Chethan Ahimsa: "ಯುವಕರು ಕಷ್ಟಪಟ್ಟು ಕೆಲಸ ಮಾಡಲಿ.. ನಿಮ್ಮ ಬ್ಯಾಂಕ್ ಬ್ಯಾಲೆನ್ಸ್ ಬೆಳೆಯಲಿ, ಅಲ್ವಾ ನಾರಾಯಣ ಮೂರ್ತಿಯವರೇ?"

Chethan Ahimsa: ಇತ್ತೀಚೆಗೆ ಇಂಫೋಸಿಸ್ ನಾರಾಯಣ ಮೂರ್ತಿಯವರು 'ಯುವಕರು ವಾರಕ್ಕೆ 70 ಗಂಟೆ ಕೆಲಸ ಮಾಡಬೇಕು' ಎಂಬ ಸಲಹೆ ನೀಡುವುದರೊಂದಿಗೆ ಜಪಾನ್‌ ಉದಾಹರಣೆಯಾಗಿ ನೀಡಿದ್ದರು. ಇದೀಗ ಈ ಹೇಳಿಕೆಯನ್ನು ಟೀಕಿಸಿ ನಟ ಚೇತನ್‌ ಕಾಮೆಂಟ್ ಮಾಡಿದ್ದಾರೆ.

Written by - Zee Kannada News Desk | Last Updated : Oct 28, 2023, 04:43 PM IST
  • ಇಂಫೋಸಿಸ್ ನಾರಾಯಣ ಮೂರ್ತಿಯವರ ಹೇಳಿಕೆಯನ್ನು ಟೀಕಿಸಿದ ನಟ ಚೇತನ್‌ ಅಹಿಂಸಾ
  • ನಟ ಚೇತನ್‌ ನಾರಾಯಣ ಮೂರ್ತಿಯವರಿಗೆ ಫೇಸ್‌ಬುಕ್‌ ಪೋಸ್ಟ್‌ನಲ್ಲಿ ಪ್ರಶ್ನೆ
  • ನಟ ಚೇತನ್‌ ಅಹಿಂಸಾ ವಿರುದ್ದ ನೆಟ್ಟಿಗರ ಆಕ್ರೋಶ
Chethan Ahimsa: "ಯುವಕರು ಕಷ್ಟಪಟ್ಟು ಕೆಲಸ ಮಾಡಲಿ.. ನಿಮ್ಮ ಬ್ಯಾಂಕ್ ಬ್ಯಾಲೆನ್ಸ್ ಬೆಳೆಯಲಿ, ಅಲ್ವಾ ನಾರಾಯಣ ಮೂರ್ತಿಯವರೇ?" title=

Chethan Ahimsa Criticized: ನಟ ಚೇತನ್‌ ಅಹಿಂಸಾ ಹಲವಾರು ವರ್ಷಗಳಿಂದ ಸಿನಿಮಾರಂಗದಿಂದ ದೂರವಿದ್ದು, ಸಾಮಾಜಿಕ ಕಳಕಳಿಯ ವಿಚಾರಗಳ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ಸೋಷಿಯಲ್‌ ಹಂಚಿಕೊಳ್ಳುವುದರ ಮೂಲಕ ಸುದ್ದಿಯಾಗುತ್ತಿರುತ್ತಾರೆ. ಸೋಷಿಯಲ್ ಮೀಡಿಯಾ ಪ್ರಿಯರಿಗೆ ಚೇತನ್ ಅಹಿಂಸಾ ಬಗ್ಗೆ, ಅವರು ಫೊಸ್ಟ್ ಮಾಡುವ ಕಾಮೆಂಟ್‌ಗಳ ಬಗ್ಗೆ ಹೊಸದಾಗಿ ಏನೂ ಹೇಳಬೇಕಿಲ್ಲ.ಹೆಚ್ಚುಕಡಿಮೆ ಎಲ್ಲ ವಿಷಯಕ್ಕೂ ಕಾಮೆಂಟ್ ಮಾಡುತ್ತಾರೆ.

