'ಈ ಆಟಗಾರ ಇಲ್ಲದಿದ್ದರೆ ಕೊಹ್ಲಿ...' ವಿರಾಟ್ ಬಗ್ಗೆ ಗೌತಮ್ ಗಂಭೀರ್ ಶಾಕಿಂಗ್ ರಿಯಾಕ್ಷನ್!

Gautam Gambhir ON Virat Kohli : ಕೊಹ್ಲಿಯ ಈ ದಾಖಲೆ ಬಗ್ಗೆ ಗೌತಮ್ ಗಂಭೀರ್ ಪ್ರತಿಕ್ರಿಯಿಸಿದ್ದಾರೆ. ಕೊಹ್ಲಿ ಶತಕದಲ್ಲಿ ಒಬ್ಬ ಆಟಗಾರ ಪ್ರಮುಖ ಪಾತ್ರವಹಿಸಿದ್ದಾರೆ ಎಂದು ಬಣ್ಣಿಸಿದ್ದಾರೆ.  

Written by - Chetana Devarmani | Last Updated : Nov 6, 2023, 03:55 PM IST
  • ಕೊಹ್ಲಿಯ ಈ ದಾಖಲೆ ಬಗ್ಗೆ ಗೌತಮ್ ಗಂಭೀರ್ ಪ್ರತಿಕ್ರಿಯೆ
  • ಕೊಹ್ಲಿ ಶತಕದಲ್ಲಿ ಅಯ್ಯರ್‌ ಪ್ರಮುಖ ಪಾತ್ರ
  • ವಿರಾಟ್‌ ಮತ್ತು ಶ್ರೇಯಸ್‌ ಆಟ ಹೊಗಳಿದ ಗಂಭೀರ್
'ಈ ಆಟಗಾರ ಇಲ್ಲದಿದ್ದರೆ ಕೊಹ್ಲಿ...' ವಿರಾಟ್ ಬಗ್ಗೆ ಗೌತಮ್ ಗಂಭೀರ್ ಶಾಕಿಂಗ್ ರಿಯಾಕ್ಷನ್! title=

Gautam Gambhir Reaction: ವಿರಾಟ್ ಕೊಹ್ಲಿ ವಿಶ್ವಕಪ್ 2023 ರ ಲೀಗ್ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ತಮ್ಮ 49 ನೇ ಏಕದಿನ ಶತಕವನ್ನು ಸಿಡಿಸಿದರು. ಇದರೊಂದಿಗೆ ಸಚಿನ್ ತೆಂಡೂಲ್ಕರ್ ಅವರ ಅತ್ಯಧಿಕ ಏಕದಿನ ಶತಕದ ದಾಖಲೆಯನ್ನು ಸರಿಗಟ್ಟಿದರು. ಕೊಹ್ಲಿಯ ಈ ದಾಖಲೆ ಬಗ್ಗೆ ಗೌತಮ್ ಗಂಭೀರ್ ಪ್ರತಿಕ್ರಿಯಿಸಿದ್ದಾರೆ. ಕೊಹ್ಲಿ ಶತಕದಲ್ಲಿ ಒಬ್ಬ ಆಟಗಾರ ಪ್ರಮುಖ ಪಾತ್ರವಹಿಸಿದ್ದಾರೆ ಎಂದು ಬಣ್ಣಿಸಿದ್ದಾರೆ. ಈ ಆಟಗಾರ ಇಲ್ಲದಿದ್ದರೆ ಕೊಹ್ಲಿ ಮೇಲೆ ಒತ್ತಡ ಬೀಳುತ್ತಿತ್ತು ಎಂದು ಗಂಭೀರ್ ಹೇಳಿದ್ದಾರೆ.

ವಿರಾಟ್ ಕೊಹ್ಲಿಯ ಈ ಶತಕದಲ್ಲಿ ಶ್ರೇಯಸ್ ಅಯ್ಯರ್ ಪ್ರಮುಖ ಪಾತ್ರ ವಹಿಸಿದ್ದಾರೆ ಎಂದು ಗೌತಮ್ ಗಂಭೀರ್ ಹೇಳಿದ್ದಾರೆ. ನಾನು ಶ್ರೇಯಸ್ ಅಯ್ಯರ್ ಅವರನ್ನು ಹೊಗಳುತ್ತೇನೆ ಏಕೆಂದರೆ ವಿರಾಟ್ ಕೊಹ್ಲಿ ಮೇಲಿದ್ದ ಒತ್ತಡವನ್ನು ಶ್ರೇಯಸ್ ಅಯ್ಯರ್ ತೆಗೆದು ಹಾಕಿದರು. ಹಾಗಾಗಿಯೇ ವಿರಾಟ್ ಕೊಹ್ಲಿ ಸುದೀರ್ಘ ಇನ್ನಿಂಗ್ಸ್ ಆಡಲು ಸಾಧ್ಯವಾಯಿತು ಎಂದಿದ್ದು.

