ಸೋಷಿಯಲ್‌ ಮೀಡಿಯಾ ಮೂಲಕ ಪ್ರೀತಿ: ಮದುವೆಯಾಗಿದ್ದವನಿಗೆ ಹೇಳಿದಳು ಗುಡ್‌ ಬೈ

Social Media Crime: ಸಾಮಾಜಿಕ ಜಾಲತಾಣಗಳ ಮೂಲಕ ಜನರು ವಂಚನೆಗೆ ಒಳಗಾಗೋದನ್ನ ಕೇಳುತ್ತಲೇ ಇರ್ತೀವಿ. ಅದರೆ ಇಲ್ಲೊಬ್ಬಳು ಸೋಶಿಯಲ್‌ ಮಿಡೀಯಾದಲ್ಲಿ ಪೋಟೋ ಶೇರ್‌ ಮಾಡಿ ಗಂಡನ ಕೈಗೆ ಸಿಕ್ಕಿಹಾಕಿಕೊಂಡಿದ್ದಾಳೆ. ಗರ್ಭಿಣಿ ಅಂತ ಆಕೆ ತನ್ನ ತವರು ಮನೆಗೆ ಹೋಗಿದ್ದಳು. ಹಾಗೆ ಹೋಗಿದ್ದವಳು ಗಂಡನ ಮನೆಗೆ ಮತ್ತೆ ವಾಪಸ್‌ ಬರಲೇ ಇಲ್ಲ. 

Written by - Zee Kannada News Desk | Last Updated : Dec 28, 2023, 12:53 PM IST
  • ಗರ್ಭಿಣಿ ಅಂತ ತವರು ಮನೆಗೆ ಹೋದವಳು ಗಂಡನ ಮನೆಗೆ ಮತ್ತೆ ವಾಪಸ್‌ ಬರಲೇ ಇಲ್ಲ.
  • ಸೋಶಿಯಲ್‌ ಮಿಡೀಯಾದಲ್ಲಿ ಪೋಟೋ ಶೇರ್‌ ಮಾಡಿ ಗಂಡನ ಕೈಗೆ ಸಿಕ್ಕಿಹಾಕಿಕೊಂಡಿದ್ದಾಳೆ.
  • ಇನ್‌ಸ್ಟಾಗ್ರಾಮ್‌ನಲ್ಲಿ ಫೋಟೋವನ್ನು ನೋಡಿದ ಮೇಲೆ ಆಕೆ ಇನ್ನೊಂದು ಮದುವೆಯಾಗಿರೋದು ತಿಳಿದು ಬಂದಿದೆ.
ಸೋಷಿಯಲ್‌ ಮೀಡಿಯಾ ಮೂಲಕ ಪ್ರೀತಿ: ಮದುವೆಯಾಗಿದ್ದವನಿಗೆ ಹೇಳಿದಳು ಗುಡ್‌ ಬೈ title=

Crime Case: ಸಾಮಾನ್ಯವಾಗಿ ಸಾಮಾಜಿಕ ಜಾಲತಾಣದಲ್ಲಿ ಇಂತಹ ಪ್ರಕರಣಗಳು ಕೇಳಿಬರುತ್ತಲೇ ಇದ್ದರು ಮೋಸ ಹೊಗುವವರು ಮಾತ್ರ ಕಡಿಮೆಯಾಗಿಲ್ಲ. ಅಂತಹದ್ದೆ ಒಂದು ಘಟನೆ  ಈಗ ಬೆಳಕಿಗೆ ಬಂದಿದೆ. ಪ್ರಶಾಂತ್ ಎಂಬಾತ ಸ್ನೇಹಾಳನ್ನು ಸೋಷಿಯಲ್ ಮೀಡಿಯಾದಲ್ಲಿ ಭೇಟಿಯಾಗಿದ್ದ. ಸ್ನೇಹದಿಂದ ಶುರುವಾದ ಇವರಿಬ್ಬರ ಪರಿಚಯ ಪ್ರೀತಿಗೆ ತಿರುಗಿತ್ತು. ಪ್ರೀತಿ ಮದುವೆ ವರೆಗೂ ಹೋಗಿತ್ತು.

2022 ರ ಫೆಬ್ರವರಿಯಲ್ಲಿ  ಪ್ರಶಾಂತ್ ಆಕೆಯನ್ನ ಮದುವೆಯಾಗಿದ್ದ. ಮಾದುವೆಯಾಗಿ ಇಬ್ಬರ ಜೀವನ ಸುಂದರವಾಗಿಯೇನೊ ಸಾಗುತ್ತಿತ್ತು. ಇದೇ ಸಮಯದಲ್ಲಿ ಸ್ನೇಹ ತಾನು ಗರ್ಭಿಣಿ ಅಂತ ಹೇಳಿ ತವರು ಮನೆಗೆ ಹೋಗಿದ್ದಳು. ತನ್ನ ಹೆಂಡತಿ ತವರು ಮನೆಗೆ ಹೋಗಿದ್ದಾಳೆ ಇನ್ನೇನು ಬರ್ತಾಳೆ ಅನ್ನೊ ನಂಬಿಕೆ ಇಂದ ಗಂಡ ಅವಳಿಗಾಗಿ ಕಾಯ್ತಾ ಇದ್ದ ಅದರೆ ಅವಳು ತವರು ಮನೆಯಿಂದ ಎಸ್ಕೇಪ್‌ ಆಗಿಬಿಟ್ಟಿದ್ದಳು.

