Share Market Update: ಸೆನ್ಸೆಕ್ಸ್ ಇಂದು ತನ್ನ ಎಲ್ಲಾ ಹಳೆಯ ದಾಖಲೆಗಳನ್ನು ಮುರಿದಿದೆ. ಮಧ್ಯಾಹ್ನ 3.30 ಕ್ಕೆ ವಹಿವಾಟು ಅಂತ್ಯಗೊಳ್ಳುವ ಮೊದಲು, ಸೆನ್ಸೆಕ್ಸ್ (ಬಿಎಸ್ಇ ಸೆನ್ಸೆಕ್ಸ್) 803.14 ಪಾಯಿಂಟ್ಗಳನ್ನು ಅಥವಾ 1.26 ಶೇಕಡಾವನ್ನು ಗಳಿಸಿ 64,718.56 ಮಟ್ಟವನ್ನು ತಲುಪಿದೆ.
WABetaInfo ವರದಿಯ ಪ್ರಕಾರ, WhatsApp ಏಕಕಾಲದಲ್ಲಿ 32 ಜನರಿಗೆ ವೀಡಿಯೊ ಕರೆ ಮಾಡುವ ಮೂಲಕ ಸಂಪರ್ಕಿಸಲು ಹೊಸ ವೈಶಿಷ್ಟ್ಯವನ್ನು ಪ್ರಾರಂಭಿಸಿದೆ. ಈ ವೈಶಿಷ್ಟ್ಯವು ಪ್ರಸ್ತುತ ಬೀಟಾ ಪರೀಕ್ಷಕರಿಗೆ ಮಾತ್ರ ಲಭ್ಯವಿದೆ. ಈ ವೈಶಿಷ್ಟ್ಯವನ್ನು ಪ್ರವೇಶಿಸಲು ಬಳಕೆದಾರರು ಬೀಟಾ ಅಪ್ಡೇಟ್ 2.23.24.1.0 ಅನ್ನು ಇನ್ಸ್ಟಾಲ್ ಮಾಡಬೇಕು.
Pakistan News: ಪಂಜಾಬ್ ಪೊಲೀಸ್ ಮತ್ತು ಬಿಎಸ್ಎಫ್ ಪಡೆಗಳಿಗೆ ಗಡಿಭಾಗದಲ್ಲಿ ಸಿಕ್ಕಿರುವ ಈ ಡ್ರೋನ್ಗಳಲ್ಲಿನ ಚಿಪ್ಗಳ ತಾಂತ್ರಿಕ ವಿಶ್ಲೇಷಣೆಯಿಂದ ಡ್ರೋನ್ಗಳ ಮಾರ್ಗಗಳ ಕುರಿತು ಭದ್ರತಾ ಪಡೆಗಳಿಗೆ ಮಹತ್ವದ ಮಾಹಿತಿ ದೊರೆತಿದೆ. ಅವುಗಳ ಮಾರ್ಗವನ್ನು ಪತ್ತೆಹಚ್ಚಿದ ನಂತರ, ಅಂತಹ ಡ್ರೋನ್ಗಳನ್ನು ನಿಯಂತ್ರಿಸುವುದು ಬಿಎಸ್ಎಫ್ಗೆ ಮೊದಲಿಗಿಂತ ಹೆಚ್ಚು ಸುಲಭವಾಗಿದೆ.
