ಹುಬ್ಬಳ್ಳಿಯಲ್ಲಿ ವೈಷ್ಣವಿ ದೇವಸ್ಥಾನದ ಅರ್ಚಕನ ಬರ್ಬರ ಹತ್ಯೆ: ಬೆಚ್ಚಿಬಿದ್ದ ಜನತೆ

Crime News: ವೈಷ್ಣವಿ ದೇವಸ್ಥಾನ ನಿರ್ಮಾಣ ಮಾಡಿ ಅದರ ಅರ್ಚನೆಯನ್ನ ಸಹ ದೇವಪ್ಪಜ್ಜ ಅವರೇ ಮಾಡುತ್ತಿದ್ದರು. ಆದರೆ ಭಾನುವಾರ (ಜುಲೈ 21) ತಡರಾತ್ರಿ ದುಷ್ಕರ್ಮಿಗಳು ಚಾಕುವಿನಿಂದ ಕೊಲೆ ಮಾಡಿದ್ದಾರೆ. 

Written by - Yashaswini V | Last Updated : Jul 22, 2024, 07:56 AM IST
  • ಹುಬ್ಬಳ್ಳಿ ನವನಗರದಲ್ಲಿ ಪೂಜಾರಿ ಬರ್ಬರ ಹತ್ಯ
  • ವಿದ್ಯಾನಗರದಲ್ಲಿ ವಾಸವಿದ್ದ ಮೃತ ದೇವೇಂದ್ರಪ್ಪಜ್ಜ
  • 60 ವರ್ಷ ವಯಸ್ಸಿನ ದೇವೇಂದ್ರಪ್ಪಜ್ಜ ಹೊನ್ನಾಳಿ ಕುಸುಗಲ್
ಹುಬ್ಬಳ್ಳಿಯಲ್ಲಿ ವೈಷ್ಣವಿ ದೇವಸ್ಥಾನದ ಅರ್ಚಕನ ಬರ್ಬರ ಹತ್ಯೆ: ಬೆಚ್ಚಿಬಿದ್ದ ಜನತೆ title=

Hubli Crime News: ಇಲ್ಲಿನ ಈಶ್ವರ ನಗರದಲ್ಲಿರುವ ವೈಷ್ಣವಿ ದೇವಸ್ಥಾನದ‌  ಸಂಸ್ಥಾಪಕ ಹಾಗೂ ಅರ್ಚಕ ದೇವಪ್ಪ ಅಲಿಯಾಸ್ ದೇವಿಂದ್ರಪ್ಪ ವನಹಳ್ಳಿಯನ್ನ ದುಷ್ಕರ್ಮಿಗಳು ಚಾಕು ಇರಿದು ಕೊಲೆ ಮಾಡಿರುವ ಘಟನೆ  ನಡೆದಿದೆ. ಘಟನೆಯಿಂದ ಸಾರ್ವಜನಿಕರು ಆತಂಕಗೊಂಡಿದ್ದಾರೆ. 

ವೈಷ್ಣವಿ ದೇವಸ್ಥಾನ (Vaishnavi Temple) ನಿರ್ಮಾಣ ಮಾಡಿ ಅದರ ಅರ್ಚನೆಯನ್ನ ಸಹ ದೇವಪ್ಪಜ್ಜ ಅವರೇ ಮಾಡುತ್ತಿದ್ದರು. ಆದರೆ ಭಾನುವಾರ (ಜುಲೈ 21) ತಡರಾತ್ರಿ ದುಷ್ಕರ್ಮಿಗಳು ಚಾಕುವಿನಿಂದ ಕೊಲೆ ಮಾಡಿದ್ದಾರೆ. ಆದಾಗ್ಯೂ, ಈ ಕೃತ್ಯ ಮಾಡಿದವರ್ಯಾರು? ಯಾವ ಕಾರಣಕ್ಕೆಈ ಕೆಲಸ ಮಾಡಿದ್ದಾರೆ ಎಂಬ ಮಾಹಿತಿ ತಿಳಿದು ಬಂದಿಲ್ಲ. 

