Anupama Parameswaran: ಡೈರೆಕ್ಟರ್‌ಗೆ ರಾಖಿ ಕಟ್ಟಿದ ನಟಸಾರ್ವಭೌಮ ಬೆಡಗಿ: ಮಾಸ್‌ ರಾಜನ ಎಚ್ಚರಿಕೆ!

Anupama Parameshwaran At Eagle Event: ಟಾಲಿವುಡ್‌ ಯಂಗ್‌ ನಟಿ ನುಪಮಾ ಪರಮೇಶ್ವರನ್‌ ನಿನ್ನೆ ನಡೆದ ‘ಈಗಲ್’ ಸಿನಿಮಾದ ಪ್ರೀ ರಿಲೀಸ್ ಸಮಾರಂಭದಲ್ಲಿ ವೇದಿಕೆ ಮೇಲೆ ಚಿತ್ರದ ನಿರ್ದೇಶಕನಿಗೆ ರಾಖಿ ಕಟ್ಟಿರುವುದನ್ನು ನೋಡಿ ಎಲ್ಲರೂ ಶಾಕ್ ಆಗಿದ್ದರು. ಇದಕ್ಕೆ ನಟ ರವಿತೇಜ ಸ್ವಾರಸ್ಯಕರ ಪ್ರತಿಕ್ರಿಯೆ ನೀಡಿದ್ದಾರೆ. 

Written by - Zee Kannada News Desk | Last Updated : Feb 5, 2024, 12:18 PM IST
  • ಅನುಪಮಾ ಪರಮೇಶ್ವರನ್ ಕೊನೆಯದಾಗ 'ಕಾರ್ತಿಕೇಯ 2' ಮತ್ತು '18 ಪೇಜಸ್' ಕಾಣಿಸಿಕೊಳ್ಳುವುದರ ಮೂಲಕ ಯಶಸ್ಸನ್ನು ಪಡೆದಿದ್ದಾರೆ.
  • ನಿನ್ನೆ ನಡೆದ ಸಮಾರಂಭದಲ್ಲಿ ನಟಿ ಅನುಪಮಾ ಮಾಡಿದ್ದಕ ಒಂದು ಕೆಲಸ ಎಲ್ಲರೂ ಶಾಕ್ ಆಗಿದ್ದು, ಇದರ ಮೇಲಾಗಿ ಚಿತ್ರದ ಹೀರೋ ರವಿತೇಜ ಪ್ರತಿಕ್ರಿಯೆಯೂ ಕುತೂಹಲ ಮೂಡಿಸಿದೆ.
  • ಮಾಸ್ ರಾಜ ಈ ಡೈಲಾಗ್ ಹೇಳುವ ಮೂಲಕ ಪ್ರತಿ ನಾಯಕಿಯನ್ನೂ ಹೊಗಳುತ್ತಿರುವುದು ಗೊತ್ತೇ ಇದ್ದು, ಸದ್ಯ ‘ಈಗಲ್’ ಚಿತ್ರ ಹೇಗಿರುತ್ತೆ ಅನ್ನೋದು ಕುತೂಹಲ ಮೂಡಿಸಿದೆ.
Anupama Parameswaran: ಡೈರೆಕ್ಟರ್‌ಗೆ ರಾಖಿ ಕಟ್ಟಿದ ನಟಸಾರ್ವಭೌಮ ಬೆಡಗಿ: ಮಾಸ್‌ ರಾಜನ ಎಚ್ಚರಿಕೆ! title=

Anupama Paramweswaran Tied Rakhi: ಬಹುಭಾಷಾ ತಾರೆ ಅನುಪಮಾ ಪರಮೇಶ್ವರನ್ ಸದ್ಯ ಸಾಲು ಸಾಲು ಚಿತ್ರಗಳ ಮೂಲಕ  ಪ್ರೇಕ್ಷಕರನ್ನು ರಂಜಿಸುತ್ತಿರುವ ನಟಿ, ಕೊನೆಯದಾಗ 'ಕಾರ್ತಿಕೇಯ 2' ಮತ್ತು '18 ಪೇಜಸ್' ಕಾಣಿಸಿಕೊಳ್ಳುವುದರ ಮೂಲಕ ಯಶಸ್ಸನ್ನು ಪಡೆದಿದ್ದಾರೆ. ಈ ನಟಿಯ ಬಹುನಿರೀಕ್ಷಿತ ‘ಈಗಲ್’ ಚಿತ್ರಕ್ಕಾಗಿ ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ.