Money Laundering Case: ಪ್ರಕರಣದಲ್ಲಿ ನಡೆದ ದೊಡ್ಡ ಪಿತೂರಿಯನ್ನು ಬಯಲಿಗೆಳೆಯಲು ಆರೋಪಿಯ ಕಸ್ಟಡಿ ವಿಚಾರಣೆಯಅವಶ್ಯಕತೆ ಇದೆ ಎಂದು ಕೇಂದ್ರೀಯ ಸಂಸ್ಥೆ ತನ್ನ ಅರ್ಜಿಯಲ್ಲಿ ವಾದಿಸಿತ್ತು. ನವದೆಹಲಿಯಲ್ಲಿರುವ ಜಾರಿ ನಿರ್ದೇಶನಾಲಯ ಕಚೇರಿಯಲ್ಲಿ ನಡೆದ ಮೂರನೇ ಸುತ್ತಿನ ವಿಚಾರಣೆಯ ಬಳಿಕ ಮಂಗಳವಾರ ರಾತ್ರಿ ಆರ್.ಕೆ ಆರೋರಾ ಅವರನ್ನು ಅಕ್ರಮ ಹಣವರ್ಗಾವಣೆ ತಡೆ ಕಾಯ್ದೆಯ (ಪಿಎಂಎಲ್ಎ) ಕ್ರಿಮಿನಲ್ ಸೆಕ್ಷನ್ಗಳ ಅಡಿ ಬಂಧಿಸಲಾಗಿದೆ.
RBI on 2000 Rupee Note: ದೇಶದಲ್ಲಿ ಶೇ.72ಕ್ಕೂ ಹೆಚ್ಚು 2000 ರೂಪಾಯಿ ನೋಟುಗಳು ಬ್ಯಾಂಕ್ಗಳಿಗೆ ವಾಪಸಾಗಿವೆ. ಭಾರತೀಯ ರಿಸರ್ವ್ ಬ್ಯಾಂಕ್ ತನ್ನ ಇತ್ತೀಚಿನ ವರದಿಯಲ್ಲಿ ಒಟ್ಟು 2.62 ಲಕ್ಷ ಕೋಟಿ ರೂಪಾಯಿ ಮೌಲ್ಯದ 2000 ರೂಪಾಯಿ ನೋಟುಗಳನ್ನು ಬ್ಯಾಂಕ್ಗಳಲ್ಲಿ ಠೇವಣಿ ಮಾಡಲಾಗಿದೆ ಅಥವಾ ವಿನಿಮಯ ಮಾಡಿಕೊಳ್ಳಲಾಗಿದೆ ಎಂದು ತಿಳಿಸಿದೆ.
Finance Ministry On Minimum Pension: ಬಜೆಟ್ ಅಧಿವೇಶನದಲ್ಲಿ ಕೇಂದ್ರ ವಿತ್ತ ಸಚಿವೆಯ ಘೋಷಣೆ ಬಳಿಕ ಹಣಕಾಸು ಕಾರ್ಯದರ್ಶಿ ಅಧ್ಯಕ್ಷತೆಯಲ್ಲಿ ಎನ್ ಪಿಎಸ್ ಕುರಿತು ಸಮಿತಿ ರಚಿಸಲಾಗಿದ್ದು, ಎನ್ ಪಿಎಸ್ ಅನ್ನು ಆಕರ್ಷಕಗೊಳಿಸಲು ಜನರೊಂದಿಗೆ ಚರ್ಚಿಸಲಾಗುತ್ತಿದೆ.
Electricity Rate Hike: ಕೈಗಾರಿಕೋದ್ಯಮಕ್ಕೆ ಹೊರೆಯಾದ ವಿದ್ಯುತ್ ದರ ಏರಿಕೆ ಖಂಡಿಸಿ, ಕರ್ನಾಟಕದಾದ್ಯಂತ ನೀಡಲಾದ ಬಂದ್ ಕರೆಗೆ, ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆ ಸೇರಿದಂತೆ ಕೈಗಾರಿಕಾ ಸಂಘ ಸಂಸ್ಥೆಗಳು ಬೆಂಬಲ ಸೂಚಿಸಿವೆ.
Karnataka Bandh: ಚುನಾವಣೆ ಬಳಿಕ ರಾಜ್ಯದಲ್ಲಿ ಅತ್ಯಧಿಕ ವಿದ್ಯುತ್ ದರ ಬರುತ್ತಿದೆ. ಈ ನಿಟ್ಟಿನಲ್ಲಿ ವಿದ್ಯುತ್ ದರ ಏರಿಕೆ ಖಂಡಿಸಿ ವಾಣಿಜ್ಯ ಹಾಗೂ ಕೈಗಾರಿಕ ಮಹಾಸಂಸ್ಥೆ ಗುರುವಾರದಂದು ರಾಜ್ಯಾದ್ಯಂತ ಬಂದ್ ಗೆ ಕರೆ ನೀಡಿದೆ.
