ʼದಿ ಕೇರಳ ಸ್ಟೋರಿʼ ಚಿತ್ರಕ್ಕೆ ಕಾಂಗ್ರೆಸ್‌ ವಿರೋಧ; ಈ ಬಗ್ಗೆ ನಟ ಚೇತನ್‌ ಹೇಳಿದ್ದೇನು..?

The Kerala Story ಬಾಲಿವುಡ್‌ನಲ್ಲಿ ಬಿಡುಗಡೆಗೆ ರೆಡಿಯಾಗಿರುವ ʼದಿ ಕೇರಳ ಸ್ಟೋರಿʼ ಸಿನಿಮಾಗೆ ಸಾಕಷ್ಟು ವಿರೋಧಗಳು ವ್ಯಕ್ತವಾಗುತ್ತಿವೆ. ಈ ಸಿನಿಮಾದಲ್ಲಿ ಕೇರಳದ ಯುವತಿಯರನ್ನು ಬಲವಂತವಾಗಿ ಮತಾಂತರ ಮಾಡಿಸುವ ಚಿತ್ರಣವಿದ್ದು, ಈ ಹಿನ್ನೆಲೆಯಲ್ಲಿ ಕೇರಳದ ಆಡಳಿತಾರೂಢ ಸಿಪಿಐ ಹಾಗೂ ವಿರೋಧ ಪಕ್ಷ ʼದಿ ಕೇರಳ ಸ್ಟೋರಿʼ ಚಿತ್ರದ ವಿರುದ್ಧ ಬಿರುಗಾಳಿ ಎಬ್ಬಿಸಿವೆ.   

Written by - Zee Kannada News Desk | Last Updated : Apr 30, 2023, 09:42 AM IST
  • ಇದ್ದಕ್ಕಿದ್ದಂತೆ ಕಾಣೆಯಾಗುವ ಯುವತಿಯರು ನಂತರ ಅವರನ್ನು ಮತಾಂತರ ಮಾಡುವುದು
  • ಅವರನ್ನು ಐಸಿಸ್‌ ಭಯೋತ್ಪಾದಕರನ್ನಾಗಿ ಪರಿವರ್ತಿಸುವುದನ್ನು ಚಿತ್ರ ಒಳಗೊಂಡಿದೆ.
  • ಸಾಕಷ್ಟು ವಿವಾದಗಳಿಗೆ ಎಡೆಮಾಡಿಕೊಟ್ಟಿದ್ದ ಹಿಜಾಬ್‌ ಬಗ್ಗೆಯೂ ಪ್ರಸ್ತಾಪವಿದೆ.
ʼದಿ ಕೇರಳ ಸ್ಟೋರಿʼ ಚಿತ್ರಕ್ಕೆ ಕಾಂಗ್ರೆಸ್‌ ವಿರೋಧ; ಈ ಬಗ್ಗೆ ನಟ ಚೇತನ್‌ ಹೇಳಿದ್ದೇನು..?   title=

Chetan Ahimsa : ಅಭಿವ್ಯಕ್ತಿ ಸ್ವಾತಂತ್ರ್ಯ ಸದ್ಯಕ್ಕೆ ಯಾವ ರೀತಿ ಇದೆಯೆಂದರೆ ಸಮಾಜದಲ್ಲಿ ನಡೆಯುವ ಕೆಟ್ಟ ಘಟನೆಗಳ ಅರಿವು ಮೂಡಿಸಲು ಅವಕಾಶಗಳಿಲ್ಲ ಎಂದು ಕೆಲವರು ಹೇಳಿಕೊಂಡದ್ದಾರೆ. 'ದಿ ಕೇರಳ ಸ್ಟೋರಿ' ಕೇರಳ ಸ್ಟೋರಿ ನೈಜ ಕಥೆಯನ್ನು ಆಧರಿಸಿದ ಚಿತ್ರವಾಗಿದ್ದು, ಈ ಚಿತ್ರಕ್ಕೆ ಸುದೀಪ್ತೋ ಸೇನ್ ಆಕ್ಷನ್ ಕಟ್ ಹೇಳಿದ್ದಾರೆ. ಇದ್ದಕ್ಕಿದ್ದಂತೆ ಕಾಣೆಯಾಗುವ ಯುವತಿಯರು ನಂತರ ಅವರನ್ನು ಮತಾಂತರ ಮಾಡುವುದು ಮತ್ತು ಅವರನ್ನು ಐಸಿಸ್‌ ಭಯೋತ್ಪಾದಕರನ್ನಾಗಿ ಪರಿವರ್ತಿಸುವುದನ್ನು ಚಿತ್ರ ಒಳಗೊಂಡಿದೆ.

ಅಲ್ಲದೇ ಈ ಚಿತ್ರದಲ್ಲಿ ಸಾಕಷ್ಟು ವಿವಾದಗಳಿಗೆ ಎಡೆಮಾಡಿಕೊಟ್ಟಿದ್ದ ಹಿಜಾಬ್‌ ಬಗ್ಗೆಯೂ ಪ್ರಸ್ತಾಪವಿದೆ. ಹಿಜಾಬ್‌ ಧರಿಸಿದ ಮಹಿಳೆ ಅತ್ಯಾಚಾರಕ್ಕೆ ಒಳಗಾಗುವುದಿಲ್ಲ, ಅವಳನ್ನು ಅಲ್ಲಾ ರಕ್ಷಿಸುತ್ತಾನೆ ಎಂದು ಮುಸ್ಲಿಂ ಯುವತಿ ಹಿಂದು ಯುವತಿಗೆ ಹೇಳುವ ದೃಶ್ಯವನ್ನು ಈ ಸಿನಿಮಾ ಹೊಂದಿದೆ. ಕೇರಳದಲ್ಲಿಯೂ ಈ ರೀತಿಯ ಘಟನೆಗಳು ನಡೆಯುತ್ತಿವೆ.

