Head Coach ಆಗಬೇಕಾದರೆ ಈ ಷರತ್ತು ಪೂರೈಸಿ !BCCI ಮುಂದೆ ತನ್ನ ಬೇಡಿಕೆ ಇಟ್ಟ ಗೌತಮ್ ಗಂಭೀರ್! ಕೊಹ್ಲಿ, ರೋಹಿತ್ ಅಭಿಮಾನಿಗಳಿಗೆ ಶಾಕ್

Gautam Gambhir New Head Coach:ಕೋಚ್ ಆಗುವ ಮುನ್ನ ಗಂಭೀರ್ ಬಿಸಿಸಿಐ ಮುಂದೆ ಕೆಲವು ಷರತ್ತುಗಳನ್ನು ಹಾಕಿದ್ದಾರೆ ಎನ್ನಲಾಗಿದೆ.ವರದಿಗಳ ಪ್ರಕಾರ,ಬಿಸಿಸಿಐ ಕೂಡಾ  ಗಂಭೀರ್ ಅವರ ಷರತ್ತುಗಳನ್ನು ಒಪ್ಪಿಕೊಂಡಿದೆಯಂತೆ.  

Written by - Ranjitha R K | Last Updated : Jun 24, 2024, 12:32 PM IST
  • ಹೊಸ ಹೆಡ್ ಕೋಚ್ ಬಗ್ಗೆ ಸಾಕಷ್ಟು ಚರ್ಚೆ ನಡೆಯುತ್ತಿದೆ
  • ಹೆಡ್ ಕೋಚ್ ಹುದ್ದೆಗೆ ಗಂಭೀರ್ ಮಾತ್ರ ಅರ್ಜಿ ಸಲ್ಲಿಸಿದ್ದಾರೆ.
  • ಹೆಡ್ ಕೋಚ್ ಸ್ಥಾನಕ್ಕೆ ಗೌತಮ್ ಗಂಭೀರ್ ಅವರ ಸಂದರ್ಶನವೂ ಆಗಿದೆ
Head Coach ಆಗಬೇಕಾದರೆ ಈ ಷರತ್ತು ಪೂರೈಸಿ !BCCI ಮುಂದೆ ತನ್ನ ಬೇಡಿಕೆ ಇಟ್ಟ ಗೌತಮ್ ಗಂಭೀರ್! ಕೊಹ್ಲಿ, ರೋಹಿತ್ ಅಭಿಮಾನಿಗಳಿಗೆ ಶಾಕ್  title=

Gautam Gambhir New Head Coach : ಭಾರತ ಕ್ರಿಕೆಟ್ ತಂಡದ ಹೊಸ ಹೆಡ್ ಕೋಚ್ ಬಗ್ಗೆ ಸಾಕಷ್ಟು ಚರ್ಚೆ ನಡೆಯುತ್ತಿದೆ.ಭಾರತದ ಮಾಜಿ ಕ್ರಿಕೆಟಿಗ ಗೌತಮ್ ಗಂಭೀರ್ ಅವರನ್ನು ಹೆಡ್ ಕೋಚ್ ಆಗಿ ಯಾವಾಗ ಬೇಕಾದರೂ ನೇಮಕ ಮಾಡಿ ಬಿಸಿಸಿಐ ಪ್ರಕಟಣೆ ಹೊರಡಿಸಬಹುದು.ಹೆಡ್ ಕೋಚ್ ಹುದ್ದೆಗೆ ಗಂಭೀರ್ ಮಾತ್ರ ಅರ್ಜಿ ಸಲ್ಲಿಸಿದ್ದಾರೆ. ಬಿಸಿಸಿಐ ಹೆಡ್ ಕೋಚ್ ಸ್ಥಾನಕ್ಕೆ ಗೌತಮ್ ಗಂಭೀರ್ ಅವರ ಸಂದರ್ಶನವನ್ನೂ ಮಾಡಿದೆ. 

ಇದಲ್ಲದೇ ಕೋಚ್ ಆಗುವ ಮುನ್ನ ಗಂಭೀರ್ ಬಿಸಿಸಿಐ ಮುಂದೆ ಕೆಲವು ಷರತ್ತುಗಳನ್ನು ಹಾಕಿದ್ದಾರೆ ಎನ್ನಲಾಗಿದೆ.ವರದಿಗಳ ಪ್ರಕಾರ,ಬಿಸಿಸಿಐ ಕೂಡಾ  ಗಂಭೀರ್ ಅವರ ಷರತ್ತುಗಳನ್ನು ಒಪ್ಪಿಕೊಂಡಿದೆಯಂತೆ.ಈ ಷರತ್ತು ಹಿರಿಯ ಆಟಗಾರರಾದ ವಿರಾಟ್ ಕೊಹ್ಲಿ,ರೋಹಿತ್ ಶರ್ಮಾ,ರವೀಂದ್ರ ಜಡೇಜಾ ಮತ್ತು ಮೊಹಮ್ಮದ್ ಶಮಿಗೆ ಸಂಬಂಧಿಸಿದ್ದು ಎನ್ನುವುದು ವಿಶೇಷ. ಇದರಿಂದಾಗಿ ಅಭಿಮಾನಿಗಳಿಗೂ ಶಾಕ್ ಆಗಬಹುದು.

