Union Budget 2024: ದೇಶಾದ್ಯಂತದ ಕೋಟ್ಯಾಂತರ ರೈತ ಬಾಂಧವರಿಗೊಂದು ಭಾರಿ ಸಂತಸದ ಸುದ್ದಿ!

Union Budget PM Kisan Yojana 2024: ಇದುವರೆಗೆ ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಲ್ಲಿ ವಾರ್ಷಿಕವಾಗಿ ಮೂರು ಕಂತುಗಳಲ್ಲಿ ಕೋಟ್ಯಾಂತರ ರೈತ ಬಾಂಧವರಿಗೆ 6000 ರೂ.ಗಳನ್ನು ಡಿಬಿಟಿ ಮೂಲಕ ವರ್ಗಾಯಿಸಲಾಗುತ್ತಿತ್ತು. ಅರ್ಥಾತ್ ಪ್ರತಿ ಕಂತಿನಲ್ಲಿ 2000 ರೂಪಾಯಿ ನೀಡಲಾಗುತಿದ್ದು. ಆದರೆ ಇದೀಗ ಸರ್ಕಾರಿ ಮೂಲಗಳು ನೀಡಿರುವ ಮಾಹಿತಿಯನ್ನು ನಂಬುವುದಾದರೆ, ರೈತರಿಗೆ ನೀಡುವ ಕಂತನ್ನು 4 ಕಂತುಗಳಿಗೆ ಏರಿಕೆಯಾಗುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. Business News In Kannada.  

Written by - Nitin Tabib | Last Updated : Jan 8, 2024, 07:39 PM IST
  • ಆರ್ಥಿಕತೆಯಲ್ಲಿ ಕೃಷಿ ಪ್ರಮುಖ ಪಾತ್ರ ವಹಿಸುತ್ತದೆ.
  • ಮುಂದಿನ ದಿನಗಳಲ್ಲಿ ಕೃಷಿಯು ರಫ್ತು ಆರ್ಥಿಕತೆಯ ಹಿಡಿತವನ್ನು ಬಲಪಡಿಸಬಹುದು ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
  • ಆಹಾರ ಪೂರೈಕೆ ಸರಪಳಿಯನ್ನು ಬಲಪಡಿಸುವುದು ಸಹ ಒಂದು ಪ್ರಮುಖ ಭಾಗವಾಗಿದೆ.
Union Budget 2024: ದೇಶಾದ್ಯಂತದ ಕೋಟ್ಯಾಂತರ ರೈತ ಬಾಂಧವರಿಗೊಂದು ಭಾರಿ ಸಂತಸದ ಸುದ್ದಿ! title=

ನವದೆಹಲಿ: ಮುಂಬರುವ ಬಜೆಟ್ 2024 ರಲ್ಲಿ ರೈತರಿಗೆ ಒಳ್ಳೆಯ ಸುದ್ದಿ ಸಿಗುವ ನಿರೀಕ್ಷೆ ಇದೆ. ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಫೆಬ್ರವರಿ 1, 2024 ರಂದು ಬಜೆಟ್ ಮಂಡಿಸಲಿದ್ದಾರೆ. ಆದಾಗ್ಯೂ, ಈ ಬಜೆಟ್ ವೋಟ್ ಒನ್ ಅಕೌಂಟ್ ಇರಲಿದೆ. 2024ರಲ್ಲಿ ಲೋಕಸಭೆ ಚುನಾವಣೆ ನಡೆಯಲಿದೆ. ಇಂತಹ ಪರಿಸ್ಥಿತಿಯಲ್ಲಿ ಸರಕಾರ ರೈತರಿಗೆ ಉಡುಗೊರೆ ನೀಡಿ ಸಂತಸ ಪಡಿಸುವ ಸಾಧ್ಯತೆ ಇದೆ ಎನ್ನಲಾಗಿದೆ. ಮೂಲಗಳ ಪ್ರಕಾರ ಈ ಬಾರಿಯ ಬಜೆಟ್‌ನಲ್ಲಿ ಯಾವುದೇ ವಿಶೇಷ ಘೋಷಣೆಗಳಿರುವುದಿಲ್ಲ, ಆದರೆ ರೈತರಿಗಾಗಿ ಏನಾದರೂ ದೊಡ್ಡ ಘೋಷಣೆಯಾಗುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ರೈತರಿಗಾಗಿ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ ಕಂತುಗಳಲ್ಲಿ ಹೆಚ್ಚಳವನ್ನು ಹಣಕಾಸು ಸಚಿವರು ಘೋಷಿಸಬಹುದು ಎನ್ನಲಾಗುತ್ತಿದೆ.  (Business News In Kannada)

