Ind Vs SL : ಕ್ರಿಕೆಟ್ ಅಭಿಮಾನಿಗಳಿಗೆ ಬ್ಯಾಡ್ ನ್ಯೂಸ್ : 2ನೇ T20 ಪಂದ್ಯಕ್ಕೆ ಅಡೆತಡೆ, ಪಂದ್ಯ ರದ್ದಾಗಬಹುದು!

ಮೊದಲ ಪಂದ್ಯದಲ್ಲಿ ಭಾರತ 62 ರನ್‌ಗಳ ಜಯ ಸಾಧಿಸಿತ್ತು. ಭಾರತೀಯ ಕ್ರಿಕೆಟ್ ಅಭಿಮಾನಿಗಳಿಗೆ ಒಂದು ಬ್ಯಾಡ್ ನ್ಯೂಸ್ ಬಂದಿದೆ. ಭಾರತ ಮತ್ತು ಶ್ರೀಲಂಕಾ ನಡುವಿನ ಎರಡನೇ ಟಿ20 ಪಂದ್ಯಕ್ಕೆ ಅಡೆತಡೆಗಳು ಎದುರಾಗುತ್ತಿವೆ. 

Written by - Channabasava A Kashinakunti | Last Updated : Feb 26, 2022, 01:56 PM IST
  • ಧರ್ಮಶಾಲಾದಲ್ಲಿ ನಡೆಯಲಿದೆ ಎರಡನೇ ಪಂದ್ಯ
  • ಪಂದ್ಯದ ಮೇಲೆ ಕರಿ ಮೋಡಗಳು
  • ಮೊದಲ ಪಂದ್ಯ ಗೆದ್ದ ಟೀಂ ಇಂಡಿಯಾ
Ind Vs SL : ಕ್ರಿಕೆಟ್ ಅಭಿಮಾನಿಗಳಿಗೆ ಬ್ಯಾಡ್ ನ್ಯೂಸ್ : 2ನೇ T20 ಪಂದ್ಯಕ್ಕೆ ಅಡೆತಡೆ, ಪಂದ್ಯ ರದ್ದಾಗಬಹುದು! title=

ನವದೆಹಲಿ : ಭಾರತ ತಂಡ ಶ್ರೀಲಂಕಾ ವಿರುದ್ಧ ಧರ್ಮಶಾಲಾ ಮೈದಾನದಲ್ಲಿ ಎರಡನೇ ಟಿ20 ಪಂದ್ಯವನ್ನಾಡಲಿದೆ. ಮೊದಲ ಪಂದ್ಯದಲ್ಲಿ ಭಾರತ 62 ರನ್‌ಗಳ ಜಯ ಸಾಧಿಸಿತ್ತು. ಭಾರತೀಯ ಕ್ರಿಕೆಟ್ ಅಭಿಮಾನಿಗಳಿಗೆ ಒಂದು ಬ್ಯಾಡ್ ನ್ಯೂಸ್ ಬಂದಿದೆ. ಭಾರತ ಮತ್ತು ಶ್ರೀಲಂಕಾ ನಡುವಿನ ಎರಡನೇ ಟಿ20 ಪಂದ್ಯಕ್ಕೆ ಅಡೆತಡೆಗಳು ಎದುರಾಗುತ್ತಿವೆ. 

ಧರ್ಮಶಾಲಾದಲ್ಲಿ ಮೋಡ ಕವಿದ ವಾತಾವರಣ

ಭಾರತ ಮತ್ತು ಶ್ರೀಲಂಕಾ(India Vs Sri Lanka) ನಡುವಿನ ಮೊದಲ ಟಿ20 ಪಂದ್ಯ ಧರ್ಮಶಾಲಾ ಮೈದಾನದಲ್ಲಿ ನಡೆಯಲಿದೆ. ಧರ್ಮಶಾಲಾದಲ್ಲಿ ನಿನ್ನೆ ರಾತ್ರಿಯಿಂದ ಧಾರಾಕಾರ ಮಳೆ ಸುರಿಯುತ್ತಿದೆ. ಇಂತಹ ಪರಿಸ್ಥಿತಿಯಲ್ಲಿ ಪಂದ್ಯ ವಾಶ್ ಔಟ್ ಆಗುವ ಸಾಧ್ಯತೆ ಇದೆ. ಬೆಳಗಿನ ಜಾವದವರೆಗೂ ಮಳೆ ಮುಂದುವರಿದಿದೆ. ಮಾಧ್ಯಮ ವರದಿಗಳ ಪ್ರಕಾರ, ಶನಿವಾರವೂ ಮಳೆಯಾಗುವ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ. ಧರ್ಮಶಾಲಾದಲ್ಲಿ ಶೇ.90ರಷ್ಟು ಮಳೆಯಾಗುವ ಸಾಧ್ಯತೆ ಇದೆ. ಅದೇ ಸಮಯದಲ್ಲಿ, ತಾಪಮಾನವು ತಂಪಾಗಿರುತ್ತದೆ ಎಂದು ನಿರೀಕ್ಷಿಸಲಾಗಿದೆ.

