ಮತ್ತೆ ಸುದ್ದಿಯಾದ ‘ಅಪ್ಪು-ಪಪ್ಪು’ ಸ್ನೇಹಿತ್!: ಮತ್ತೆನೆಪ್ಪಾ ಇವನ ಕಿರಿಕ್ ಸ್ಟೋರಿ?

ಕಿರಿಕ್ ಮಾಡಿದ್ದಕ್ಕೆ ತಮ್ಮ ವಿರುದ್ಧ ದೂರು ದಾಖಲಿಸಿದ್ದಕ್ಕೆ ಸ್ನೇಹಿತ್ ಗ್ಯಾಂಗ್‍ನ ರಕ್ಷಿತ್ ಎಂಬಾತನಿಂದ ಮತ್ತೊಂದು ಕೌಂಟರ್ ಕಂಪ್ಲೆಂಟ್ ದಾಖಲಾಗಿದೆ.

Written by - Zee Kannada News Desk | Last Updated : Sep 30, 2022, 12:55 PM IST
  • ಎರಡ್ಮೂರು ಚಿತ್ರದಲ್ಲಿ ನಟಿಸಿರುವ ನಿರ್ಮಾಪಕನ ಪುತ್ರ ಮತ್ತೆ ಕಿರಿಕ್ ನಡೆಸಿದ್ದಾನೆ
  • ಕಾರು ಓಡಿಸುವ ವಿಚಾರವಾಗಿ ದಂಪತಿ ಜೊತೆ ‘ಅಪ್ಪು ಪಪ್ಪು’ ನಟನ ಕಿರಿಕ್
  • ಮಹಿಳೆ ಮೇಲೆ ಹಲ್ಲೆ ನಡೆಸಿ ಅತ್ಯಾಚಾರ ನಡೆಸುವುದಾಗಿ ಬೆದರಿಕೆ
ಮತ್ತೆ ಸುದ್ದಿಯಾದ ‘ಅಪ್ಪು-ಪಪ್ಪು’ ಸ್ನೇಹಿತ್!: ಮತ್ತೆನೆಪ್ಪಾ ಇವನ ಕಿರಿಕ್ ಸ್ಟೋರಿ? title=
ಖ್ಯಾತ ನಿರ್ಮಾಪಕನ ಮಗನಿಂದ ಮತ್ತೆ ಕಿರಿಕ್!

ಬೆಂಗಳೂರು: ಮತ್ತೆ ಶ್ರೀಮಂತಿಕೆಯ ಅಮಲು ಮುಂದುವರೆದಿದ್ದು, ಖ್ಯಾತ ನಿರ್ಮಾಪಕನ ಮಗನಿಂದ ಮತ್ತೆ ಕಿರಿಕ್ ನಡೆದಿದೆ. ಎರಡ್ಮೂರು ಚಿತ್ರದಲ್ಲಿ ನಟಿಸಿರುವ ನಿರ್ಮಾಪಕನ ಪುತ್ರ ಮತ್ತೆ ಕಿರಿಕ್ ಮಾಡಿದ್ದಾನೆ. ತನ್ನ ಮಗ ತಪ್ಪು ಮಾಡಿದ್ರೂ ಆತನ ಅಪ್ಪ ಕ್ಯಾರೆ ಎನ್ನುತ್ತಿಲ್ಲ.

ಕಂಡ ಕಂಡ ಮಹಿಳೆಯರ ಜೊತೆ ಕಿರಿಕ್ ಮಾಡುತ್ತಿರುವ ಈತ ರೇಪ್ ಮಾಡ್ತಿನಿ ಎಂದು ಅವಾಜ್ ಹಾಕುತ್ತಾನಂತೆ. ಈ ಹಿಂದೆ ದೂರು ದಾಖಲಾಗಿ ಅವಾಂತರವಾದ್ರೂ ಈ ನಿರ್ಮಾಪಕರ ಪುತ್ರ ಬುದ್ದಿ ಕಲ್ತಿಲ್ಲ. ಅಪ್ಪನ ಶ್ರೀಮಂತಿಕೆಯಿಂದ ಮಗ ಪೋಲಿ ಬಿದಿದ್ದಾನೆ. ಅಹಂಕಾರದಿಂದ ಜನರನ್ನು ನೋಡಿ ಅವರ ಮೇಲೆ ದರ್ಪ ಮೆರೆಯುತ್ತಿದ್ದಾನಂತೆ. ಈ ಹಿಂದೆ ಖ್ಯಾತ ನಿರ್ಮಾಪಕನ ಮಧ್ಯಸ್ಥಿಕೆಯಲ್ಲಿ ಪ್ರಕರಣ ಸುಖಾಂತ್ಯಗೊಂಡಿತ್ತು. ಆದರೆ ಈಗ ಈತನ ಮೇಲೆ ಅಸಭ್ಯ ವರ್ತನೆ , ಹಲ್ಲೆ ಸೇರಿ ಹಲವು ಪ್ರಕರಣಗಳಿವೆ.

