ಟೆರರಿಸ್ಟ್​ಗಳು ವಿಲನ್ಸ್‌ ಆದರೆ ಮುಸ್ಲಿಮರಲ್ಲ..! ʼದಿ ಕೇರಳ ಸ್ಟೋರಿʼ ನಟಿಯ ಹೇಳಿಕೆ ವೈರಲ್‌

Adah sharma on muslims : ಬಾಲಿವುಡ್‌ ನಟಿ ಅದಾ ಶರ್ಮಾ ಮುಸ್ಲಿಂರ ಕುರಿತು ನೀಡಿರುವ ಇತ್ತೀಚಿನ ಹೇಳಿಕೆಯೊಂದು ಸೋಷಿಯಲ್‌ ಮೀಡಿಯಾದಲ್ಲಿ ಸಖತ್‌ ವೈರಲ್‌ ಆಗುತ್ತಿದೆ. ಅಷ್ಟಕ್ಕೂ ನಟಿ ಹೇಳಿದ್ದೇನು..? ಇಲ್ಲಿದೆ ವರದಿ..

Written by - Krishna N K | Last Updated : Mar 27, 2024, 06:43 PM IST
    • ನಟಿ ಅದಾ ಶರ್ಮಾ ಮುಸ್ಲಿಂರ ಕುರಿತ ಹೇಳಿಕೆ ವೈರಲ್‌
    • ಭಯೋತ್ಪಾದಕರು ವಿಲನ್‌ಗಳೇ ಹೊರತು ಮುಸ್ಲಿಂರಲ್ಲ
    • ದಿ ಕೆರಳ ಸ್ಟೋರಿ ನಟಿ ಹೇಳಿಕೆ ವೈರಲ್‌ ಆಗುತ್ತಿದೆ.
 ಟೆರರಿಸ್ಟ್​ಗಳು ವಿಲನ್ಸ್‌ ಆದರೆ ಮುಸ್ಲಿಮರಲ್ಲ..! ʼದಿ ಕೇರಳ ಸ್ಟೋರಿʼ ನಟಿಯ ಹೇಳಿಕೆ ವೈರಲ್‌ title=

Adah Sharma : ʼದಿ ಕೇರಳ ಸ್ಟೋರಿʼ ಸಿನಿಮಾ ಖ್ಯಾತಿಯ ನಟಿ ಅದಾ ಶರ್ಮಾ ಮುಸ್ಲಿಂರ ಕುರಿತು ನೀಡಿರುವ ಹೇಳಿಕೆಯೊಂದು ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಿದೆ. ಅಲ್ಲದೆ, ನಟಿಯ ಮಾತಿಗೆ ನೆಟ್ಟಿಗರು ಟ್ರೋಲ್‌ ಮಾಡುವ ಮೂಲಕ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. 

ಕೆಲವು ದಿನಗಳ ಹಿಂದೆ ರಾಜಕಾರಣಿ ಬಾಬಾ ಸಿದ್ದಿಕ್ (Baba Siddique) ಅವರು ರಂಜಾನ್‌ ಹಿನ್ನಲೆ ಆಯೋಜನೆ ಮಾಡಿದ್ದ ಇಫ್ತಾರ್ ಕೂಟದಲ್ಲಿ ಬಾಲಿವುಡ್‌ ಸೂಪರ್‌ ಸ್ಟಾರ್‌ಗಳಾದ ಸಲ್ಮಾನ್ ಖಾನ್, ಇಮ್ರಾನ್ ಹಶ್ಮಿ, ಮುನಾವರ್ ಫರುಕಿ, ಪ್ರೀತಿ ಜಿಂಟಾ, ಪ್ರಿಯಾಂಕಾ ಚಹರ್ ಚೌಧರಿ ಮತ್ತು ಶೆಹನಾಜ್ ಗಿಲ್ ಸೇರಿದಂತೆ ಹಲವಾರು ಸೆಲೆಬ್ರಿಟಿಗಳು ಭಾಗವಹಿಸಿದ್ದರು. 

ಇದನ್ನೂ ಓದಿ:ದೇವಸ್ಥಾನದಲ್ಲಿ ಗುಟ್ಟಾಗಿ ಮದುವೆಯಾದ ನಟ ಸಿದ್ಧಾರ್ಥ್ - ಅದಿತಿ ರಾವ್..! ಕಾರಣವೇನು ಗೊತ್ತೆ..?

