2ನೇ ಮದುವೆ ರದ್ದು: ಮೊದಲ ಪತ್ನಿಯೊಂದಿಗೆ ಯೋಧ ಆತ್ಮಹತ್ಯೆ..!

ವಿಧವೆಯ ಜೊತೆಗೆ ಮದುವೆಯಾಗಿರುವ ವಿಚಾರ ಮುಚ್ಚಿಟ್ಟಿದ್ದ ಯೋಧ ಕಿರಣ್‍ಕುಮಾರ್ 2ನೇ ಮದುವೆಯಾಗಲು ತಯಾರಿ ನಡೆಸಿದ್ದ. ಆದರೆ ಮೊದಲ ಪತ್ನಿ ಆಶಾ ಕಲ್ಯಾಣಮಂಟಪಕ್ಕೆ ಆಗಮಿಸಿ ಮದುವೆ ನಿಲ್ಲಿಸಿದ್ದಳು.

Written by - Puttaraj K Alur | Last Updated : Nov 12, 2022, 11:00 AM IST
  • ವಿಧವೆ ಜೊತೆಗೆ ಮದುವೆಯಾಗಿರುವ ವಿಚಾರ ಬಚ್ಚಿಟ್ಟು 2ನೇ ಮದುವೆಗೆ ಸಿದ್ಧತೆ
  • ಹಾಸನ ಜಿಲ್ಲೆಯ ಕಲ್ಯಾಣ ಮಂಟಪದಲ್ಲಿ ದೊಡ್ಡ ಗಲಾಟೆಯಾಗಿ ರದ್ದಾದ ಮದುವೆ
  • ಮದುವೆ ರದ್ದಾಗಿದ್ದಕ್ಕೆ ಮೊದಲ ಪತ್ನಿ ಜೊತೆಗೆ ಆತ್ಮಹತ್ಯೆ ಮಾಡಿಕೊಂಡ ಯೋಧ
2ನೇ ಮದುವೆ ರದ್ದು: ಮೊದಲ ಪತ್ನಿಯೊಂದಿಗೆ ಯೋಧ ಆತ್ಮಹತ್ಯೆ..! title=
ಮೊದಲ ಪತ್ನಿ ಜೊತೆ ಯೋಧ ಆತ್ಮಹತ್ಯೆ!

ಹಾಸನ: 2ನೇ ಮದುವೆ ರದ್ದಾಗಿದ್ದಕ್ಕೆ ಮೊದಲ ಪತ್ನಿಯೊಂದಿಗೆ ಯೋಧನೊಬ್ಬ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಹಾಸನ ಜಿಲ್ಲೆಯಲ್ಲಿ ನಡೆದಿದೆ. ಯೋಧ ಕಿರಣ್ ಕುಮಾರ್ ಮತ್ತು ಆತನ ಮೊದಲ ಪತ್ನಿ ಆಶಾ ಆತ್ಮಹತ್ಯೆಗೆ ಶರಣಾದವರು.

ಘಟನೆಯ ವಿವರ

ವಿಧವೆಯ ಜೊತೆಗೆ ಮದುವೆಯಾಗಿರುವ ವಿಚಾರ ಮುಚ್ಚಿಟ್ಟಿದ್ದ ಯೋಧ ಕಿರಣ್‍ಕುಮಾರ್ 2ನೇ ಮದುವೆಯಾಗಲು ತಯಾರಿ ನಡೆಸಿದ್ದ. ಆದರೆ 2ನೇ ಮದುವೆ ವೇಳೆ ಮೊದಲ ಪತ್ನಿ ಆಶಾ ಕಲ್ಯಾಣಮಂಟಪಕ್ಕೆ ಆಗಮಿಸಿ ಮದುವೆ ನಿಲ್ಲಿಸಿದ್ದಳು. ಇನ್ನೇನು 2ನೇ ಪತ್ನಿಗೆ ತಾಳಿ ಕಟ್ಟಬೇಕೆಂದು ಸಿದ್ಧನಾಗಿದ್ದ ಯೋಧ ಕಿರಣ್‍ಕುಮಾರ್‍ಗೆ ದೊಡ್ಡ ನಿರಾಸೆಯಾಗಿತ್ತು. ಸೀದಾ ಮದುವೆ ಮಂಟಪಕ್ಕೆ ಆಗಮಿಸಿದ ಆಶಾ ಮದುವೆ ನಿಲ್ಲಿಸಿದ್ದಳು. ಇದರಿಂದ ಸಂಭ್ರಮದಿಂದ ಕೂಡಿದ ಮದುವೆ ಮನೆಯಲ್ಲಿ ದೊಡ್ಡ ಗಲಾಟೆಯೇ ನಡೆದುಹೋಗಿದೆ.

