ದೇಶಾದ್ಯಂತ ಇರುವ ಎಲ್ಲ ಬ್ಯಾಂಕ್ ಗಳು ತಮ್ಮ ತಮ್ಮ ATM ಗಳಲ್ಲಿ ರೂ.2000 ಮುಖಬೆಲೆಯ ನೋಟುಗಳನ್ನು ಹಾಕುವುದನ್ನು ಬಂದ್ ಮಾಡಿವೆ. ಅವುಗಳ ಜಾಗಕ್ಕೆ ಕಡಿಮೆ ಮುಖಬೆಲೆ ಇರುವ ನೋಟುಗಳನ್ನು ಭರ್ತಿ ಮಾಡಲಾರಂಭಿಸಿವೆ. ಶೀಘ್ರವೇ ATM ಗಳಿಂದ ಕೇವಲ 500, 200 ಹಾಗೂ 100 ಮುಖಬೆಲೆಯ ನೋಟುಗಳು ಹೊರಬರಲಿವೆ.
ಕುಸುಮ್ (KUSUM) ಯೋಜನೆಯಲ್ಲಿ, ರೈತರು ತಮ್ಮ ಬಂಜರು ಭೂಮಿಯಲ್ಲಿ ಸೌರ ಫಲಕಗಳನ್ನು ಹಾಕುವ ಮೂಲಕ ನೀರಾವರಿ ಜೊತೆಗೆ ವಿದ್ಯುತ್ ಉತ್ಪಾದಿಸಬಹುದು. ವಿಶೇಷವೆಂದರೆ ರೈತರು ಸೌರ ಫಲಕಗಳಿಂದ ಪಡೆದ ಹೆಚ್ಚುವರಿ ಶಕ್ತಿಯನ್ನು ಮಾರಾಟ ಸಹ ಮಾಡಬಹುದು.
ಈಗ ನೀವು ಪ್ಯಾನ್ ಕಾರ್ಡ್(PAN Card)ಗಾಗಿ ಯಾವುದೇ ಫಾರ್ಮ್ ಅನ್ನು ಭರ್ತಿ ಮಾಡಬೇಕಾಗಿಲ್ಲ. ಈಗ ನೀವು ಯಾವುದೇ ಫಾರ್ಮ್ ಅನ್ನು ಭರ್ತಿ ಮಾಡದೆ ಪ್ಯಾನ್ ಕಾರ್ಡ್ ಪಡೆಯುತ್ತೀರಿ. ಶನಿವಾರ ಬಜೆಟ್ ಮಂಡಿಸುವಾಗ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೊಸ ವ್ಯವಸ್ಥೆಯನ್ನು ಪ್ರಕಟಿಸಿದ್ದಾರೆ.
ಇತ್ತೀಚಿನ ವರದಿಯ ಪ್ರಕಾರ, ಭಾರತದ ಆರ್ಥಿಕ ಕೊರತೆ ಸ್ಥಿರವಾಗಿ ಕುಸಿಯುತ್ತಿದೆ. 2010-11ರಲ್ಲಿ ಹಣಕಾಸಿನ ಕೊರತೆ ಶೇಕಡಾ 4.8 ರಷ್ಟಿತ್ತು. ಆದರೆ ಪ್ರಸ್ತುತ 2019-20ರಲ್ಲಿ ಹಣಕಾಸಿನ ಕೊರತೆ ಕಡಿಮೆಯಾಗಿದೆ.
ಸಂಸತ್ತಿನ ಬಜೆಟ್ ಅಧಿವೇಶನ ಶುಕ್ರವಾರ (ಜನವರಿ 31) ಆರಂಭವಾಗಲಿದೆ. ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು 2019-20ರ ಆರ್ಥಿಕ ಸಮೀಕ್ಷೆಯನ್ನು ಸದನದಲ್ಲಿ ಮಂಡಿಸಲಿದ್ದಾರೆ. ಶನಿವಾರ ಲೋಕಸಭೆಯಲ್ಲಿ ಬಜೆಟ್ ಮಂಡಿಸಲಾಗುವುದು.
ಆರ್ಥಿಕತೆ, ಹಣದುಬ್ಬರ ಮತ್ತು ಸಾಮಾನ್ಯ ಜನರ ನಿರೀಕ್ಷೆಗಳ ಮಧ್ಯೆ ಈ ಬಾರಿಯ ಬಜೆಟ್ ಅನ್ನು ಬಹಳ ಮುಖ್ಯವಾದ ಬಜೆಟ್ ಎಂದು ಪರಿಗಣಿಸಲಾಗಿದೆ. ಏಕೆಂದರೆ, ಕಾರ್ಪೋರೇಟ್ಗಳಿಂದ ಹಿಡಿದು ಷೇರು ಮಾರುಕಟ್ಟೆಯವರೆಗೆ, ಜನಸಾಮಾನ್ಯರಿಂದ ಹಿಡಿದು ರೈತರವರೆಗೆ ಎಲ್ಲರ ದೃಷ್ಟಿ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರತ್ತ ನೆಟ್ಟಿದೆ.
ಭಾರತವನ್ನು 5 ಟ್ರಿಲಿಯನ್ ಡಾಲರ್ ಆರ್ಥಿಕತೆಯನ್ನಾಗಿ ಮಾಡಲು ದೇಶದ ಕಂಪನಿಗಳ ಅಭಿವೃದ್ಧಿ ಅಗತ್ಯ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದರು. ಇದಕ್ಕಾಗಿ ಕೇಂದ್ರ ಸರ್ಕಾರವು ಈಗಿರುವ ಆದಾಯ ತೆರಿಗೆ ಕಾಯ್ದೆ ಮತ್ತು ಮನಿ ಲಾಂಡರಿಂಗ್ ತಡೆ ಕಾಯ್ದೆಯನ್ನು ಅಪರಾಧೇತರ ವರ್ಗಕ್ಕೆ ತರಲು ನಿರ್ಧರಿಸಿದೆ.
ಮುಂಬರುವ ಆರ್ಥಿಕ ವರ್ಷದ ಕೇಂದ್ರ ಬಜೆಟ್ ಅನ್ನು ಫೆಬ್ರವರಿ 1 ಮಂಡಿಸಲಾಗುವುದು. ಪ್ರತಿಯೊಂದು ಕ್ಷೇತ್ರಕ್ಕೂ ಸಂಬಂಧಿಸಿದಂತೆ ಜನರಿಗೆ ಈ ಬಜೆಟ್ನಲ್ಲಿ ಹಣಕಾಸು ಸಚಿವರಿಂದ ಸಾಕಷ್ಟು ಭರವಸೆ ಇದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.