ಇದನ್ನೂ ಓದಿ : ENG vs USA : ಸೆಮಿಸ್‌ಗೆ ಎಂಟ್ರಿ ಕೊಟ್ಟ ಇಂಗ್ಲೆಂಡ್‌, ಟೂರ್ನಿಯಿಂದ ಹೊರಬಿದ್ದ ಯುಎಸ್‌ಎ

ಗಂಭೀರ್‌ ಷರತ್ತುಗಳೇನು ? :
ಐಸಿಸಿ ಚಾಂಪಿಯನ್ಸ್ ಟ್ರೋಫಿ 2025ರಲ್ಲಿ ಪಾಕಿಸ್ತಾನದಲ್ಲಿ ಪ್ರಾರಂಭವಾಗುತ್ತದೆ. ವರದಿಯ ಪ್ರಕಾರ, ವಿರಾಟ್ ಕೊಹ್ಲಿ,ರೋಹಿತ್ ಶರ್ಮಾ,ರವೀಂದ್ರ ಜಡೇಜಾ ಮತ್ತು ಮೊಹಮ್ಮದ್ ಶಮಿಯಂತಹ ಹಿರಿಯ ಆಟಗಾರರಿಗೆ ಈ ಚಾಂಪಿಯನ್ಸ್ ಟ್ರೋಫಿ ಕೊನೆಯ ಅವಕಾಶವಾಗಿದೆ.ಈ ಆಟಗಾರರೊಂದಿಗೆ ಟೀಂ ಇಂಡಿಯಾ ಪ್ರಶಸ್ತಿ ಗೆಲ್ಲಲು ಸಾಧ್ಯವಾಗದಿದ್ದರೆ,ಈ ಆಟಗಾರರನ್ನು ತಂಡದಿಂದ ಕೈಬಿಡಬಹುದು.ಆದರೆ,ಈ ಆಟಗಾರರನ್ನು ಯಾವ ಸ್ವರೂಪಗಳಿಂದ ಕೈಬಿಡಬಹುದು ಎಂಬ ಮಾಹಿತಿ ಇನ್ನೂ ಲಭ್ಯವಿಲ್ಲ.

ಮುಖ್ಯ ಕೋಚ್ ಆದ ನಂತರ ಗೌತಮ್ ಗಂಭೀರ್ 2027ರ ವಿಶ್ವಕಪ್ ವರೆಗೆ ತಂಡದ ಮಾರ್ಗಸೂಚಿಯನ್ನು ಸಿದ್ಧಪಡಿಸಲಿದ್ದಾರೆ.ಗೌತಮ್ ಗಂಭೀರ್ ವೈಟ್ ಬಾಲ್ ಕ್ರಿಕೆಟ್‌ನಲ್ಲಿ ಯುವ ಟೀಮ್ ಇಂಡಿಯಾವನ್ನು ಕಟ್ಟುವ ತಯಾರಿಯಲ್ಲಿದ್ದಾರೆ.ಸದ್ಯ ಟಿ20 ವಿಶ್ವಕಪ್‌ನಲ್ಲಿ ಟೀಂ ಇಂಡಿಯಾ ಸದ್ದು ಮಾಡುತ್ತಿದೆ.ಸದ್ಯ ಭಾರತ ತಂಡದ ಹೆಡ್ ಕೋಚ್ ರಾಹುಲ್ ದ್ರಾವಿಡ್.

ಇದನ್ನೂ ಓದಿ : ಅರಮನೆಯಂತಿದೆ ಸಚಿನ್ ತೆಂಡೂಲ್ಕರ್ ಐಷಾರಾಮಿ ಬಂಗಲೆ.. ಮುಂಬೈನ ಈ ಮನೆಯ ಕೋಣೆಗಳು, ಗಾಜಿನ ಸೇತುವೆ ಸೇರಿ ಒಳಾಂಗಣ ಫೋಟೋ ಇಲ್ಲಿವೆ

2024ರ ಟಿ20 ವಿಶ್ವಕಪ್ ಬಳಿಕ ರಾಹುಲ್ ದ್ರಾವಿಡ್ ಅಧಿಕಾರಾವಧಿ ಕೊನೆಗೊಳ್ಳಲಿದೆ.ಇದರಿಂದಾಗಿ ಟೀಂ ಇಂಡಿಯಾಗೆ ಹೊಸ ಹೆಡ್ ಕೋಚ್‌ಗಾಗಿ ಬಿಸಿಸಿಐ ಬಹಳ ದಿನಗಳಿಂದ ಹುಡುಕಾಟ ನಡೆಸುತ್ತಿದೆ.ಆದರೆ ಹಾಲಿ ಕೋಚ್ ರಾಹುಲ್ ದ್ರಾವಿಡ್ ಈಗಾಗಲೇ ಈ ಹುದ್ದೆಗೆ ಮತ್ತೊಮ್ಮೆ ಅರ್ಜಿ ಸಲ್ಲಿಸಲು ನಿರಾಕರಿಸಿದ್ದಾರೆ.ಹಾಗಾಗಿ ಗೌತಮ್ ಗಂಭೀರ್ ಬಿಸಿಸಿಐನ ಮೊದಲ ಆಯ್ಕೆಯಾಗಿದ್ದಾರೆ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News