ಕಾವೇರಿ ಹೋರಾಟದಲ್ಲಿ ನಾವಷ್ಟೇ ಕಾಣ್ಸೋದಾ?-ದಚ್ಚು ಹೇಳಿಕೆಗೆ ರೈತರ ಆಕ್ರೋಶ

Darshan Statement on Kaveri Dispute: ರಾಜ್ಯದಲ್ಲಿ ದಿನಿದಿಂದ ದಿನಕ್ಕೆ ಕಾವೇರಿ ಕಿಚ್ಚು ತಾರಕಕೇರುತ್ತಿದೆ. ಇದೇ ಸಂದರ್ಭದಲ್ಲಿ ದರ್ಶನ್‌ ನೀಡಿರುವ ಹೇಳಿಕೆಯೊಂದು ವೈರಲ್‌ ಆಗಿದ್ದು, ಈ ಬಗ್ಗೆ ರೈತರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.   

Written by - Savita M B | Last Updated : Sep 26, 2023, 11:24 AM IST
  • ಕಾವೇರಿ ನೀರು ಹರಿಸುವ ವಿಚಾರವಾಗಿ ಸಾಕಷ್ಟು ಸಂಘಟನೆಗಳು ಪ್ರತಿಭಟನೆ ನಡೆಸುತ್ತಿವೆ
  • ಈ ಹೋರಾಟಕ್ಕೆ ಸ್ಯಾಂಡಲ್‌ವುಡ್ ನಟರು ಬೆಂಬಲ ಸೂಚಿಸಿದ್ದಾರೆ.
  • ಚಾಲೆಂಜಿಗ್‌ ಸ್ಟಾರ್‌ ದರ್ಶನ್‌ ವಿವಾದಾತ್ಮಕ ಹೇಳಿಕೆಯೊಂದನ್ನು ನೀಡಿದ್ದಾರೆ
ಕಾವೇರಿ ಹೋರಾಟದಲ್ಲಿ ನಾವಷ್ಟೇ ಕಾಣ್ಸೋದಾ?-ದಚ್ಚು ಹೇಳಿಕೆಗೆ ರೈತರ ಆಕ್ರೋಶ title=

Kaveri Water Dispute: ಕರ್ನಾಟಕ ಮತ್ತು ತಮಿಳುನಾಡು ರಾಜ್ಯಗಳ ನಡುವೆ ದಶಕಗಳಿಂದ ನಡೆಯುತ್ತಿರುವ ಕಾವೇರಿ ನೀರು ಹಂಚಿಕೆ ವಿವಾದ ಈಗ ಮತ್ತೆ ಉದ್ಭವವಾಗಿದೆ. ಈ ವಿಚಾರವಾಗಿ ತಮಿಳುನಾಡು ಹಠಮಾರಿ ಧೋರಣೆಯನ್ನು ತೋರುತ್ತಿದೆ. 

ಸದ್ಯ ಈ ಕಾವೇರಿ ನೀರು ಹರಿಸುವ ವಿಚಾರವಾಗಿ ಸಾಕಷ್ಟು ಸಂಘಟನೆಗಳು ಪ್ರತಿಭಟನೆ ನಡೆಸುತ್ತಿವೆ. ಈ ಹೋರಾಟಕ್ಕೆ ಸ್ಯಾಂಡಲ್‌ವುಡ್ ನಟರು ಬೆಂಬಲ ಸೂಚಿಸಿದ್ದಾರೆ. ಕಾವೇರಿ ವಿಚಾರವಾಗಿ ಇತ್ತೀಚೆಗೆ ನಡೆದ ಪ್ರತಿಭಟನೆಯ ಮೆರವಣಿಗೆಯಲ್ಲಿ ಭಾಗವಹಿಸಿದ ಚಾಲೆಂಜಿಗ್‌ ಸ್ಟಾರ್‌ ದರ್ಶನ್‌ ವಿವಾದಾತ್ಮಕ ಹೇಳಿಕೆಯೊಂದನ್ನು ನೀಡಿದ್ದಾರೆ. ಈ ಹೇಳಿಕೆ ಇದೀಗ ರೈತರ ಆಕ್ರೋಶಕ್ಕೆ ಕಾರಣವಾಗಿದೆ.