ಇತ್ತೀಚೆಗೆ ಇಂಫೋಸಿಸ್ ನಾರಾಯಣ ಮೂರ್ತಿಯವರು ಯುವಕರನ್ನು ಕುರಿತು ಮಾತನಾಡುವಾಗ, 'ಯುವಕರು ವಾರಕ್ಕೆ 70 ಗಂಟೆ ಕೆಲಸ ಮಾಡಬೇಕು' ಎಂಬ ಸಲಹೆ ನೀಡುವುದರೊಂದಿಗೆ ತಮ್ಮ ಮಾತಿಗೆ ಅನುಗುಣವಾಗಿ ಜರ್ಮನಿ, ಜಪಾನ್ ದೇಶಗಳನ್ನೂ ಉದಾಹರಣೆಯನ್ನಾಗಿಯೂ ಸಹ ನೀಡಿದ್ದರು. ಇದೀಗ ನಟ ಚೇತನ್ ನಾರಾಯಣಮೂರ್ತಿ ಅವರ ಹೇಳಿಕೆಯನ್ನು ಟೀಕಿಸಿ ಕಾಮೆಂಟ್ ಮಾಡುವುದರ ಜೊತೆಗೆ,'ಯುವಕರು ಕಷ್ಟಪಟ್ಟು ಕೆಲಸ ಮಾಡಲಿ, ನಿಮ್ಮ ಬ್ಯಾಂಕ್ ಬ್ಯಾಲೆನ್ಸ್ ಬೆಳೆಯಲಿ: ಅಲ್ವಾ? ನಾರಾಯಣ ಮೂರ್ತಿಯವರೇ' ಎಂದು ಪ್ರಶ್ನಿಸಿ, ತಮ್ಮ ಫೇಸ್‌ಬುಕ್ ಪೇಜ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. 

 

ಇದನ್ನು ಓದಿ: ಗುರುತೇ ಸಿಗದಂತ ಪಾತ್ರದಲ್ಲಿ ವಿನೋದ್‌ ಪ್ರಭಾಕರ್: ಮರಿ ಟೈಗರ್‌ಗೆ ಸ್ಟಾರ್‌ಗಳ ಮೆಚ್ಚುಗೆ

ಫೇಸ್‌ಬುಕ್‌ನಲ್ಲಿ ನಾರಾಯಣ್‌ ಮೂರ್ತಿ ಹೇಳಿಕೆಗೆ ಆಕ್ಷೇಪ ವ್ಯಕ್ತಪಡಿಸಿರುವ ನಟ ಚೇತನ್, "ಭಾರತದ ಉತ್ಪಾದಕತೆಯನ್ನು ಹೆಚ್ಚಿಸಲು ಯುವಕರು ವಾರಕ್ಕೆ 70 ಗಂಟೆಗಳ ಕಾಲ ಕೆಲಸ ಮಾಡಬೇಕೆಂದು ನಾರಾಯಣ ಮೂರ್ತಿ ಬಯಸುತ್ತಾರೆ. ಆ ತರ್ಕದ ಪ್ರಕಾರ, ಯುವಕರು 140 ಗಂಟೆಗಳ ಕಾಲ ಕೆಲಸ ಮಾಡಿದರೆ ಭಾರತೀಯ ಉತ್ಪಾದಕತೆ ಇನ್ನೂ ಹೆಚ್ಚಾಗುವುದಿಲ್ಲವೇ? ಸಹಜವಾಗಿ ಮನಸ್ಸು ಮತ್ತು ದೇಹಕ್ಕೆ ವಿಶ್ರಾಂತಿ ನೀಡುವ ಅಗತ್ಯವಿಲ್ಲ. ಇದು ಎಂತಹ ಸಮಯ ವ್ಯರ್ಥ! ಅಲ್ವಾ? ಯುವಕರು ಕಷ್ಟಪಟ್ಟು ಕೆಲಸ ಮಾಡಲಿ, ಇದರಿಂದ ನಿಮ್ಮ (ನಾರಾಯಣ ಮೂರ್ತಿಯವರ) ಬ್ಯಾಂಕ್ ಬ್ಯಾಲೆನ್ಸ್ ಇನ್ನಷ್ಟು ಬೆಳೆಯಲಿ, ಅಲ್ವಾ?" ಎಂದು ಪ್ರಶ್ನಿಸುವುದರ ಜೊತೆಗೆ "ಇದು ನಾರಾಯಣ ಮೂರ್ತಿಯವರ ಇಂತಹ ಸಮಸ್ಯಾತ್ಮಕ, ಅತಿ ಬಂಡವಾಳಶಾಹಿ ಸಲಹೆ" ಅಂತ ಬರೆದುಕೊಂಡಿದ್ದಾರೆ.

