ಗೌರಿ-ಗಣೇಶ ಹಬ್ಬಕ್ಕಾಗಿ ಊರಿಗೆ ಹೋಗುವವರಿಗೆ ಕೆ‌ಎಸ್‌ಆರ್‌ಟಿ‌ಸಿ ಗುಡ್ ನ್ಯೂಸ್, ಟಿಕೆಟ್ ಬುಕ್ಕಿಂಗ್ ಮೇಲೆ ರಿಯಾಯಿತಿಯೂ ಲಭ್ಯ

Good News: ಹಬ್ಬದ ಸಂದರ್ಭದಲ್ಲಿ ಯಾವುದೇ ತೊಂದರೆಯಿಲ್ಲದೆ ತಮ್ಮ ತಮ್ಮ ಊರುಗಳಿಗೆ ತೆರಳಲು ಬಯಸುವ ಪ್ರಯಾಣಿಕರು ಇ ಟಿಕೆಟ್ ಬುಕ್ಕಿಂಗ್ (E-Ticket Booking) ಗಾಗಿ www.ksrtc.Karnataka.gov.in ನಲ್ಲಿ ಬುಕ್ ಮಾಡುವಂತೆ ಕೆ‌ಎಸ್‌ಆರ್‌ಟಿ‌ಸಿ ಸೂಚನೆ ನೀಡಿದೆ.   

Written by - Yashaswini V | Last Updated : Sep 3, 2024, 10:53 AM IST
  • ಗೌರಿ ಗಣೇಶ ಹಬ್ಬಕ್ಕೆ ಪ್ರಯಾಣಿಕರಿಗೆ ಗುಡ್ ನ್ಯೂಸ್ ನೀಡಿದ ಕೆ‌ಎಸ್‌ಆರ್‌ಟಿ‌ಸಿ
  • ಹೆಚ್ಚುವರಿ ಬಸ್ ಜೊತೆಗೆ ಟಿಕೆಟ್ ಬುಕ್ಕಿಂಗ್‌ನಲ್ಲಿಯೂ ರಿಯಾಯಿತಿ
  • ಕೆ‌ಎಸ್‌ಆರ್‌ಟಿ‌ಸಿ ರಿಯಾಯಿತಿ ಕೊಡುಗೆಗಳನ್ನು ಮಿಸ್ ಮಾಡಿಕೊಳ್ಳಲೇಬೇಡಿ
ಗೌರಿ-ಗಣೇಶ ಹಬ್ಬಕ್ಕಾಗಿ ಊರಿಗೆ ಹೋಗುವವರಿಗೆ ಕೆ‌ಎಸ್‌ಆರ್‌ಟಿ‌ಸಿ ಗುಡ್ ನ್ಯೂಸ್, ಟಿಕೆಟ್ ಬುಕ್ಕಿಂಗ್ ಮೇಲೆ ರಿಯಾಯಿತಿಯೂ ಲಭ್ಯ  title=

KSRTC: ಗೌರಿ-ಗಣೇಶ ಹಬ್ಬಕ್ಕೆ ದಿನಗಣನೆ ಆರಂಭವಾಗಿದೆ. ಈ ಸಂದರ್ಭದಲ್ಲಿ ಹಬ್ಬದ ಪ್ರಯುಕ್ತ ಊರಿಗೆ ಹೋಗುವವರಿಗೆ ಗುಡ್ ನ್ಯೂಸ್ ನೀಡಿರುವ ಕೆ‌ಎಸ್‌ಆರ್‌ಟಿ‌ಸಿ ನಿಗಮ 1500  ಹೆಚ್ಚುವರಿ ಬಸ್ ಒದಗಿಸುವುದಾಗಿ ಘೋಷಿಸಿದೆ. 