ಇದನ್ನೂ ಓದಿ: ಮುಂದಿನ ಬಾರಿ ಪೀಣ್ಯ ಕೈಗಾರಿಕಾ ಪ್ರದೇಶಕ್ಕೂ ಭೇಟಿ ನೀಡಿ: ಪ್ರಧಾನಿ ಮೋದಿಗೆ AAP ಆಗ್ರಹ

ತನ್ನ ಮದುವೆ ನಿಂತುಹೋಗಿದಕ್ಕೆ ಮನನೊಂದ ಯೋಧ ಕಿರಣ್ ಕುಮಾರ್ ಮೊದಲ ಪತ್ನಿ ಆಶಾ ಜೊತೆಗೆ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಹಾಸನ ತಾಲೂಕಿನ ಶಾಂತಿಗ್ರಾಮ ಸಮೀಪದ ಕಾಡಿನ ಬಳಿ ಮರಕ್ಕೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಅರಣ್ಯ ಪ್ರದೇಶದಲ್ಲಿ ಆತ್ಮಹತ್ಯೆ

ಹಾಸನದ ಬೂವನಹಳ್ಳಿ ಸಮೀಪದ ಕಲ್ಯಾಣ ಮಂಟಪದಲ್ಲಿ ನವೆಂಬರ್ 10ರಂದು ಯೋಧ ಕಿರಣ್ 2ನೇ ಮದುವೆಗೆ ಸಿದ್ಧತೆ ನಡೆಸಿದ್ದ. ಈ ಮೊದಲು ವಿಧವೆ ಆಶಾರನ್ನು ಮದುವೆಯಾಗಿದ್ದನಂತೆ. 2ನೇ ಮದುವೆಯಾಗುತ್ತಿರುವ ವಿಚಾರ ತಿಳಿದು ಮದುವೆ ಮಂಟಪಕ್ಕೆ ಬಂದಿದ್ದ ಆಶಾ, ‘ತಾನು ವಿಧವೆಯಾಗಿದ್ದು, ಇಬ್ಬರು ಮಕ್ಕಳಿದ್ದಾರೆ. ಕೆಲ ತಿಂಗಳ ಹಿಂದೆ ಕಿರಣ್ ತನಗೆ ತಾಳಿ ಕಟ್ಟಿದ್ದಾನೆ. ಈಗ ಮತ್ತೆ ಮದುವೆಯಾಗಲು ಹೊರಟಿದ್ದಾನೆ’ ಅಂತಾ ಗಲಾಟೆ ಮಾಡಿದ್ದರು.

ಇದನ್ನೂ ಓದಿ: Vijayanand Kashappanavar : 'ನಿಮ್ದು ಇನ್ನು ಬರೀ 142 ದಿನ ಮಾತ್ರ, ಎಷ್ಟು ಉರಿತಿರಿ ಉರಿರಿ'

ಈ ವೇಳೆ 2ನೇ ಹೆಂಡತಿಗೆ ತಾಳಿ ಕಟ್ಟಲು ಕಿರಣ್ ಸಿದ್ಧನಾಗಿದ್ದ. ಗಲಾಟೆಯ ಬಳಿಕ ವಧು ತನಗೆ ಮದುವೆ ಬೇಡವೆಂದು ಹೇಳಿದ್ದಾಳೆ. ಈ ವೇಳೆ ಮದುವೆ ಮನೆಯಲ್ಲಿ ದೊಡ್ಡ ಗಲಾಟೆಯೇ ನಡೆದುಹೋಗಿದೆ. ರಾಜಿ ಸಂಧಾನದ ಬಳಿಕ ಯೋಧ ಕಿರಣ್ ಮನೆಗೆ ಹೋಗಿ ಆಶಾರನ್ನು ಮತ್ತೆ ಸಂಪರ್ಕಿಸಿದ್ದಾನೆ. ಈ ವೇಳೆ ಇಬ್ಬರ ನಡುವೆ ಮನಸ್ತಾಪ ಉಂಟಾಗಿ ಅರಣ್ಯ ಪ್ರದೇಶದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಹೇಳಲಾಗಿದೆ. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News