ʼಮದುವೆಯಾದ 40 ದಿನದಲ್ಲಿ 6 ಬಾರಿ ಮಾತ್ರ ಮಾಡಿದ್ದಾನೆ..ʼ ಆ ಕಾರಣಕ್ಕೆ ಪತಿಯಿಂದ ವಿಚ್ಛೇದನ ಕೇಳಿದ ಪತ್ನಿ!!

Viral Divorce: ಮದುವೆಯಾಗಿ 40 ದಿನಗಳು ಕಳೆದಿವೆ. ಹೊಸ ಜೀವನದ ಮೇಲೆ ಅಪಾರ ನಿರೀಕ್ಷೆ ಇಟ್ಟುಕೊಂಡಿದ್ದ ವಿವಾಹಿತ ಮಹಿಳೆ ಮಲಗುವ ಕೋಣೆ ಪ್ರವೇಶಿಸುವ ಮುನ್ನವೇ ಪತಿಗೆ ವಿಚ್ಛೇದನ ನೀಡಿದ್ದಾಳೆ.  

Written by - Savita M B | Last Updated : Sep 17, 2024, 06:39 PM IST
  • ಇತ್ತೀಚಿನ ದಿನಗಳಲ್ಲಿ ಮದುವೆಯ ನಂತರ ವಿಚ್ಛೇದನವು ಸಾಮಾನ್ಯ ಸಮಸ್ಯೆಯಾಗಿದೆ.
  • ಆದರೆ ಇದೀಗ ಒಂದು ದಂಪತಿಯ ವಿಚ್ಛೇದನ ವೈರಲ್ ಆಗಿದೆ. ಇದಕ್ಕೆ ಕಾರಣ ತಿಳಿದರೆ ಶಾಕ್ ಆಗುತ್ತೀರಿ.
ʼಮದುವೆಯಾದ 40 ದಿನದಲ್ಲಿ 6 ಬಾರಿ ಮಾತ್ರ ಮಾಡಿದ್ದಾನೆ..ʼ ಆ ಕಾರಣಕ್ಕೆ ಪತಿಯಿಂದ ವಿಚ್ಛೇದನ ಕೇಳಿದ ಪತ್ನಿ!!  title=

ಇತ್ತೀಚಿನ ದಿನಗಳಲ್ಲಿ ಮದುವೆಯ ನಂತರ ವಿಚ್ಛೇದನವು ಸಾಮಾನ್ಯ ಸಮಸ್ಯೆಯಾಗಿದೆ. ಅದರಲ್ಲೂ ಖ್ಯಾತ ಸಿನಿಮಾ ನಟ, ನಟಿಯರು, ಖ್ಯಾತ ಕ್ರಿಕೆಟಿಗರು, ಉದ್ಯಮಿಗಳು ವಿಚ್ಛೇದನದ ಮೂಲಕ ಸುದ್ದಿಯಲ್ಲಿದ್ದಾರೆ. ಹಲವು ವರ್ಷಗಳ ಕುಟುಂಬ ಜೀವನದ ನಂತರ ಅವರು ವೈವಾಹಿಕ ಜೀವನಕಕೆ ವಿದಾಯ ಹೇಳುತ್ತಿದ್ದಾರೆ.. ಆದರೆ ಇದೀಗ ಒಂದು ದಂಪತಿಯ ವಿಚ್ಛೇದನ ವೈರಲ್ ಆಗಿದೆ. ಇದಕ್ಕೆ ಕಾರಣ ತಿಳಿದರೆ ಶಾಕ್ ಆಗುತ್ತೀರಿ.  

ಉತ್ತರ ಪ್ರದೇಶದ ಆಗ್ರಾದ ಮಹಿಳೆಯೊಬ್ಬರು 40 ದಿನಗಳ ಗಂಡನ ಅಸಭ್ಯತೆಯ ನಂತರ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದಾರೆ. ಪತಿಯಿಂದ ವಿಚ್ಛೇದನಕ್ಕೆ ಆಕೆ ನೀಡಿದ ಕಾರಣ ತಿಳಿದು ಎಲ್ಲರೂ ನಗುತ್ತಿದ್ದಾರೆ. ಮದುವೆಯಾದ 40 ದಿನಗಳ ನಂತರ ವಿಚ್ಛೇದನ ಏಕೆ ಬೇಕು ಎಂದು ಕೇಳಿದಾಗ ಪತಿ ರಾಜೇಶ್ ತಿಂಗಳಿಗೆ ಎರಡು ಬಾರಿ ಸ್ನಾನ ಮಾಡುತ್ತಿದ್ದರು ಎಂದು ಮಹಿಳೆ ದೂರಿದ್ದಾರೆ.

