Viral News: 8ನೇ ಮದುವೆಯಾಗಲು ಹೋಗಿ ಸಿಕ್ಕಿಬಿದ್ದವಳಿಗೆ 7 ಮಂದಿ ಗಂಡಂದಿರು!

Rajasthan Viral News: ರಾಜಸ್ಥಾನದ ರತನ್‌ಗಢ ನಿವಾಸಿಯಾಗಿರುವ ಈ ಮಹಿಳೆಗೆ ಮದುವೆಯಾಗುವುದೇ ಖಯಾಲಿ. ಈ ಮಹಿಳೆಗೆ ಮೂವರು ಮಕ್ಕಳು ಸಹ ಇದ್ದಾರೆ. ವ್ಯಕ್ತಿಯೊಬ್ಬರೊಂದಿಗೆ ಮೊದಲ ಮದುವೆಯಾಗಿದ್ದ ಈಕೆ ಕೆಲ ವರ್ಷ ಸಂಸಾರ ನಡೆಸಿದ್ದಳು. ಈತನಿಂದ ಮೂವರು ಮಕ್ಕಳನ್ನು ಪಡೆದುಕೊಂಡ ಆಕೆ, ಪತಿಗೆ ವಿಚ್ಛೇದನ ನೀಡಿದ್ದಳಂತೆ.

Written by - Puttaraj K Alur | Last Updated : Jun 20, 2024, 12:57 PM IST
  • 7 ಗಂಡಂದಿರನ್ನು ಹೊಂದಿರುವ ಈಕೆಗೆ ಮದುವೆಯಾಗುವುದೇ ಖಯಾಲಿ!
  • 8ನೇ ಮದುವೆಯಾಗಲು ಹೋಗಿ ಪೊಲೀಸರ ಕೈಗೆ ಸಿಕ್ಕಿಬಿದ್ದ ಮಹಿಳೆ
  • ರಾಜಸ್ಥಾನದಲ್ಲಿ ಮದುವೆಯಾಗಿ ವಂಚಿಸುತ್ತಿದ್ದ ಮೋಸಗಾತಿ ಖಾಕಿ ಬಲೆಗೆ
Viral News: 8ನೇ ಮದುವೆಯಾಗಲು ಹೋಗಿ ಸಿಕ್ಕಿಬಿದ್ದವಳಿಗೆ 7 ಮಂದಿ ಗಂಡಂದಿರು! title=
8ನೇ ಮದುವೆಯಾಗಲು ಹೋಗಿ ಸಿಕ್ಕಿಬಿದ್ದಳು!

Rajasthan Viral News: 7 ಮಂದಿಯನ್ನು ಮದುವೆಯಾಗಿದ್ದ ಮಹಿಳೆಯೊಬ್ಬಳು 8ನೇ ಮದುವೆಯಾಗಲು ಹೋಗಿ ಸಿಕ್ಕಿಬಿದ್ದಿರುವ ಘಟನೆ ರಾಜಸ್ಥಾನದಲ್ಲಿ ನಡೆದಿದೆ. ಈ ಸುದ್ದಿ ಬಹಿರಂಗವಾಗುತ್ತಿದ್ದಂತೆಯೇ  ಆಕೆ ಪೊಲೀಸರ ಅತಿಥಿಯಾಗಿದ್ದಾಳೆ. ಈ ಸುದ್ದಿ ಇದೀಗ ಸೋಷಿಯಲ್‌ ಮೀಡಿಯಾದಲ್ಲಿ ಸಖತ್‌ ವೈರಲ್‌ ಆಗುತ್ತಿದೆ. 

ಹೌದು, ಒಬ್ಬ ಮಹಿಳೆ ಈಗಾಗಲೇ 7 ಮಂದಿಯನ್ನು ಮದುವೆಯಾಗಿದ್ದಳು, ಆದರೂ ಆಕೆಗೆ ಆಸೆ ತೀರಿರಲಿಲ್ಲವೆಂದು ಕಾಣಿಸುತ್ತದೆ. ಹೀಗಾಗಿಯೇ 8ನೇ ಮದುವೆಯಾಗಲು ಸಿದ್ಧತೆ ನಡೆಸಿದ್ದಳು. ಆದರೆ ಆಕೆಯ ಪ್ಲ್ಯಾನ್‌ ಉಲ್ಟಾ ಆಗಿದ್ದು, ಸಿಕ್ಕಿಹಾಕಿಕೊಂಡು ಕಂಬಿ ಎಣಿಸುತ್ತಿದ್ದಾಳೆ.  

ಇದನ್ನೂ ಓದಿ: ದೇಶದಲ್ಲೇ ಅತಿ ಹೆಚ್ಚು ವೇತನ ಪಡೆಯುವ ಮುಖ್ಯಮಂತ್ರಿ ಯಾರು ಗೊತ್ತೆ..? ಸಿದ್ದರಾಮಯ್ಯರ ಸಂಬಳ ಎಷ್ಟಿದೆ..?

