Zee News Sting Operation: ಟೀಂ ಇಂಡಿಯಾದ ಈ ಮೂವರ ವೃತ್ತಿಜೀವನ ಬಹುತೇಕ ಮುಳುಗಿದೆ: ಚೇತನ್ ಶರ್ಮಾ

Zee News Sting Operation: ಒಂದರಿಂದ ಹನ್ನೊಂದನೇಯವರೆಗಿನ ಭಾರತೀಯ ಕ್ರಿಕೆಟ್ ತಂಡದ ಪ್ರತಿ ಸ್ಥಾನಕ್ಕೂ ಹಲವು ಸ್ಪರ್ಧಿಗಳಿರುತ್ತಾರೆ. ಯಾರಿಗಾದರೂ ಅವಕಾಶಗಳು ಬಂದರೆ, ಅವಕಾಶಕ್ಕಾಗಿ ಕಾಯುತ್ತಿರುವ ಅನೇಕರ ವೃತ್ತಿಜೀವನವು ಕೊನೆಗೊಳ್ಳುತ್ತದೆ. ಇಂತಹ ಪ್ರಬಲ ಪೈಪೋಟಿಯ ನಡುವೆಯೂ ಆಟಗಾರನೊಬ್ಬ ಟೀಂ ಇಂಡಿಯಾದಲ್ಲಿ ಸ್ಥಾನ ಪಡೆದರೆ ಸಣ್ಣಪುಟ್ಟ ಗಾಯಗಳಿಂದಾಗಿ ತಂಡದಿಂದ ಹೊರಗುಳಿಯಲು ಬಯಸುವುದಿಲ್ಲ.

Written by - Bhavishya Shetty | Last Updated : Feb 17, 2023, 06:30 PM IST
    • ಪ್ರತಿ ನಗರ, ಹಳ್ಳಿಯ ಲಕ್ಷಾಂತರ ಯುವಕರು ಟೀಮ್ ಇಂಡಿಯಾಕ್ಕಾಗಿ ಆಡುವ ಕನಸು ಹಿಡಿದಿರುತ್ತಾರೆ.
    • ಆದರೆ ಇಂದು ಅಂತಹ ಟೀಂನ ಕರ್ಮಕಾಂಡ ಬಯಲಾಗಿದೆ.
    • ಬಿಸಿಸಿಐನ ಆಯ್ಕೆ ಸಮಿತಿಯ ಅಧ್ಯಕ್ಷ ಚೇತನ್ ಶರ್ಮಾ ಈ ಎಲ್ಲಾ ವಿಚಾರಗಳ ಬಗ್ಗೆ ಮಾತನಾಡಿದ್ದಾರೆ.
 Zee News Sting Operation: ಟೀಂ ಇಂಡಿಯಾದ ಈ ಮೂವರ ವೃತ್ತಿಜೀವನ ಬಹುತೇಕ ಮುಳುಗಿದೆ: ಚೇತನ್ ಶರ್ಮಾ title=
Zee News Sting Operation

Zee News Sting Operation: ಭಾರತದ ರಾಷ್ಟ್ರೀಯ ಆಟ ಹಾಕಿ ಆದರೆ ಇಲ್ಲಿ ಕ್ರಿಕೆಟ್ ಒಂದು ಧರ್ಮವಿದ್ದಂತೆ. ನಮ್ಮ ದೇಶದಲ್ಲಿ ಒಲಿಂಪಿಕ್‌ನಲ್ಲಿ ಚಿನ್ನದ ಪದಕ ಗೆದ್ದ ಆಟಗಾರರನ್ನು ಎರಡು-ನಾಲ್ಕು ವರ್ಷಗಳಲ್ಲಿ ಮರೆತುಬಿಡುತ್ತಾರೆ. ಆದರೆ ಕ್ರಿಕೆಟಿಗರು ದೇವರಾಗುತ್ತಾರೆ. ಯಾವುದೇ ಕ್ರೀಡೆಯು ಗರಿಷ್ಠ ಸಂಪತ್ತು ಮತ್ತು ಖ್ಯಾತಿಯನ್ನು ಸೃಷ್ಟಿಸಿದರೆ ಅದು ಕ್ರಿಕೆಟ್ ಎಂದು ದೇಶದ ಪ್ರತಿ ಮಗುವಿಗೆ ತಿಳಿದಿದೆ. ಅದಕ್ಕಾಗಿಯೇ ಪ್ರತಿ ನಗರ, ಹಳ್ಳಿಯ ಲಕ್ಷಾಂತರ ಯುವಕರು ಟೀಮ್ ಇಂಡಿಯಾಕ್ಕಾಗಿ ಆಡುವ ಕನಸು ಹಿಡಿದಿರುತ್ತಾರೆ. ಆದರೆ ಇಂದು ಅಂತಹ ಟೀಂನ ಕರ್ಮಕಾಂಡ ಬಯಲಾಗಿದೆ. ಬಿಸಿಸಿಐನ ಆಯ್ಕೆ ಸಮಿತಿಯ ಅಧ್ಯಕ್ಷ ಚೇತನ್ ಶರ್ಮಾ, Zee News ನಡೆಸಿದ Exclusive ರಹಸ್ಯ ಕಾರ್ಯಾಚರಣೆಯಲ್ಲಿ ಈ ಎಲ್ಲಾ ವಿಚಾರಗಳ ಬಗ್ಗೆ ಮಾತನಾಡಿದ್ದಾರೆ.

