ಈ ಬಾರಿ ಅಮಿತಾಬ್ ಬಚ್ಚನ್ ಮನೆಯಲ್ಲಿಲ್ಲ ದೀಪಾವಳಿ ಪಾರ್ಟಿ, ಇದಕ್ಕೆ ಕರೋನಾ ಕಾರಣವಲ್ಲ...!

ಬಾಲಿವುಡ್ ಬಿಗ್ ಬಿ ಅಮಿತಾಬ್ ಬಚ್ಚನ್ ಈ ವರ್ಷ ದೀಪಾವಳಿ ಆಚರಿಸಲು ನಿರಾಕರಿಸಿದ್ದಾರೆ. ಈ ವರ್ಷ ಏಕ್ತಾ ಕಪೂರ್ ಕೂಡ ತಮ್ಮ ಮನೆಯಲ್ಲಿ ಪಾರ್ಟಿ ಆಯೋಜಿಸುತ್ತಿಲ್ಲ ಎಂದು ತಿಳಿದುಬಂದಿದೆ.

Last Updated : Nov 2, 2020, 05:41 PM IST
  • ಬಾಲಿವುಡ್ ಬಿಗ್ ಬಿ ಅಮಿತಾಬ್ ಬಚ್ಚನ್ (Amitabh Bachchan) ಪ್ರತಿ ಉತ್ಸವದಲ್ಲೂ ಅದ್ಭುತ ಪಾರ್ಟಿ ನೀಡುವಲ್ಲಿ ಹೆಸರುವಾಸಿಯಾಗಿದ್ದಾರೆ.
  • ಬಾಲಿವುಡ್ ಬಿಗ್ ಬಿ ಅಮಿತಾಬ್ ಬಚ್ಚನ್ ಈ ವರ್ಷ ದೀಪಾವಳಿ ಆಚರಿಸಲು ನಿರಾಕರಿಸಿದ್ದಾರೆ.
ಈ ಬಾರಿ ಅಮಿತಾಬ್ ಬಚ್ಚನ್ ಮನೆಯಲ್ಲಿಲ್ಲ ದೀಪಾವಳಿ ಪಾರ್ಟಿ, ಇದಕ್ಕೆ ಕರೋನಾ ಕಾರಣವಲ್ಲ...! title=
File Image

ಮುಂಬೈ: ಬಾಲಿವುಡ್ ಬಿಗ್ ಬಿ, ಸೂಪರ್‌ಸ್ಟಾರ್ ಅಮಿತಾಬ್ ಬಚ್ಚನ್ (Amitabh Bachchan) ಪ್ರತಿ ಉತ್ಸವದಲ್ಲೂ ಅದ್ಭುತ ಪಾರ್ಟಿ ನೀಡುವಲ್ಲಿ ಹೆಸರುವಾಸಿಯಾಗಿದ್ದಾರೆ. ಪಾರ್ಟಿ ಚಿತ್ರರಂಗದ ಪ್ರಸಿದ್ಧ ವ್ಯಕ್ತಿಗಳನ್ನು ಒಳಗೊಂಡಿರುತ್ತದೆ. ಆದರೆ ಈ ಬಾರಿ ಇಂತಹ ಪಾರ್ಟಿ ಕಣ್ತುಂಬಿಕೊಳ್ಳುವ ಇಚ್ಛೆ ಹೊಂದಿರುವವರಿಗೆ ನಿರಾಸೆಯಾಗಬಹುದು. ಕಾರಣ ಈ ವರ್ಷ ದೀಪಾವಳಿ ಆಚರಿಸಲು ಅಮಿತಾಬ್ ನಿರಾಕರಿಸಿದ್ದಾರೆ.

