ʼದಿ ಕಪಿಲ್‌ ಶರ್ಮಾ ಶೋʼನಲ್ಲಿ ನಟ ಗಣೇಶ್‌.. ಮತ್ತೆ ಆ್ಯಂಕರ್ ಆಗ್ತಾರಾ ಕಾಮಿಡಿ ಕಿಂಗ್‌..!

ಸ್ಯಾಂಡಲ್‌ವುಡ್‌ನಲ್ಲಿ ʼಥ್ರಿಪಲ್‌ ರೈಡಿಂಗ್‌ʼ ಮಾಡಿದ್ದ ಗೋಲ್ಡನ್‌ ಸ್ಟಾರ್‌ ಗಣೇಶ್‌ ಸದ್ಯ ʼಬಾನದಾರಿಯಲ್ಲಿʼ ಸಾಗಿದ್ದಾರೆ. ವಿಭಿನ್ನ ಕಥಾಹಂದರ ಹೊಂದಿರುವ ಬಾನದಾರಿಯಲ್ಲಿ ಚಿತ್ರ ಟೈಟಲ್‌ನಿಂದಲೇ ಕನ್ನಡ ಚಿತ್ರರಂಗದಲ್ಲಿ ಸಾಕಷ್ಟು ಕುತೂಹಲ ಮೂಡಿಸಿದೆ. ಸಿನಿಮಾ ಬಿಡುಗಡೆ ದಿನಾಂಕ ಕೂಡ ಫಿಕ್ಸ್‌ ಆಗಿದೆ. ಇದರ ಬೆನ್ನಲ್ಲೆ ಬಾಲಿವುಡ್‌ ಜನಪ್ರಿಯ ಶೋ ಕಪಿಲ್‌ ಶರ್ಮಾದಲ್ಲಿ ಗಣೇಶ್‌ ಕಾಣಿಸಿಕೊಳ್ಳಲಿದ್ದಾರೆ. ಆದ್ರೆ ಗಣೇಶ್‌ ಏಕಾಎಕಿ ಕಪಿಲ್‌ ಶರ್ಮಾ ಶೋಗೆ ಯಾಕ್‌ ಹೋಗಿದಾರೆ ಎನ್ನುವ ವಿಚಾರ ಮಾತ್ರ ಗುಟ್ಟಾಗಿದೆ.

Written by - Krishna N K | Last Updated : Feb 8, 2023, 07:14 PM IST
  • ಸ್ಯಾಂಡಲ್‌ವುಡ್‌ನಲ್ಲಿ ʼಥ್ರಿಪಲ್‌ ರೈಡಿಂಗ್‌ʼ ಮಾಡಿದ್ದ ಗೋಲ್ಡನ್‌ ಸ್ಟಾರ್‌ ಗಣೇಶ್‌ ಸದ್ಯ ʼಬಾನದಾರಿಯಲ್ಲಿʼ ಸಾಗಿದ್ದಾರೆ.
  • ವಿಭಿನ್ನ ಕಥಾಹಂದರ ಹೊಂದಿರುವ ಬಾನದಾರಿಯಲ್ಲಿ ಚಿತ್ರ ಟೈಟಲ್‌ನಿಂದಲೇ ಕನ್ನಡ ಚಿತ್ರರಂಗದಲ್ಲಿ ಸಾಕಷ್ಟು ಕುತೂಹಲ ಮೂಡಿಸಿದೆ.
  • ಇದರ ಬೆನ್ನಲ್ಲೆ ಬಾಲಿವುಡ್‌ ಜನಪ್ರಿಯ ಶೋ ಕಪಿಲ್‌ ಶರ್ಮಾದಲ್ಲಿ ಗಣೇಶ್‌ ಕಾಣಿಸಿಕೊಳ್ಳಲಿದ್ದಾರೆ.
ʼದಿ ಕಪಿಲ್‌ ಶರ್ಮಾ ಶೋʼನಲ್ಲಿ ನಟ ಗಣೇಶ್‌.. ಮತ್ತೆ ಆ್ಯಂಕರ್ ಆಗ್ತಾರಾ ಕಾಮಿಡಿ ಕಿಂಗ್‌..! title=

Ganesh in The Kapil sharma show : ಸ್ಯಾಂಡಲ್‌ವುಡ್‌ನಲ್ಲಿ ʼಥ್ರಿಪಲ್‌ ರೈಡಿಂಗ್‌ʼ ಮಾಡಿದ್ದ ಗೋಲ್ಡನ್‌ ಸ್ಟಾರ್‌ ಗಣೇಶ್‌ ಸದ್ಯ ʼಬಾನದಾರಿಯಲ್ಲಿʼ ಸಾಗಿದ್ದಾರೆ. ವಿಭಿನ್ನ ಕಥಾಹಂದರ ಹೊಂದಿರುವ ಬಾನದಾರಿಯಲ್ಲಿ ಚಿತ್ರ ಟೈಟಲ್‌ನಿಂದಲೇ ಕನ್ನಡ ಚಿತ್ರರಂಗದಲ್ಲಿ ಸಾಕಷ್ಟು ಕುತೂಹಲ ಮೂಡಿಸಿದೆ. ಸಿನಿಮಾ ಬಿಡುಗಡೆ ದಿನಾಂಕ ಕೂಡ ಫಿಕ್ಸ್‌ ಆಗಿದೆ. ಇದರ ಬೆನ್ನಲ್ಲೆ ಬಾಲಿವುಡ್‌ ಜನಪ್ರಿಯ ಶೋ ಕಪಿಲ್‌ ಶರ್ಮಾದಲ್ಲಿ ಗಣೇಶ್‌ ಕಾಣಿಸಿಕೊಳ್ಳಲಿದ್ದಾರೆ. ಆದ್ರೆ ಗಣೇಶ್‌ ಏಕಾಎಕಿ ಕಪಿಲ್‌ ಶರ್ಮಾ ಶೋಗೆ ಯಾಕ್‌ ಹೋಗಿದಾರೆ ಎನ್ನುವ ವಿಚಾರ ಮಾತ್ರ ಗುಟ್ಟಾಗಿದೆ.