ಈ ಪೈಕಿ ನಟಿ ಅದಾ ಶರ್ಮಾ ಸಹ ಕಾಣಿಸಿಕೊಂಡಿದ್ದರು. ಇನ್ನು ಇಫ್ತಾರ್‌ ಕೂಟದಲ್ಲಿ ಅದಾ ಕಾಣಿಸಿಕೊಂಡಿದ್ದಕ್ಕೆ, ಕೆಲವು ನೆಟ್ಟಿಗರು ಟೀಕೆ ವ್ಯಕ್ತಪಡಿಸುತ್ತಿದ್ದಾರೆ. ಅಲ್ಲದೆ, ಈ ಕುರಿತ ವಿಡಿಯೋ ಹಂಚಿಕೊಂಡು ವಿರೋಧ ವ್ಯಕ್ತಪಡಿಸಿದ್ದಾರೆ. ಈ ಪೈಕಿ ವಿಡಿಯೋ ಒಂದಕ್ಕೆ ಉತ್ತರ ನೀಡಿರುವ ನಟಿ, ʼಭಯೋತ್ಪಾದಕರು ವಿಲನ್‌ಗಳೇ ಹೊರತು ಮುಸ್ಲಿಮರಲ್ಲʼ (Terrorists are villains not Muslims) ಎಂದು ಸ್ಪಷ್ಟನೆ ನೀಡಿದ್ದಾರೆ.

ಹೌದು. ಬಲವಂತವಾಗಿ ಇಸ್ಲಾಂಗೆ ಮತಾಂತರಗೊಳ್ಳುವ ಅವಸ್ಥೆಯನ್ನು ʼದಿ ಕೇರಳ ಸ್ಟೋರಿʼ ಸಿನಿಮಾದಲ್ಲಿ ತೋರಿಸಲಾಗಿತ್ತು. ಚಿತ್ರದಲ್ಲಿ ಅದಾ ನಟಿಸಿದ್ದರು. ಈ ಚಿತ್ರದ ವಿರುದ್ಧ ಮುಸ್ಲಿಂ ಸಂಘಟನೆಗಳು ಮತ್ತು ಕೆಲವು ರಾಜಕೀಯ ನಾಯಕರು ವಿರೋಧ ವ್ಯಕ್ತಪಡಿಸಿದ್ದರು. ಒಟ್ಟಾರೆಯಾಗಿ ಈ ಚಿತ್ರ ಸಾಕಷ್ಟು ವಿವಾದವನ್ನು ಹುಟ್ಟುಹಾಕಿತ್ತು.

ಇದನ್ನೂ ಓದಿ:ಮಗಳಿದ್ರೂ ಎರಡನೇ ಮದುವೆಗೆ ರೆಡಿಯಾದ್ರಾ ಮೀನಾ..!? ಸ್ಪಷ್ಟನೆ ಕೊಟ್ಟ ನಟಿ

2023 ರಲ್ಲಿ ಬಿಡುಗಡೆಯಾದ ದಿ ಕೇರಳ ಸ್ಟೋರಿ ಸಿನಿಮಾದಲ್ಲಿ ನಟಿ ಅದಾ ಶರ್ಮಾ, ಯೋಗಿತಾ ಬಿಹಾನಿ, ಸೋನಿಯಾ ಬಲಾನಿ ಮತ್ತು ಸಿದ್ಧಿ ಇದ್ನಾನಿ ಸಹ ನಟಿಸಿದ್ದಾರೆ. ಈ ಸಿನಿಮಾ ವಿರೋಧದ ನಡವೆಯೂ ಉತ್ತಮ ಪ್ರದರ್ಶನ ಕಂಡಿತ್ತು. ಸಧ್ಯ ಈ ಸಿನಿಮಾದಲ್ಲಿ ನಟಿಸಿ ಇಫ್ತಾರ್‌ ಕೂಟದಲ್ಲಿ ಕಾಣಿಸಿಕೊಂಡಿದ್ದಕ್ಕೆ ಅದಾ ಟೀಕೆಗೆ ಗುರಿಯಾಗಿದ್ದಾರೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News