ಇದನ್ನೂ ಓದಿ-ವಿರಾಟ್ ಕೊಹ್ಲಿ ಅಲ್ಲ, ʼಈʼ ಸ್ಟಾರ್ ಟೀಂ ಇಂಡಿಯಾದ ಫಿಟ್ ಆಟಗಾರ! ಯಾರು ಗೊತ್ತೇ?   

ಪತಿ ದಿನವೂ ಸರಿಯಾಗಿ ಸ್ನಾನ ಮಾಡದೇ ಬೆಡ್ ರೂಮಿಗೆ ಬಂದಾಗ ಅದರ ವಾಸನೆ ಬಂದಿದ್ದರಿಂದ ಪತ್ನಿ ಬೇಸರಗೊಂಡು ವಿಚ್ಛೇದನ ಪಡೆದಿದ್ದಾಳೆ ಎಂದು ವರದಿಯಾಗಿದೆ. ಮೂಲಗಳ ಪ್ರಕಾರ, ರಾಜೇಶ್ ಗಂಗಾಜಲವನ್ನು ಶುದ್ಧೀಕರಣಕ್ಕಾಗಿ ವಾರಕ್ಕೊಮ್ಮೆ ತಮ್ಮ ದೇಹದ ಮೇಲೆ ಸಿಂಪಡಿಸುತ್ತಾನೆ. ಅಲ್ಲದೇ ಆತ ಮದುವೆಯಾದ ನಂತರ ಬರೀ 6 ಬಾರಿ ಸ್ನಾನ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ... ಇದರಿಂದ ಮನನೊಂದ ಆಕೆ ರಾಜೇಶನನ್ನು ಬಿಟ್ಟು ಪೋಷಕರ ಮನೆಗೆ ಹೋಗಿದ್ದಳು ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಆಕೆಯ ಮನೆಯವರು ರಾಜೇಶ್ ವಿರುದ್ಧ ಸಮೀಪದ ಪೊಲೀಸ್ ಠಾಣೆಯಲ್ಲಿ ವರದಕ್ಷಿಣೆ ಕಿರುಕುಳದ ದೂರು ದಾಖಲಿಸಿದ್ದಾರೆ.

ಆಗ್ರಾದ ಕೌಟುಂಬಿಕ ಸಲಹಾ ಕೇಂದ್ರದ ಅಧಿಕಾರಿಗಳನ್ನು ಸಂಪರ್ಕಿಸಿದಾಗ ಸಂತ್ರಸ್ತೆಯ ದೂರುಗಳನ್ನು ಸರಿಯಾಗಿ ಪರಿಶೀಲಿಸಿದ ಪೊಲೀಸ್ ಸಲಹೆಗಾರರ ​​ಮಧ್ಯಸ್ಥಿಕೆಗೆ ರಾಜೇಶ್ ಸಕಾರಾತ್ಮಕವಾಗಿ ಸ್ಪಂದಿಸಿದರು. ನಿತ್ಯವೂ ಸ್ನಾನ ಮಾಡಿ ಅಭ್ಯಾಸ ಬದಲಿಸುವುದಾಗಿ ಭರವಸೆ ನೀಡಿದ್ದರು ಎನ್ನಲಾಗಿದೆ. ಆದರೆ ಪತ್ನಿ ಮಾತ್ರ ವಿಚ್ಛೇದನ ಬಯಸಿದ್ದಳು. ಸೆಪ್ಟೆಂಬರ್ 22ರಂದು ಕೌನ್ಸೆಲಿಂಗ್ ಕೇಂದ್ರಕ್ಕೆ ಹಿಂತಿರುಗುವಂತೆ ಸೂಚಿಸಲಾಗಿದೆ ಎಂದು ವರದಿ ತಿಳಿಸಿದೆ.

ಇದನ್ನೂ ಓದಿ-ಹಾರ್ದಿಕ್ ಪಾಂಡ್ಯಗೆ ಬಿಗ್ ಶಾಕ್!ಈತನೇ ಮುಂಬೈ ಇಂಡಿಯನ್ಸ್‌ನ ಹೊಸ ಕ್ಯಾಪ್ಟನ್!?‌

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News