ಬಿಗ್‌ಬಾಸ್‌ಗೆ ಮತ್ತೆ ʼಹುಲಿ ಉಗುರುʼ ಸಂಕಷ್ಟ! ಗೋಲ್ಡ್‌ ಸುರೇಶ್‌ ಕೊರಳಲ್ಲಿದೆ ಹುಲಿ ಉಗುರಿನ ಪೆಂಡೆಂಟ್... ಇವರಿಗೂ ಬರುತ್ತಾ ವರ್ತೂರು ಸಂತೋಷ್‌ ಸ್ಥಿತಿ?

Gold Suresh tiger claw Pendant: ಬಿಗ್‌ ಬಾಸ್‌ ಕನ್ನಡ ಸೀಸನ್‌ 11 ಈಗಾಗಲೇ ಆರಂಭಗೊಂಡಿದೆ. ನಾನಾ ಕ್ಷೇತ್ರದ 17 ಮಂದಿ ಸ್ಪರ್ಧಿಗಳು ಸ್ವರ್ಗ – ನರಕದ ಮನೆಯೊಳಗೆ ಪ್ರವೇಶ ಮಾಡಿದ್ದಾರೆ. ಇವರೆಲ್ಲರ ನಡುವೆ, ಭಾರೀ ಗಮನ ಸೆಳೆದಿದ್ದು ಗೋಲ್ಡ್‌ ಸುರೇಶ್.‌

Written by - Bhavishya Shetty | Last Updated : Oct 1, 2024, 09:10 PM IST
    • ಬಿಗ್‌ ಬಾಸ್‌ ಕನ್ನಡ ಸೀಸನ್‌ 11 ಈಗಾಗಲೇ ಆರಂಭಗೊಂಡಿದೆ
    • ನಾನಾ ಕ್ಷೇತ್ರದ 17 ಮಂದಿ ಸ್ಪರ್ಧಿಗಳು ಸ್ವರ್ಗ – ನರಕದ ಮನೆಯೊಳಗೆ ಪ್ರವೇಶ ಮಾಡಿದ್ದಾರೆ
    • ಮತ್ತೆ ಬಿಗ್‌ ಬಾಸ್‌ ಮನೆಯಲ್ಲಿ ಹುಲಿ ಉಗುರಿನ ವಿಚಾರ ಸುದ್ದಿಯಾಗುತ್ತಿದೆ
ಬಿಗ್‌ಬಾಸ್‌ಗೆ ಮತ್ತೆ ʼಹುಲಿ ಉಗುರುʼ ಸಂಕಷ್ಟ! ಗೋಲ್ಡ್‌ ಸುರೇಶ್‌ ಕೊರಳಲ್ಲಿದೆ ಹುಲಿ ಉಗುರಿನ ಪೆಂಡೆಂಟ್... ಇವರಿಗೂ ಬರುತ್ತಾ ವರ್ತೂರು ಸಂತೋಷ್‌ ಸ್ಥಿತಿ? title=
Gold Suresh tiger claw Pendant

Gold Suresh tiger claw Pendant: ಬಿಗ್‌ ಬಾಸ್‌ ಅಂದ್ರೆನೇ ಒಂದಲ್ಲ ಒಂದು ಜಗಳ, ವಿವಾದ ಇದ್ದೇ ಇರುತ್ತೆ ಎನ್ನುತ್ತಿದ್ದ ಸಂದರ್ಭದಲ್ಲಿ ಹುಲಿ ಉಗುರಿನ ಪ್ರಕರಣವೊಂದು ಭಾರೀ ಸದ್ದು ಮಾಡಿತ್ತು. ಕಳೆದ ಬಾರಿ ಸ್ಪರ್ಧಿಯಾಗಿ ಆಗಮಿಸಿದ್ದ ವರ್ತೂರ್‌ ಸಂತೋಷ್‌, ಹುಲಿ ಉಗುರಿನ ಪೆಂಡೆಂಟ್‌ ಧರಿಸಿದ್ದರು ಎಂಬ ಆರೋಪದಲ್ಲಿ ಪೊಲೀಸ್‌ ವಿಚಾರಣೆಯನ್ನು ಎದುರಿಸಿದ್ದರು. ಇದೀಗ ಮತ್ತೆ ಅಂತಹದ್ದೇ ಒಂದು ವಿಚಾರ ಮುನ್ನೆಲೆಗೆ ಬಂದಿದ್ದು, ಭಾರೀ ಚರ್ಚೆಯನ್ನು ಹುಟ್ಟುಹಾಕಿದೆ.