ಇದನ್ನೂ ಓದಿ-ಸಿನಿರಂಗಕ್ಕೆ ಮತ್ತಿಬ್ಬರು ಸ್ಟಾರ್‌ ಪುತ್ರಿಯರ ಆಗಮನ..ಯಾರವರು ಅಂತೀರಾ?

ಕಾವೇರಿ ವಿವಾದದದ ವಿಚಾರವಾಗಿ ಮಾತನಾಡಿದ ದರ್ಶನ್‌ "ಕಾವೇರಿ ಹೋರಾಟ ಅಂದ್ರೆ ನಿಮ್ಮ ಕಣ್ಣಿಗೆ ನಾವೇನಾ ಕಾಣೋದು" ಎಂದು ಜನತೆಗೆ ಪ್ರಶ್ನಿಸಿದ್ದರು. ಇದೀಗ ಈ ಹೇಳಿಕೆ ವಿಚಾರವಾಗಿ ಕೋಪಗೊಂಡ ಪ್ರತಿಭಟನಾಕಾರರು "ದರ್ಶನ್‌ ಅವರು ಬಂದರೇ ನಮ್ಮ ಹೋರಾಟಕ್ಕೆ ದೊಡ್ಡ ಬಲ ಸಿಗುತ್ತೆ ಎಂದು ನಾವುಇ ಭಾವಿಸಿದ್ದೆವು...ದರ್ಶನ್‌ ಈ ರೀತಿ ಮಾತನಾಡಬಾರದಿತ್ತು, ನಾವು ಕಳೆದ ಒಂದು ತಿಂಗಳಿನಿಂದ ಹೋರಾಟ ಮಾಡುತ್ತಿದ್ದೇವೆ. ಆದರೆ ನೀವು ನಮಗೆ ಅಪಮಾನವಾಗುವ ರೀತಿಯಲ್ಲಿ ಮಾತನಾಡಿದ್ದೀರಿ" ಎಂದು ಆಕ್ರೋಶ ಹೊರಹಾಕಿದ್ದಾರೆ. 

ಮುಂದುವರೆದು ಮಾತನಾಡಿದ ಪ್ರತಿಭಟನಾಕಾರರು "ನಾವು ನಿಮಗೆ ಹೋರಾಟಕ್ಕೆ ಆಮಂತ್ರಣ ನೀಡಿದ್ದೇವೆ..ಆದರೆ ನೀವು ಅದನ್ನು ತಪ್ಪಾಗಿ ಭಾವಿಸಿ ಈ ಈ ರೀತಿ ಮಾತನಾಡಿದ್ದು ತಪ್ಪು. ಕಾವೇರಿ ಹರಿಯುವ ಜಿಲ್ಲೆಯವಾರದ ನೀವು ಹೋರಾಟಗಾರರ ಬಗ್ಗೆ ಹೀಗೆ ಮಾತನಾಡುವದು ತಪ್ಪು..ಈ ಕೂಡಲೇ ನೀವು ರೈತರಿಗೆ ಕ್ಷಮೆ ಕೇಳಬೇಕು. ಜೊತೆಗೆ ಒಬ್ಬ ಜವಾಬ್ದಾರಿಯುತ ನಟನಾಗಿ ಬಂದು ಹೋರಾಟಕ್ಕೆ ಬೆಂಬಲ ಸೂಚಿಸಿ" ಎಂದು ಆಗ್ರಹಿಸಿದ್ದಾರೆ. 

ಇದನ್ನೂ ಓದಿ-ಸೌದತ್ತಿ ಯಲ್ಲಮ್ಮ ದೇವಸ್ಥಾನದಲ್ಲಿ ಉರುಳು ಸೇವೆ ಸಲ್ಲಿಸಿದ ಇನಾಮ್ದಾರ ಚಿತ್ರ ನಟ ರಂಜನ್ ಛತ್ರಪತಿ

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.

Trending News