ಇದನ್ನೂ ಓದಿ: Game Over: Zee News ರಹಸ್ಯ ಕಾರ್ಯಾಚರಣೆ: ಗುಪ್ತ ಕ್ಯಾಮರಾದಲ್ಲಿ ಬಟಾಬಯಲಾಯ್ತು ಬಿಸಿಸಿಐ ಗುಟ್ಟು!

ಒಂದರಿಂದ ಹನ್ನೊಂದನೇಯವರೆಗಿನ ಭಾರತೀಯ ಕ್ರಿಕೆಟ್ ತಂಡದ ಪ್ರತಿ ಸ್ಥಾನಕ್ಕೂ ಹಲವು ಸ್ಪರ್ಧಿಗಳಿರುತ್ತಾರೆ. ಯಾರಿಗಾದರೂ ಅವಕಾಶಗಳು ಬಂದರೆ, ಅವಕಾಶಕ್ಕಾಗಿ ಕಾಯುತ್ತಿರುವ ಅನೇಕರ ವೃತ್ತಿಜೀವನವು ಕೊನೆಗೊಳ್ಳುತ್ತದೆ. ಇಂತಹ ಪ್ರಬಲ ಪೈಪೋಟಿಯ ನಡುವೆಯೂ ಆಟಗಾರನೊಬ್ಬ ಟೀಂ ಇಂಡಿಯಾದಲ್ಲಿ ಸ್ಥಾನ ಪಡೆದರೆ ಸಣ್ಣಪುಟ್ಟ ಗಾಯಗಳಿಂದಾಗಿ ತಂಡದಿಂದ ಹೊರಗುಳಿಯಲು ಬಯಸುವುದಿಲ್ಲ. ಅಂತಹ ಪರಿಸ್ಥಿತಿಯಲ್ಲಿ, ಆಟಗಾರನು ತನ್ನನ್ನು ತಾನು 100 ಪ್ರತಿಶತದಷ್ಟು ಫಿಟ್ ಆಗಿ ತೋರಿಸಲು ಇಂಜೆಕ್ಷನ್ ತೆಗೆದುಕೊಳ್ಳುತ್ತಾನೆ. ಇದು ಬಿಸಿಸಿಐನ ಆಯ್ಕೆ ಸಮಿತಿ ಅಧ್ಯಕ್ಷ ಚೇತನ್ ಶರ್ಮಾ ಅವರ ಹೇಳಿಕೆ.

ಸ್ಥಾನ ಕಿತ್ತುಕೊಳ್ಳಲು ಆಟಗಾರರ ಮೇಲೆ ಒತ್ತಡ ಹೆಚ್ಚಿದ್ದು, ಈ ರೀತಿಯ ಒತ್ತಡ ಇರುವ ಆಟಗಾರರು ನಿಷೇಧಿತ ಇಂಜೆಕ್ಷನ್ ಆಟದಲ್ಲಿ ಪಾಲ್ಗೊಳ್ಳುತ್ತಾರೆ ಎಂಬುದು ಚೇತನ್ ಶರ್ಮಾ ಅವರ ಮಾತುಗಳಿಂದ ತೋರುತ್ತದೆ.

