ಮಕ್ಕಳ ಮಾರಾಟ ದಂಧೆ : ನಕಲಿ ಡಾಕ್ಟರ್‌ ಸೇರಿ ಸಂಬಂಧಿಯ ಮಗುವನ್ನೇ ಮಾರಿದ್ದ ಕಿಲಾಡಿ ಲೇಡಿ ಅಂದರ್..!

Infant trafficking racket : ರಾಜಧಾನಿಯನ್ನೇ ಬೆಚ್ಚಿಬೀಳಿಸಿರೋ ಹಸುಗೂಸುಗಳ ಮಾರಾಟ ಕೇಸ್ ದಿನಕ್ಕೊಂದು ಟ್ವಿಸ್ಟ್ ಪಡಿತೀದೆ.. ಹಣಕ್ಕಾಗಿ ಮಕ್ಕಳನ್ನೇ ಮಾರಾಟ ಮಾಡುತ್ತಿದ್ದ ದುಷ್ಟರ ಪಡೆಯ ಮತ್ತಿಬ್ಬರು ಖತರ್ನಾಕ್ ಗಳನ್ನು ಸಿಸಿಬಿ ಬಂಧಿಸಿದೆ. ಈ ಕುರಿತು ಹೆಚ್ಚಿನ ಮಾಹಿತಿ ಇಲ್ಲಿದೆ ನೋಡಿ..

Written by - VISHWANATH HARIHARA | Edited by - Krishna N K | Last Updated : Nov 29, 2023, 05:28 PM IST
  • ಹಸುಗೂಸುಗಳ ಮಾರಾಟ ಕೇಸ್ ದಿನಕ್ಕೊಂದು ಟ್ವಿಸ್ಟ್ ಪಡಿತೀದೆ.
  • ಹಣಕ್ಕಾಗಿ ಮಕ್ಕಳನ್ನೇ ಮಾರಾಟ ಮಾಡುತ್ತಿದ್ದ ದುಷ್ಟರ ಪಡೆಯ 2 ಬಂಧನವಾಗಿದೆ.
  • ಡಾಕ್ಟರ್ ಅಂತಾ ಹೇಳಿಕೊಂಡು ಹಸುಗೂಸುಗಳ ಮಾರಾಟದಲ್ಲಿ ಇನ್ವಾಲ್ ಆಗಿದ್ದಾನೆ.
ಮಕ್ಕಳ ಮಾರಾಟ ದಂಧೆ : ನಕಲಿ ಡಾಕ್ಟರ್‌ ಸೇರಿ ಸಂಬಂಧಿಯ ಮಗುವನ್ನೇ ಮಾರಿದ್ದ ಕಿಲಾಡಿ ಲೇಡಿ ಅಂದರ್..! title=

ಬೆಂಗಳೂರು : ಎಳೆ ಕಂದಮ್ಮಗಳ ಮಾರಾಟ ದಂಧೆ ಕೇಸ್ ನ ಇನ್ನಿಬ್ಬರು ಆರೋಪಿಗಳು ಲಾಕ್ ಆಗಿದ್ದಾರೆ. ಕ್ಲಿನಿಕ್ ತೆರೆದಿದ್ದ ನಕಲಿ ಡಾಕ್ಟರ್ ದಂಧೆಕೋರರಿಗೆ ಸಾಥ್ ನೀಡಿದ್ದ ಎಂಬುದು ಗೊತ್ತಾಗಿದೆ. ಜೊತೆಗೆ ಏಜೆಂಟ್ ಆಗಿ ಕೆಲಸ ಮಾಡುತ್ತಿದ್ದ ಕಿಲಾಡಿ ಲೇಡಿಯೊಬ್ಬಳು ಅಂದರ್ ಆಗಿದ್ದಾಳೆ.

ಇಡೀ ಬೆಂಗಳೂರನ್ನೇ ಬೆಚ್ಚಿಬೀಳಿಸಿರೋ ಹಸುಗೂಸುಗಳ ಮಾರಾಟ ಕೇಸ್ ದಿನಕ್ಕೊಂದು ಟ್ವಿಸ್ಟ್ ಪಡಿತೀದೆ.. ಹಣಕ್ಕಾಗಿ ಮಕ್ಕಳನ್ನೇ ಮಾರಾಟ ಮಾಡುತ್ತಿದ್ದ ದುಷ್ಟರ ಪಡೆಯ ಮತ್ತಿಬ್ಬರು ಖತರ್ನಾಕ್ ಗಳನ್ನು ಸಿಸಿಬಿ ಬಂಧಿಸಿದೆ.ನಕಲಿ ವೈದ್ಯ ಕೇವಿನ್ ಮತ್ತು ಏಜೆಂಟ್ ಆಗಿ ಕೆಲಸ ಮಾಡುತ್ತಿದ್ದ ರಮ್ಯಾ ಎಂಬಾಕೆಯೇ ಸಿಸಿಬಿ ಕೈಗೆ ತಗಲಾಕ್ಕೊಂಡವರು.

