Angry Rantman: 27ನೇ ವಯಸ್ಸಿಗೆ ಇಹಲೋಕ ತ್ಯಜಿಸಿದ‌ ʼKGF, ಕಾಂತಾರʼ ಮೆಚ್ಚಿದ್ದ ಖ್ಯಾತ ಯೂಟ್ಯೂಬರ್!

Abhradeep Saha Death: ಯೂಟ್ಯೂಬ್‌ ಮತ್ತು ಸಾಮಾಜಿಕ ಜಾಲತಾಣದಲ್ಲಿ ಹೆಚ್ಚಿನ ಸಂಖ್ಯೆಯ ಫಾಲೋವರ್ಸ್‌ ಮತ್ತು ಸಬ್‌ಸ್ಕೈಬರ್ಸ್‌ ಹೊಂದಿದ್ದ ಅಬ್ರದೀಪ್‌ ಅನಾರೋಗ್ಯಕ್ಕೆ ತುತ್ತಾಗಿದ್ದರು. ಹೀಗಾಗಿ ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು.

Written by - Puttaraj K Alur | Last Updated : Apr 17, 2024, 06:42 PM IST
  • ಫೇಮಸ್‌ ಯೂಟ್ಯೂಬರ್‌ ಆಂಗ್ರಿ ರ್ಯಾಂಟ್‌ಮ್ಯಾನ್‌ ಅನಾರೋಗ್ಯದಿಂದ ಸಾವು
  • ಬಹು ಅಂಗಾಂಗ ವೈಫಲ್ಯದಿಂದ ಬಳಲುತ್ತಿದ್ದ ಅಬ್ರದೀಪ್‌ ಸಹಾ ನಿಧನರಾಗಿದ್ದಾರೆ
  • ಕೆಜಿಎಫ್‌, ಕಾಂತಾರ ಸಿನಿಮಾಗಳನ್ನು ಹಾಡಿ ಹೊಗಳಿದ್ದ ಅಬ್ರದೀಪ್‌ ಸಣ್ಣ ವಯಸ್ಸಿಗೆ ನಿಧನ
Angry Rantman: 27ನೇ ವಯಸ್ಸಿಗೆ ಇಹಲೋಕ ತ್ಯಜಿಸಿದ‌ ʼKGF, ಕಾಂತಾರʼ ಮೆಚ್ಚಿದ್ದ ಖ್ಯಾತ ಯೂಟ್ಯೂಬರ್!  title=
ಯುವ ಯೂಟ್ಯೂಬರ್‌ ಸಾವು!

Abhradeep Saha Death: ರಾಕಿಂಗ್‌ ಸ್ಟಾರ್‌ ಯಶ್‌ ಅವರ ʼಕೆಜಿಎಫ್‌ʼ, ರಿಷಬ್‌ ಶೆಟ್ಟಿ ಅವರ ʼಕಾಂತಾರʼ ಸೇರಿದಂತೆ ಹಲವಾರು ಕನ್ನಡ ಸಿನಿಮಾಗಳನ್ನು ಮೆಚ್ಚಿಕೊಂಡಿದ್ದ, ತನ್ನ ಮಾತಿನ ಶೈಲಿಯಿಂದಲೇ ಸಿನಿಮಾಗಳ ರಿವ್ಯೂ ನೀಡುತ್ತಿದ್ದ ಆಂಗ್ರಿ ರ್ಯಾಂಟ್‌ಮ್ಯಾನ್‌ ಎಂದೇ ಫೇಮಸ್‌ ಆಗಿದ್ದ ಯುವ ಯೂಟ್ಯೂಬರ್‌ ಅಬ್ರದೀಪ್‌ ಸಹಾ ನಿಧನರಾಗಿದ್ದಾರೆ. ಕೇವಲ 27ನೇ ವಯಸ್ಸಿಗೆ ಅಬ್ರದೀಪ್‌ ಸಾವನ್ನಪ್ಪಿದ್ದು, ಅವರ ಲಕ್ಷಾಂತರ ಅಭಿಮಾನಿಗಳಿಗೆ ಶಾಕ್‌ ಆಗಿದೆ. 

ಬಹು ಅಂಗಾಂಗ ವೈಫಲ್ಯದಿಂದ ಮಂಗಳವಾರ ರಾತ್ರಿ (ಏಪ್ರಿಲ್‌ 16) ಅಬ್ರದೀಪ್‌ ನಿಧನರಾಗಿದ್ದಾರೆ. ಅವರ ನಿಧನದ ಸುದ್ದಿಯನ್ನು ಕುಟುಂಬಸ್ಥರು ಸೋಷಿಯಲ್‌ ಮೀಡಿಯಾ ಖಾತೆಯಲ್ಲಿ ಅಧಿಕೃತವಾಗಿ ಹಂಚಿಕೊಂಡಿದ್ದಾರೆ. ಸೋಷಿಯಲ್‌ ಮೀಡಿಯಾ ಬಳಕೆದಾರರು ಅಬ್ರದೀಪ್‌ ನಿಧನಕ್ಕೆ ಆಘಾತ ವ್ಯಕ್ತಪಡಿಸಿದ್ದು, ಸಂತಾಪ ಸೂಚಿಸಿದ್ದಾರೆ. 