ಹೌದು, ಗೌರಿ- ಗಣೇಶ ಹಬ್ಬದ (Gowri- Ganesha Festival) ಪ್ರಯುಕ್ತ ಹೆಚ್ಚುವರಿ ಬಸ್ಸುಗಳ ವಿಶೇಷ ಸಾರಿಗೆ ವ್ಯವಸ್ಥೆ ಕಲ್ಪಿಸಿರುವ ಕೆ‌ಎಸ್‌ಆರ್‌ಟಿ‌ಸಿ (KSRTC) , ಸೆಪ್ಟೆಂಬರ್ 6 ಹಾಗೂ ಸೆ. 7ರಂದು ಗೌರಿ-ಗಣೇಶ ಹಬ್ಬ ಮತ್ತು ಸೆಪ್ಟೆಂಬರ್ 8ರಂದು ವಾರಾಂತ್ಯವಾಗಿರುವುದರಿಂದ  ಸಾರ್ವಜನಿಕ ಪ್ರಯಾಣಿಕರ ಅನುಕೂಲಕ್ಕಾಗಿ ಸೆ.5 ರಿಂದ ಸೆ.7 ರವರೆಗೆ ಬೆಂಗಳೂರಿನಿಂದ ಹೆಚ್ಚುವರಿ ಬಸ್ ಗಳ ವ್ಯವಸ್ಥೆ ಮಾಡಲಾಗಿದೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.

ಕೆ‌ಎಸ್‌ಆರ್‌ಟಿ‌ಸಿ ಹೇಳಿಕೆಯ ಪ್ರಕಾರ, ಬೆಂಗಳೂರಿನ ಕೆಂಪೇಗೌಡ ಬಸ್ ನಿಲ್ದಾಣ(Kempegowda Bus Stand) ದಿಂದ ಧರ್ಮಸ್ಥಳ, ಕುಕ್ಕೆಸುಬ್ರಮಣ್ಯ, ಶಿವಮೊಗ್ಗ, ಹಾಸನ, ಮಂಗಳೂರು, ಕುಂದಾಪುರ, ಹುಬ್ಬಳ್ಳಿ, ದಾರವಾಡ, ದಾವಣಗೆರೆ ತಿರುಪತಿ, ವಿಜಯವಾಡ, ಹೈದಾರಬಾದ್ ಗೆ ಈ ವಿಶೇಷ ಕಾರ್ಯಚರಣೆಗೆ ವ್ಯವಸ್ಥೆ ಕಲ್ಪಿಸಲಾಗಿದೆ.

ಇದನ್ನೂ ಓದಿ- Post Office Scheme: ಪೋಸ್ಟ್ ಆಫೀಸ್​ನ ಈ ಸ್ಕೀಮ್​ನಲ್ಲಿ ಹೂಡಿಕೆ ಮಾಡಿದ್ರೆ ತಿಂಗಳಿಗೆ 20,000ಕ್ಕೂ ಅಧಿಕ ಆದಾಯ ಸಿಗುತ್ತೆ!

ಸ್ಯಾಟಲೈಟ್ ಬಸ್ ನಿಲ್ದಾಣ (Satellite Bus Stand)ದಿಂದ ಮೈಸೂರು, ಹುಣಸೂರು, ಪಿರಿಯಾಪಟ್ಟಣ, ವಿರಾಜಪೇಟೆ, ಮಡಿಕೇರಿಗೆ ವಿಶೇಷ ಬಸ್ ಗಳು ಸಂಚರಿಸಲಿವೆ. 

ಇದಲ್ಲದೆ, ತಮಿಳುನಾಡು ಮತ್ತು ಕೇರಳ ಭಾಗಗಳಿಗೆ ಶಾಂತಿನಗರ ಬಿಎಂಟಿಸಿ ಬಸ್ ನಿಲ್ದಾಣದಿಂದ ವಿಶೇಷ ಬಸ್ ಗಳು ಸಂಚರಿಸಲಿವೆ.  ಇನ್ನೂ ಈ ಎಲ್ಲಾ ಹೆಚ್ಚುವರಿ  ಬಸ್ ಗಳು ಸೆ.8 ರಂದು ರಾಜ್ಯದ ವಿವಿಧ ಸ್ಥಳಗಳಿಂದ ವಾಪಸ್ಸಾಗಲಿವೇ ಎಂದು ಕೆ‌ಎಸ್‌ಆರ್‌ಟಿ‌ಸಿ ತಿಳಿಸಿದೆ. 

