ಟ್ವಿಟರ್ನಲ್ಲಿ ನನಗೂ ಅವರಿಗೂ ಆಗಾಗ ಜಗಳ ನಡೆಯುತ್ತೆ, ಅವರು ನನ್ನನ್ನ ಜೈಲಿಗೆ ಹಾಕಿಸ್ತೀನಿ ಅಂತಾರೆ, ಕೃಷ್ಣ ಹುಟ್ಟಿದ್ದು ಜೈಲಲ್ಲಿ, ಸಾವರ್ಕರ್, ಭಗತ್ ಸಿಂಗ್ ಇದ್ದದ್ದು ಜೈಲಲ್ಲಿ. ಈ ಸಮಾಜ ಒಳ್ಳೆಯ ದಿಕ್ಕಿನ ಕಡೆ ನಡಿಬೇಕು ಅಂತ ಯಾರು ಹೇಳ್ತಾರೆ ಅಂತಹವರನ್ನು ಈ ಸರ್ಕಾರ ಜೈಲಿನಲ್ಲಿ ಇಟ್ಟಿದೆ ಎಂದು ಪರೋಕ್ಷವಾಗಿ ಸಚಿವ ಪ್ರಿಯಾಂಕ್ ಖರ್ಗೆ ವಿರುದ್ದ ಚಕ್ರವರ್ತಿ ಸೂಲಿಬೆಲೆ ಗುಡುಗಿದರು.
Udhayanidhi stalin : ತಮಿಳುನಾಡು ಸಚಿವ ಉದಯನಿಧಿ ಸ್ಟಾಲಿನ್ ಅವರು ನೂತನ ಸಂಸತ್ತಿಗೆ ಭಾರತದ ರಾಷ್ಟ್ರಪತಿಯನ್ನು ಆಹ್ವಾನಿಸದಿದ್ದಕ್ಕೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕಳೆದ ಕೆಲವು ದಿನಗಳ ಹಿಂದೆ ಸನಾತನ ಧರ್ಮದ ಕುರಿತು ಹೇಳಿಕೆ ನೀಡಿ ರಾಷ್ಟ್ರಾದ್ಯಂತ ಆಕ್ರೋಶಕ್ಕೆ ಕಾರಣವಾಗಿದ್ದರು.
ಸನಾತನ ಧರ್ಮಕ್ಕೆ ಅನಾದಿ ಕಾಲದಿಂದಲೂ ತನ್ನದೆ ಆದ ಪರಂಪರೆ ಇದೆ. ಎಲುಬಿಲ್ಲದ ನಾಲಿಗೆ ಇದೆಯೆಂದು ಬಾಯಿಗೆ ಬಂದಂತೆ ಹೇಳಿಕೆ ನೀಡಿದರೆ ಜನ ಎಲ್ಲದಕ್ಕು ಸೂಕ್ತ ಸಮಯದಲ್ಲಿ ಉತ್ತರ ಕೊಡುತ್ತಾರೆಂಬುದು ಮರೆಯಬಾರದು ತಕ್ಷಣವೆ ಕ್ಷಮೆ ಕೇಳಬೇಕು ಎಂದು ಮಾಜಿ ಸಚಿವ ಪ್ರಭು ಚೌಹಾಣ್ ಆಗ್ರಹಿಸಿದ್ದಾರೆ.
Sanatana Dharma row : ಮಣಿಪುರದಲ್ಲಿ ಪ್ರಚೋದಿತ ಗಲಭೆಯಿಂದ 250 ಕ್ಕೂ ಹೆಚ್ಚು ಜನರ ಹತ್ಯೆ ಮತ್ತು 7.5 ಲಕ್ಷ ಕೋಟಿ ಭ್ರಷ್ಟಾಚಾರ ಸೇರಿದಂತೆ ಇತರ ಸತ್ಯಗಳಿಂದ ಜನರ ಗಮನವನ್ನು ಬೇರೆಡೆಗೆ ಸೆಳೆಯಲು ಮೋದಿ ಮತ್ತು ಅವರ ಕಂಪನಿಯು ಸನಾತನ ತಂತ್ರವನ್ನು ಬಳಸುತ್ತಿದೆ ಎಂದು ಉದಯನಿಧಿ ಹೇಳಿದರು.