ರಾಜಸ್ಥಾನದ ರತನ್‌ಗಢ ನಿವಾಸಿಯಾಗಿರುವ ಈ ಮಹಿಳೆಗೆ ಮದುವೆಯಾಗುವುದೇ ಖಯಾಲಿ. ಈ ಮಹಿಳೆಗೆ ಮೂವರು ಮಕ್ಕಳು ಸಹ ಇದ್ದಾರೆ. ವ್ಯಕ್ತಿಯೊಬ್ಬರೊಂದಿಗೆ ಮೊದಲ ಮದುವೆಯಾಗಿದ್ದ ಈಕೆ ಕೆಲ ವರ್ಷ ಸಂಸಾರ ನಡೆಸಿದ್ದಳು. ಈತನಿಂದ ಮೂವರು ಮಕ್ಕಳನ್ನು ಪಡೆದುಕೊಂಡ ಆಕೆ, ಪತಿಗೆ ವಿಚ್ಛೇದನ ನೀಡಿದ್ದಳಂತೆ. ಬಳಿಕ ಮದುವೆಯಾಗುವುದೇ ದಂಧೆಯನ್ನಾಗಿ ಮಾಡಿಕೊಂಡಿದ್ದ ಈಕೆ ಶ್ರೀಮಂತ ಹುಡುಗರನ್ನು ತನ್ನ ಬಲೆಗೆ ಬೀಳಿಸಿಕೊಳ್ಳುತ್ತಿದ್ದಳಂತೆ. 

ಅಮಾಯಕರನ್ನೇ ಟಾರ್ಗೆಟ್‌ ಮಾಡುತ್ತಿದ್ದ ಆಕೆ ಅವರನ್ನು ಮರಳು ಮಾಡಿ ಶಾಸ್ತ್ರೋಕ್ತವಾಗಿ ಮದುವೆಯಾಗುತ್ತಿದ್ದಳು. ನಂತರ 10-15 ದಿನ ಆತನ ಮನೆಯಲ್ಲಿರುತ್ತಿದ್ದಳಂತೆ. ಸಮಯ-ಸಂದರ್ಭ ನೋಡಿ ಗಂಡನ ಮನೆಯಲ್ಲಿರುವ ಹಣ, ಚಿನ್ನಾಭರಣಗಳನ್ನು ದೋಚಿ ಎಸ್ಕೇಪ್‌ ಆಗುತ್ತಿದ್ದಳಂತೆ. ಹೀಗೆ ಬರೋಬ್ಬರಿ 7 ಮಂದಿಯನ್ನು ಮದುವೆಯಾಗಿ ಟೋಪಿ ಹಾಕಿದ್ದಳಂತೆ.

ಇದನ್ನೂ ಓದಿ: ದೇಶದಲ್ಲೇ ಅತಿ ಹೆಚ್ಚು ವೇತನ ಪಡೆಯುವ ಮುಖ್ಯಮಂತ್ರಿ ಯಾರು ಗೊತ್ತೆ..? ಸಿದ್ದರಾಮಯ್ಯರ ಸಂಬಳ ಎಷ್ಟಿದೆ..?

ಈ ಮಹಿಳೆ ಇತ್ತೀಚೆಗಷ್ಟೇ ಬಿಕಾನೇರ್​ನ ಲುಂಕಾರನ್​ಸರ್ ನಿವಾಸಿ ವೀರ್​ಪಾಲ್ ಅವರನ್ನು ಮದುವೆಯಾಗಿದ್ದಳಂತೆ. 20 ದಿನಗಳ ಕಾಲ ಆತನ ಜೊತೆಯಲ್ಲಿದ್ದ ಆಕೆ ರಾತ್ರೋರಾತ್ರಿ ಚಿನ್ನಾಭರಣ ಹಾಗೂ ಹಣದೊಂದಿಗೆ ಎಸ್ಕೇಪ್‌ ಆಗಿದ್ದಳಂತೆ. ನಂತರ ಈಕೆಯ ೮ನೇ ಮದುವೆಗೆ ಎಲ್ಲಾ ಸಿದ್ಧತೆ ನಡೆದಿತ್ತು. ಶ್ರೀಮಂತ ವ್ಯಕ್ತಿಯನ್ನೇ ಬುಟ್ಟಿಗೆ ಹಾಕಿಕಕೊಂಡಿದ್ದ ಈಕೆ ಆತನಿಗೆ ವಂಚಿಸಲು ಸಕಲ ರೀತಿಯಲ್ಲಿ ಸಜ್ಜಾಗಿದ್ದಳು. ಆದರೆ ಈಕೆಯ ಪ್ಲ್ಯಾನ್‌ ಉಲ್ಟಾ ಆಗಿದ್ದು, ಮದುವೆಗೆ ತಯಾರಿ ನಡೆಸುತ್ತಿದ್ದಾಗಲೇ ಪೊಲೀಸರಿಗೆ ಮಾಹಿತಿ ಗೊತ್ತಾಗಿ ಆಕೆಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಸದ್ಯ ಅನೇಕರಿಗೆ ವಂಚಿಸುತ್ತಿದ್ದ ಈಕೆ ಇದೀಗ ಪೊಲೀಸರ ಅತಿಥಿಯಾಗಿದ್ದಾಳೆ.  

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News