ಪುನೀತ್ ಹುಟ್ಟುಹಬ್ಬಕ್ಕೆ ಮುನ್ನವೇ ಪತ್ನಿ ಅಶ್ವಿನಿಯ ಗಟ್ಟಿ ನಿರ್ಧಾರ!

ಅಪ್ಪು ಆಕಾಶ ಸೇರಿ ವರುಷವೇ ಕಳೆದಿದೆ. ಆದರೆ, ಅಭಿಮಾನಿಗಳು ತಮ್ಮ ಮನದಂಗಳದಲ್ಲಿ ಅವರನ್ನು ಇನ್ನೂ ಜೀವಂತವಾಗಿರಿಸಿದ್ದಾರೆ.  ಈ ಅಭಿಮಾನಿಗಳು ಅಪ್ಪು ಜನ್ಮ ದಿನವನ್ನ ಸ್ಪೂರ್ತಿ ದಿನವನ್ನಾಗಿ ಆಚರಿಸಲು ನಿರ್ಧರ್ರಿಸಿದ್ದಾರೆ. ಅದಕ್ಕೆ ಬೇಕಾದ ಸಕಲ ಸಿದ್ದತೆ ಕೂಡಾ ಮಾಡಿಕೊಂಡಿದ್ದಾರೆ..

Written by - YASHODHA POOJARI | Edited by - Ranjitha R K | Last Updated : Mar 10, 2023, 12:32 PM IST
  • ಮಾರ್ಚ್ 17 ಪುನೀತ್ ಜನ್ಮ ದಿನ
  • ಅಭಿಮಾನಿಗಳನ್ನು ಕಾಡುತ್ತಿದೆ ಈ ದಿನ
  • ಈ ದಿನ ಸ್ಪೂರ್ತಿಯ ದಿನವನ್ನಾಗಿ ಆಚರಣೆ
ಪುನೀತ್ ಹುಟ್ಟುಹಬ್ಬಕ್ಕೆ ಮುನ್ನವೇ ಪತ್ನಿ ಅಶ್ವಿನಿಯ ಗಟ್ಟಿ ನಿರ್ಧಾರ!  title=

ಬೆಂಗಳೂರು : ಮಾರ್ಚ್ 17  ದೊಡ್ಮನೆ ಅಭಿಮಾನಿಗಳ ಪಾಲಿಗೆ ಅವಿಸ್ಮರಣೀಯ ದಿನ. ಪ್ರತಿವರ್ಷ ಈ ದಿನವನ್ನು ಪ್ರೀತಿಯ ಅಪ್ಪು ಜೊತೆ ಸೆಲೆಬ್ರೇಶನ್ ಮಾಡುತ್ತಿದ್ದ ಪುನೀತ್ ಅಭಿಮಾನಿಗಳು  ಇದೀಗ ಅಪ್ಪು ಅನುಪಸ್ಥಿತಿಯಲ್ಲಿಯೇ ಅವರ ಹುಟ್ಟಿದ ದಿನವನ್ನು ಆಚರಿಸುವಂತಾಗಿದೆ.  ಅದೇ ರೀತಿ ಈ ವರ್ಷ ಅಪ್ಪು ಜನ್ಮ ದಿನವನ್ನು ಆಚರಿಸಲು ಅಭಿಮಾನಿಗಳು ಪ್ಲಾನ್ ಮಾಡಿದ್ದಾರೆ. ಇಂಥ ಟೈಮ್ ನಲ್ಲೇ ಅಪ್ಪು ಮಡದಿ ಅಶ್ವಿನಿ ಒಂದು ನಿರ್ಧಾರಕ್ಕೆ ಬಂದಿದ್ದಾರೆ‌‌‌‌. 

ಅಪ್ಪು ಆಕಾಶ ಸೇರಿ ವರುಷವೇ ಕಳೆದಿದೆ. ಆದರೆ, ಅಭಿಮಾನಿಗಳು ತಮ್ಮ ಮನದಂಗಳದಲ್ಲಿ ಅವರನ್ನು ಇನ್ನೂ ಜೀವಂತವಾಗಿರಿಸಿದ್ದಾರೆ. ಈ ಅಭಿಮಾನಿಗಳು ಅಪ್ಪು ಜನ್ಮ ದಿನವನ್ನ ಸ್ಪೂರ್ತಿ ದಿನವನ್ನಾಗಿ ಆಚರಿಸಲು ನಿರ್ಧರ್ರಿಸಿದ್ದಾರೆ. ಅದಕ್ಕೆ ಬೇಕಾದ ಸಕಲ ಸಿದ್ದತೆ ಕೂಡಾ ಮಾಡಿಕೊಂಡಿದ್ದಾರೆ..

