Kiara Advani: ಮದುವೆಗೂ ಮುನ್ನವೇ ಗರ್ಭಿಣಿ ಆಗಲು ಬಯಸಿದ್ದರೇ ಈ ಖ್ಯಾತ ನಟಿ!?

Kiara Advani : ಕಿಯಾರಾ ಅಡ್ವಾಣಿ ಅವರ ಹಳೆಯ ಹೇಳಿಕೆಯು ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವೈರಲ್‌ ಆಗುತ್ತಿದೆ. ಈ ಹೇಳಿಕೆಯಲ್ಲಿ ನಟಿ ಮದುವೆಗೂ ಮುನ್ನವೇ ಪ್ರೆಗ್ನೆನ್ಸಿ ಬಗ್ಗೆ ಹೇಳಿದ್ದು ಹೇಳಿಕೆಯ ಚರ್ಚೆ ಜೋರಾಗಿದೆ. ಈ ಹೇಳಿಕೆಯಲ್ಲಿ, ನಟಿ ಮದುವೆಗೆ ಮುನ್ನ ಗರ್ಭಿಣಿಯಾಗುವ ಬಗ್ಗೆ ಮಾತನಾಡಿದ್ದಾರೆ.   

Written by - Chetana Devarmani | Last Updated : Jul 31, 2023, 02:13 PM IST
  • ಕಿಯಾರಾ ಅಡ್ವಾಣಿ ಮತ್ತು ಸಿದ್ಧಾರ್ಥ್ ಮಲ್ಹೋತ್ರಾ
  • ಮದುವೆಗೂ ಮುನ್ನ ಗರ್ಭಿಣಿಯಾಗುವ ಬಗ್ಗೆ ಮಾತನಾಡಿದ್ದ ನಟಿ
  • ಕಿಯಾರಾ ಹಳೆಯ ಹೇಳಿಕೆ ಸಿಕ್ಕಾಪಟ್ಟೆ ವೈರಲ್‌
Kiara Advani: ಮದುವೆಗೂ ಮುನ್ನವೇ ಗರ್ಭಿಣಿ ಆಗಲು ಬಯಸಿದ್ದರೇ ಈ ಖ್ಯಾತ ನಟಿ!?   title=

Kiara Advani Pregnancy News : ಕಿಯಾರಾ ಅಡ್ವಾಣಿ ಮತ್ತು ಸಿದ್ಧಾರ್ಥ್ ಮಲ್ಹೋತ್ರಾ ನಿರಂತರವಾಗಿ ಒಂದಲ್ಲ ಒಂದು ಕಾರಣಕ್ಕಾಗಿ ಜನಮನದಲ್ಲಿ ಉಳಿಯುತ್ತಾರೆ. ಮದುವೆಯ ನಂತರ, ಕಿಯಾರಾ ಅಡ್ವಾಣಿ ಅವರ ಮುಂಬರುವ ಚಿತ್ರ 'ಸತ್ಯಪ್ರೇಮ್ ಕಿ ಕಥಾ' ಚಿತ್ರದ ಪ್ರಚಾರದಲ್ಲಿ ಬ್ಯುಸಿಯಾಗಿದ್ದಾರೆ. ಆದರೂ ಸಿನಿಮಾ ಬಿಟ್ಟು ವೈಯಕ್ತಿಕ ವಿಚಾರವಾಗಿಯೂ ಕಿಯಾರಾ ಸುದ್ದಿಯಲ್ಲಿದ್ದಾರೆ. ನಟಿಯ ಗರ್ಭಧಾರಣೆಯ ವದಂತಿಯೇ ಇದರ ಹಿಂದಿನ ಕಾರಣ. ಆದರೆ ಈಗ ಕಿಯಾರಾ ಅಡ್ವಾಣಿಯವರ ಹಳೆಯ ಸಂದರ್ಶನವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ, ಅದರಲ್ಲಿ ಅವರು ಮದುವೆಗೆ ಮೊದಲು ಗರ್ಭಧಾರಣೆಯ ಬಗ್ಗೆ ಮಾತನಾಡಿದ್ದಾರೆ.

