Viral Video: ಇದು ‘ಯಮ’ ಊಟಕ್ಕೆ ತೆರಳಿದ್ದ ವೇಳೆ ನಡೆದ ಪವಾಡಸದೃಶ ಘಟನೆ!

Viral Video: ಬಿಹಾರದ ಬೆಟ್ಟಿಯ ಉತ್ತರವಾರಿ ಪೋಖರಾ ಪ್ರದೇಶದ ನಿವಾಸಿ 24 ವರ್ಷದ ಯುವಕ ಪ್ರತೀಕ್ ಕುಮಾರ್ ಎಂಬಾತ ರೈಲಿನಡಿ ಬಿದ್ದು ಪವಾಡಸದೃಶವೆಂಬಂತೆ ಪ್ರಾಣಾಪಾಯದಿಂದ ಪಾರಾಗಿದ್ದಾನೆ. ​

Written by - Puttaraj K Alur | Last Updated : Dec 3, 2023, 05:06 PM IST
  • ಚಲಿಸುತ್ತಿದ್ದ ರೈಲು ಹತ್ತಲು ಹೋಗಿ ರೈಲಿನಡಿ ಬಿದ್ದ ಯುವಕ
  • ಪವಾಡಸದೃಶವೆಂಬಂತೆ ಪ್ರಾಣಾಪಾಯದಿಂದ ಪಾರಾದ ವ್ಯಕ್ತಿ
  • ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿರುವ ವಿಡಿಯೋ
Viral Video: ಇದು ‘ಯಮ’ ಊಟಕ್ಕೆ ತೆರಳಿದ್ದ ವೇಳೆ ನಡೆದ ಪವಾಡಸದೃಶ ಘಟನೆ!   title=
ಪವಾಡಸದೃಶವೆಂಬಂತೆ ಬದುಕುಳಿದ ಯುವಕ!

ನವದೆಹಲಿ: ನಮ್ಮ ಜನರಿಗೆ ಎಷ್ಟೇ ಹೇಳಿದರೂ ಬುದ್ದಿ ಕಲಿಯುವುದಿಲ್ಲ. ಆತುರಕ್ಕೆ ಬಿದ್ದು ಜೀವವನ್ನೇ ಕಳೆದುಕೊಳ್ಳುವ ದುಸ್ಸಾಹಕ್ಕೆ ಕೈಹಾಕುತ್ತಾರೆ. ಚಲಿಸುತ್ತಿದ್ದ ರೈಲು ಹತ್ತಲು ಹೋಗಿ ಅನೇಕರು ಪ್ರಾಣ ಕಳೆದುಕೊಂಡಿದ್ದಾರೆ. ಕೆಲವರು ಪವಾಡಸದೃಶವೆಂಬಂತೆ ಬದುಕುಳಿಯುವ ಮೂಲಕ ಅಚ್ಚರಿ ಮೂಡಿಸಿದ್ದಾರೆ. ಚಲಿಸುತ್ತಿದ್ದ ರೈಲು ಹತ್ತಲು ಅದರಡಿ ಬಿದ್ದು ಬದುಕುಳಿದು ಬಂದ ವ್ಯಕ್ತಿಯ ವಿಡಿಯೋ ಇದೀಗ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ.

ಈ ಘಟನೆ ಬಿಹಾರದ ಬಗಾಹ ರೈಲು ನಿಲ್ದಾಣದಲ್ಲಿ ನಡೆದಿದೆ. ಚಲಿಸುತ್ತಿದ್ದ ರೈಲನ್ನು ಹತ್ತಲು ಪ್ರಯತ್ನಿಸುತ್ತಿದ್ದ ವ್ಯಕ್ತಿಯೊಬ್ಬ ರೈಲು ಮತ್ತು ಪ್ಲಾಟ್‌ಫಾರ್ಮ್ ನಡುವೆ ಬಿದ್ದಿದ್ದಾನೆ. ಚಲಿಸುತ್ತಿದ್ದ ರೈಲು ಹತ್ತಲು ಹೋಗಿದ್ದ ಆತ ಕಾಲು ಜಾರಿ ಕೆಳಗಡೆ ಬಿದ್ದಿದ್ದಾನೆ. ಸಣ್ಣಪುಟ್ಟ ಗಾಯಗಳನ್ನು ಹೊರತುಪಡಿಸಿ ಪವಾಡಸದೃಶವೆಂಬಂತೆ ಬದುಕುಳಿದಿದ್ದಾನೆ.

