ಕಿಡ್ನಾಪ್​​​ನಿಂದ ಕೊಲೆ ಬಳಿಕ ಶವ ವಿಲೇವಾರಿವರೆಗೂ ನಟನ ಕೈವಾಡ..! ಸ್ವ-ಇಚ್ಚಾ ಹೇಳಿಕೆ ನೀಡಿದ ದರ್ಶನ್ 

Darshan case : ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ನಟ ದರ್ಶನ್‌ ಸ್ವ-ಇಚ್ಚಾ ಹೇಳಿಕೆ ಪಡೆಯಲಾಗಿದೆ. ತನ್ನ ಹೆಸರು ಎಲ್ಲಿಯೂ ಬರದಂತೆ ಮಾಡಲು ಸೂಚಿಸಿ, ಮೃತದೇಹ ವಿಲೇವಾರಿ ಮಾಡಲು 30 ಲಕ್ಷ ಕೊಟ್ಟಿದ್ದಾಗಿ ಉಲ್ಲೇಖಿಸಿಲಾಗಿದೆ ಈ ಕುರಿತ ಹೆಚ್ಚಿನ ಮಾಹಿತಿ ಇಲ್ಲಿದೆ.

Written by - Krishna N K | Last Updated : Jun 19, 2024, 03:13 PM IST
    • ರೇಣುಕಾಸ್ವಾಮಿ ಕೊಲೆ ಪ್ರಕರಣ
    • ನಟ ದರ್ಶನ್‌ ಸ್ವ-ಇಚ್ಚಾ ಹೇಳಿಕೆ
    • ಹತ್ಯೆಯಲ್ಲಿ ನಟನ ಕೈವಾಡ ಇದ್ದದ್ದು ಸ್ಪಷ್ಟ.
ಕಿಡ್ನಾಪ್​​​ನಿಂದ ಕೊಲೆ ಬಳಿಕ ಶವ ವಿಲೇವಾರಿವರೆಗೂ ನಟನ ಕೈವಾಡ..! ಸ್ವ-ಇಚ್ಚಾ ಹೇಳಿಕೆ ನೀಡಿದ ದರ್ಶನ್  title=

Darshan Renukaswamy murder case : ರೇಣುಕಾಸ್ವಾಮಿ ಪ್ರಕರಣಕ್ಕೆ ಸಂಬಂಧಿಸಿ ದಿನದಿಂದ ದಿನಕ್ಕೆ ಹೊಸ ಹೊಸ ವಿಚಾರಗಳು ಬಯಲಿಗೆ ಬರುತ್ತಿವೆ. ರೇಣುಕಾಸ್ವಾಮಿ ಕೊಲೆ ಕೇಸ್ ತನಿಖೆ ಬಹುತೇಕ ಕ್ಲೈಮ್ಯಾಕ್ಸ್ ಘಟ್ಟ ತಲುಪಿದೆ. ಸಧ್ಯ ಘಟನೆ ಬಗ್ಗೆ ನಟ ದರ್ಶನ್‌ ಪೊಲೀಸ್ ವಿಚಾರಣೆಯಲ್ಲಿ ಸ್ವ-ಇಚ್ಚಾ ಹೇಳಿಕೆ ನೀಡಿದ್ದಾರೆ..

ಹೌದು.. ಪವಿತ್ರಗೌಡಗೆ ಅಶ್ಲೀಲ ಸಂದೇಶ ಕಳುಹಿಸಿ ಎನ್ನುವ ಕಾರಣಕ್ಕೆ ಚಿತ್ರದುರ್ಗ ಮೂಲಕ ರೇಣುಕಾಸ್ವಾಮಿ ಎಂಬುವರ ಹತ್ಯೆ ಮಾಡಲಾಗಿತ್ತು. ಪ್ರಕರಣಕ್ಕೆ ಸಂಬಂಧಿಸಿ 17 ಜನರ ಬಂಧಿಸಿ ವಿಚಾರಣೆ ನಡೆಸಲಾಗಿದೆ. ಈ ಪೈಕಿ ಇದೀಗ ನಟ ದರ್ಶನ್‌ ಅವರಿಗೆ ಸ್ವ-ಇಚ್ಚಾ ಹೇಳಿಕೆ ಪಡೆಯಲಾಗಿದೆ.

