“ರೋಹಿತ್’ರನ್ನು ಮತ್ತೆ ಕ್ಯಾಪ್ಟನ್ ಮಾಡಿ…” ಎಂದು ಬೇಡಿಕೊಂಡ ಅಭಿಮಾನಿಗೆ MI ಮಾಲೀಕ ಅಂಬಾನಿ ಕೊಟ್ಟ ಉತ್ತರವೇನು ಗೊತ್ತಾ?

Akash Ambani on Rohit Sharma: ಮುಂಬೈ ಇಂಡಿಯನ್ಸ್ ಮಾಲೀಕ ಆಕಾಶ್ ಅಂಬಾನಿ ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದಾಗ, “ರೋಹಿತ್’ರನ್ನು ಮತ್ತೆ ಕ್ಯಾಪ್ಟನ್ ಮಾಡಿ” ಎಂದು ಅಭಿಮಾನಿಯೊಬ್ಬರು ಹೇಳಿದ್ದಾರೆ. ವ್ಯಕ್ತಿಯ ಪ್ರಶ್ನೆಯನ್ನು ಕೇಳಿದ ಆಕಾಶ್, "ಚಿಂತಿಸಬೇಡಿ. ಅವರು ಬ್ಯಾಟಿಂಗ್ ಮಾಡುತ್ತಾರೆ" ಎಂದು ಹೇಳಿದ್ದಾರೆ.

Written by - Bhavishya Shetty | Last Updated : Dec 20, 2023, 03:38 PM IST
    • ಆಕಾಶ್ ಅಂಬಾನಿಗೆ ಅಭಿಮಾನಿಯೊಬ್ಬರ ವಿಶೇಷ ಬೇಡಿಕೆ
    • ಬಹಳ ಬುದ್ಧಿವಂತಿಕೆಯಿಂದ ಪ್ರತಿಕ್ರಿಯಿಸಿದ ಆಕಾಶ್
    • ಮುಂಬೈ ಇಂಡಿಯನ್ಸ್ ಮಾಲೀಕ ಆಕಾಶ್ ಅಂಬಾನಿ
“ರೋಹಿತ್’ರನ್ನು ಮತ್ತೆ ಕ್ಯಾಪ್ಟನ್ ಮಾಡಿ…” ಎಂದು ಬೇಡಿಕೊಂಡ ಅಭಿಮಾನಿಗೆ MI ಮಾಲೀಕ ಅಂಬಾನಿ ಕೊಟ್ಟ ಉತ್ತರವೇನು ಗೊತ್ತಾ? title=
Akash Ambani

Akash Ambani on Rohit Sharma: ಐಪಿಎಲ್ ಹರಾಜು ಡಿಸೆಂಬರ್ 19 ರಂದು ದುಬೈನಲ್ಲಿ ನಡೆದಿದೆ. ಈ ಸಂದರ್ಭದಲ್ಲಿ ಮುಂಬೈ ಇಂಡಿಯನ್ಸ್ ಮಾಲೀಕ ಆಕಾಶ್ ಅಂಬಾನಿಗೆ ಅಭಿಮಾನಿಯೊಬ್ಬರು ವಿಶೇಷ ಬೇಡಿಕೆಯೊಂದನ್ನು ಇಟ್ಟಿದ್ದು, ಅದಕ್ಕೆ ಆಕಾಶ್ ಬಹಳ ಬುದ್ಧಿವಂತಿಕೆಯಿಂದ ಪ್ರತಿಕ್ರಿಯಿಸಿದ್ದಾರೆ.

ಇದನ್ನೂ ಓದಿ: ಹೇಗಿದೆ ಗೊತ್ತಾ ಧೋನಿ CSK ನೂತನ ಪಡೆ..! IPL 2024 ವಾರ್‌ಗೆ MSD ಟೀಂ ರೆಡಿ

ಮುಂಬೈ ಇಂಡಿಯನ್ಸ್ ಮಾಲೀಕ ಆಕಾಶ್ ಅಂಬಾನಿ ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದಾಗ, “ರೋಹಿತ್’ರನ್ನು ಮತ್ತೆ ಕ್ಯಾಪ್ಟನ್ ಮಾಡಿ” ಎಂದು ಅಭಿಮಾನಿಯೊಬ್ಬರು ಹೇಳಿದ್ದಾರೆ. ವ್ಯಕ್ತಿಯ ಪ್ರಶ್ನೆಯನ್ನು ಕೇಳಿದ ಆಕಾಶ್, "ಚಿಂತಿಸಬೇಡಿ. ಅವರು ಬ್ಯಾಟಿಂಗ್ ಮಾಡುತ್ತಾರೆ" ಎಂದು ಹೇಳಿದ್ದಾರೆ. ಮುಂಬೈ ಇಂಡಿಯನ್ಸ್ ಈ ವೀಡಿಯೊವನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದೆ.

