ಲೋಕಸಭೆಗೆ ಪಿಂಚಣಿಗೆ ಸಂಬಂಧಿಸಿದ ಮಹತ್ವದ ಮಾಹಿತಿ ನೀಡಿದೆಯಾ ಕೇಂದ್ರ ಸರ್ಕಾರ?

Pension Hike: ಕೇಂದ್ರ ಸರ್ಕಾರ ನೌಕರರ ಪಿಂಚಣಿಯನ್ನು ಯಾವಾಗ ಹೆಚ್ಚಿಸಲಾಗುವುದು ಎಂಬುದರ ಕುರಿತು ಮಾಹಿತಿಯನ್ನು ನೀಡಿದೆಯೇ? ಹೌದು, ಲೋಕಸಭೆ ಚುನಾವಣೆಗೆ ಇನ್ನೂ ಒಂದು ವರ್ಷ ಬಾಕಿ (Business News In Kannada) ಇದೆ ಎಂಬುದು ಎಲ್ಲರಿಗೂ ತಿಳಿದ ಸಂಗತಿಯಾಗಿದೆ ಮತ್ತು ಇಂತಹ ಪರಿಸ್ಥಿತಿಯಲ್ಲಿ ಸರ್ಕಾರವು ಅನೇಕ ಜನಪರ ಘೋಷಣೆಗಳನ್ನು ಮಾಡಬಹುದೆಂದು ಜನರು ನಿರೀಕ್ಷಿಸುತ್ತಾರೆ.  

Written by - Nitin Tabib | Last Updated : Aug 3, 2023, 10:21 PM IST
  • ಸರ್ಕಾರ ಎಂಟನೇ ವೇತನ ಆಯೋಗವನ್ನು ಯಾವಾಗ ತರಲು ಹೊರಟಿದೆ ಎಂಬ ಪ್ರಶ್ನೆ ಇತ್ತೀಚಿನ ದಿನಗಳಲ್ಲಿ ಹಲವು ಬಾರಿ ಕೇಳಿಬಂದಿದೆ,
  • ದರ ಬಗ್ಗೆ ಹಣಕಾಸು ರಾಜ್ಯ ಸಚಿವ ಪಂಕಜ್ ಚೌಧರಿ ಅವರು ಮಾಹಿತಿ ನೀಡಿದ್ದಾರೆ. 8ನೇ ವೇತನ ಆಯೋಗವನ್ನು ತರಲು ಸರಕಾರಕ್ಕೆ ಇನ್ನೂ ಯಾವುದೇ ಯೋಜನೆ ಇಲ್ಲ.
  • 10 ವರ್ಷಗಳಲ್ಲಿ ವೇತನ ಆಯೋಗವನ್ನು ಬದಲಾಯಿಸುವ ಸಂಪ್ರದಾಯವನ್ನು ಅನುಸರಿಸಲಾಗುತ್ತಿದೆ. ಸದ್ಯ ಅದನ್ನೂ ಬದಲಾಯಿಸಲು ಯೋಜನೆ ರೂಪಿಸಲಾಗುತ್ತಿದೆ ಎಂದು ಅವರು ಹೇಳಿದ್ದಾರೆ
ಲೋಕಸಭೆಗೆ ಪಿಂಚಣಿಗೆ ಸಂಬಂಧಿಸಿದ ಮಹತ್ವದ ಮಾಹಿತಿ ನೀಡಿದೆಯಾ ಕೇಂದ್ರ ಸರ್ಕಾರ? title=

Pension Update: ದೇಶಾದ್ಯಂತ ಪಿಂಚಣಿ ಬಗ್ಗೆ ಹಲವು ರೀತಿಯ ಸುದ್ದಿಗಳು ಬರುತ್ತಿವೆ. ಹೀಗಿರುವಾಗ ಕೇಂದ್ರ ಸರ್ಕಾರ ತನ್ನ ನೌಕರರ ಪಿಞ್ಚೈಯನ್ನು ಯಾವಾಗ ಹೆಚ್ಚಿಸಲಾಗುವುದು ಎಂಬ ಮಾಹಿತಿ ಹಂಚಿಕೊಂಡಿದೆಯೇ? ಎಂಬುದರ ಕುರಿತು ಗುಸುಗುಸು ಕೇಳಿ ಬರಲಾರಂಭಿಸಿದೆ. ಲೋಕಸಭೆ ಚುನಾವಣೆಗೆ ಇನ್ನೂ ಒಂದು ವರ್ಷ ಬಾಕಿ ಇದೆ ಎಂಬುದು ಎಲ್ಲರಿಗೂ ತಿಳಿದಿರುವ ಸಂಗತಿ ಮತ್ತು ಇಂತಹ ಪರಿಸ್ಥಿತಿಯಲ್ಲಿ ಸರ್ಕಾರವು ಅನೇಕ ಜನಪರ ಘೋಷಣೆಗಳನ್ನು ಮಾಡಬಹುದೆಂದು ಜನರು ನಿರೀಕ್ಷಿಸುತ್ತಾರೆ. ಇದರೊಂದಿಗೆ ಸರಕಾರವೂ ಪಿಂಚಣಿ ಹೆಚ್ಚಿಸಬಹುದು ಎಂಬ ಊಹಾಪೋಹಗಳು ಕೇಳಿಬರುತ್ತಿವೆ. ಇದಲ್ಲದೆ ಕನಿಷ್ಠ ಪಿಂಚಣಿ ಬಗ್ಗೆಯೂ ಪ್ರಕಟಿಸಬಹುದು. ಸದ್ಯ ಈ ನಿಟ್ಟಿನಲ್ಲಿ ಸರಕಾರದಿಂದ ಮಾಹಿತಿಯೊಂದು ಲಭಿಸಿದೆ (Business News In Kannada).