ಇದನ್ನೂ ಓದಿ- Accident: ಕಾರಿಗೆ ಡಿಕ್ಕಿ ಹೊಡೆದು ತಪ್ಪಿಸಿಕೊಳ್ಳುತ್ತಿದ್ದ ವೇಳೆ ಫ್ಲೈ ಓವರ್ ನಿಂದ ನೆಲಕ್ಕೆ ಅಪ್ಪಳಿಸಿದ ಲಾರಿ

ಕೊಲೆಯಾದ ಸ್ಥಳದಲ್ಲಿ ಸರಿಯಾಗಿ ಸಿಸಿಟಿವಿ ಇಲ್ಲ. ದೇವಪ್ಪಜ್ಜ (Devappajja) ಧಾರವಾಡಕ್ಕೆ ವೀರಶೈವ ಮಹಾಸಭಾ ಚುನಾವಣೆಯಲ್ಲಿ ಮತಹಾಕಿ ಹುಬ್ಬಳ್ಳಿ ಈಶ್ವರನಗರಕ್ಕೆ ಬಂದಿದ್ದಾರೆ. ಈ ಸಮಯದಲ್ಲಿ ಬಂದ ವ್ಯಕ್ತಿಯೊಬ್ಬ ದೇವಪ್ಪಜ್ಜನ ಹೊಟ್ಟೆ, ಬೆನ್ನಿಗೆ ನಾಲ್ಕು ಸಲ ಚಾಕು ಇರಿದು ಎಸ್ಕೇಪ್ ಆಗಿದ್ದಾನೆ. ದೇವಪ್ಪಜ್ಜನನ್ನು ಆಸ್ಪತ್ರೆಗೆ ಕೊಂಡೊಯ್ಯುವುದರೊಳಗಾಗಿ ಅವರು ಕೊನೆಯುಸಿರೆಳೆದಿರುವುದಾಗಿ ತಿಳಿದುಬಂದಿದೆ. 

ಕಳೆದ ಒಂದು ವರ್ಷದ ಹಿಂದೆ ಅರ್ಚಕನ  ಮೇಲೆ ದುಷ್ಕರ್ಮಿಗಳಿಂದ ದಾಳಿ ನಡೆದಿತ್ತು. ಅದೃಷ್ಟವಶಾತ್‌ ಆ ಸಮಯದಲ್ಲಿ ಅರ್ಚಕ ಬದುಕುಳಿದಿದ್ದರು ಎನ್ನಲಾಗಿದೆ. ಇಲ್ಲಿನ ನವನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿರುವ ಪೊಲೀಸರು ಅಲ್ಲಿಯೇ 
ಬೀಡುಬಿಟ್ಟಿದ್ದಾರೆ. ಕೊಲೆ ಆರೋಪಿ ಬಂಧನಕ್ಕೆ ಬಲೆ ಬೀಸಲಾಗಿದೆ ಎಂದು ಹುಬ್ಬಳ್ಳಿ ಧಾರವಾಡ ಪೊಲೀಸ್ ಕಮೀಷನರ್ ಶಶಿಕುಮಾರ್  ಮಾಹಿತಿ ನೀಡಿದ್ದಾರೆ. 

ಇದನ್ನೂ ಓದಿ- ಸಕ್ಕರೆ ನಾಡಿನಲ್ಲಿ ಪುಡಿ ರೌಡಿಗಳ ಅಟ್ಟಹಾಸಕ್ಕೆ ಬ್ರೇಕ್ ಹಾಕಿದ ನೂತನ ಎಸ್‌ಪಿ

ಮೃತನ ದೂರದ ಸಂಬಂಧಿ ಅಜ್ಜಿ ಶ್ರೀಮತಿ ಬಾಲೇಹೂಸರು ಹಾಗೂ ಭಕ್ತರು ಮಾತ್ರ ದೇಚಪ್ಪಜ್ಜನ ಬಗ್ಗೆ ಒಳ್ಳೆಯ ಅಭಿಪ್ರಾಯ ವ್ಯಕ್ತಪಡಿಸಿದ್ದು, ದೇವಪ್ಪಜ್ಜನ ಪತ್ನಿ ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಯಲ್ಲಿ ಹಾಗೂ ಪುತ್ರಿ ಸಹ ಬಾಗಲಕೋಟೆಯಲ್ಲಿ ವೈದ್ಯರಾಗಿದ್ದು ಯಾವುದೇ ರೀತಿಯ ಮಾಹಿತಿ ಕೊಡಲು ನಿರಾಕರಣೆ ಮಾಡಿರುವುದಾಗಿ ತಿಳಿದುಬಂದಿದೆ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News