ಇದನ್ನೂ ಓದಿ: ಖಾಲಿ ಹೊಟ್ಟೆಯಲ್ಲಿ ಇದೊಂದು ಪದಾರ್ಥ ತಿನ್ನಿ: ಮಧುಮೇಹ, ಬಿಪಿ ಸಮಸ್ಯೆ ಎಲ್ಲವೂ ಮಾಯವಾಗುತ್ತೆ!

ಬಿಗ್‌ ಬಾಸ್‌ ಕನ್ನಡ ಸೀಸನ್‌ 11 ಈಗಾಗಲೇ ಆರಂಭಗೊಂಡಿದೆ. ನಾನಾ ಕ್ಷೇತ್ರದ 17 ಮಂದಿ ಸ್ಪರ್ಧಿಗಳು ಸ್ವರ್ಗ – ನರಕದ ಮನೆಯೊಳಗೆ ಪ್ರವೇಶ ಮಾಡಿದ್ದಾರೆ. ಇವರೆಲ್ಲರ ನಡುವೆ, ಭಾರೀ ಗಮನ ಸೆಳೆದಿದ್ದು ಗೋಲ್ಡ್‌ ಸುರೇಶ್.‌ ಇವರ ಮೈಮೇಲೆ ಸುಮಾರು 1.5 ರಿಂದ 2 ಕೋಟಿ ರೂ ಮೌಲ್ಯದ ಚಿನ್ನಾಭರಣವಿದೆಯಂತೆ. ಹೀಗೆಂದು ಸ್ವತಃ ಅವರೇ ಕಿಚ್ಚ ಸುದೀಪ್‌ ಮುಂದೆ ಬಹಿರಂಗಪಡಿಸಿದ್ದಾರೆ. ಈ ಮಾತು ಕೇಳಿಸಿಕೊಂಡ ಕಿಚ್ಚ ಒಂದು ಕ್ಷಣ ಬೆರಗಾಗಿದ್ದರು.

ಕಳೆದ ಸೀಸನ್‌ನಲ್ಲಿ ಹುಲಿ ಉಗುರು ಪ್ರಕರಣ ಭಾರೀ ಸದ್ದು ಮಾಡಿತ್ತು. ಇದೀಗ ಮತ್ತೆ ಬಿಗ್‌ ಬಾಸ್‌ ಮನೆಯಲ್ಲಿ ಹುಲಿ ಉಗುರಿನ ವಿಚಾರ ಸುದ್ದಿಯಾಗುತ್ತಿದೆ. ಇದಕ್ಕೆ ಕಾರಣ ʼಗೋಲ್ಡ್‌ ಸುರೇಶ್‌ʼ ಧರಿಸಿದ್ದ ಪೆಂಡೆಂಟ್.‌

ಇದನ್ನೂ ಓದಿ: ಪಾಕಿಸ್ತಾನದ ಉದ್ಯಮಿಗೆ ಜಯ್‌ ಶಾ ಸ್ಥಾನ... ಅಚ್ಚರಿಯ ಹೆಸರು ಬಹಿರಂಗ! ಆತ ಯಾರು ಗೊತ್ತಾ?

ಬೆಳಗಾವಿ ಮೂಲದವರಾದ ಗೋಲ್ಡ್‌ ಸುರೇಶ್‌ ಅವರ ವಿಟಿಯಲ್ಲಿ ಇದನ್ನು ತೋರಿಸಲಾಗಿದೆ. ಆದರೆ ಇದು ಅಸಲಿಯೋ ಅಥವಾ ನಕಲಿಯೋ, ಅಥವಾ ಫೈಬರ್‌ನದ್ದೋ ಎಂಬುದು ಸ್ಪಷ್ಟವಾಗಿಲ್ಲ. ಅಷ್ಟೇ ಅಲ್ಲದೆ ಆ ಪೆಂಡೆಂಟ್‌ನ್ನು ಬಿಗ್‌ ಬಾಸ್‌ ಮನೆಯೊಳಗೆ ತೆಗೆದುಕೊಂಡು ಹೋಗಿದ್ದಾರಾ ಅಥವಾ ತೆಗೆದಿಟ್ಟಿದ್ದಾರಾ ಎಂಬುದನ್ನು ಸ್ಪಷ್ಟಪಡಿಸಿಕೊಳ್ಳಲು ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಬಿಗ್‌ಬಾಸ್‌ ಮನೆಗೆ ಹೋಗುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿದೆ.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

 

Trending News