Rishabh pant : ಉರಿಯುತ್ತಿದ್ದ ಕಾರಿನ ಪಕ್ಕ ಬಿದ್ದಿದ್ದ ರಿಷಬ್‌ ಪಂತ್‌.. Watch ವಿಡಿಯೋ..!

ಭಾರತ ಕ್ರಿಕೆಟಿಗ ರಿಷಬ್ ಪಂತ್ ಇಂದು ಭೀಕರ ಕಾರು ಅಪಘಾತಕ್ಕೀಡಾಗಿದ್ದಾರೆ. ಇದೀಗ, ಅಪಘಾತದ ದೃಶ್ಯಗಳು ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಿವೆ. ಕಾರಿನ ಪಕ್ಕದಲ್ಲಿ ನೆಲದ ಮೇಲೆ ಪಂತ್‌ ಮಲಗಿರುವ ವಿಡಿಯೋ ಇಂಟರ್ನೆಟ್‌ನಲ್ಲಿ ಹರಿದಾಡುತ್ತಿದೆ. ವಿಡಿಯೋದಲ್ಲಿ,  ಇಬ್ಬರು ಹುಡುಗರು ರಸ್ತೆಯ ಬದಿಯಲ್ಲಿ ಮಲಗಿರುವ ಪಂತ್‌ನನ್ನು ಮೇಲಕ್ಕೆತ್ತುವುದನ್ನು ಕಾಣಬಹುದು. ಪಕ್ಕದಲ್ಲೇ ಕಾರು ಹೊತ್ತಿ ಉರಿಯುತ್ತಿರುವುದು ಸಹ ವಿಡಿಯೋದಲ್ಲಿ ಸೆರೆಯಾಗಿದೆ.

Written by - Krishna N K | Last Updated : Dec 30, 2022, 05:18 PM IST
  • ಭಾರತ ಕ್ರಿಕೆಟಿಗ ರಿಷಬ್ ಪಂತ್ ಇಂದು ಭೀಕರ ಕಾರು ಅಪಘಾತಕ್ಕೀಡಾಗಿದ್ದಾರೆ.
  • ಅಪಘಾತದ ದೃಶ್ಯಗಳು ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಿವೆ.
  • ಬೆಂಕಿ ಹತ್ತಿ ಹೊತ್ತಿ ಉರಿಯುತ್ತಿದ್ದ ಕಾರಿನ ಪಕ್ಕದಲ್ಲಿ ಪಂತ್‌ ಮಲಗಿರುವ ವಿಡಿಯೋ ಇಂಟರ್ನೆಟ್‌ನಲ್ಲಿ ಹರಿದಾಡುತ್ತಿದೆ.
Rishabh pant : ಉರಿಯುತ್ತಿದ್ದ ಕಾರಿನ ಪಕ್ಕ ಬಿದ್ದಿದ್ದ ರಿಷಬ್‌ ಪಂತ್‌.. Watch ವಿಡಿಯೋ..! title=

Rishabh pant accident video : ಭಾರತ ಕ್ರಿಕೆಟಿಗ ರಿಷಬ್ ಪಂತ್ ಇಂದು ಭೀಕರ ಕಾರು ಅಪಘಾತಕ್ಕೀಡಾಗಿದ್ದಾರೆ. ಇದೀಗ, ಅಪಘಾತದ ದೃಶ್ಯಗಳು ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಿವೆ. ಕಾರಿನ ಪಕ್ಕದಲ್ಲಿ ನೆಲದ ಮೇಲೆ ಪಂತ್‌ ಮಲಗಿರುವ ವಿಡಿಯೋ ಇಂಟರ್ನೆಟ್‌ನಲ್ಲಿ ಹರಿದಾಡುತ್ತಿದೆ. ವಿಡಿಯೋದಲ್ಲಿ,  ಇಬ್ಬರು ಹುಡುಗರು ರಸ್ತೆಯ ಬದಿಯಲ್ಲಿ ಮಲಗಿರುವ ಪಂತ್‌ನನ್ನು ಮೇಲಕ್ಕೆತ್ತುವುದನ್ನು ಕಾಣಬಹುದು. ಪಕ್ಕದಲ್ಲೇ ಕಾರು ಹೊತ್ತಿ ಉರಿಯುತ್ತಿರುವುದು ಸಹ ವಿಡಿಯೋದಲ್ಲಿ ಸೆರೆಯಾಗಿದೆ.