ಇದನ್ನೂ ಓದಿ : Pushpavati song: ಸಖತ್ ಟ್ರೆಂಡಿಂಗ್ನಲ್ಲಿವೆ ಕ್ರಾಂತಿ ಹಾಗೂ ವೇದ ಸಿನಿಮಾದ ʼಪುಷ್ಪಾವತಿʼ

ಮಾರ್ಚ್ 17 ಬಂತು ಅಂದ್ರೆ ಸಾಕು ಸದಾಶಿವನಗರದ ಮನೆಯಲ್ಲಿ ಜನ ಜಂಗುಳಿ ಸೇರುತ್ತಿತ್ತು. ಅಲ್ಲಿ ಸಂತೋಷ ಸಡಗರ ಮೇಳೈಸುತ್ತಿತ್ತು. ಆದರೆ ಈ ಬಾರಿ ಹಾಗಾಗುವುದಿಲ್ಲ, ಯಾಕೆಂದರೆ ದೂರದೂರೂಗಳಿಂದ ಬಂದ ಅಭಿಮಾನಿಗಳ ಸಂತೋಷ ಇಮ್ಮಡಿಗೊಳಿಸಲು ಅಲ್ಲಿ ಅಪ್ಪು ಇಲ್ಲ. ಇರುವುದು ಬರೀ ಅವರ ನೆನಪು ಅಷ್ಟೇ. ಹಾಗಂತ ಅಪ್ಪು ಜನ್ಮದಿನದಂದು ಮನೆ ಬಳಿ ಬರಬೇಡಿ ಎಂದು ಹೇಳುವುದಕ್ಕೆ ಅಶ್ವಿನಿ ಪುನೀತ್ ರಾಜ್‍ಕುಮಾರ್  ಮನಸ್ಸು ಒಪ್ಪುತ್ತಿಲ್ಲ. ಈ ಹಿನ್ನೆಲೆಯಲ್ಲಿ ಅಪ್ಪು ಹುಟ್ಟು ಹಬ್ಬಕ್ಕೆ ಕೆಲವು ದಿನಗಳು ಬಾಕಿ ಇರುವಾಗಲೇ ಅಶ್ವಿನಿ ನಿರ್ಧಾರವೊಂದನ್ನ ತೆಗೆದು ಕೊಂಡಿದ್ದಾರೆ.

ಅಪ್ಪು ಯಾವುದೇ ಕಾರಣಕ್ಕೂ ಅಭಿಮಾನಿಗಳನ್ನ ಮನೆ ಬಳಿ ಬರಬೇಡಿ ಅಂದವರಲ್ಲ. ಹೀಗಿರುವಾಗ ಅವರ ಅಗಲಿಕೆ ನಂತರ ಅಭಿಮಾನಿಗಳನ್ನು ಮನೆ ಬಳಿ ಬರಬೇಡಿ ಎಂದು ಹೇಳುವುದಕ್ಕೆ ಆಗದೆ, ಅಪ್ಪು ಹುಟ್ಟು ಹಬ್ಬಕ್ಕೂ ಮುನ್ನ ವಿದೇಶದಲ್ಲಿರುವ ಮಗಳ ಬಳಿ ಹೊರಟಿದ್ದಾರೆ. 

ಇದನ್ನೂ ಓದಿ : ಕಾಂತಾರ ಸೀಕ್ವೇಲ್ ಅಲ್ಲ ಪ್ರೀಕ್ವೇಲ್ ಮಾಡ್ತಿವಿ- ರಿಷಬ್ ಶೆಟ್ಟಿ

ಅಪ್ಪು ಹುಟ್ಟು ಹಬ್ಬಕ್ಕೆ ಸಾವಿರಾರು ಅಭಿಮಾನಿಗಳು ಮನೆ ಬಳಿ  ಬರುತ್ತಾರೆ. ಅಭಿಮಾನಿಗಳ ಆ ಪ್ರೀತಿ ಅಪ್ಪು ನೆನಪು ಮತ್ತಷ್ಟು ಕಾಡುವಂತೆ ಮಾಡುತ್ತದೆ.  ಈ ಹಿನ್ನೆಲೆಯಲ್ಲಿ ಅಶ್ವಿನಿ ಪುನೀತ್ ರಾಜ್ ಕುಮಾರ್  ಇಂದು ವಿದೇಶಕ್ಕೆ ಪ್ರಯಾಣ ಬೆಳೆಸಿ  ಮಾರ್ಚ್ 19 ಕ್ಕೆ ವಾಪಸ್ಸಾಗಲಿದ್ದಾರೆ.‌‌‌ 

ಜೀವಕ್ಕೆ ಜೀವವಾಗಿದ್ದ ಪತಿಯನ್ನ ಕಳೆದು ಕೊಂಡ ಮೇಲೆ ಮೌನಕ್ಕೆ ಶರಣಾಗಿದ್ದ ಅಶ್ವಿನಿ ಪುನೀತ್ ರಾಜ್ ಕುಮಾರ್ ಮುಖದಲ್ಲಿ  ಇತ್ತೀಚಿಗೆ ಕೊಂಚ ನಗು ಕಾಣಿಸಿದೆ. ಆದರೂ ಅಪ್ಪು ಫೋಟೊ ಮತ್ತು ಅವರ ಬಗ್ಗೆ  ಮಾತಿಗಿಳಿದಾಗ ಮಾತ್ರ ಭಾವುಕರಾಗಿ ಬಿಡುತ್ತಾರೆ ಅಶ್ವಿನಿ. ಅಪ್ಪು ಹುಟ್ಟಿದ ದಿನ ಅವರಿಲ್ಲದೆ ಅಭಿಮಾನಿಗಳನ್ನು  ಭೇಟಿ ಅಭಿಮಾನಿಗಳು ಕಣ್ಣೀರೂ ಹಾಕುವಂತೆ ಮಾಡಬಾರದು ಎಂದು ನೋವಿನಿಂದಲೇ ಅಶ್ವಿನಿ ವಿದೇಶಕ್ಕೆ ತೆರಳಿದ್ದಾರೆ. 

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News