Adipurush Controversy: 'ಆಧಿಪುರುಷ್' ಚಿತ್ರದ ಸಂಭಾಷಣೆ ವಿವಾದ ನಿಲ್ಲುವ ಮಾತೆ ಎತ್ತುತ್ತಿಲ್ಲ. ಹೀಗಿರುವಾಗ ಇದೀಗ ಸರ್ಕಾರ ಕೂಡ ಈ ಕುರಿತು ಕಠಿಣ ನಿಲುವು ತಳೆದಿದ್ದು, ಯಾರೊಬ್ಬರ ಧಾರ್ಮಿಕ ಭಾವನೆಗಳಿಗೆ ಧಕ್ಕೆ ಉಂಟಾಗಲು ಬಿಡುವುದಿಲ್ಲ ಎಂದು ಹೇಳಿದೆ.
Acharya Chanakya Lessons In Kannada: ಹಣ ಗಳಿಕೆಯ ಜೊತೆಗೆ ಹಣ ಹೇಗೆ ವೆಚ್ಚ ಮಾಡಬೇಕು ಎಂಬುದರ ಕುರಿತು ಕೂಡ ಚಾಣಕ್ಯ ನೀತಿಯಲ್ಲಿ ಮಾರ್ಗದರ್ಶನಗಳನ್ನು ನೀಡಲಾಗಿದೆ. ಆಚಾರ್ಯ ಚಾಣಕ್ಯರ ಪ್ರಕಾರ, ಕೆಲ ಸ್ಥಳಗಳಲ್ಲಿ ಹಣ ವೆಚ್ಚ ಮಾಡುವಲ್ಲಿ ಹಿಂಜರಿಯಬಾರದು ಎನ್ನಲಾಗಿದೆ.
UGC New Guidelines: ಒಂದು ವೇಳೆ ವಿದ್ಯಾರ್ಥಿಯು ನಾಲ್ಕು ವರ್ಷಗಳ ಆನರ್ಸ್ ಪದವಿಯ ಸಂಪೂರ್ಣ ಅವಧಿಯನ್ನು ಪೂರ್ಣಗೊಳಿಸಿದರೆ, ಹ್ಯೂಮ್ಯಾನಿಟಿಸ್ ಸೈನ್ಸ್ ನಲ್ಲಿ ಬ್ಯಾಚುಲರ್ ಆಫ್ ಸೈನ್ಸ್ ಪದವಿಯನ್ನು ಸಹ ನೀಡಲಾಗುತ್ತದೆ ಎಂದು ನಿಯಮ ಹೇಳುತ್ತದೆ.
Business Concept- ನೀವು ಸಹ ನಿಮ್ಮ ಸ್ವಂತ ಉದ್ಯಮವನ್ನು ಆರಂಭಿಸಲು ಯೋಜನೆ ರೂಪಿಸುತಿದ್ದು, ನಿಮ್ಮ ಬಳಿ ಕಡಿಮೆ ಬಂಡವಾಳವಿದ್ದರೆ, ನಿಮ್ಮ ಉದ್ಯಮವನ್ನು ನೀವು ನಿಮ್ಮ ಮನೆಯ ಮೇಲ್ಚಾವಣಿಯಿಂದಲೇ ಪ್ರಾರಂಭಿಸಬಹುದು. ನೀವು ಯಾವುದೇ ನಗರ ಅಥವಾ ಹಳ್ಳಿ ಅಥವಾ ಮೆಟ್ರೋ ನಗರದಲ್ಲಿ ವಾಸಿಸುತ್ತಿದ್ದರೂ ಕೂಡ ನೀವು ಮೇಲ್ಚಾವಣಿ ಹೊಂದಿದ್ದರೆ, ಈ ಉದ್ಯಮಗಳಿಂದ ನೀವು ಚೆನ್ನಾಗಿ ಹಣ ಸಂಪಾದನೆ ಮಾಡಬಹುದು.