ನಟ ಅಮಿತಾಬ್ ಬಚ್ಚನ್ ಮಾತ್ರವಲ್ಲದೆ ಏಕ್ತಾ ಕಪೂರ್ (Ekta Kapoor) ಅವರೂ ಕೂಡ ಈ ವರ್ಷ ದೀಪಾವಳಿ ಪಾರ್ಟಿ ಆಯೋಜಿಸದಿರಲು ನಿರ್ಧರಿಸಿದ್ದಾರೆ ಎಂದು ತಿಳಿದುಬಂದಿದೆ. ಲಾಕ್ ಡೌನ್ ಸಮಯದಲ್ಲಿ ನಟ ರಿಷಿ ಕಪೂರ್ ಸಾವನ್ನಪ್ಪಿರುವುದು ಇದಕ್ಕೆ ಮುಖ್ಯ ಕಾರಣ. ಏಕ್ತಾ ಕಪೂರ್ ರಿಷಿ ಕಪೂರ್ ಅವರ ಕುಟುಂಬವನ್ನು ತನ್ನ ಕುಟುಂಬವೆಂದು ಪರಿಗಣಿಸಿದ್ದಾರೆ. ರಿಷಿ ಕಪೂರ್ ಅವರ ನಿಧನದಿಂದಾಗಿ ಈ ಬಾರಿ ದೀಪಾವಳಿ ಪಾರ್ಟಿ ನಡೆಸಲು ಏಕ್ತಾ ನಿರಾಕರಿಸಿದ್ದಾರೆ.

PICS: ಈ 5 ಸೂಪರ್ ಸ್ಟಾರ್‌ಗಳ ಮೊದಲ ಸಂಭಾವನೆ ಎಷ್ಟೆಂದು ತಿಳಿದರೆ ಆಗ್ತೀರಾ ಶಾಕ್

ಬಾಲಿವುಡ್‌ನ ಅನೇಕ ದೊಡ್ಡ ವ್ಯಕ್ತಿಗಳು ಈ ವರ್ಷ ಸಾವನ್ನಪ್ಪಿದ್ದಾರೆ. ಈ ಕಾರಣದಿಂದಾಗಿ ಬಾಲಿವುಡ್‌ನಲ್ಲಿ ಬೆರಗುಗೊಳಿಸುವ ನೋಟ ಎಲ್ಲೋ ಕಣ್ಮರೆಯಾದಂತಿದೆ. ಅಮಿತಾಬ್ ಬಚ್ಚನ್ ಮತ್ತು ಏಕ್ತಾ ಕಪೂರ್ ಇದೇ ಕಾರಣದಿಂದಾಗಿ ಈ ವರ್ಷ ದೀಪಾವಳಿ ಪಾರ್ಟಿ ಆಯೋಜಿಸದಿರಲು ನಿರ್ಧರಿಸಿದ್ದಾರೆ ಎಂದು ಹೇಳಲಾಗುತ್ತಿದೆ.

ಅಮಿತಾಬ್ ರಿಷಿ ಕಪೂರ್‌ಗೆ ತುಂಬಾ ಆಪ್ತರಾಗಿದ್ದರು:-
ರಿಷಿ ಕಪೂರ್ ಅಮಿತಾಬ್ ಬಚ್ಚನ್ ಅವರ ಆಪ್ತ ಸ್ನೇಹಿತ ಮಾತ್ರವಲ್ಲ, ಸಂಬಂಧಿಕರೂ ಆಗಿದ್ದರು. ಅಮಿತಾಬ್ ಅವರ ಪುತ್ರಿ ಶ್ವೇತಾ ಬಚ್ಚನ್ ನಂದಾ ಅವರು ರಿಷಿ ಕಪೂರ್ ಅವರ ಸೋದರಳಿಯ ನಿಖಿಲ್ ನಂದಾ ಅವರನ್ನು ವಿವಾಹವಾವಾಗಿದ್ದಾರೆ.

ಕರೋನಾ ಚಿಕಿತ್ಸೆಯ ಮಧ್ಯೆ ಭಾವುಕರಾದ ಅಮಿತಾಬ್ ಬಚ್ಚನ್‍ರಿಂದ ವಿಡಿಯೋ ಬಿಡುಗಡೆ

ಆದ್ದರಿಂದ ಅಮಿತಾಭ್ ಈ ವರ್ಷ ದೀಪಾವಳಿ (Deepavali) ಆಚರಿಸಲು ನಿರಾಕರಿಸಿದ್ದಾರೆ. ಅವರು ತಮ್ಮ ಕುಟುಂಬದೊಂದಿಗೆ ದೀಪಾವಳಿಯನ್ನು ಸರಳ ರೀತಿಯಲ್ಲಿ ಆಚರಿಸಲಿದ್ದಾರೆ. ಅದೇ ರೀತಿ ಏಕ್ತಾ ದೀಪಾವಳಿಯ ಹಬ್ಬವನ್ನು ತನ್ನ ಕುಟುಂಬದೊಂದಿಗೆ ಮಾತ್ರ ಆಚರಿಸಲಿದ್ದಾರೆ ಎಂದು ತಿಳಿದುಬಂದಿದೆ.

Trending News