ಇದನ್ನೂ ಓದಿ: Ravana Language: ಲಂಕೆಯಲ್ಲಿದ್ದ ರಾವಣ ಯಾವ ಭಾಷೆ ಮಾತನಾಡುತ್ತಿದ್ದ ಗೊತ್ತೇ?

ಹೌದು, ಬಿಹಾರದ ಬೆಟ್ಟಿಯ ಉತ್ತರವಾರಿ ಪೋಖರಾ ಪ್ರದೇಶದ ನಿವಾಸಿ 24 ವರ್ಷದ ಯುವಕ ಪ್ರತೀಕ್ ಕುಮಾರ್ ಎಂಬಾತ ರೈಲಿನಡಿ ಬಿದ್ದು ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಅಂದಹಾಗೆ ರೈಲಿನಲ್ಲಿ ಕುಳಿತುಕೊಂಡಿದ್ದ ಈತ ಬಿಸ್ಕತ್ತು ಮತ್ತು ತಂಪು ಪಾನೀಯವನ್ನು ಖರೀದಿಸಲು ರೈಲಿನಿಂದ ಕಳೆಗಿಳಿದಿದ್ದರಂತೆ. ರೈಲು ಚಲಿಸುತ್ತಿದ್ದಂತೆಯೇ ಓಡಿ ಓಡಿ ಬಂದ ಆತ ಬೋಗಿ ಹತ್ತಲು ಪ್ರಯತ್ನಿಸಿದ್ದಾನೆ. ಈ ವೇಳೆ ಆತನ ಕಾಲು ಜಾರಿದ್ದರಿಂದ ರೈಲಿನಡಿ ಸಿಲುಕಿ ಕಳಗಡೆ ಬಿದ್ದಿದ್ದಾನೆ.

ಕೂಡಲೇ ಪೊಲೀಸ್ ಸಿಬ್ಬಂದಿ ಮತ್ತು ಸ್ಥಳೀಯರು ಆತನ ರಕ್ಷಣೆಗೆ ಮುಂದಾಗಿದ್ದಾರೆ. ರೈಲು ಹಳಿ ಮತ್ತು ಪ್ಲಾಟ್‌ಫಾರ್ಮ್‍ನಡಿ ಸಿಲುಕಿದ್ದ ಆತನಿಗೆ ಸರಿಯಾಗಿ ಮಾರ್ಗದರ್ಶನ ಮಾಡಿದ್ದಾರೆ. ರೈಲು ಸಂಪೂರ್ಣವಾಗಿ ಹೋಗುವವರೆಗೂ ಹಳಿಯಲ್ಲಿ ಚಪ್ಪಟೆಯಾಗಿ ಮಲಗುವಂತೆ ಆತನಿಗೆ ಸಲಹೆ ನೀಡಿದ್ದಾರೆ. ಆತ ಅದರಂತೆ ರೈಲು ಹೋಗುವವರೆಗೂ ಹಳಿಯಲ್ಲಿಯೇ ಮಲಗಿಕೊಂಡು ನಂತರ ಎದ್ದುಬಂದು ನಿಟ್ಟಿಸಿರು ಬಿಟ್ಟಿದ್ದಾನೆ. ಈ ದೃಶ್ಯ ಸ್ಥಳೀಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಗಾಯಗೊಂಡಿದ್ದ ಯುವಕನಿಗೆ ತಕ್ಷಣವೇ ವೈದ್ಯಕೀಯ ಚಿಕಿತ್ಸೆ ನೀಡಲಾಯಿತು. ರೈಲು ಹತ್ತುವ ವೇಳೆ ಯಾರೂ ಸಹ ಆತುರ ಮಾಡಬಾರದು ಎಂದು ಪೊಲೀಸರು ಜನರಲ್ಲಿ ಮನವಿ ಮಾಡಿಕೊಂಡಿದ್ದಾರೆ.  

ಇದನ್ನೂ ಓದಿ: Viral Video: ಹಾಡಹಗಲೇ ಗುಂಡಿಕ್ಕಿ ಯುವಕನ ಹತ್ಯೆ! ಭಯಾನಕ ವಿಡಿಯೋ ವೈರಲ್!

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News