ಪಿಎಂ ಕಿಸಾನ್ ಕಂತು ಹೆಚ್ಚಾಗಬಹುದೇ?
ಇದುವರೆಗೆ ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಲ್ಲಿ ವಾರ್ಷಿಕವಾಗಿ 3 ಕಂತುಗಳನ್ನು ನೀಡಲಾಗುತ್ತದೆ. ಇದರಲ್ಲಿ 2000 ರೂಪಾಯಿ ಮೂರು ಕಂತುಗಳ ಮೂಲಕ 6 ಸಾವಿರ ಪಾವತಿಸಲಾಗುತ್ತದೆ. ಆದರೆ, ಸರ್ಕಾರಿ ಮೂಲಗಳನ್ನು ನಂಬುವುದಾದರೆ, ರೈತರಿಗೆ ನೀಡುವ ಕಂತನ್ನು ಈಗ 3 ರ ಬದಲು 4 ಕ್ಕೆ ಏರಿಕೆಯಾಗಬಹುದು ಎನ್ನಲಾಗುತ್ತಿದೆ. ಅಂದರೆ 1 ಕಂತು ಹೆಚ್ಚಾಗುವ ನಿರೀಕ್ಷೆ ಇದೆ. ಇಲ್ಲಿಯವರೆಗೆ ಪ್ರತಿ ನಾಲ್ಕು ತಿಂಗಳಿಗೊಮ್ಮೆ ಒಂದು ಕಂತಿನಪಾವತಿಸಲಾಗುತ್ತಿದೆ. ಆದರೆ, ಈಗ ರೈತರಿಗೆ 3 ತಿಂಗಳಿಗೊಮ್ಮೆ ಅಂದರೆ ತ್ರೈಮಾಸಿಕ ಆಧಾರದಲ್ಲಿ ಈ ಎರಡು ಸಾವಿರ ರೂ.ಗಳನ್ನು ಸರ್ಕಾರ ನೀಡುವ ಸಾಧ್ಯತೆ ಇದೆ. ಇದು ಏಪ್ರಿಲ್ 2024 ರಿಂದ ಆರಂಭಗೊಳ್ಳುವ ಸಾಧ್ಯತೆ ಇದೆ. ಆದರೆ, ಕಂತಿನ ಮೊತ್ತವೂ ಹೆಚ್ಚಾಗಲಿದೆಯೇ ಅಥವಾ ಇಲ್ಲವೇ ಎಂಬ ಬಗ್ಗೆ ಮಾಹಿತಿ ಇಲ್ಲ ಎನ್ನುತ್ತವೆ ಮೂಲಗಳು. ಆದರೆ, ಕಂತು ಹೆಚ್ಚಿಸಿದರೆ ಖಂಡಿತವಾಗಿ ರೈತರಿಗೆ ಪ್ರತಿ ಮೂರು ತಿಂಗಳಿಗೊಮ್ಮೆ 2000 ರೂ. ಅಂದರೆ ವಾರ್ಷಿಕ 8000 ರೂ ಸಿಗಳಿವೆ. ಕೃಷಿ ತಜ್ಞರು ಮತ್ತು ಎಸ್‌ಬಿಐ ಪರಿಸರ ವರದಿಯು ರೈತರಿಗೆ ಮೊತ್ತವನ್ನು ಹೆಚ್ಚಿಸಲು ಪ್ರಸ್ತಾಪಿಸಿವೆ.

ಪಿಎಂ ಕಿಸಾನ್ ಕಂತು ಏಕೆ ಹೆಚ್ಚಾಗಬಹುದು?
ಆರ್ಥಿಕತೆಯಲ್ಲಿ ಕೃಷಿ ಪ್ರಮುಖ ಪಾತ್ರ ವಹಿಸುತ್ತದೆ. ಮುಂದಿನ ದಿನಗಳಲ್ಲಿ ಕೃಷಿಯು ರಫ್ತು ಆರ್ಥಿಕತೆಯ ಹಿಡಿತವನ್ನು ಬಲಪಡಿಸಬಹುದು ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಆಹಾರ ಪೂರೈಕೆ ಸರಪಳಿಯನ್ನು ಬಲಪಡಿಸುವುದು ಸಹ ಒಂದು ಪ್ರಮುಖ ಭಾಗವಾಗಿದೆ. ಇದಲ್ಲದೆ, ರಾಗಿಗೆ ಇತರ ದೇಶಗಳಲ್ಲಿಯೂ ಬೇಡಿಕೆಯಿದೆ. ಇಂತಹ ಪರಿಸ್ಥಿತಿಯಲ್ಲಿ ಸರಕಾರ ರೈತರ ಆದಾಯ ಹೆಚ್ಚಿಸುವತ್ತ ಗಮನ ಹರಿಸುತ್ತಿದೆ. ಈ ಯೋಜನೆಯಡಿ ರೈತರಿಗೆ ಇದುವರೆಗೆ 15 ಕಂತುಗಳಲ್ಲಿ 2000 ರೂ. ನೀಡಿದ್ದು, ಇನ್ನೂ ಒಂದು ಕಂತು ಬಾಕಿ ಉಳಿದಿದೆ. ಈ ಯೋಜನೆಯಲ್ಲಿ ರೈತರ ಖಾತೆಗೆ ನೇರವಾಗಿ ಹಣ ಜಮಾ ಮಾಡಲಾಗುತ್ತದೆ. ಬೀಜಗಳು ಮತ್ತು ರಸಗೊಬ್ಬರಗಳ ಬೆಲೆಗಳು ರೈತರ ಮೇಲೆ ಪರಿಣಾಮ ಬೀರದಂತೆ ನೋಡಿಕೊಳ್ಳಲು ಸರ್ಕಾರ ಈ ಸಹಾಯ ಮಾಡುತ್ತದೆ. ಪಿಎಂ ಕಿಸಾನ್‌ನಲ್ಲಿ ಕಂತು ಅಥವಾ ಮೊತ್ತವನ್ನು ಹೆಚ್ಚಿಸುವುದು ಒಂದು ದೊಡ್ಡ ಪರಿಹಾರ ಒದಗಿಸುತ್ತದೆ.