ಸನಾತನ ಧರ್ಮದ ಬಗ್ಗೆ ಉದಯನಿಧಿ ಹೇಳಿಕೆ ವಿಚಾರ
ಸನಾತನ ಧರ್ಮದ ಅವಹೇಳನಕ್ಕೆ ತಕ್ಕ ಪ್ರತ್ಯುತ್ತರ ನೀಡಿ
ಸಚಿವ ಸಂಪುಟದ ಸಹೋದ್ಯೋಗಿಗಳಿಗೆ ಪ್ರಧಾನಿ ಮೋದಿ ಕರೆ
ಉದಯನಿಧಿ ಹೇಳಿಕೆಗೆ ಪ್ರಧಾನಿ ಮೊದಲ ಪ್ರತಿಕ್ರಿಯೆ
ಇತಿಹಾಸ ಕೆದಕಬೇಡಿ, ಸಂವಿಧಾನ ವಾಸ್ತವ್ಯಕ್ಕೆ ಬದ್ಧರಾಗಿ
ಸಮಕಾಲಿನ ಪರಿಸ್ಥಿತಿಯ ಬಗ್ಗೆ ಮಾತ್ರ ಮಾತನಾಡಿ
ಉದಯನಿಧಿ ಹೇಳಿಕೆ ಬಿಜೆಪಿ ಕೈಗೆ ಸನಾತನ ಅಸ್ತ್ರವಾಯ್ತಾ..?
ಹಿಂದೂ, ಇಸ್ಲಾಮ್, ಕ್ರೈಸ್ತ, ಸಿಖ್, ಭೌದ್ಧ, ಧರ್ಮದಲ್ಲಿ ದಯವೇ ಧರ್ಮದ ಮೂಲವಯ್ಯ ಎಂದಿದ್ದಾರೆ ಅಂತ ಗೃಹ ಸಚಿವ ಜಿ.ಪರಮೇಶ್ವರ ಅವರ ಹೇಳಿಕೆಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಮರ್ಥನೆ ಮಾಡಿಕೊಂಡರು.
ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ನೂತನ ಸಂಸತ್ ಕಟ್ಟಡದ ಉದ್ಘಾಟನೆಗೆ ಕೇಂದ್ರ ಸರ್ಕಾರ ಆಹ್ವಾನಿಸದಿರುವುದು 'ಸನಾತನ ಧರ್ಮದ ಅಡಿಯಲ್ಲಿ ಇರುವ ತಾರತಮ್ಯಕ್ಕೆ ಉದಾಹರಣೆಯಾಗಿದೆ ಎಂದು ತಮಿಳುನಾಡು ಮುಖ್ಯಮಂತ್ರಿ ಎಂಕೆ ಸ್ಟಾಲಿನ್ ಅವರ ಪುತ್ರ ಉದಯನಿಧಿ ಮಂಗಳವಾರ ರಾತ್ರಿ ಸುದ್ದಿಗಾರರಿಗೆ ತಿಳಿಸಿದರು.
ಸನಾತನ ಧರ್ಮದ ಬಗ್ಗೆ ಅವಹೇಳನಕಾರಿಯಾಗಿ ಹೇಳಿಕೆ ನೀಡಿರುವ ತಮಿಳುನಾಡಿನ ಸಚಿವ ಉದಯನಿಧಿ ಅವರನ್ನು ಬಂಧಿಸಿ, ಮೊಕದ್ದಮೆ ದಾಖಲಿಸಬೇಕು ಎಂದು ಕನ್ನಡಪರ ಹೋರಾಟಗಾರ ಚಾ.ರಂ.ಶ್ರೀನಿವಾಸಗೌಡ ಆಗ್ರಹಿಸಿದರು.
Udhayanidhi stalin on Sanatana dharma : ಡೆಂಗ್ಯೂ, ಮಲೇರಿಯಾ ಮತ್ತು ಮಾರಣಾಂತಿಕ ಕೊರೊನಾ ವೈರಸ್ನಂತಹ ಸೊಳ್ಳೆಗಳಿಂದ ಹರಡುವ ರೋಗಗಳ ಹರಡುವಿಕೆಯಂತಹ ಅನೇಕ ಸಾಮಾಜಿಕ ಅನಿಷ್ಟಗಳಿಗೆ ಸನಾತನ ಧರ್ಮ ಕಾರಣವಾಗಿದೆ ಎಂದು ನಾನು ನಂಬುತ್ತೇನೆ ಎಂದು ನಟ, ಸಚಿವ ಉದಯನಿಧಿ ಹೇಳಿದ್ದಾರೆ.
Kharmas 2021 - ಗ್ರಹ ದೆಸೆ ಅನುಕೂಲಕರವಾಗಿಲ್ಲದ ಸಮಯದಲ್ಲಿ ಶುಭ ಕಾರ್ಯಗಳನ್ನು (Auspicious Work) ಮಾಡಿದರೆ ಅದು ಅಶುಭ ಫಲಿತಾಂಶವನ್ನು (Negative Results) ನೀಡುತ್ತದೆ. ಖರ್ಮಾಸ್ ಕೂಡ ಇದರಲ್ಲಿ ಒಂದು, ಖರ್ಮಾಸದಲ್ಲಿ ಶುಭ ಕಾರ್ಯಗಳನ್ನು ಮಾಡುವುದನ್ನು ನಿಷೇಧಿಸಲಾಗಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.