ಟಾರ್ಗೆಟ್ 'ಹೆಡ್'.. ಕೊಚ್ಚಿ ಕೊಂದ ಹಂತಕ ಪಡೆ..! ರಂಗೋಲಿ ಹಾಕುವ ಸ್ಥಳದಲ್ಲೇ ರಕ್ತದ ಓಕುಳಿ

ನಿಜಕ್ಕೂ ಅದೊಂದು ಬರ್ಬರ ಹತ್ಯೆ. ಕೊಲೆಗೈದ ಪರಿ ನೋಡಿದರೆ ಹತ್ಯೆಯಾದವ ಮೇಲೆ ಅದೆಂತಹ ದ್ವೇಷವಿದ್ದಿರಬಹುದು ಎಂದು ಊಹಿಸಲು ಸಾಧ್ಯವಿಲ್ಲ. ಯಸ್.. ಮಿಸುಕಾಡಲೂ ಬಿಡದೆ ಕೊಂದು ಹಾಕಲಾಗಿದೆ. ಅದರ ಡೀಟೇಲ್ಸ್ ಇಲ್ಲಿದೆ..  

Written by - VISHWANATH HARIHARA | Edited by - Krishna N K | Last Updated : Jul 3, 2024, 07:51 PM IST
    • ತಲೆಯ ಮೆದಳು ಕೂಡ ಹೊರ ಬಂದಿದೆ.
    • ಈ ರೀತಿಯ ಹತ್ಯೆಗಳು ಪ್ರೋಫೇಷನಲ್ ಹಂತಕರೇ ನಡೆಸುವಂತಹದ್ದು.
    • ಈ ಹತ್ಯೆಯ ಹಿಂದೆ ನುರಿತ ಹಂತಕರೇ ಇರುವ ಸಾಧ್ಯತೆ ಇದೆ.
ಟಾರ್ಗೆಟ್ 'ಹೆಡ್'.. ಕೊಚ್ಚಿ ಕೊಂದ ಹಂತಕ ಪಡೆ..! ರಂಗೋಲಿ ಹಾಕುವ ಸ್ಥಳದಲ್ಲೇ ರಕ್ತದ ಓಕುಳಿ  title=

ಬೆಂಗಳೂರು : ಅಜಿತ್ ಎಂದು ಈತನ ಹೆಸರು. ಮೂಲತಃ ತಮಿಳುನಾಡು. ಕಾಕ್ಸ್ ಟೌನ್ ಬಳಿ ಇರು ದೊಡ್ಡ ಗುಂಟಿ ಸರ್ಕಲ್ ಬಳಿಯ ನಿವಾಸಿ ಈತ. ಇಂದು ಈತನ ದಾರಿ ಕಾಯ್ತಿದ್ದ ನಾಲ್ಕೈದು ಜನ ಹಂತಕರು ಬರ್ಬರವಾಗಿ ಹತ್ಯೆ ನಡೆಸಿ ಪರಾರಿಯಾಗಿದ್ದಾರೆ.

ನಿಜಕ್ಕೂ ಅದ್ಯಾವ ಪರಿ ಹೊಡೆದಿದ್ದರೆಂದರೆ ತಲೆಯ ಮೆದಳು ಕೂಡ ಹೊರ ಬಂದಿದೆ. ಈ ರೀತಿಯ ಹತ್ಯೆಗಳು ಪ್ರೋಫೇಷನಲ್ ಹಂತಕರೇ ನಡೆಸುವಂತಹದ್ದು. ಹೀಗಾಗಿ ಈ ಹತ್ಯೆಯ ಹಿಂದೆ ನುರಿತ ಹಂತಕರೇ ಇರುವ ಸಾಧ್ಯತೆ ಇದೆ. ಅಷ್ಟಕ್ಕೂ ಈತ ಸತ್ತು ಬಿದ್ದಿದ್ದು ತನ್ನ ಮನೆ ಮುಂದೆಯೇ. ಹೀಗಾಗಿ ಪೊಲೀಸರಲ್ಲಿ ಹಲವು ಅನುಮಾನಗಳು ವ್ಯಕ್ತವಾಗಿದೆ.. 