ರಾಜ್ಯ ಸಚಿವರು ಲೋಕಸಭೆಯಲ್ಲಿ ಮಾಹಿತಿ ನೀಡಿದ್ದಾರೆ
ಲೋಕಸಭೆಯಲ್ಲಿ ಕನಿಷ್ಠ ಪಿಂಚಣಿ ಮತ್ತು ಕುಟುಂಬ ಪಿಂಚಣಿ ಹೆಚ್ಚಿಸುವ ಬಗ್ಗೆ ಮೋದಿ ಸರ್ಕಾರ ಮಾಹಿತಿ ನೀಡಿದೆ. ಸದ್ಯ ಅಂತಹ ಯಾವುದೇ ಪ್ರಸ್ತಾವನೆ ಇಲ್ಲ ಎಂದು ಸಿಬ್ಬಂದಿ ಖಾತೆ ರಾಜ್ಯ ಸಚಿವ ಜಿತೇಂದ್ರ ಸಿಂಗ್ ಲೋಕಸಭೆಗೆ ತಿಳಿಸಿದ್ದಾರೆ. ಇದರೊಂದಿಗೆ ಕೇಂದ್ರ ಸರ್ಕಾರದ ಅಡಿಯಲ್ಲಿ ಕನಿಷ್ಠ ಪಿಂಚಣಿ ಮೊತ್ತ ರೂ.9000 ಎಂದು ಹೇಳಿದ್ದಾರೆ.

ಇದನ್ನೂ ಓದಿ-ಸರ್ಕಾರಿ ನೌಕರರ ವೇತನದಲ್ಲಿ 15144 ಹೆಚ್ಚಳ... ಡಿಟೇಲ್ಸ್ ಇಲ್ಲಿದೆ!

ಸರ್ಕಾರ ಎಷ್ಟು ಕೋಟಿ ಖರ್ಚು ಮಾಡುತ್ತಿದೆ?
ಇದರೊಂದಿಗೆ, ಪ್ರಸ್ತುತ ಸುಮಾರು 44,81,245 ಪಿಂಚಣಿದಾರರಿದ್ದು, ಈ ಪೈಕಿ 20,93,462 ಕುಟುಂಬ ಪಿಂಚಣಿದಾರರೂ ಇದರಲ್ಲಿ ಶಾಮಿಲಾಗಿದ್ದಾರೆ ಎಂದು ಸಿಬ್ಬಂದಿ ಖಾತೆ ರಾಜ್ಯ ಸಚಿವ ಜಿತೇಂದ್ರ ಸಿಂಗ್ ತಿಳಿಸಿದ್ದಾರೆ. ಇದರೊಂದಿಗೆ 2022-23ನೇ ಸಾಲಿನಲ್ಲಿ ಸರ್ಕಾರದಿಂದ 2,41,777 ಕೋಟಿ ರೂ. ಪಿಂಚಣಿ ಪಾವತಿಸಲಾಗಿದೆ. ಪ್ರಸ್ತುತ, ಕನಿಷ್ಠ ಪಿಂಚಣಿ ಮೊತ್ತವನ್ನು ಹೆಚ್ಚಿಸಲು ಸರ್ಕಾರದ ಮುಂದೆ ಯಾವುದೇ ಪ್ರಸ್ತಾವನೆ ಇಲ್ಲ ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ-Business Concept: ಕೇವಲ 1.65 ಲಕ್ಷ ರೂ.ಗಳಿಂದ ಆರಂಭಿಸಿ ಈ ಜಬರ್ದಸ್ತ್ ಬಿಸ್ನೆಸ್, ತಿಂಗಳಿಗೆ 60 ಸಾವಿರ ಆದಾಯ ಕೊಡುತ್ತೇ!

8ನೇ ವೇತನ ಆಯೋಗದಲ್ಲಿ ಸ್ಪಷ್ಟ ಉತ್ತರ ಸಿಗಲಿದೆ
ಸರ್ಕಾರ ಎಂಟನೇ ವೇತನ ಆಯೋಗವನ್ನು ಯಾವಾಗ ತರಲು ಹೊರಟಿದೆ ಎಂಬ ಪ್ರಶ್ನೆ ಇತ್ತೀಚಿನ ದಿನಗಳಲ್ಲಿ ಹಲವು ಬಾರಿ ಕೇಳಿಬಂದಿದೆ, ಅದರ ಬಗ್ಗೆ ಹಣಕಾಸು ರಾಜ್ಯ ಸಚಿವ ಪಂಕಜ್ ಚೌಧರಿ ಅವರು ಮಾಹಿತಿ ನೀಡಿದ್ದಾರೆ. 8ನೇ ವೇತನ ಆಯೋಗವನ್ನು ತರಲು ಸರಕಾರಕ್ಕೆ ಇನ್ನೂ ಯಾವುದೇ ಯೋಜನೆ ಇಲ್ಲ. 10 ವರ್ಷಗಳಲ್ಲಿ ವೇತನ ಆಯೋಗವನ್ನು ಬದಲಾಯಿಸುವ ಸಂಪ್ರದಾಯವನ್ನು ಅನುಸರಿಸಲಾಗುತ್ತಿದೆ. ಸದ್ಯ ಅದನ್ನೂ ಬದಲಾಯಿಸಲು ಯೋಜನೆ ರೂಪಿಸಲಾಗುತ್ತಿದೆ ಎಂದು ಅವರು ಹೇಳಿದ್ದಾರೆ

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News