ಪ್ರಯಾಣಿಕರಿಗೆ ಇ- ಟಿಕೆಟ್ ಬುಕ್ಕಿಂಗ್ ಗೆ ಅವಕಾಶ: 
ಇನ್ನೂ ಹಬ್ಬದ ಸಂದರ್ಭದಲ್ಲಿ ಯಾವುದೇ ತೊಂದರೆಯಿಲ್ಲದೆ ತಮ್ಮ ತಮ್ಮ ಊರುಗಳಿಗೆ ತೆರಳಲು ಬಯಸುವ ಪ್ರಯಾಣಿಕರು ಇ ಟಿಕೆಟ್ ಬುಕ್ಕಿಂಗ್ (E-Ticket Booking) ಗಾಗಿ www.ksrtc.Karnataka.gov.in ನಲ್ಲಿ ಬುಕ್ ಮಾಡುವಂತೆ ಕೆ‌ಎಸ್‌ಆರ್‌ಟಿ‌ಸಿ ಸೂಚನೆ ನೀಡಿದೆ. 

ಇದನ್ನೂ ಓದಿ- ಭಾರತೀಯ ರೈಲ್ವೇ: ಪ್ಯಾಸೆಂಜರ್ ರೈಲಿನಿಂದ ಸೂಪರ್‌ಫಾಸ್ಟ್‌ವರೆಗೆ ಯಾವ ಬಣ್ಣ ಏನನ್ನು ಸೂಚಿಸುತ್ತೆ? ಯಾವುದು ಹೆಚ್ಚು ಸೇಫ್!

ಇಂತಹ ಬುಕ್ಕಿಂಗ್ ಮೇಲೆ ಶೇ. 5% ಡಿಸ್ಕೌಂಟ್ (Discount on E-Ticket Booking): 
ಗೌರಿ-ಗಣೇಶ ಹಬ್ಬದ ಸಂದರ್ಭದಲ್ಲಿ ಸಾರ್ವಜನಿಕ ಸಾರಿಗೆಯಲ್ಲಿ ಪ್ರಯಾಣಿಸುವವವರಿಗೆ ರಿಯಾಯಿತಿಯನ್ನೂ ಸಹ ಘೋಷಿಸಿರುವ ಕೆ‌ಎಸ್‌ಆರ್‌ಟಿ‌ಸಿ ನಾಲ್ಕು ಅಥವಾ ಅದಕ್ಕಿಂತ ಹೆಚ್ಚಿನ ಜನ ಒಟ್ಟಿಗೆ ಟಿಕೆಟ್ ಬುಕ್ ಮಾಡಿದ್ರೆ ಶೇ.5% ಡಿಸೌಂಟ್ ನೀಡುವುದಾಗಿ ತಿಳಿಸಿದೆ. ಇದಲ್ಲದೆ, ಹೋಗುವ ಮತ್ತು ಬರುವ ಎರಡು ಟಿಕೆಟ್ ಬುಕ್ ಮಾಡಿದ್ರೆ ಅಂತವರಿಗೆ ಬರುವ ಟಿಕೆಟ್ ದರದಲ್ಲಿ ಶೇ.10% ಡಿಸ್ಕೌಂಟ್ ನೀಡಲಾಗುವುದು ಎಂದು ಕೆ‌ಎಸ್‌ಆರ್‌ಟಿ‌ಸಿ ಘೋಷಿಸಿದೆ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News