ಈ ಮಿನಿ ಹರಾಜಿನಲ್ಲಿ ಮುಂಬೈ ಇಂಡಿಯನ್ಸ್ 8 ಆಟಗಾರರನ್ನು ಖರೀದಿಸಿದೆ. ಇದರಲ್ಲಿ ವೇಗದ ಬೌಲರ್ ಜೆರಾಲ್ಡ್ ಕೊಯೆಟ್ಜಿಯನ್ನು ಗರಿಷ್ಠ 5 ಕೋಟಿಗೆ ಖರೀದಿಸುವ ಮೂಲಕ ತನ್ನ ತಂಡದಲ್ಲಿ ಸೇರಿಸಿಕೊಂಡಿದೆ. ಹರಾಜಿನಲ್ಲಿ ಮುಂಬೈ ಇಂಡಿಯನ್ಸ್ ಜೆರಾಲ್ಡ್ ಕೋಟ್ಜಿ (5 ಕೋಟಿ), ದಿಲ್ಶನ್ ಮಧುಶಂಕ (4.60 ಕೋಟಿ), ಶ್ರೇಯಸ್ ಗೋಪಾಲ್ (20 ಲಕ್ಷ), ನಮನ್ ಧೀರ್ (20 ಲಕ್ಷ), ಅನ್ಶುಲ್ ಕಾಂಬೋಜ್ (20 ಲಕ್ಷ), ನುವಾನ್ ತುಷಾರ (4.80 ಕೋಟಿ), ಮೊಹಮ್ಮದ್ ಅವರನ್ನು ಖರೀದಿಸಿದೆ. ನಬಿ (1.50 ಕೋಟಿ), ಶಿವಾಲಿಕ್ ಶರ್ಮಾ (20 ಲಕ್ಷ) ಕೂಡ ತಂಡದಲ್ಲಿ ಸ್ಥಾನ ಪಡೆದಿದ್ದಾರೆ.

ಇದನ್ನೂ ಓದಿ: ರಶ್ಮಿಕಾ ಡೀಪ್‌ಫೇಕ್ ಮಾಡಿದ್ದ ನಾಲ್ವರು ಶಂಕಿತರು ಪತ್ತೆ..! ಯಾರವರು ಗೊತ್ತೆ..?

IPL 2024ಕ್ಕೆ ಮುಂಬೈ ಇಂಡಿಯನ್ಸ್‌ ಸಂಪೂರ್ಣ ತಂಡ: ಆಕಾಶ್ ಮಧ್ವಾಲ್, ಅರ್ಜುನ್ ತೆಂಡೂಲ್ಕರ್, ಕ್ಯಾಮೆರಾನ್ ಗ್ರೀನ್, ಡೆವಾಲ್ಡ್ ಬ್ರೂವಿಸ್, ಇಶಾನ್ ಕಿಶನ್, ಜೇಸನ್ ಬೆಹ್ರೆನ್‌’ಡಾರ್ಫ್, ಜಸ್ಪ್ರೀತ್ ಬುಮ್ರಾ, ಕುಮಾರ್ ಕಾರ್ತಿಕೇಯ ಸಿಂಗ್, ತಿಲಕ್ ವರ್ಮಾ, ನೆಹಾಲ್ ವಧೇರಾ, ಪಿಯುಶ್ ಚಾವ್ಲಾ, ರೋಹಿತ್ ಶರ್ಮಾ, ರೊಮಾರಿಯೋ ಶೆಫರ್ಡ್, ಶಮ್ಸ್ ಮುಲಾನಿ, ಸೂರ್ಯ ಕುಮಾರ್ ಯಾದವ್, ಟಿಮ್ ಡೇವಿಡ್, ವಿಷ್ಣು ವಿನೋದ್, ಹಾರ್ದಿಕ್ ಪಾಂಡ್ಯ, ಜೆರಾಲ್ಡ್ ಕೋಟ್ಜಿ, ದಿಲ್ಶನ್ ಮಧುಶಂಕ, ಶ್ರೇಯಸ್ ಗೋಪಾಲ್, ನಮನ್ ಧೀರ್, ಅನ್ಶುಲ್ ಕಾಂಬೋಜ್, ನುವಾನ್ ತುಷಾರ, ಮೊಹಮ್ಮದ್ ನಬಿ, ಶಿವಾಲಿಕ್ ಶರ್ಮಾ,

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News