ಇದನ್ನೂ ಓದಿ:ಅಮ್ಮ ಆದ್ರೂ ಅಂದ ತಗ್ಗಿಲ್ಲ, ಗ್ಯಾಪ್‌ ಕೊಟ್ಟು ಸಿನಿರಂಗಕ್ಕೆ ರೀ ಎಂಟ್ರಿ ಕೊಟ್ಟ ಕಾಜಲ್ ಆಸ್ತಿ ಎಷ್ಟಿದೆ ಗೊತ್ತೆ..!

ರಿಮ್ಯಾಂಡ್ ಅಪ್ಲಿಕೇಷನ್​ನಲ್ಲಿ ದರ್ಶನ್ ಪಾತ್ರದ ಬಗ್ಗೆ ಉಲ್ಲೇಖ ಮಾಡಲಾಗಿದೆ. ಕಿಡ್ನಾಪ್​​​ನಿಂದ ಹಿಡಿದು ಕೊಲೆ ಬಳಿಕ ಶವ ವಿಲೇವಾರಿವರೆಗೂ ನಟನ ಕೈವಾಡ ಇದ್ದದ್ದು ಸ್ಪಷ್ಟವಾಗಿದೆ. ಪೊಲೀಸ್ ವಿಚಾರಣೆಯಲ್ಲಿ ಸ್ವ-ಇಚ್ಚಾ ಹೇಳಿಕೆ ನೀಡಿದರುವ ನಟ ತನ್ನ ಹೆಸರು ಎಲ್ಲಿಯೂ ಬರದಂತೆ ಮಾಡಲು ಸೂಚಿಸಿ, ಮೃತದೇಹ ವಿಲೇವಾರಿ ಮಾಡಲು 30 ಲಕ್ಷ ಕೊಟ್ಟಿದ್ದಾಗಿ ಉಲ್ಲೇಖಿಸಿಲಾಗಿದೆ.

ರೇಣುಕಾ ಸ್ವಾಮಿ ಹತ್ಯೆ ಪ್ರಕರಣದಲ್ಲಿ A2 ದರ್ಶನ್ ಪಾತ್ರವೇನು?

ಪಾತ್ರ1
ದರ್ಶನ್​ ಸೂಚನೆ ಮೇರೆಗೆ ರೇಣುಕಾಸ್ವಾಮಿ ಕಿಡ್ನಾಪ್
ಪಾತ್ರ2
ಆರೋಪಿಗಳೆಲ್ಲರೂ ಸೇರಿ ರೇಣುಕಾಸ್ವಾಮಿ ಹತ್ಯೆ
ಪಾತ್ರ3
ಶವ ವಿಲೇವಾರಿ ಮಾಡಲು ಸೂಚಿಸಿದ್ದ ನಟ ದರ್ಶನ್
ಪಾತ್ರ4
ಆರೋಪಿ ಪ್ರದೋಶ್​​ಗೆ ₹30 ಲಕ್ಷ ಹಣ ನೀಡಿದ್ದ ದರ್ಶನ್
ಪಾತ್ರ5
ಮೂವರು ಆರೋಪಿಗಳಿಗೆ ಸರೆಂಡರ್ ಆಗಲು ಸೂಚನೆ
ಪಾತ್ರ6
ನನ್ನ ಹೆಸರು ಎಲ್ಲೂ ಬರಬಾರದು ಎಂದು ಸರೆಂಡರ್‌ ಆಗಲು ಸೂಚನೆ

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News