ಹೌದು.. ಸ್ಯಾಂಡಲ್‌ವುಡ್‌ ಸ್ಟಾರ್‌ಗಳಲ್ಲಿ ಮೊದಲು ಕಿಚ್ಚ ಸುದೀಪ್‌ ಅವರು ದಿ ಕಪಿಲ್‌ ಶರ್ಮಾ ಶೋ ಭಾಗವಹಿಸಿದ್ದರು. ಇದೀಗ ಗೋಲ್ಡನ್‌ ಸ್ಟಾರ್‌ ಗಣೇಶ್‌ ಕಪಿಲ್‌ ಜೊತೆ ಕಾಣಿಸಿಕೊಳ್ಳಲಿದ್ದಾರೆ. ಆದ್ರೆ ಯಾರ್‌ ಯಾರು ಈ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿದ್ದಾರೆ ಎನ್ನವ ಮಾಹಿತಿ ಸಿಕ್ಕಿಲ್ಲ. ಜಸ್ಟ್‌ ಕಪಿಲ್‌ಗೆ ಗಣಿ ಥ್ಯಾಂಕ್ಸ್‌ ಹೇಳಿರುವ ವಿಡಿಯೋ ಒಂದು ತಮ್ಮ ಟ್ವೀಟರ್‌ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಬಾನದಾರಿಯಲ್ಲಿ ಸಿನಿಮಾದ ಪ್ರಮೋಶನ್‌ಗಾಗಿ ಗಣೇಶ್‌ ಕಪಿಲ್‌ ಶೋಗೆ ಹೋಗಿದ್ದಾರೆ ಎಂದು ಹೇಳಲಾಗುತ್ತಿದೆ.

ಇದನ್ನೂ ಓದಿ: SidKiara : ಇಷ್ಟು ಬೇಗ ಹನಿಮೂನ್‌ಗೆ ಹೊರಟ್ರಾ ಸಿದ್ಧಾರ್ಥ್‌ ಕಿಯಾರಾ..!

ಸಿನಿಮಾ ವಿಚಾರಕ್ಕೆ ಬರೋದಾದ್ರೆ, ಗಣೇಶ್ ಅವರ ಬಹುನಿರೀಕ್ಷಿತ ಬಾನದಾರಿಯಲ್ಲಿ ಸಿನಿಮಾ ಮಾರ್ಚ್​ನಲ್ಲಿ ರಿಲೀಸ್ ಆಗಲಿದೆ. ಈ ಸಿನಿಮಾದ ಪೋಸ್ಟರ್ ಬಿಡುಗಡೆಯಾದ ನಂತರ ಪ್ರೇಕ್ಷಕರ ಕುತೂಹಲವನ್ನು ಕೆರಳಿಸಿದೆ. ಚಿತ್ರಕ್ಕೆ ಅರ್ಜುನ್ ಜನ್ಯ ಸಂಗೀತ ಸಂಯೋಜಿಸಿದ್ದು ದೀಪು ಎಸ್ ಕುಮಾರ್ ಅವರ ಸಂಕಲನವಿದೆ. ಮಳೆಯಲಿ ಜೊತೆಯಲಿ, ದಿಲ್ ರಂಗೀಲಾ, ಮತ್ತು 99 ಚಿತ್ರಗಳ ನಂತರ ಗಣೇಶ್ ಮತ್ತು ನಿರ್ದೇಶಕ ಪ್ರೀತಂ ಗುಬ್ಬಿ ಮತ್ತೆ ಒಂದಾಗಿದ್ದು ಈ ಕಾಂಬಿನೇಷನ್‌ನಲ್ಲಿ ಬಾನದಾರಿಯಲ್ಲಿ ಮೂಡಿಬರುತ್ತಿದೆ.

ಈ ಸಿನಿಮಾ ಮಾರ್ಚ್ 17 ರಂದು ಅದ್ಧೂರಿಯಾಗಿ ರಿಲೀಸ್ ಆಗಲಿದೆ. ರುಕ್ಮಿಣಿ ವಸಂತ್ ಮತ್ತು ರೀಷ್ಮಾ ನಾಣಯ್ಯ ಕೂಡಾ ಈ ಸಿನಿಮಾದಲ್ಲಿ ನಟಿಸಿದ್ದಾರೆ. ಶ್ರೀ ವಾರೆ ಟಾಕೀಸ್ ಬ್ಯಾನರ್​ನಲ್ಲಿ ಬಾನದಾರಿಯಲ್ಲಿ ಸಿನಿಮಾ ನಿರ್ಮಾಣವಾಗಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News