ಇದನ್ನೂ ಓದಿ:ನಾನು ಹಣ ಪಡೆದು ಕೆಲಸ ಕೊಟ್ಟಿದ್ದೀನಿ ಅಂತಾ ಆರೋಪ ಮಾಡಿದ್ದರು

ಯೆಸ್.. ನಕಲಿ ಡಾಕ್ಟರ್ ಕೇವಿನ್ ಈ ದಂಧೆಯಲ್ಲಿ ತೊಡಗಿದ್ದವನು. ರಾಜಾಜಿನಗರದಲ್ಲಿ ತನ್ನದೇ ಕ್ಲಿನಿಕ್ ನಡೆಸ್ತಿದ್ದ ಈತ ರೋಗಿಗಳಿಗೆ ಟ್ರಿಟ್ಮೆಂಟ್ ಸಹ ನೀಡುತ್ತಿದ್ದನಂತೆ. ಮೂರನೇ ವರ್ಷದ ಎಂಬಿಬಿಎಂಸ್ ಓದುವಾಗಲೇ ಗೋತಾ ಹೊಡೆದಿದ್ದ ಈತ ತಾನೊಬ್ಬ ಡಾಕ್ಟರ್ ಅಂತಾ ಹೇಳಿಕೊಂಡು ಹಸುಗೂಸುಗಳ ಮಾರಾಟದಲ್ಲಿ ಇನ್ವಾಲ್ ಆಗಿದ್ದಾನೆ. ಮಕ್ಕಳನ್ನ ಮಾರಾಟಕ್ಕೆ ಪಡೆಯುವವರ ಬಳಿ ಹಣ ಪಡೆದು ಮಕ್ಕಳಿಗೆ ಬರ್ತ್ ಸರ್ಟಿಪೀಕೆಟ್ ತಯಾರಿಸಿ ಕೊಡುತ್ತಿದ್ನಂತೆ. ಹಾಗೆ ಇಬ್ಬರು ಮಕ್ಕಳನ್ನ ಮಾರಾಟ ಮಾಡಲು ಸಹಾಯ ಕೂಡ ಮಾಡಿದ್ನಂತೆ. ಸದ್ಯ ಕೇವಿನ್ ನನ್ನ ಬಂಧಿಸಿರೋ ಸಿಸಿಬಿ ಪೊಲೀಸರು ಈತನ ಜನ್ಮವನ್ನು ಜಾಲಾಡುತ್ತಿದ್ದಾರೆ. 

ಮತ್ತೊಂದು ಕಡೆ ಈ ದಂಧೆಯಲ್ಲಿ ತೊಡಗಿದ್ದ ರಮ್ಯಾ ಎಂಬಾಕೆಯನ್ನ ಸಿಸಿಬಿ ಬಂಧಿಸಿದೆ. ರಮ್ಯಾ ಸಂಬಂಧಿಯೊಬ್ಬರು ಮದುವೆಗೂ ಮೊದಲೇ ಗರ್ಭಿಣಿಯಾಗಿ ಅಬಾರ್ಷನ್ ಗೆ ಓಡಾಡ್ತಿದ್ಳಂತೆ. ಇದನ್ನ ಅತಿತ ಈ ಚಾಲಕಿ ರಮ್ಯಾ ಆ ಗರ್ಭಿಣಿಯನ್ನ ಆರೈಕೆ ಮಾಡಿ ಮಗು ಹೆತ್ತ ಬಳಿಕ ಈ ಗ್ಯಾಂಗ್ ಜೊತೆ ಸೇರಿ ಆಕೆಯ ಮಗುವನ್ನ ಮಾರಾಟ ಮಾಡಿದ್ದಾಳೆ. ಹಾಗೆ ಮಗು ಹೆತ್ತು ಕೊಟ್ಟಿದ್ದಕ್ಕೆ ಸಂಬಂಧಿ ಯುವತಿಗೆ ಹಣ ಕೂಡ ನೀಡಿದ್ದಾಳಂತೆ.

ಇದನ್ನೂ ಓದಿ: ಡಿಕೆಶಿ ವಿರುದ್ಧ ಯತ್ನಾಳ್‌ ಕೋರ್ಟ್‌ಗೆ ಮಧ್ಯಂತರ ಅರ್ಜಿ ಸಲ್ಲಿಕೆ

ಸದ್ಯ ಪ್ರಕರಣದಲ್ಲಿ ಒಟ್ಟು 10 ಆರೋಪಿಗಳನ್ನ ಸಿಸಿಬಿ  ಬಂಧಿಸಿ ವಿಚಾರಣೆ ಮುಂದುವರಿಸಿದೆ‌. ಜೊತೆಗೆ  ಮೊದಲು ಅರೆಸ್ಟ್ ಆದ ನಾಲ್ವರು ಆರೋಪಿಗಳು ನ್ಯಾಯಾಂಗ ಬಂಧನದಲ್ಲಿದ್ದು, ಹೆಚ್ಚಿನ ವಿಚಾರಣೆಗಾಗಿ ನಾಲ್ವರನ್ನ ವಶಕ್ಕೆ ಪಡೆಯಲು ಸಿಸಿಬಿ ತಯಾರಿ ನಡೆಸಿದೆ. ಅದೆನೇ ಇರ್ಲಿ, ಬೀದಿಯಲ್ಲಿ ತರಕಾರಿ ಮಾರುವಂತೆ ಕಂದಮ್ಮಗಳನ್ನು ಮಾರಿರುವ ಈ ಪಾಪಿಗಳಿಗೆ ಸರಿಯಾದ ಶಿಕ್ಷೆಯಾಗಬೇಕು ಎಂಬುದೇ ನಾಗರಿಕ ಸಮಾಜದ ಆಗ್ರಹ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News