‘ಈಗಲ್’ ಸಿನಿಮಾದಲ್ಲಿ ನಟಿ ಅನುಪಮಾ ಪರಮೇಶ್ವರನ್‌  ಮಾಸ್ ಮಹಾರಾಜ ರವಿತೇಜಗೆ ನಾಯಕನಾಗಿ ನಟಿಸಿದ್ದು, ನಿನ್ನೆ ಈ ಚಿತ್ರದ ಪ್ರೀ ರಿಲೀಸ್ ಕಾರ್ಯಕ್ರಮ ಅದ್ಧೂರಿಯಾಗಿ ನಡೆದಿದೆ. ‘ಈಗಲ್’ ಪ್ರೀ ರಿಲೀಸ್ ಇವೆಂಟ್‌ನಲ್ಲಿ ನಟಿ  ಅನುಪಮಾ ಪರಮೇಶ್ವರನ್ ಸೀರೆಯಲ್ಲಿ ಸುಂದರವಾಗಿ ಮಿಂಚುತ್ತಿದ್ದು, ಎಲ್ಲರ ಕಣ್ಣುಕುಕ್ಕುವಂತೆ ಕಾಣುತ್ತಿದ್ದರು. ಇದೀಗ ಆ ಫೋಟೋಗಳು ಕೂಡ ಸೋಷಿಯಲ್‌ ಮಿಡಿಯಾದಲ್ಲಿ ವೈರಲ್ ಆಗಿವೆ. 

ಇದನ್ನೂ ಓದಿ: Shivarajkumar: ಶಿವಣ್ಣ - ಚಿರಂಜೀವಿ ಭೇಟಿ.. ಮೆಗಾಸ್ಟಾರ್‌ಗೆ ಸೆಂಚ್ಯುರಿ ಸ್ಟಾರ್ ಅಭಿನಂದನೆ.!

ನಿನ್ನೆ ನಡೆದ ಸಮಾರಂಭದಲ್ಲಿ ನಟಿ ಅನುಪಮಾ ಮಾಡಿದ್ದಕ ಒಂದು ಕೆಲಸ ಎಲ್ಲರೂ ಶಾಕ್ ಆಗಿದ್ದು, ಇದರ ಮೇಲಾಗಿ ಚಿತ್ರದ ಹೀರೋ ರವಿತೇಜ ಪ್ರತಿಕ್ರಿಯೆಯೂ ಕುತೂಹಲ ಮೂಡಿಸಿದೆ. ‘ಈಗಲ್’ ಪ್ರೀ ರಿಲೀಸ್ ಇವೆಂಟ್‌ನಲ್ಲಿ ಅನುಪಮಾ ಚಿತ್ರದ ನಿರ್ದೇಶಕ ಕಾರ್ತಿಕ್ ಘಟ್ಟಮನೇನಿಗೆ ರಾಖಿ ಕಟ್ಟಿ, ಈ ನಟಿ ನಿರ್ದೇಶಕನನ್ನು ಸಹೋದರ ಎಂದು ಕರೆದಳು. ಈ ಹಿಂದೆ ನಾಲ್ಕು ಚಿತ್ರಗಳಿಗೆ ಒಟ್ಟಿಗೆ ಕೆಲಸ ಮಾಡಿದ್ದು, ಅವರ ನಡುವೆ ಉತ್ತಮ ಬಾಂಧವ್ಯ ಏರ್ಪಟ್ಟಿತ್ತು ಎಂದರು. 

‘ಈಗಲ್’ ಪ್ರೀ ರಿಲೀಸ್ ಕಾರ್ಯಕ್ರಮದಲ್ಲಿ ನಟಿ ಅನುಪಮಾ ಸಿನಿಮಾದ ಡೈರೆಕ್ಟರ್‌ಗೆ ರಾಖಿ ಕಟ್ಟಿದನ್ನು ನೋಡಿದ ಮಾಸ್ ರಾಜ ರವಿತೇಜ, "ಸುಂದರ ಹುಡುಗಿಯರನ್ನು ಅಣ್ಣ ಎಂದು ಕರೆಯಬೇಡಿ" ಎಂದು ಎಚ್ಚರಿಕೆ ನೀಡಿದ್ದಾರೆ. ಮಾಸ್ ರಾಜ ಈ ಡೈಲಾಗ್ ಹೇಳುವ ಮೂಲಕ ಪ್ರತಿ ನಾಯಕಿಯನ್ನೂ ಹೊಗಳುತ್ತಿರುವುದು ಗೊತ್ತೇ ಇದ್ದು, ಸದ್ಯ  ‘ಈಗಲ್’ ಚಿತ್ರ ಹೇಗಿರುತ್ತೆ ಅನ್ನೋದು ಕುತೂಹಲ ಮೂಡಿಸಿದೆ. ಇದೇ ಫೆಬ್ರವರಿ 9 ರಂದು ‘ಈಗಲ್’ ಸಿನಿಮಾ ತೆರೆಗೆ ಬರಲಿದೆ.  

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News