ಇದನ್ನೂ ಓದಿ: Ram Mandir: ಕನ್ನಡದಲ್ಲಿ ಬರಲಿದೆ ಅಯೋಧ್ಯೆ ಶ್ರೀರಾಮಮಂದಿರದ ಬಯೋಪಿಕ್!!

ಯೂಟ್ಯೂಬ್‌ ಮತ್ತು ಸಾಮಾಜಿಕ ಜಾಲತಾಣದಲ್ಲಿ ಹೆಚ್ಚಿನ ಸಂಖ್ಯೆಯ ಫಾಲೋವರ್ಸ್‌ ಮತ್ತು ಸಬ್‌ಸ್ಕೈಬರ್ಸ್‌ ಹೊಂದಿದ್ದ ಅಬ್ರದೀಪ್‌ ಅನಾರೋಗ್ಯಕ್ಕೆ ತುತ್ತಾಗಿದ್ದರು. ಹೀಗಾಗಿ ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಇತ್ತೀಚೆಗಷ್ಟೇ ಅವರು ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಆದರೆ ಮಂಗಳವಾರ ರಾತ್ರಿ ಅವರು ಸಾವನ್ನಪ್ಪಿದ್ದಾರೆ.

 

ಅಬ್ರದೀಪ್‌ ಬಹು ಅಂಗಾಂಗ ವೈಫಲ್ಯದಿಂದ ಬಳಲುತ್ತಿದ್ದರು. ಹೀಗಾಗಿ ಅವರನ್ನು ಬೆಂಗಳೂರಿನ ನಾರಾಯಣ ಕಾರ್ಡಿಯಿಕ್‌ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಸರ್ಜರಿಯ ನಂತರ ಅವರನ್ನು ಐಸಿಯುನಲ್ಲಿ ವೆಂಟಿಲೇಟರ್‌ ಸಹಾಯದಲ್ಲಿ ಇರಿಸಲಾಗಿತ್ತು. ಆದರೆ ಚಿಕಿತ್ಸೆಯ ನಂತರ ಆರೋಗ್ಯದಲ್ಲಿ ತೀವ್ರ ಏರುಪೇರು ಉಂಟಾಗಿ ಸಾವನ್ನಪ್ಪಿದ್ದಾರೆಂದು ತಿಳಿದುಬಂದಿದೆ. 

ಇದನ್ನೂ ಓದಿ: Sneha: "ನನಗೆ ಒಂದು ಲವ್ ಬ್ರೇಕಪ್ ಆಗಿತ್ತು..": ವಿವಾಹವಾದ 12 ವರ್ಷಗಳ ಬಳಿಕ ಸತ್ಯ ಬಿಚ್ಚಿಟ್ಟ ನಟಿ!

ಅಬ್ರದೀಪ್‌ ಅವರು ರಾಕಿಂಗ್‌ ಸ್ಟಾರ್‌ ಯಶ್‌ ನಟನೆಯ ಕೆಜಿಎಫ್‌ ಸಿನಿಮಾವನ್ನು ಹಾಡಿ ಹೊಗಳಿದ್ದರು. ಯಶ್‌ ಅಭಿನಯಕ್ಕೆ ಫಿದಾ ಆಗಿ ʼಸಲಾಂ ರಾಕಿ ಬಾಯ್‌ʼ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದರು. ರವಿ ಬಸ್ರೂರ್‌ ಅವರ ಸಂಗೀತಕ್ಕೆ ಸೆಲ್ಯೂಟ್‌ ಎಂದು ಹೇಳಿದ್ದ ಅವರು ಬಾಲಿವುಡ್‌ ಇಂಡಸ್ಟ್ರಿಯನ್ನೇ ಟೀಕಿಸಿದ್ದರು. ರಿಷಬ್‌ ಶೆಟ್ಟಿಯವರ ʼಕಾಂತಾರʼ ಸಿನಿಮಾಗೂ ಮೆಚ್ಚುಗೆ ಸೂಚಿಸಿದ್ದ ಅಬ್ರದೀಪ್‌ ಕನ್ನಡ ಚಿತ್ರರಂಗವನ್ನು ಹಾಡಿಹೊಗಳಿದ್ದರು. ಇವರ ಸಿನಿಮಾ ವಿಮರ್ಶೆಗೆ ಹೊಂಬಾಳೆ ಫಿಲಂಸ್‌ ಕೂಡ ಮೆಚ್ಚುಗೆ ವ್ಯಕ್ತಪಡಿಸಿತ್ತು. ತನ್ನ ವಿಭಿನ್ನ ಕಂಟೆಂಟ್‌ ಮೂಲಕ ಸಖತ್‌ ಜನಪ್ರಿಯತೆ ಗಳಿಸಿದ್ದ ಅಬ್ರದೀಪ್‌ ಯೂಟ್ಯೂಬ್‌ನಲ್ಲಿ 483K subscribersಗಳನ್ನು ಹೊಂದಿದ್ದರು. ತಮ್ಮ ವಿಭಿನ್ನ ಸಿನಿಮಾ ರಿವ್ಯೂನಿಂದಲೇ ಅವರು ಲಕ್ಷಾಂತರ ಅಭಿಮಾನಿಗಳನ್ನು ಸಹ ಸಂಪಾದಿಸಿದ್ದರು.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.

Trending News