IMD Report On Monsoon 2023: ಸಾಮಾನ್ಯವಾಗಿ ಜೂನ್ ತಿಂಗಳ ಮೊದಲವಾರದಲ್ಲಿ ಭಾರತದಲ್ಲಿ ಮುಂಗಾರಿನ ಆಗಮನವಾಗುತ್ತದೆ. ಇದು ಜೂನ್ ಮೊದಲ ವಾರದ ವೇಳೆಗೆ ಭಾರತೀಯ ಪರ್ಯಾಯ ದ್ವೀಪದ ದಕ್ಷಿಣ ಭಾಗವನ್ನು ತಲುಪುತ್ತದೆ ಎನ್ನಲಾಗುತ್ತದೆ.
MiG 21 ಯುದ್ಧ ವಿಮಾನಗಳಿಗೆ ಸಂಬಂಧಿಸಿದಂತೆ ಭಾರತೀಯ ಸೇನೆ ಒಂದು ಮಹತ್ವದ ನಿರ್ಧಾರ ಕೈಗೊಂಡಿದೆ. ಹೌದು, ಇನ್ಮುಂದೆ ಈ ಯುದ್ಧ ವಿಮಾನಗಳು ನಿಮ್ಮ ಅಕ್ಕಪಕ್ಕದಲ್ಲಾಗಲಿ ಅಥವಾ ಯುದ್ಧದ ಮೈದಾನದಲ್ಲಾಗಲಿ ಕಾಣಿಸುವುದಿಲ್ಲ. ಭಾರತೀಯ ವಾಯುಸೇನೆ ಅದರ ಹಿಂದಿನ ಕಾರಣವನ್ನು ಕೂಡ ಹಂಚಿಕೊಂಡಿದೆ.
Lok Sabha Elecition 2024: ಮುಂಬರುವ ಲೋಕಸಭೆ ಚುನಾವಣೆ ಹಿನ್ನೆಲೆ ಜೀತನ್ ರಾಮ್ ಮಾಂಝೀ ನೀಡಿರುವ ಹೇಳಿಕೆ ಬಿಹಾರ ಮುಖ್ಯಮಂತ್ರಿ ನಿತಿಶ್ ಕುಮಾರ್ ಅವರಿಗೆ ಬಿಗ್ ಶಾಕ್ ಆಗಿದೆ ಎಂಬಂತೆ ವಿಶ್ಲೇಶಿಸಲಾಗುತ್ತಿದ್ದೆ. ಏಕೆಂದರೆ ನಿತಿಶ್ ಕುಮಾರ್ ಅವರು ಬಿಜೆಪಿ ವಿರುದ್ಧ ಪ್ರತಿಪಕ್ಷಗಳ ಒಗ್ಗೂಡುವಿಕೆಗೆ ಶ್ರಮಿಸುತ್ತಿದ್ದಾರೆ.
Russia Ukraine War:ಉಕ್ರೇನಿಯನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಕಳೆದ ಕೆಲವು ದಿನಗಳಲ್ಲಿ ಯುರೋಪಿಯನ್ ಮಿತ್ರರಾಷ್ಟ್ರಗಳು ಮಾಡಿದ ಹೊಸ ಮಿಲಿಟರಿ ನೆರವು ಭರವಸೆಗಳನ್ನು ಶ್ಲಾಘಿಸಿದ್ದಾರೆ - ಆದರೆ ಅವರು ಆಧುನಿಕ ಯುದ್ಧ ವಿಮಾನಗಳ ಪೂರೈಕೆಗಾಗಿ ತಮ್ಮ ಬೇಡಿಕೆಯನ್ನು ಮುಂದುವರೆಸಿದ್ದಾರೆ.
