Dhanush: ಭಿಕ್ಷುಕನಂತೆ ಸುತ್ತಾಡಿದ ಸ್ಟಾರ್‌ ನಟ.. ಟ್ರಾಫಿಕ್‌ ಜಾಮ್‌, ತಿರುಪತಿ ಭಕ್ತರ ಹಿಡಿಶಾಪ!

Dhanush: ತಿರುಮಲ ವೆಂಕಟೇಶ್ವರ ಸ್ವಾಮಿಯ ದರ್ಶನಕ್ಕೆ ಬಂದ ಭಕ್ತರಿಗೆ ಹೊಸ ಸಂಕಷ್ಟ ಎದುರಾಗಿದೆ. ಭಿಕ್ಷುಕನಂತೆ ಸುತ್ತಾಡಿದ ಸ್ಟಾರ್‌ ನಟನ ಮೇಲೆ ವಾಹನ ಸವಾರರು ಗರಂ ಆಗಿದ್ದಾರೆ. 

Written by - Chetana Devarmani | Last Updated : Feb 1, 2024, 06:41 PM IST
  • ತಿರುಪತಿಯಲ್ಲಿ ಚಿತ್ರದ ಶೂಟಿಂಗ್
  • ರಸ್ತೆ ಮಧ್ಯೆ ಚಿತ್ರೀಕರಣದಿಂದ ವಾಹನ ದಟ್ಟಣೆ
  • ಭಕ್ತರಿಗೆ ತೊಂದರೆ ತಂದ ಟ್ರಾಫಿಕ್‌ ಜಾಮ್‌
Dhanush: ಭಿಕ್ಷುಕನಂತೆ ಸುತ್ತಾಡಿದ ಸ್ಟಾರ್‌ ನಟ.. ಟ್ರಾಫಿಕ್‌ ಜಾಮ್‌, ತಿರುಪತಿ ಭಕ್ತರ ಹಿಡಿಶಾಪ!   title=

Dhanush Movie Shooting In Tirupati: ತಿರುಮಲ ವೆಂಕಟೇಶ್ವರ ಸ್ವಾಮಿಯ ದರ್ಶನಕ್ಕೆ ಬಂದ ಭಕ್ತರಿಗೆ ಹೊಸ ಸಂಕಷ್ಟ ಎದುರಾಗಿದೆ. ಸ್ಟಾರ್‌ ನಟನಿಗಾಗಿ ವಾಹನ ಸಂಚಾರದ ದಾರಿಯನ್ನು ಬದಲಿಸಲಾಗಿತ್ತು. ಇದರಿಂದಾಗಿ ಹೆಚ್ಚಿನ ಸಂಖ್ಯೆಯಲ್ಲಿ ವಾಹನಗಳು ನಿಂತು ಟ್ರಾಫಿಕ್ ಜಾಮ್ ಉಂಟಾಗಿತ್ತು. ಕಿಲೋಮೀಟರ್ ಗಟ್ಟಲೆ ವಾಹನಗಳು ನಿಂತಿದ್ದರಿಂದ ತಿರುಮಲ ರಸ್ತೆಯಲ್ಲಿ ವಾಹನ ದಟ್ಟಣೆ ಉಂಟಾಗಿತ್ತು.

ದೇವರ ದರ್ಶನಕ್ಕೆ ತೆರಳಿದ್ದ ಭಕ್ತರು ತೀವ್ರ ತೊಂದರೆ ಅನುಭವಿಸಿದರು. ತಿರುಮಲದ ಅಲಿಪಿರಿಯಲ್ಲಿ ಸಿನಿಮಾ ಚಿತ್ರೀಕರಣಕ್ಕೆ ಅನುಮತಿ ನೀಡಲಾಗಿದೆ. ಇದರಿಂದ ಹೊಸ ತೊಂದರೆಗಳು ಉದ್ಭವಿಸಿದವು. ಶೂಟಿಂಗ್‌ಗಾಗಿ ದಾರಿ ಬಂದ್‌ ಮಾಡಿದ್ದರಿಂದ ಭಾರೀ ಟ್ರಾಫಿಕ್‌ ಜಾಮ್‌ ಉಂಟಾಗಿತ್ತು. ಬೆಟ್ಟಕ್ಕೆ ಹೋಗುತ್ತಿದ್ದ ವಾಹನಗಳನ್ನು ಬೇರೆಡೆಗೆ ತಿರುಗಿಸಿದ್ದರಿಂದ ಗೊಂದಲ ಉಂಟಾಯಿತು. ಬೌನ್ಸರ್‌ಗಳು ಮತ್ತು ಪೊಲೀಸರನ್ನು ನಿಯೋಜಿಸಲಾಗಿತ್ತು. ಕಿಲೋಮೀಟರ್ ಗಟ್ಟಲೆ ವಾಹನಗಳು ನಿಂತಿದ್ದರಿಂದ ಭಕ್ತರು ಪರದಾಡುವಂತಾಯಿತು. 