ಇದನ್ನೂ ಓದಿ : ವಿರಾಟ್ ಕೊಹ್ಲಿ-ರಿಷಬ್ ಪಂತ್ ಸ್ಥಾನಕ್ಕೆ ಕುತ್ತಾಗಬಹುದು ಈ ಇಬ್ಬರು ಆಟಗಾರರು, ಬೌಲರ್‌ಗಳಿಗೆ ನಡುಕ ಹುಟ್ಟಿಸುವ ಬ್ಯಾಟ್ಸಮನ್ ಗಳಿವರು

ವೇಗದ ಬೌಲರ್‌ಗಳಿಗೆ ಸಹಾಯಕವಾದ ಪಿಚ್

ಭಾರತದಲ್ಲಿನ ಹೆಚ್ಚಿನ ಪಿಚ್‌ಗಳು ಸಮತಟ್ಟಾಗಿದೆ, ಇದು ಸ್ಪಿನ್ನರ್‌ಗಳಿಗೆ ಸಹಾಯಕವಾಗಿದೆ, ಆದರೆ ಧರ್ಮಶಾಲಾ(Dharamshala) ಕ್ರೀಡಾಂಗಣವನ್ನು ಪರ್ವತಗಳ ನಡುವೆ ನಿರ್ಮಿಸಲಾಗಿದೆ, ಇದರಿಂದಾಗಿ ಇಲ್ಲಿನ ಪಿಚ್ ವೇಗದ ಬೌಲರ್‌ಗಳನ್ನು ಬೆಂಬಲಿಸುತ್ತದೆ. ಭಾರತದ ವೇಗದ ಬೌಲರ್‌ಗಳು ಅಲ್ಲಿ ವಿಧ್ವಂಸಕರಾಗಲು ಸಿದ್ಧರಾಗುತ್ತಾರೆ. ಜಸ್ಪ್ರೀತ್ ಬುಮ್ರಾ, ಭುವನೇಶ್ವರ್ ಕುಮಾರ್, ಮೊಹಮ್ಮದ್ ಸಿರಾಜ್, ಹರ್ಷಲ್ ಪಟೇಲ್ ಮತ್ತು ಅವೇಶ್ ಖಾನ್ ಟೀಮ್ ಇಂಡಿಯಾದ ವೇಗದ ಬೌಲಿಂಗ್ ದಾಳಿಯಲ್ಲಿದ್ದಾರೆ. ಈ ಬೌಲರ್‌ಗಳ ಎಸೆತಗಳನ್ನು ಆಡುವುದು ಯಾರಿಗೂ ಸುಲಭವಲ್ಲ. ಒಂದು ವೇಳೆ ಪಂದ್ಯ ನಡೆದರೆ ಶ್ರೀಲಂಕಾ ಬ್ಯಾಟ್ಸ್‌ಮನ್‌ಗಳನ್ನು ಛಿದ್ರಗೊಳಿಸಲು ರೆಡಿಯಾಗಿದ್ದಾರೆ.

ಸರಣಿ ಗೆಲ್ಲುವ ಹಂಬಲದಲ್ಲಿ ಟೀಂ ಇಂಡಿಯಾ

ರೋಹಿತ್ ಶರ್ಮಾ(Rohit Sharma) ನೇತೃತ್ವದ ಭಾರತ ತಂಡದ ಕಣ್ಣುಗಳು ಶ್ರೀಲಂಕಾ ವಿರುದ್ಧದ ಸರಣಿಯನ್ನು ಗೆಲ್ಲಲು ಪ್ರಯತ್ನದಲ್ಲಿವೆ. ಇದಕ್ಕಾಗಿ ಭಾರತದ ಬೌಲಿಂಗ್ ಮತ್ತು ಬ್ಯಾಟಿಂಗ್ ಬಲ ಪ್ರದರ್ಶಿಸಬೇಕಿದೆ. ಸಂಜು ಸ್ಯಾಮ್ಸನ್ ಅವರನ್ನು ಬ್ಯಾಟಿಂಗ್‌ಗೆ ಕಳುಹಿಸಬಹುದು. ಅದೇ ಸಮಯದಲ್ಲಿ, ಭಾರತೀಯ ಬೌಲರ್‌ಗಳು ಮಧ್ಯಮ ಓವರ್‌ಗಳಲ್ಲಿ ಹೆಚ್ಚುವರಿ ರನ್ ನೀಡುವುದನ್ನು ತಪ್ಪಿಸಬೇಕಾಗುತ್ತದೆ. ಮೊದಲ ಪಂದ್ಯದ ಬಳಿಕ ನಾಯಕ ರೋಹಿತ್ ಶರ್ಮಾ ಟೀಂ ಇಂಡಿಯಾದ ಫೀಲ್ಡರ್ ಗಳ ಮೇಲೆ ತೀವ್ರ ಕೋಪಗೊಂಡಿದ್ದರು. ತಂಡ ಇನ್ನೂ ಈ ನಿಟ್ಟಿನಲ್ಲಿ ಕೆಲಸ ಮಾಡಬೇಕಿದೆ. ಇದುವರೆಗೆ ಧರ್ಮಶಾಲಾದಲ್ಲಿ ಕೇವಲ ಒಂದು ಟಿ20 ಪಂದ್ಯ ಮಾತ್ರ ನಡೆದಿದ್ದು, ಟೀಂ ಇಂಡಿಯಾ ದಕ್ಷಿಣ ಆಫ್ರಿಕಾ ವಿರುದ್ಧ ಆಡಿತ್ತು. ಅದರಲ್ಲಿ ಅವರು ಸೋಲನ್ನು ಎದುರಿಸಬೇಕಾಯಿತು.

ಇದನ್ನೂ ಓದಿ : Ind Vs SL : ಕೊಹ್ಲಿ ತಂಡದಿಂದ ಹೊರಗಿಟ್ಟ ಆಟಗಾರನಿಗೆ ಅವಕಾಶ ನೀಡಿದ ರೋಹಿತ್ ಶರ್ಮಾ!

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News