ಇದನ್ನೂ ಓದಿ: ʼಚಿಕ್ಕದಾಗಿ ಸೇರ್ಕೊಂಡು ದೊಡ್ಡದಾಗಿ ಲವ್‌ ಮಾಡೋಣʼ : ಐಶುಗೆ ನವಾಜ್‌ ಲವ್‌ ಪ್ರಪೋಸ್‌

ಮಹಿಳೆಗೆ ಸೀರೆ ಬಿಚ್ಚಿ ಹೊಡೀತಿನಿ, ರೇಪ್ ಮಾಡ್ತಿನಿ ಎಂದೆಲ್ಲಾ ಅವಾಜ್ ಹಾಕ್ತಾನಂತೆ. ಗಂಡನ ಎದುರೇ ಆತನ ಪತ್ನಿಗೆ ಸೀರೆ ಬಿಚ್ಚಿ ಹೊಡಿತಿನಿ, ರೇಪ್ ಮಾಡ್ತಿನಿ ಎಂದು ಅವಾಜ್ ಹಾಕಿದ್ದಾನಂತೆ. ಸಿನಿಮಾಗಳಲ್ಲಿ ಹೀರೋ ಆಗಿ ನಟಿಸಿದ್ದವನೇ ಈಗ ವಿಲನ್ ಆಗಿದ್ದಾನೆ. ಮೊದಲು ಕಂಡಕಂಡವರ ಮೇಲೆ ಹಲ್ಲೆ ಮಾಡ್ತಿದ್ದವನು ಈಗ ಬೆಳೆಯುತ್ತಿದ್ದಂತೆ ರೇಪ್ ಮಾಡ್ತಿನಿ ಎಂದು ಅವಾಜ್ ಹಾಕಿದ್ದಾನಂತೆ.

ಅಷ್ಟಕ್ಕೂ ಈತ ಯಾರು ಅಂತೀರಾ..? ‘ಅಪ್ಪು ಪಪ್ಪು’ ಸಿನಿಮಾದ ಹೀರೋ, ರೇಖಾ ಜಗದೀಶ್ ಹಾಗು ಸೌಂದರ್ಯ ಜಗದೀಶ್ ಪುತ್ರ ಸೇಹೀತ್. ಈತ ತನ್ನ ಸಹಚರರ ಜೊತೆಗೆ ಜಾಗ್ವಾರ್ ಕಾರ್‍ನಲ್ಲಿ ಬಂದು ದಂಪತಿಗಳನ್ನು ಅಡ್ಡ ಗಟ್ಟಿ ಅವಾಜ್ ಹಾಕಿದ್ದಾನಂತೆ. ಕಾರು ಓಡಿಸುವ ವಿಚಾರವಾಗಿ ಕಿರಿಕ್ ಮಾಡಿದ್ದಾನಂತೆ. ಅವಾಚ್ಯ ಶಬ್ಧಗಳಿಂದ ನಿಂದಿಸಿದಕ್ಕೆ ಅನ್ನಪೂರ್ಣ ಮತ್ತು ರಜತ್ ಗೌಡ ದಂಪತಿ ಪ್ರಶ್ನಿಸಿದ್ದರು. ಹೀಗೆ ಪ್ರಶ್ನಿಸಿದಕ್ಕೆ ಸ್ನೇಹಿತ್ ಹಾಗೂ ಆತನ ಸಹಚರರು ಸೇರಿ ಮಹಿಳೆಯನ್ನು ಕಾರಿನಿಂದ ಹೊರಗೆಳೆದು ಹಲ್ಲೆ ನಡೆಸಿದ್ದಾರಂತೆ. ಇವರಿಂದ ತಪ್ಪಿಸಿಕೊಂಡು ಹೋಗುವಾಗ ಬೆನ್ನಟ್ಟಿ ಮನೆ ಬಳಿ ಬಂದು ರೇಪ್ ಮಾಡ್ತೀನಿ ಅಂತಾ ಅವಾಜ್ ಹಾಕಿದ್ದಾನಂತೆ. ಈ ಬಗ್ಗೆ ಮಹಾಲಕ್ಷ್ಮಿ ಲೇಔಟ್‍ನಲ್ಲಿ ದೂರು ದಾಖಲಾಗಿದೆ.  

ಇದನ್ನೂ ಓದಿ: ಪಾಕ್ ನಟನೊಂದಿಗೆ ಅಮೀಷಾ ಪಟೇಲ್ ಡೇಟಿಂಗ್...! ನಟಿ ಎನ್ ಹೇಳಿದ್ರು ಗೊತ್ತಾ?

ಕೌಂಟರ್ ಕಂಪ್ಲೆಂಟ್ ದಾಖಲು

ಕಿರಿಕ್ ಮಾಡಿದ್ದಕ್ಕೆ ತಮ್ಮ ವಿರುದ್ಧ ದೂರು ದಾಖಲಿಸಿದ್ದಕ್ಕೆ ಸ್ನೇಹಿತ್ ಗ್ಯಾಂಗ್‍ನ ರಕ್ಷಿತ್ ಎಂಬಾತನಿಂದ ಮತ್ತೊಂದು ಕೌಂಟರ್ ಕಂಪ್ಲೆಂಟ್ ದಾಖಲಾಗಿದೆ. ರಜತ್ ಗೌಡ ಹಾಗು ಶಮಂತ್ ಗೌಡ ಎಂಬುವವರ ಮೇಲೆ ಅಟ್ರಾಸಿಟಿ ಕೇಸ್ ದಾಖಲಿಸಲಾಗಿದೆ. ಜಾತಿ ನಿಂದನೆ ಮಾಡಿದ್ದಾರೆಂದು ಸ್ನೇಹಿತ್ ಗ್ಯಾಂಗ್ ಕೇಸು ದಾಖಲಿಸಿದ್ದಾರೆ. ನಾವು ರಾಜಕೀಯ ಕುಟುಂಬದವರು ಮುಂದೆ ಕಾರ್ಪೊರೇಟರ್ ಆಗಿ ಸಾಯಿಸುತ್ತೇನೆಂದು ಬೆದರಿಕೆ ಹಾಕಿದ್ದಾರೆಂದು ಆರೋಪಿಸಲಾಗಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News