ಇದನ್ನೂ ಓದಿ: ಒಟಿಟಿಯಲ್ಲೂ 'Animal' ರಾಕ್, 3 ದಿನದಲ್ಲೇ ಹೊಸ ದಾಖಲೆ ಬರೆದ ರಣಬೀರ್ ಕಪೂರ್ ಚಿತ್ರ !

ಶೇಖರ್ ಕಮ್ಮುಲ ನಿರ್ದೇಶನದಲ್ಲಿ ಅಲಿಪಿರಿ ಹಾದಿಯಲ್ಲಿ ಸಿನಿಮಾ ಚಿತ್ರೀಕರಣ ನಡೆಯುತ್ತಿದೆ. ಈ ಚಿತ್ರದಲ್ಲಿ ಧನುಷ್ ಮತ್ತು ಅಕ್ಕಿನೇನಿ ನಾಗಾರ್ಜುನ್ ನಟಿಸುತ್ತಿದ್ದಾರೆ. ಮಂಗಳವಾರದಿಂದ ಚಿತ್ರೀಕರಣ ಆರಂಭವಾಗಿದೆ. ಈ ಹಿನ್ನೆಲೆ ವಾಹನಗಳ ಮಾರ್ಗವನ್ನು ಬದಲಿಸಲಾಗಿದೆ. ವಾಹನಗಳನ್ನು ಹರೇರಾಮ ಹರೇಕೃಷ್ಣ ರಸ್ತೆಗೆ ತಿರುಗಿಸಲಾಯಿತು. ಕಿರಿದಾದ ರಸ್ತೆ ಇರುವುದರಿಂದ ಟ್ರಾಫಿಕ್‌ ಜಾಮ್‌ ಉಂಟಾಯಿತು. ಸದಾ ಜನದಟ್ಟಣೆ ಇರುವ ಈ ರಸ್ತೆಯಲ್ಲಿ ಚಿತ್ರೀಕರಣಕ್ಕೆ ಅನುಮತಿ ನೀಡಿರುವುದು ತೀವ್ರ ಟೀಕೆಗೆ ಗುರಿಯಾಗಿತ್ತು. ಇಲ್ಲಿ ಚಿತ್ರೀಕರಣಕ್ಕೆ ಅನುಮತಿ ನೀಡಿದ್ದು ಹೇಗೆ ಎಂದು ಭಕ್ತರು ಅಧಿಕಾರಿಗಳ ಜತೆ ವಾಗ್ವಾದ ನಡೆಸಿದರು.

 

 

ದಕ್ಷಿಣದ ಖ್ಯಾತ ನಟ ಧನುಷ್ ಅವರ ತಿರುಪತಿಯಲ್ಲಿನ ಶೂಟಿಂಗ್ ಸಮಯದ ವಿಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ಚಿತ್ರಕ್ಕೆ ತಾತ್ಕಾಲಿಕವಾಗಿ ‘D 51’ ಎಂದು ಟೈಟಲ್‌ ನೀಡಲಾಗಿದೆ. ಈ ಸಿನಿಮಾ ಚಿತ್ರೀಕರಣಕ್ಕಾಗಿ ಧನುಷ್ ತಿರುಪತಿಗೆ ತೆರಳಿದ್ದರು. ಸಿನಿಮಾ ಸೆಟ್‌ನಲ್ಲಿ ಅವರ ಅವತಾರ, ಧರಿಸಿರುವ ಹಳೆಯ ಬಟ್ಟೆ, ಬೆಳೆದ ಗಡ್ಡ ಕಂಡು ಧನುಷ್ ಅವರನ್ನು ಗುರುತಿಸುವುದು ಕಷ್ಟಸಾಧ್ಯವಾಗಿದೆ.  

ಇದನ್ನೂ ಓದಿ: ಅನುಷ್ಕಾ ಶೆಟ್ಟಿ ನಾಗ ಚೈತನ್ಯ ಮದುವೆ! ಎಂಗೇಜ್‌ಮೆಂಟ್ ಕೂಡ ಆಗಿದೆಯಾ? 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News