ಪಂತ್ ಕಾರ್‌ ಆಕ್ಸಿಡೆಂಟ್‌ ವಿಡಿಯೋಗಳು ಇಂಟರ್‌ನೆಟ್‌ನಲ್ಲಿ ಹರಿದಾಡುತ್ತಿವೆ. ಅಪಘಾತದ ದೃಶ್ಯ ಸಿಸಿಟಿವಿಯಲ್ಲೂ ಸೆರೆಯಾಗಿದೆ. ವೇಗವಾಗಿ ಬಂದ ಕಾರು ಡಿವೈಡರ್‌ಗೆ ಡಿಕ್ಕಿ ಹೊಡೆದ ಪರಿಣಾಮ ಬೆಂಕಿ ಹತ್ತಿದೆ. ಭೀಕರ ಅಪಘಾತದ ನಂತರ ಕ್ರಿಕೆಟಿಗ ಪಂತ್‌ನನ್ನು ಡೆಹ್ರಾಡೂನ್‌ನ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ. ಸಿಎಂ ಪುಷ್ಕರ್ ಸಿಂಗ್ ಧಾಮಿ ಅವರು ರಿಷಬ್‌ ಗುಣಮುಖರಾಗಲು ಬೇಕಾದ ಎಲ್ಲ ನೆರವು ನೀಡುವಂತೆ ವೈದ್ಯರಿಗೆ ಆದೇಶಿಸಿದ್ದಾರೆ.

ಇದನ್ನೂ ಓದಿ: Urvashi Rautela : ದ್ವೇಷ ಬಿಟ್ಟು ಪಂತ್‌ಗಾಗಿ ಊರ್ವಶಿ ʼಪ್ರಾರ್ಥನೆʼ..! ತಲೆಕೆಡಿಸಿತು ನಟಿಯ ಪೋಸ್ಟ್‌

ಮಾಧ್ಯಮ ವರದಿಗಳ ಪ್ರಕಾರ, ಘಟನೆಯ ಸಮಯದಲ್ಲಿ ರಿಷಬ್ ಪಂತ್ ಮಾತ್ರ ಕಾರಿನಲ್ಲಿದ್ದರು. ಉತ್ತರಾಖಂಡ ಪೊಲೀಸ್ ಮಹಾನಿರ್ದೇಶಕ ಅಶೋಕ್ ಕುಮಾರ್ ಪ್ರಕಾರ, ಬೆಂಕಿ ಹೊತ್ತಿಕೊಂಡಿದ್ದ ಕಾರಿನಿಂದ ತಪ್ಪಿಸಿಕೊಳ್ಳಲು ವಿಂಡ್‌ಸ್ಕ್ರೀನ್ ಅನ್ನು ಒಡೆದು ಪಂತ್‌ ಹೊರಗೆ ಬಂದಿದ್ದಾರೆ. ಘಟನೆಯಲ್ಲಿ ತಲೆ, ಮೊಣಕಾಲಿಗೆ ಗಾಯಗಳಾಗಿವೆ, ಕಾಲು ಮುರಿದಿರಬಹುದು ಎಂದು ಹೇಳಲಾಗುತ್ತಿದೆ. ಹೆಚ್ಚಿನ ಚಿಕಿತ್ಸೆಗಾಗಿ ಅವರನ್ನು ಡೆಹ್ರಾಡೂನ್‌ನ ಮ್ಯಾಕ್ಸ್ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ.

ಸೂರ್ಯಕುಮಾರ್ ಯಾದವ್, ಜಸ್ಪ್ರೀತ್ ಬುಮ್ರಾ ಮತ್ತು ಶುಭಮನ್ ಗಿಲ್ ಸೇರಿದಂತೆ ಹಲವಾರು ಗಣ್ಯ ವ್ಯಕ್ತಿಗಳು, ಸಿನಿತಾರೆಯರು, ಅಭಿಮಾನಿಗಳು ರಿಷಬ್ ಪಂತ್ ಶೀಘ್ರವಾಗಿ ಚೇತರಿಸಿಕೊಳ್ಳಲಿ ಎಂದು ಹಾರೈಸಿದ್ದಾರೆ. ಅಲ್ಲದೆ, ಪಾಕಿಸ್ತಾನಿ ಕ್ರಿಕೆಟಿಗರಾದ ಉಮರ್ ಅಕ್ಮಲ್, ಶೋಯೆಬ್ ಮಲಿಕ್ ಮತ್ತು ಮೊಹಮ್ಮದ್ ಹಫೀಜ್ ಕೂಡ ಭೀಕರ ಅಪಘಾತದ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News