 

ಇದನ್ನೂ ಓದಿ-Rashmika Mandanna: ಈ ನಟನ ಜೊತೆ ಫೋಟೋ ಹಂಚಿಕೊಂಡ ರಶ್ಮಿಕಾ ಮಂದಣ್ಣ, ಮತ್ತೆ ಶುರುವಾಯ್ತು ಗುಸುಪಿಸು!?

ಕೇರಳದಲ್ಲಿ ಮುಸ್ಲಿಂ ಯುವಕರನ್ನು ಭಯೋತ್ಪಾದನೆ ಮಾಡುವಂತೆ ಪ್ರೋತ್ಸಾಹಿಸಲಾಗಿದೆ ಎಂದು ಹೇಳಲಾಗುತ್ತಿತ್ತು. ಇದರಲ್ಲಿ ಮಹಿಳೆಯರ ಸಂಖ್ಯೆಯೆ ಹೆಚ್ಚಿದೆ ಎಂದು ಬಹಿರಂಗಪಡಿಸಲಾಗಿತ್ತು. ಉಮ್ಮನ್ ಚಾಂಡಿ ಸಿಎಂ ಆಗಿದ್ದ ಅವಧಿಯಲ್ಲಿ 2006-2012ರಲ್ಲಿ ಇಸ್ಲಾಂ ಧರ್ಮಕ್ಕೆ ಮತಾಂತರವಾದವರ ಸಂಖ್ಯೆ 7713 ಇಷ್ಟಿತ್ತು.  2009-2012ರ ಮದ್ಯದಲ್ಲಿ ಮತಾಂತರಗೊಂಡವರಲ್ಲಿ 2667 ಯುವಕರು ಸೇರಿದ್ದಾರೆ. 2195 ಯುವಕರು ಹಿಂದೂಗಳು ಮತ್ತು 492 ಯುವಕರು ಕ್ರಿಶ್ಚಿಯನ್ನರು. ಇದೇ ರಾಜಕೀಯ ಗದ್ದಲಗಳಿಗಳಿ ಮೂಲ ಕಾರಣವಾಗಿದೆ. 

ರಾಜಕೀಯ ಪಕ್ಷಗಳು ಈ ಸಿನಿಮಾ ಬಿಡುಗಡೆಗೆ ವಿರೋಧವ್ಯಕ್ತಪಡಿಒಸುತ್ತಿದ್ದು, ಸಿನಿಮಾ ಬಿಡುಗಡೆಯನ್ನು ತಡೆಯುವಂತೆ ಒತ್ತಾಯಿಸುತ್ತಿವೆ. ಧಾರ್ಮಿಕವಾಗಿ ಸಮಾಜದಲ್ಲಿ ಕೋಮು ದ್ವೇಷವನ್ನು ಹುಟ್ಟಿಸಲು ಷಡ್ಯಂತ್ರಮಾಡುತ್ತಿದ್ದಾರೆ ಎಂದಿದ್ದಾರೆ. ನಟ ಚೇತನ್‌ ಅಹಿಂಸಾ ವಿಚಾರವಾಗಿ ಪ್ರತಿಕ್ರಿಯಿದ್ದು, "ವಿವಾದಾತ್ಮಕ ಚಿತ್ರ 'ದಿ ಕೇರಳ ಸ್ಟೋರಿ' ಮೇ 5 ರಂದು ತೆರೆಗೆ ಬರಲಿದೆ ನಾನು ಈ ಹಿಂದೆ ಸಮುದಾಯದ/ಲಿಂಗದ ವಿರುದ್ಧ ದ್ವೇಷ ಮತ್ತು ಅವಹೇಳನ ಮಾಡುವ ಚಲನಚಿತ್ರಗಳಲ್ಲಿ ನಟಿಸಲು ನಿರಾಕರಿಸಿದ್ದೆ ಆದರೆ, ಸೈದ್ಧಾಂತಿಕ ಆಧಾರದ ಮೇಲೆ ಸೆನ್ಸಾರ್ ಮಂಡಳಿಯಿಂದ ಅನುಮತಿ ಪಡೆದ ಚಲನಚಿತ್ರವನ್ನು ರಾಜ್ಯವು ನಿಷೇಧಿಸಬೇಕು ಎಂದು ಹೇಳುವುದನ್ನು ನಾನು ಒಪ್ಪುವುದಿಲ್ಲ. ನಮಗೆ ಅಭಿವ್ಯಕ್ತಿ ಸ್ವಾತಂತ್ರ್ಯ ಅತ್ಯಗತ್ಯ" ಎಂದು ತಮ್ಮ ಫೆಸ್ಬುಕ್‌ ಪೇಜ್‌ನಲ್ಲಿ ಬರೆದುಕೊಂಡಿದ್ದಾರೆ. 

ಇದನ್ನೂ ಓದಿ-Nora VS Janhavi: ಒಂದೇ ರೀತಿಯ ಬಟ್ಟೆ ಧರಿಸಿ ಪರಸ್ಪರರಿಗೆ ಸವಾಲೆಸಗಿದ ಬಾಲೀವುಡ್ ಲಲನೆಯರು, ಫೋಟೋ ನೋಡಿ!

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News