'ಗುಡ್ ನ್ಯೂಸ್' ಚಿತ್ರದ ಪ್ರಚಾರದ ವೇಳೆ ಕಿಯಾರಾ ಅಡ್ವಾಣಿ ಪ್ರೆಗ್ನನ್ಸಿ ಬಗ್ಗೆ ಮುಕ್ತವಾಗಿ ಮಾತನಾಡಿದ್ದಾರೆ. "ನಾನು ಗರ್ಭಿಣಿಯಾಗಲು ಬಯಸುತ್ತೇನೆ. ಇದರಿಂದ ನಾನು ಏನು ತಿನ್ನಬೇಕೋ ಅದನ್ನು ತಿನ್ನಬಹುದು. ಮಗು ಹುಡುಗ ಅಥವಾ ಹುಡುಗಿ ಎಂಬುದು ಮುಖ್ಯವಲ್ಲ. ಏನೇ ಆಗಲಿ ಆರೋಗ್ಯವಾಗರಬೇಕು ಎಂದಿದ್ದರು. ಕಿಯಾರಾ ಅವರ ಈ ಹೇಳಿಕೆ ಮತ್ತೊಮ್ಮೆ ಸಿಕ್ಕಾಪಟ್ಟೆ ವೈರಲ್‌ ಆಗಿದೆ.

ಇದನ್ನೂ ಓದಿ: ಗೂಸ್‌ಬಂಪ್ಸ್‌ ತರಿಸುವ ಜೂ NTR 'ದೇವರ' ವಿಶೇಷ ವಿಡಿಯೋ.. ಒಮ್ಮೆ ನೋಡಿ

ಇದಲ್ಲದೇ ಕಿಯಾರಾ ಅಡ್ವಾಣಿ ಮದುವೆಯಾಗಿ ಕೆಲವೇ ತಿಂಗಳಲ್ಲಿ ಗರ್ಭಿಣಿಯಾಗಿದ್ದಾರೆ ಎಂಬ ವದಂತಿ ಶುರುವಾಗಿದೆ. ಕೆಲವು ದಿನಗಳ ಹಿಂದೆ, 'ಸತ್ಯಪ್ರೇಮ್ ಕಿ ಕಥಾ' ಪ್ರಚಾರದ ಸಮಯದಲ್ಲಿ, ಕಿಯಾರಾ ಅಡ್ವಾಣಿ ಕಿತ್ತಳೆ ಬಣ್ಣದ ಪೈಜಾಮ ಮತ್ತು ಫುಲ್ ಸ್ಲೀವ್ ಇರುವ ಟಾಪ್‌ನ್ನು ಹಾಕಿದ್ದರು. ಈ ಉಡುಪಿನ ಫೋಟೋಗಳು ವೈರಲ್‌ ಆದ ಬಳಿಕ ಕಿಯಾರಾ ಅವರ ಹೊಟ್ಟೆ ಸ್ವಲ್ಪ ಉಬ್ಬಿರುವುದು ಕಂಡು ಬಂದಿತು. ಇದಾದ ನಂತರ ಕಿಯಾರಾ ಗರ್ಭಿಣಿ ಎಂಬ ಸುದ್ದಿ ಹಬ್ಬಿತ್ತು.

ಕಿಯಾರಾ ಅಡ್ವಾಣಿ ಮತ್ತು ಸಿದ್ಧಾರ್ಥ್ ಮಲ್ಹೋತ್ರಾ ಫೆಬ್ರವರಿ 7 ರಂದು ರಾಜಸ್ಥಾನದ ಜೈಸಲ್ಮೇರ್‌ನಲ್ಲಿರುವ ರಾಜಮನೆತನದ ಕೋಟೆಯಲ್ಲಿ ವಿವಾಹವಾದರು. ಕೆಲವು ಹತ್ತಿರದ ಸಂಬಂಧಿಗಳು ಮತ್ತು ಸ್ನೇಹಿತರನ್ನು ಮಾತ್ರ ಮದುವೆಗೆ ಆಹ್ವಾನಿಸಿದ್ದರು. ವಿಶೇಷವೆಂದರೆ ಮದುವೆಯನ್ನು ಮದುವೆ ಮಾಡಲು ಇಬ್ಬರೂ ನೀರಿನಂತೆ ಹಣ ಚೆಲ್ಲಿದ್ದು ಸಾಕಷ್ಟು ಚರ್ಚೆಗೆ ಗ್ರಾಸವಾಗಿತ್ತು. 

ಇದನ್ನೂ ಓದಿ: ನಟಿ ರೇಖಾ ಜೀವನದ ಕಣ್ಣೀರ ಕಥೆ.. ಚಪ್ಪಲಿಯಿಂದ ಹೊಡೆಯಲು ಬಂದ ಅತ್ತೆ, ಪತಿ ಆತ್ಮಹತ್ಯೆ!

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News