ಹುಟ್ಟುಹಬ್ಬದ ದಿನವೇ ಮಸಣ ಸೇರಿದ ಯುವಕ: ಕಲ್ಲಿನಿಂದ ಜಜ್ಜಿ ಬರ್ಬರ ಕೊಲೆ

Murder in Bangalore: ಹುಟ್ಟುಹಬ್ಬ ದಿನದಂದೇ ಯುವಕನೊಬ್ಬ ಮಸಣ ಸೇರಿದ್ದಾನೆ. ಕೆಂಗೇರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ  ಬರ್ಬರವಾಗಿ ಹತ್ಯೆ ನಡೆದಿದೆ. 

Written by - VISHWANATH HARIHARA | Edited by - Chetana Devarmani | Last Updated : Jul 17, 2022, 03:45 PM IST
  • ಹುಟ್ಟುಹಬ್ಬದ ದಿನವೇ ಮಸಣ ಸೇರಿದ ಯುವಕ
  • ಕೆಂಗೇರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬರ್ಬರ ಹತ್ಯೆ
  • ಹೆಚ್‌.ಗೊಲ್ಲಹಳ್ಳಿ ನಿವಾಸಿ ಹೇಮಂತ್ ಕುಮಾರ್ ಕೊಲೆ
ಹುಟ್ಟುಹಬ್ಬದ  ದಿನವೇ ಮಸಣ ಸೇರಿದ ಯುವಕ: ಕಲ್ಲಿನಿಂದ ಜಜ್ಜಿ ಬರ್ಬರ ಕೊಲೆ  title=
ಕೊಲೆ

ಬೆಂಗಳೂರು: ಹುಟ್ಟುಹಬ್ಬ ದಿನದಂದೇ ಯುವಕನೊಬ್ಬ ಮಸಣ ಸೇರಿದ್ದಾನೆ. ಕೆಂಗೇರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ  ಬರ್ಬರವಾಗಿ ಹತ್ಯೆ ನಡೆದಿದ್ದು, ಹೆಚ್‌.ಗೊಲ್ಲಹಳ್ಳಿ ನಿವಾಸಿ ಹೇಮಂತ್ ಕುಮಾರ್ ಹತ್ಯೆಯಾದ ದುದೈರ್ವಿಯಾಗಿದ್ದಾನೆ. ನೈಸ್ ರೋಡ್ ಬಳಿ ಈ ಘಟನೆ ನಡೆದಿದೆ.

ಇದನ್ನೂ ಓದಿ: ವಂಚನೆ ಪ್ರಕರಣ: ಸ್ಯಾಂಡಲ್ ವುಡ್ ಖ್ಯಾತ ನಟಿಯ ಸ್ನೇಹಿತ ಅರೆಸ್ಟ್‌

ನಿನ್ನೆ ರಾತ್ರಿ ಹುಟ್ಟುಹಬ್ಬ ಆಚರಿಸಿಕೊಳ್ಳಲು ಮನೆಯಿಂದ ಹೊರ ಹೋಗಿದ್ದ. ರಾತ್ರಿಯಾದರೂ ಮನೆಗೆ ಹಿಂತಿರುಗಿರಲಿಲ್ಲ. ಇಂದು ಬೆಳಗ್ಗೆ ಹೆಮ್ಮಿಗೆಪುರ ವಾರ್ಡ್ ನೈಸ್ ರೋಡ್ ನ ಸುರಂಗದ ಬಳಿ ಕಲ್ಲಿನಿಂದ ಜಿಜ್ಜಿ ರುಂಡವನ್ನ ಬೇರ್ಪಡಿಸಿರುವ ಸ್ಥಿತಿಯಲ್ಲಿ ಹೇಮಂತ್ ಶವ ಕಂಡುಬಂದಿದೆ. ಈ ಬಗ್ಗೆ ಕೂಡಲೇ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದು, ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿದ್ದಾರೆ. 

ಕುಟುಂಬಸ್ಥರು ಆಗಮಿಸಿ ಮೃತನ ಗುರುತನ್ನ ಪತ್ತೆ ಹಚ್ಚಿದ್ದಾರೆ‌. ಪ್ರಾಥಮಿಕ ತನಿಖೆಯಲ್ಲಿ ಪರಿಚಯಸ್ಥರೇ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದ್ದು,ಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ‌‌. ಸದ್ಯ ಶ್ವಾನದಳ ಹಾಗೂ ಎಫ್ ಎಸ್ ಎಲ್ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಸಾಕ್ಷಿ ಸಂಗ್ರಹಿಸುತ್ತಿದ್ದಾರೆ.

ಇದನ್ನೂ ಓದಿ:  ಬಾಲಕಿಯನ್ನು ಮದುವೆಯಾಗಲು ಆಧಾರ್ ಕಾರ್ಡ್ ತಿದ್ದಿದ ಮದುಮಗ.. ಈಗ ಪೊಲೀಸರ ಅತಿಥಿ

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News