ಇದು ಎಂತಹ ಸಮಯ ವ್ಯರ್ಥ! ಅಲ್ವಾ? ಯುವಕರು ಕಷ್ಟಪಟ್ಟು ಕೆಲಸ ಮಾಡಲಿ, ಇದರಿಂದ ನಿಮ್ಮ (ನಾರಾಯಣ ಮೂರ್ತಿಯವರ) ಬ್ಯಾಂಕ್ ಬ್ಯಾಲೆನ್ಸ್ ಇನ್ನಷ್ಟು ಬೆಳೆಯಲಿ, ಅಲ್ವಾ? ಎಂದು ಪ್ರಶ್ನಿಸಿದ್ದಾರೆ.
ಈ ಪೋಸ್ಟ್‌ನ್ನು ನೋಡಿದ್ದ ನೆಟ್ಟಿಗರು ಚೇತನ್ ವಿರುದ್ದ‌ ಸೋಷಿಯಲ್‌ ಮಿಡಿಯಾದಲ್ಲಿ ಆಕ್ರೋಶ ವ್ಯಕ್ತಪಡಿಸುವುದರಿಂದ, ಚೇತನ್‌ಗೆ ಹಲವಾರು ನೆಗೆಟೀವ್‌ ಕಮೆಂಟ್‌ಗಳೇ ಬಂದಿದ್ದು, ಹೆಚ್ಚು ಕಡಿಮೆ ನಾರಾಯಣ್‌ ಮೂರ್ತಿಯವರು ಹೇಳಿದ್ದು ಏನು ತಪ್ಪಿಲ್ಲ ಅಂತ ಹೇಳಿದ್ದಾರೆ. ಈ ಬಗ್ಗೆ ಸರ್ಕಾರ ರೂಲ್ಸ್ ಮಾಡಬೇಕು ಎಂದು ಹೇಳಿಲ್ಲ, ಅಥವಾ ತಮ್ಮ ಸಂಸ್ಥೆಯಲ್ಲಿ ಅಷ್ಟು ಕೆಲಸ ಮಾಡಬೇಕು ಎಂದು ಕೂಡ ಹೇಳಿಲ್ಲ . ಬದಲಾಗಿ, ದೇಶದ ಒಳಿತಿಗಾಗಿ ಜಪಾನ್-ಜರ್ಮನಿಗಳನ್ನು ಉದಾಹರಿಸಿ ಯುವಕರಿಗೆ ಕಿವಿಮಾತು ಹೇಳಿದ್ದಾರೆ ಅಷ್ಟೇ. ತಾವು ಉದ್ಧಾರ ಆಗಬೇಕು, ದೇಶವೂ ಬೆಲೆಯಬೇಕು ಎನ್ನುವವರು ಅವರ ಮಾತನ್ನು ಪಾಲಿಸಬಹುದು ಎಂದು ಹೇಳಿದ್ದಾರೆ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News