ಚೇತನ್ ಶರ್ಮಾ- ಈಗ ಅವರು (ರಿಷಬ್ ಪಂತ್) ಗಾಯಗೊಂಡಿದ್ದಾರಂತೆ, ಇಶಾನ್ ಕಿಶನ್ ಒಳಗೆ ಬಂದಿದ್ದಾರೆ, ಇಶಾನ್ ಕಿಶನ್ ಈಗ ಎಷ್ಟು ದಿನ ಇರುತ್ತಾರೆ. ರಿಷಭ್ ಪಂತ್ ಸಮಸ್ಯೆ ಎದುರಾಗಿದೆ, ಶಿಖರ್ ಧವನ್ ತಂಡದಿಂದ ಅಕ್ಷರಶಃ ಔಟ್. ಸಂಜು ಸ್ಯಾಮ್ಸನ್ ಸಿಕ್ಕಿಬಿದ್ದಿದ್ದಾನೆ. ಒಂದು ನಾಕ್, 3 ಹುಡುಗರನ್ನು ಗಲ್ಲಿಗೇರಿಸಿದೆ.. ಆಯ್ಕೆದಾರರಿಗೆ ತೊಂದರೆಯಾಗಿದೆ. ಈಗ ತಂಡದಲ್ಲಿ ಮೂವರು ವಿಕೆಟ್‌ಕೀಪರ್‌ಗಳನ್ನು ಹೇಗೆ ಹಾಕುತ್ತೀರಿ. ಕೆಎಲ್ ರಾಹುಲ್ ವಿಕೆಟ್ ಕೀಪಿಂಗ್ ಮಾಡುತ್ತಾರೆ, ತಂಡದಲ್ಲಿ ಇಶಾನ್ ಕಿಶನ್ ಈಗಾಗಲೇ ಇದ್ದಾರೆ.. ಈಗ ಮೂರನೇ ವಿಕೆಟ್ ಕೀಪರ್ ಅನ್ನು ತೋರಿಸಿ! ಸಂಜು ಸ್ಯಾಮ್ಸನ್ ಹಾಕಬೇಡಿ ಎಂದರೂ ಆತ ಹಿಂದಿಗಿಂತ ಚೆನ್ನಾಗಿ ಆಡುತ್ತಾನೆ” ಹೇಳಿದ್ದಾರೆ.

ಇತ್ತೀಚೆಗೆ, ಇಶಾನ್ ಕಿಶನ್ ಏಕದಿನ ಕ್ರಿಕೆಟ್‌ನಲ್ಲಿ ವೇಗದ ದ್ವಿಶತಕ ಗಳಿಸುವ ಮೂಲಕ ಸಂಚಲನವನ್ನು ಸೃಷ್ಟಿಸಿದರು ಮತ್ತು ಯುವ ಆರಂಭಿಕ ಆಟಗಾರ ಶುಭಮನ್ ಗಿಲ್ ಕೂಡ ಇದೇ ರೀತಿಯ ದ್ವಿಶತಕ ಗಳಿಸುವ ಮೂಲಕ ತಮ್ಮ ಹಕ್ಕು ಬಲಪಡಿಸಿದ್ದಾರೆ. ಇಶಾನ್ ಕಿಶನ್ ಅವರ ದ್ವಿಶತಕ ಮತ್ತು ಶುಭಮನ್ ಗಿಲ್ ಅವರ ದ್ವಿಶತಕದ ಚರ್ಚೆಯ ನಂತರ ಚೇತನ್ ಶರ್ಮಾ ಅವರೊಂದಿಗಿನ ನಮ್ಮ ಸಂಭಾಷಣೆ ಹೀಗಿದೆ.

“ಮೂರು ಆಟಗಾರರ ವೃತ್ತಿಜೀವನವನ್ನು ಬಹುತೇಕ ಮುಳುಗಿದೆ”. ಶಿಖರ್ ಧವನ್, ಸಂಜು ಸ್ಯಾಮ್ಸನ್ ಮತ್ತು ಕೆಎಲ್ ರಾಹುಲ್ ಅವರನ್ನು ನಿರ್ದಿಷ್ಟವಾಗಿ ಉಲ್ಲೇಖಿಸಿ ಈ ಮಾತನ್ನು ಅವರು ಹೇಳಿದ್ದಾರೆ.

ಇದನ್ನೂ ಓದಿ:  Zee News ರಹಸ್ಯ ಕಾರ್ಯಾಚರಣೆ: ಬಹಿರಂಗವಾಯ್ತು ನಕಲಿ ಫಿಟ್ನೆಸ್ ಗಾಗಿ ಇಂಜೆಕ್ಷನ್ ತೆಗೆದುಕೊಳ್ಳುವ ಟೀಂ ಇಂಡಿಯಾದ ಆಟಗಾರರ ಹೆಸರು!

ಚೇತನ್ ಶರ್ಮಾ ಪ್ರಕಾರ, ಈ ಸಮಯದಲ್ಲಿ ಪ್ಲೇಯಿಂಗ್ XI ನಲ್ಲಿ ಸ್ಥಾನ ಪಡೆಯಲು ಟೀಮ್ ಇಂಡಿಯಾದಲ್ಲಿ ಪೈಪೋಟಿ ಇದೆ, ಯಾವುದೇ ಆಟಗಾರನು ತನ್ನ ಸಣ್ಣ ಗಾಯಗಳ ಕಾರಣದಿಂದ ಒಂದೇ ಒಂದು ಪಂದ್ಯವನ್ನು ಬಿಡಲು ಬಯಸುವುದಿಲ್ಲ. ಅವನು ಚುಚ್ಚುಮದ್ದನ್ನು ತೆಗೆದುಕೊಳ್ಳಬಯಸುತ್ತಾನೆ” ಎಂದು ಹೇಳಿದ್ದಾರೆ.

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News