ಇಂದು ಮಹತ್ವದ ರಾಜ್ಯ ಸಚಿವ ಸಂಪುಟ ಸಭೆ
ಗೌವರ್ನರ್ ತಾರತಮ್ಯ ನೀತಿಗೆ ಖಂಡನೆ ಸಾಧ್ಯತೆ
ವಿಪಕ್ಷ ನಾಯಕರ ಪ್ರಾಸಿಕ್ಯೂಷನ್ ಬಗ್ಗೆ ಚರ್ಚೆ..?
ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ಸಂಪುಟ ಸಭೆ
HDK ಸೇರಿ 6 ನಾಯಕರ ಪ್ರಾಸಿಕ್ಯೂಷನ್ ಬಾಕಿ
250 ಮೀಟರ್ ಎತ್ತರದ ಈ ಸ್ಕೈಡೆಕ್ ಗಾಗಿ 25 ಎಕರೆ ಜಾಗ ಅಗತ್ಯವಿದೆ. ಕೊಮ್ಮಘಟ್ಟ ಹಾಗೂ ಬೆಂಗಳೂರು ವಿವಿ ಬಳಿಯ ಜಾಗವನ್ನು ನೋಡಿದ್ದೆವು. ಬೆಂಗಳೂರು ಬೆಳೆಯುತ್ತಿರುವಾಗ ಬೆಂಗಳೂರು ವಿವಿಯ ಬಳಿ 25 ಎಕರೆ ಭೂಮಿ ವ್ಯರ್ಥ ಮಾಡುವುದು ಬೇಡ, ವಿದ್ಯಾರ್ಥಿಗಳಿಗೆ ತೊಂದರೆಯಾಗಬಹುದು ಎಂದು ಶಾಸಕರು ಅಭಿಪ್ರಾಯಪಟ್ಟರು.
ಸರ್ಕಾರಿ ನೌಕರರ ಬೇಡಿಕೆ ಈಡೇರಿಸದಿದ್ದರೆ ಜುಲೈ 29ರಿಂದ ಅನಿರ್ದಿಷ್ಟಾವಧಿ ಮುಷ್ಕರ ಆರಂಭಿಸಲಾಗುವುದು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್ ಷಡಾಕ್ಷರಿ ರಾಜ್ಯ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದರು. ಈ ಬೆನ್ನಲ್ಲೇ ರಾಜ್ಯ ಸರ್ಕಾರವು ಸಂಪುಟ ಸಭೆಯಲ್ಲಿ ಮಹತ್ವದ ತೀರ್ಮಾನ ಕೈಗೊಳ್ಳಲಾಗಿದೆ.
ರಾಜ್ಯದ ಸರ್ಕಾರಿ ನೌಕರರಿಗೆ ಕೊನೆಗೂ ಸಿಹಿ ಸುದ್ದಿ
7ನೇ ರಾಜ್ಯ ವೇತನ ಆಯೋಗದ ಶಿಫಾರಸು ಜಾರಿ
ಆಗಸ್ಟ್ 1ರಿಂದ ಅನ್ವಯವಾಗುವಂತೆ ಅನುಷ್ಠಾನ
ಸಿದ್ದರಾಮಯ್ಯ ನೇತೃತ್ವದ ಸಂಪುಟ ಸಭೆ ತೀರ್ಮಾನ
ಸರ್ಕಾರಿ ನೌಕರರ ವೇತನ ಶೇಕಡಾ 27.5ರಷ್ಟು ಹೆಚ್ಚಳ
ಎನ್ ಡಿ ಎ ಮೈತ್ರಿಕೂಟ ಸರ್ಕಾರದ ನೇತೃತ್ವದ ಪ್ರಧಾನಿ ನರೇಂದ್ರ ಮೋದಿ ಅವರು ದೆಹಲಿಯ ತಮ್ಮ ನಿವಾಸದಲ್ಲಿ ತಮ್ಮ ಮೊದಲ ಸಂಪುಟ ಸಭೆಯನ್ನು ನಡೆಸಿದ್ದಾರೆ.ಈ ಸಭೆಯಲ್ಲಿ ಪ್ರಧಾನಿ ಮೋದಿ ತಮ್ಮ ಸಚಿವ ಸಂಪುಟದ ಮೊದಲ ನಿರ್ಧಾರವಾಗಿ ಪ್ರಧಾನ ಮಂತ್ರಿ ಆವಾಸ್ ಯೋಜನೆಯಡಿ ಗ್ರಾಮೀಣ ಮತ್ತು ನಗರ ಬಡವರಿಗೆ 3 ಕೋಟಿ ಮನೆಗಳನ್ನು ನಿರ್ಮಿಸುವ ಯೋಜನೆಗೆ ಅನುಮೋದನೆ ನೀಡಿದ್ದಾರೆ.
ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ಸಚಿವ ಸಂಪುಟ ಸಭೆ
ಬರಗಾಲ ನಿರ್ವಹಣೆಗೆ ಹೆಚ್ಚಿನ ಅನುದಾನ ನೀಡಲು ಒಪ್ಪಿಗೆ
ಬೆಂಗಳೂರಿನ ಕಾಂಗ್ರೆಸ್ ಶಾಸಕರಿಗೆ ಸಿಎಂ ಬಂಪರ್ ಅವಕಾಶ
ಕಾಂಗ್ರೆಸ್ ಶಾಸಕರ ಕ್ಷೇತ್ರಗಳಿಗೆ ತಲಾ 25 ಕೋಟಿ ಅನುದಾನ
ಸಂಸತ್ತಿನ ಐದು ದಿನಗಳ ವಿಶೇಷ ಅಧಿವೇಶನದ ಮೊದಲ ದಿನದಂದು ಕರೆಯಲಾದ ಕೇಂದ್ರ ಸಚಿವ ಸಂಪುಟದ ಪ್ರಮುಖ ಸಭೆ ಪ್ರಗತಿಯಲ್ಲಿದೆ ಎಂದು ಮೂಲಗಳು ತಿಳಿಸಿವೆ. ಅಜೆಂಡಾ ಇನ್ನೂ ತಿಳಿದಿಲ್ಲವಾದರೂ, ಈ ವಿಶೇಷ ಅಧಿವೇಶನದಲ್ಲಿ ಐತಿಹಾಸಿಕ ನಿರ್ಧಾರಗಳನ್ನು ತೆಗೆದುಕೊಳ್ಳಲಾಗುವುದು ಎಂದು ಪ್ರಧಾನಿ ನರೇಂದ್ರ ಮೋದಿ ಅವರ ಈ ಹಿಂದಿನ ಹೇಳಿಕೆಯನ್ನು ಗಮನದಲ್ಲಿಟ್ಟುಕೊಂಡು ಸಭೆಗೆ ಭಾರಿ ಮಹತ್ವ ಬಂದಿದೆ.
ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ಇಂದು ಸಚಿವ ಸಂಪುಟ ಸಭೆ ಮಳೆ ಕೊರತೆ ಹಿನ್ನಲೆ ಬರಪೀಡಿತ ತಾಲೂಕು ಘೋಷಣೆ ಸಾಧ್ಯತೆ ಸಚಿವ ಸಂಪುಟ ಉಪ ಸಮಿತಿ ಶಿಫಾರಸ್ಸು ಹಿನ್ನಲೆ ಮಹತ್ವದ ಚರ್ಚೆ ಕುಡಿಯುವ ನೀರು, ಜಾನುವಾರಿಗೆ ಮೇವು ಪೂರೈಕೆಗೆ ಕ್ರಮ ಸಾಧ್ಯತೆ ಉದ್ಯೋಗ ಖಾತ್ರಿ ಯೋಜನೆ 150 ದಿನ ಉದ್ಯೋಗ ನೀಡುವ ಪ್ರಯತ್ನ ಬರಪೀಡಿತ ತಾಲೂಕುಗಳಿಗೆ 10 KG ಅಕ್ಕಿ ಪೂರೈಸುವ ತೀರ್ಮಾನ ಸಾಧ್ಯತೆ
ಗೃಹಲಕ್ಷ್ಮೀ ಗ್ಯಾರಂಟಿ ಯೋಜನೆ ಜಾರಿಗೆ ಕ್ಷಣಗಣನೆ ಇಂದು ಮೈಸೂರಿನಲ್ಲಿ ಗೃಹಲಕ್ಷ್ಮೀ ಯೋಜನೆಗೆ ಚಾಲನೆ ರಾಹುಲ್ ಗಾಂಧಿಯಿಂದ ಯೋಜನೆಗೆ ಅದ್ದೂರಿ ಚಾಲನೆ ಇಂದೇ ಯಜಮಾನಿ ಖಾತೆಗೆ 2 ಸಾವಿರ ರೂಪಾಯಿ ಜಮೆ
ಗ್ರಾಮೀಣ ಭಾಗದ ಮಹಿಳೆಯರು ಕೆಲವು ದಿನಗಳಿಂದ ತಮ್ಮ ಕಾಯಕವನ್ನೇ ಮರೆತು ಬಿಟ್ಟಿದ್ದಾರೆ. ಸೂರ್ಯ ಉದಯಿಸುವ ಮುನ್ನೇ ಸರತಿ ಸಾಲಿನಲ್ಲಿ ನಿಲ್ಲುವ ನಾರಿಯರು.. ತಮ್ಮ ಕೆಲಸ ಆದರೆ ಸಾಕಪ್ಪಾ ಸಾಕು ಅಂತಾ ಬರ್ತಾರೆ.. ನೂರಾರು ಮಹಿಳಾ ಮಣಿಗಳು ಆ ಒಂದು ಕೆಲಸಕ್ಕೆ ಎದುರು ನೋಡ್ತಾ ಇರ್ತಾರೆ.. ಏನಿದು ಸ್ಟೋರಿ ಅಂತಿರಾ.. ಇಲ್ಲಿದೆ ಅದರ ವರದಿ..
ಇದುವರೆಗೂ ಬರೊಬ್ಬರಿ 48,98,835 ಅರ್ಜಿ ಸಲ್ಲಿಕೆ ನಿನ್ನೆ ಒಂದೇ ದಿನ 10,02,400 ಮಹಿಳೆರ ನೋಂದಣಿ ದಿನೇ ದಿನೇ ಹೆಚ್ಚಳವಾಗ್ತಿದೆ ಗೃಹ ಲಕ್ಷ್ಮಿಯರ ನೋಂದಣಿ ಸರ್ವರ್ ಸಮಸ್ಯೆಗೆ ಕೊಂಚ ಮುಕ್ತಿ ಸಿಕ್ಕ ಹಿನ್ನೆಲೆ ನೋಂದಣಿ ಹೆಚ್ಚಳ
By accepting cookies, you agree to the storing of cookies on your device to enhance site navigation, analyze site usage, and assist in our marketing efforts.