ಇದನ್ನೂ ಓದಿ:ಲೈಂಗಿಕ ದೌರ್ಜನ್ಯ ಎಸಗಿ ಹಿಂಬದಿ ತಲೆ ಜಜ್ಜಿ ಕೊಲೆ..! ಕಾಮುಕರ ಹಟ್ಟಹಾಸಕ್ಕೆ 6 ವರ್ಷದ ಬಾಲಕಿ ಬಲಿ

ಇನ್ನು ಮೀನಕುಂಟೆ ಬಳಿ ಇರುವ ಐಟಿಸಿ ಬ್ರಾಂಚ್ ಕಂಪನಿಯಲ್ಲಿ ಅಜಿತ್ ಕೆಲಸ ಮಾಡಿಕೊಂಡಿದ್ದ. ತಮಿಳುನಾಡಿನಿಂದ ಬಂದು ಇಲ್ಲೇ ಸೆಟ್ಲ್ ಆಗಿದ್ದ. ಹಣದ ವಿಚಾರವಾಗಿ ಹತ್ಯೆ ನಡೆದಿದೆ ಎನ್ನಲಾಗಿದೆ. ಅಜಿತ್ ಹಲವರಿಂದ ಬಡ್ಡಿಗೆ ಹಣ ಪಡೆದಿದ್ದನಂತೆ. ಆ ಹಣ ವಾಪಾಸ್ ಕೊಡದ ಕಾರಣ ಹತ್ಯೆ ನಡೆದಿರಬಹುದು ಎಂದು ಒಂದು ಆಯಾಮದ ವಿಚಾರವಾಗಿದೆ. 

ಆದರೆ ಅವನ ಸ್ನೇಹಿತರು ಹೇಳುವ ಪ್ರಕಾರ ಅಜಿತ್ ಗೆ ಹಣದ ಸಮಸ್ಯೆ ಇರಲಿಲ್ಲ. ಹೀಗಾಗಿ ಬಡ್ಡಿಗೆ ಹಣ ಪಡೆಯಲು ಸಾಧ್ಯವೇ ಇಲ್ಲ ಇದು ಹಳೆ ದ್ವೇಷದ ಹಿನ್ನಲೆ ಆಗಿರುವ ಕೃತ್ಯ ಎಂದು ಸಮರ್ಥನೆ ಮಾಡಿಕೊಂಡಿದ್ದಾರೆ. ಸದ್ಯ ಎರಡೂ ಆ್ಯಂಗಲ್ ನಲ್ಲಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಇನ್ನು ಈ ವಾರ ನೈಟ್ ಶಿಪ್ಟ್ ಆದ ಕಾರಣ ಅಜಿತ್ ಕೆಲಸ ಮುಗಿಸಿ ಮನೆಗೆ ಬಂದಿದ್ದ.

ಇದನ್ನೂ ಓದಿ:ಹುಬ್ಬಳ್ಳಿ ಧಾರವಾಡ ಪೊಲೀಸ್ ಕಮಿಷನರ್ ಆಗಿ ಶಶಿಕುಮಾರ್ ನೇಮಕ

ಈ ವೇಳೆ ಕಾದು ಕೂತಿದ್ದ ಹಂತಕರು ಏಕಾಏಕಿ ಮುಗಿಬಿದ್ದು ಲಾಂಗು ಮಚ್ಚುಗಳಿಂದ ತಲೆ ಭಾಗಕ್ಕೆ ಹೆಚ್ಚು ಟಾರ್ಗೇಟ್ ಮಾಡಿ ಹತ್ಯೆ ಮಾಡಿ ಪರಾರಿಯಾಗಿದ್ದಾರೆ. ಸದ್ಯ ಈ ಕೊಲೆಯ ಸಂಬಂಧ ಪುಲಿಕೇಶಿನಗರ ಪೊಲೀಸರು ವಿಶೇಷ ತಂಡವನ್ನ ರಚನೆ ಮಾಡಿ  ಆರೋಪಿಗಳಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ

ರಂಗೋಲಿ ಬಿಡುವ ಸ್ಥಳದಲ್ಲಿ ಮಗನ ರಕ್ತದ ಬಣ್ಣ ಬಿದ್ದಿದೆ. ಇದರಿಂದ ಅಜಿತ್ ತಾಯಿ ಕೂಡ ಗಾಬರಿಯಿಂದ ಅಸ್ವಸ್ಥಳಾಗಿ ಆಸ್ಪತ್ರೆ ಸೇರಿದ್ದಾರೆ. ಸದ್ಯ ಈ ಬರ್ಬರ ಹತ್ಯೆಯ ಹಿಂದಿನ ರೂವಾರಿಗಳಿಗೆ ಪುಲಿಕೇಶಿನಗರ ಪೊಲೀಸರು ಹುಡುಕಾಟ ಮುಂದುವರೆಸಿದ್ದಾರೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News