ಇದನ್ನೂ ಓದಿ: ಕೊಹ್ಲಿ ಫೋನ್‌ನಲ್ಲಿ ಅತಿ ಹೆಚ್ಚು ಮಾತನಾಡೋದು ಈ ಮೂವರ ಜೊತೆ.. ತಾಯಿ, ಅನುಷ್ಕಾ.. ಆ ಮೂರನೇ ವ್ಯಕ್ತಿ ಯಾರು? 

ವಿರಾಟ್ ಕೊಹ್ಲಿ ಪ್ರದರ್ಶನದ ಬಗ್ಗೆ ಹೇಳಿಕೆ ನೀಡಿದ ಟೀಂ ಇಂಡಿಯಾ ಮಾಜಿ ಬ್ಯಾಟ್ಸ್‌ಮನ್ ಗೌತಮ್ ಗಂಭೀರ್, ವಿರಾಟ್ ಕೊಹ್ಲಿ ಮತ್ತು ಶ್ರೇಯಸ್ ಅಯ್ಯರ್ ವಿಭಿನ್ನ ರೀತಿಯ ಬ್ಯಾಟಿಂಗ್ ಮಾಡಿದ್ದಾರೆ. ಆದರೆ ಇದು ವಾಂಖೆಡೆ ಅಥವಾ ದೆಹಲಿಯ ಮೈದಾನವಾಗಿರಲಿಲ್ಲ, ಅಲ್ಲಿ ಬ್ಯಾಟಿಂಗ್‌ಗೆ ಉತ್ತಮ ಪಿಚ್ ಇದೆ. ಇಲ್ಲಿ ವಿಕೆಟ್ ಆರಂಭದಲ್ಲಿ ಉತ್ತಮವಾಗಿತ್ತು. ಆದರೆ ಮಧ್ಯಮ ಓವರ್‌ಗಳಲ್ಲಿ ಮತ್ತು ಕೊನೆಯಲ್ಲಿ ಅದು ಕಷ್ಟಕರವಾಯಿತು. ನನ್ನ ಪ್ರಕಾರ ಕೊಹ್ಲಿ ಮತ್ತು ಅಯ್ಯರ್ ರೋಹಿತ್ ಮತ್ತು ಗಿಲ್‌ಗಿಂತ ಉತ್ತಮವಾಗಿ ಬ್ಯಾಟಿಂಗ್ ಮಾಡಿದ್ದಾರೆ ಎಂದಿದ್ದಾರೆ. 

ಸ್ಪಿನ್ ದೊಡ್ಡ ಸವಾಲಾಗಿತ್ತು. ಈ ಇಬ್ಬರು (ಕೊಹ್ಲಿ ಮತ್ತು ಶ್ರೇಯಸ್) ಕೇಶವ್ ಮಹಾರಾಜ್ ವಿರುದ್ಧ ಬ್ಯಾಟ್ ಮಾಡಿದ ರೀತಿ ಅದ್ಭುತ. ಅವರು ಕೇವಲ 30 ರನ್ ನೀಡಿರಬಹುದು. ಆದರೆ ಪ್ರಮುಖ ವಿಷಯವೆಂದರೆ ಅವರು ಕೇವಲ ಒಂದು ವಿಕೆಟ್ ಮಾತ್ರ ಪಡೆದರು. ಇದರಿಂದಾಗಿ ದಕ್ಷಿಣ ಆಫ್ರಿಕಾ ತನ್ನ ವೇಗದ ಬೌಲರ್‌ಗಳನ್ನು ಮರಳಿ ಕರೆತರಬೇಕಾಯಿತು ಎಂದು ಗಂಭೀರ್‌ ಹೇಳಿದ್ದಾರೆ. 

ಶ್ರೇಯಸ್ ಅಯ್ಯರ್ ಅವರು ಒಂದು ಓವರ್‌ನಲ್ಲಿ ಎರಡು ದೊಡ್ಡ ಹೊಡೆತಗಳನ್ನು ಮತ್ತು ನಂತರ ಮೂರು ಬೌಂಡರಿಗಳನ್ನು ಹೊಡೆಯುವ ಮೂಲಕ ಒತ್ತಡವನ್ನು ಕಡಿಮೆ ಮಾಡಿದರು. ಹಾಗಾಗದೇ ಇದ್ದಿದ್ದರೆ ವಿರಾಟ್ ಮೇಲೆ ಒತ್ತಡ ಬೀಳುತ್ತಿತ್ತು ಮತ್ತು ಲೂಸ್ ಸ್ಟ್ರೋಕ್ ಅನ್ನು ನೀವು ನೋಡಬಹುದಿತ್ತು ಎಂದು ಗಂಭೀರ್‌ ಹೇಳಿದ್ದಾರೆ. 

ಇದನ್ನೂ ಓದಿ: ಹಾರ್ದಿಕ್​ ಪಾಂಡ್ಯ ಗಾಯಗೊಂಡು ಈ ಮೂವರು ಆಟಗಾರರ ಅದೃಷ್ಟವನ್ನೇ ಬದಲಿಸಿ ಬಿಟ್ರು! 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News