Karnataka Election Results 2023: ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸಿಕ್ಕ ಜಯ ಅನೇಕ ಹಿರಿಯ ನಾಯಕರ ದೃಷ್ಟಿಕೋನವನ್ನೇ ಬದಲಾಯಿಸಿದೆ. ಕಾಂಗ್ರೆಸ್ ಒಂದು ಮುಳುಗುವ ಹಡಗು ಎಂದೇ ಪರಿಗಣಿಸಿದವರು ಇದೀಗ ಕಾಂಗ್ರೆಸ್ ಕುರಿತು ಹೊಗಳಿಕೆಯ ಮಾತುಗಳನ್ನು ಆಡುತ್ತಿದ್ದಾರೆ. ಈ ಹಿನ್ನೆಲೆ ಇದೀಗ ಕಾಂಗ್ರೆಸ್ ಪಕ್ಷವನ್ನು ಈ ಮೊದಲು ಟೀಕಿಸುತ್ತಿದ್ದ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಕೂಡ ಕಾಂಗ್ರೆಸ್ ಬಗ್ಗೆ ಇರುವ ತಮ್ಮ ನಿಲುವನ್ನು ಬದಲಾಯಿಸಿದ್ದಾರೆ.
Wholesale Price Index: ಹಣದುಬ್ಬರವು ಏಪ್ರಿಲ್ನಲ್ಲಿ 34 ತಿಂಗಳ ಕನಿಷ್ಠ ಮಟ್ಟ ಅಂದರೆ ಮೈನಸ್ ಶೇ.0.92 ಕ್ಕೆ ಜಾರಿದೆ. ಈ ಮೂಲಕ ಸಗಟು ಹಣದುಬ್ಬರ ದರ ಕಳೆದ ಮೂರು ವರ್ಷಗಳ ದಾಖಲೆಯನ್ನು ಮುರಿದಿದೆ.
Ola Electric Update: ಓಲಾ ಎಲೆಕ್ಟ್ರಿಕ್ ತನ್ನ ಎಲೆಕ್ಟ್ರಿಕ್ ಸ್ಕೂಟರ್ ಖರೀದಿದಾರರಿಗೆ ಚಾರ್ಜರ್ ವೆಚ್ಚವನ್ನು ಮರುಪಾವತಿಸುತ್ತಿರುವುದಾಗಿ ಘೋಷಿಸಿದೆ. ಕಳೆದ ಕೆಲವು ವರ್ಷಗಳಲ್ಲಿ ಎಲೆಕ್ಟ್ರಿಕ್ ವಾಹನ ಉದ್ಯಮವು ಅಭೂತಪೂರ್ವ ಯಶಸ್ಸನ್ನು ದಾಖಲಿಸಿದೆ ಎಂದು ಕಂಪನಿಯು ಟ್ವಿಟರ್ನಲ್ಲಿ ಹೇಳಿಕೆ ನೀಡಿದೆ.
Maharashtra Politics: ಮಹಾರಾಷ್ಟ್ರ ರಾಜ್ಯ ರಾಜಕೀಯದಲ್ಲಿ ಯುಬಿಟಿ, ಕಾಂಗ್ರೆಸ್ ಹಾಗೂ ಎನ್ಸಿಪಿ ಪಕ್ಷಗಳ ಮಹಾವಿಕಾಸ್ ಆಘಾಡಿ ಶೀಘ್ರದಲ್ಲಿಯೇ ಚದುರುವ ಲಕ್ಷಣಗಳು ಗೋಚರಿಸತೊಡಗಿವೆ. ಇದೀಗ ಅಜೀತ್ ಪವಾರ್ ನೀಡಿರುವ ಹೇಳಿಕೆ ರಾಜ್ಯ ರಾಜಕೀಯದಲ್ಲಿ ಭಾರಿ ಸಂಚಲನವನ್ನು ಸೃಷ್ಟಿಸಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.