ಇದನ್ನೂ ಓದಿ-Investment Tips: ಲೇಡೀಜ್ ಗಮನಕ್ಕೆ! ಎಫ್ಡಿ - ಚಿನ್ನಕ್ಕಿಂತ ಹೆಚ್ಚಿನ ಬಡ್ಡಿ ಬೇಕೆ?, ಹೆದರುವುದನ್ನು ಬಿಟ್ಟು ಇಲ್ಲಿ ಹೂಡಿಕೆ ಮಾಡಿ!

ಪಿಎಂ ಕಿಸಾನ್‌ನ ಮುಂದಿನ ಕಂತು ಯಾವಾಗ ಬರುತ್ತದೆ?
ಪಿಎಂ ಕಿಸಾನ್‌ನ 16ನೇ ಕಂತು 2024ರ ಜನವರಿ-ಫೆಬ್ರವರಿಯಲ್ಲಿ ಬರಲಿದೆ. ಆದರೆ, ಅದರ ದಿನಾಂಕವನ್ನು ಇನ್ನೂ ಪ್ರಕಟಗೊಂಡಿಲ್ಲ. ಪ್ರಧಾನಿ ನರೇಂದ್ರ ಮೋದಿ ಅವರು ರೈತರ ಖಾತೆಗಳಿಗೆ 16 ನೇ ಕಂತಿನ ಹಣವನ್ನು ಬಿಡುಗಡೆ ಮಾಡುತ್ತಾರೆ. 13 ಕೋಟಿಗೂ ಹೆಚ್ಚು ರೈತ ಕುಟುಂಬಗಳು ಇದರ ಪ್ರಯೋಜನ ಪಡೆಯುತ್ತಿದ್ದಾರೆ. . ಆದಾಗ್ಯೂ, ಇದಕ್ಕೂ ಮೊದಲು ಇಕೆವೈಸಿ ನಿಯಮಗಳು ಮತ್ತು ಇತರ ಮಾನದಂಡಗಳನ್ನು ಪೂರೈಸುವವರು ಮಾತ್ರ ಹಣವನ್ನು ಪಡೆಯುತ್ತಾರೆ.

ಇದನ್ನೂ ಓದಿ-Digital FD Tips: ಡಿಜಿಟಲ್ ಎಫ್ಡಿ ಕಾಲ, ನಿಮ್ಮ ಎಫ್ಡಿ ಮೇಲೆ ಸಿಗಲಿದೆ ಶೇ.0.25 ರಷ್ಟು ಹೆಚ್ಚು ಬಡ್ಡಿ ದರ!

ಏನಿದು ಪಿಎಂ ಕಿಸಾನ್ ಯೋಜನೆ?
ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಡಿ ಫಲಾನುಭವಿ ರೈತರಿಗೆ ಪ್ರತಿ 4 ತಿಂಗಳಿಗೊಮ್ಮೆ 2000 ರೂ. ಅಂದರೆ ವಾರ್ಷಿಕವಾಗಿ  6000 ರೂ.ಗಳನ್ನು ಸರ್ಕಾರ ನೀಡುತ್ತದೆ. ಇದನ್ನು ನೇರವಾಗಿ ಬ್ಯಾಂಕ್ ಖಾತೆಗಳಿಗೆ ವರ್ಗಾಯಿಸಲಾಗುತ್ತದೆ. ಪ್ರಧಾನಿ ಮೋದಿ ಅವರೇ ಒಂದು ವರ್ಷದಲ್ಲಿ ಒಟ್ಟು 3 ಕಂತುಗಳನ್ನು ಬ್ಯಾಂಕ್ ಖಾತೆಗಳಿಗೆ ವರ್ಗಾಯಿಸುತ್ತಾರೆ. 2023-24ರ ಕೇಂದ್ರ ಬಜೆಟ್‌ನಲ್ಲಿ ಪಿಎಂ ಕಿಸಾನ್ ಸಮ್ಮಾನ್ ನಿಧಿ ಅಡಿಯಲ್ಲಿ 11.4 ಕೋಟಿ ರೈತರಿಗೆ 2.2 ಲಕ್ಷ ಕೋಟಿ ರೂಪಾಯಿ ನಗದು ವರ್ಗಾವಣೆ ಮಾಡಲಾಗಿದೆ.

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News