ಇದನ್ನೂ ಓದಿ: ಮಾಟ ಮಂತ್ರದ ನೆಪ : ಮಹಿಳೆಗೆ ಬೆಂಕಿ ಹಚ್ಚಿ ಕೊಲೆ..

ತವರು ಮನೆಗೆ ಹೋಗದ್ದ ಹೆಂಡತಿ ಮಾತ್ರೆ ಸೇವಿಸಿ ಗರ್ಭಪಾತ ಮಾಡಿದ್ದಾಳೆ. ನನ್ನ ಹೆಂಡತಿ ಕಾಣೆಯಾಗಿದ್ದಾಳೆ ಅಂತ ನಾನು ಪೋಲಿಸ್‌ ಠಾಣೆಯಲ್ಲಿ ದೂರು ಕೊಟ್ಟಿದೆ. ಅದರೆ ಈಗ ನನ್ನ ಹೆಂಡತಿ ನನಗೆ ತಿಳಿಯದೆ ಇನ್ನೊಬ್ಬನನ್ನ ಅವಳು ಮದುವೆಯಾಗಿದ್ದಾಳೆ. ಇನ್‌ಸ್ಟಾಗ್ರಾಮ್‌ನಲ್ಲಿ ಮದುವೆಯ ಫೋಟೋಗಳನ್ನು ನೋಡಿದ ಮೇಲೆ ನನಗೆ ಆಕೆ ಇನ್ನೊಂದು ಮದುವೆಯಾಗಿರೋದು ತಿಳಿದು ಬಂದಿದೆ ಅಂತ ಪ್ರಶಾಂತ್ ಹೇಳಿಕೊಂಡಿದ್ದಾರೆ.

ಸ್ನೇಹಾ ಮೂಲತಃ ಮಂಡ್ಯ ಜಿಲ್ಲೆಯ ನರಹಳ್ಳಿ ನಿವಾಸಿ. ಅಗಂತ ಪ್ರಶಾಂತ್‌ ಒಬ್ಬನೆ ಇವಳಿಗೆ ಗಂಡ ಅಲ್ಲ. ಈಕೆ ಪ್ರಶಾಂತ್‌ಗೂ ಮುಂಚೆ ಇನ್ನೂ ಇಬ್ಬರನ್ನ ಕೂಡ ಮದುವೆ ಆಗಿದ್ದಳು ಅಂತ ಹೇಳಲಾಗುತ್ತಿದ್ದು. ಸದ್ಯ ಈಕೆ ಮದುವೆಯಾಗಿರೋದು ಬೆಂಗಳೂರಿನ ನಿವಾಸಿ ರಘು ಎಂಬಾತನನ್ನು ಎಂದು ಹೇಳಲಾಗುತ್ತಿದೆ. 

ಇದನ್ನೂ ಓದಿ: Kolar: ಮರ್ಯಾದೆಗಂಜಿ ಮಗಳನ್ನೇ ಕೊಲೆ ಮಾಡಿದ ತಂದೆ..!

ಇದಕ್ಕೂ ಮುಂಚೆ ಈಕೆ ಇಬ್ಬರನ್ನ ಮದುವೆಯಾಗಿದ್ದನ್ನ ಆಕೆಯ ಕುಟುಂಬದವರು ತನ್ನಿಂದ ಮುಚ್ಚಿಟ್ಟಿದ್ದಾರೆ. ಇತ್ತೀಚೆಗೆ ಅಕೆಯ ಸಂಬಂದಿಯೊಬ್ಬರು ಸ್ನೇಹಾಳಿಗೆ ಇದಕ್ಕೂ ಮುಂಚೆ ಮದುವೆಯಾಗಿತ್ತು ಅಂತ ಹೇಳಿದಾಗ ನನಗೆ ಇದರ ಬಗ್ಗೆ ತಿಳಿದುಬಂದಿದೆ. ಆಕೆ ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯವಾಗಿರುವ ಕಾರಣ ನನ್ನಂತೆ ಅದೆಷ್ಟೋ ಜನರನ್ನ ಆಕೆ ಮೋಸ ಮಾಡುತ್ತಾಳೆ. ಇಂತವರಿಂದ ದೂರ ಉಳಿಯುವಂತೆ ಎಚ್ಚರಿಕೆ ನೀಡಲು ಮತ್ತು ಬೇರೆಯವರಿಗೆ ಈಕೆ ವಂಚನೆ ಮಾಡಬಾರದು ಅನ್ನೋ ಉದ್ದೇಶದಿಂದ ನಾನು ಪೋಲಿಸ್‌ ಠಾಣೆಯಲ್ಲಿ ದೂರು ನೀಡಿದ್ದೇನೆ ಅಂತ ಪ್ರಶಾಂತ್‌ ಹೇಳಿದ್ದಾರೆ. 

ಇದನ್ನೂ ಓದಿ: ದೇವಸ್ಥಾನವನ್ನೆ ಬಾರ್ ಅಂಡ್ ರೆಸ್ಟೋರೆಂಟ್ ಮಾಡಿಕೊಂಡ ಕಿಡಿಗೇಡಿಗಳು..!

ಸದ್ಯಕ್ಕೆ ಪ್ರಕರಣ ದಾಖಲಿಸಿಕೊಂಡಿರುವ ಪೋಲಿಸರು ಮಾಹಿತಿ ಕಲೆಹಾಕುತ್ತಿದ್ದು. ಪ್ರಶಾಂತ್‌ ಪೋಲಿಸ್‌ ಠಾಣೆಯಲ್ಲಿ ತನ್ನ ಮದುವೆಯನ್ನ ವಜಾ ಮಾಡಿಕೊಂಡಿದ್ದಾರೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News