ವಿಕ್ರಾಂತ್ ರೋಣ ಮೂಲಕ ಹಾಲಿವುಡ್ ಗೂ ಲಗ್ಗೆ ಇಟ್ಟಿರುವ ಬಾದಷಾ ಕಿಚ್ಚನ ಮುಂದಿನ ಸಿನಿ ನಡೆ ಯಾವುದು ಗೊತ್ತೇ..?

ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್‌ ರವರು ಸದ್ಯ "ವಿಕ್ರಾಂತ್‌ ರೋಣ" ಸಿನಿಮಾದಲ್ಲಿ ಬ್ಯೂಸಿ ಆಗಿದ್ದಾರೆ. ಆದರೆ ಈ ಚಿತ್ರ ಬಿಡುಗಡೆಗೂ ಮುನ್ನವೇ ಸಾಮಾಜಿಕ ಮಾಧ್ಯಮಗಳಲ್ಲಿ ಅವರ ಮುಂದಿನ ಸಿನಿಮಾ ಯಾವುದಾಗಿರಬಹುದು ಎನ್ನುವ ಚರ್ಚೆಗಳು ಈಗ ಹರಿದಾಡುತ್ತಿವೆ. ಅಂತಹ ಚರ್ಚೆಗಳ ಭಾಗವಾಗಿ ಅವರ ಸಿನಿಮಾ ಯಾವುದಾಗಿರಬಹುದು ಎನ್ನುವ ಸಂಪೂರ್ಣ ಮಾಹಿತಿಯನ್ನು ನಾವು ನಿಮ್ಮ ಮುಂದೆ ಇಡುತ್ತಿದ್ದೇವೆ.

Written by - K Karthik Rao | Edited by - Manjunath N | Last Updated : Jun 10, 2022, 11:43 PM IST
  • ಸುದೀಪ್ ಅವರು ಕನ್ನಡದಿಂದ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಸದ್ದು ಮಾಡಿದ ಮೊದಲ ನಟ ಎಂದು ಹೇಳಬಹುದು,
  • ಕಾರಣವಿಷ್ಟೇ ಅವರು ಹಿಂದಿ, ತಮಿಳು ತೆಲುಗು, ಭಾಷೆಗಳಲ್ಲಿನ ಚಿತ್ರಗಳಲ್ಲಿಯೂ ನಟಿಸಿ ಸೈ ಎನಿಸಿಕೊಳ್ಳುವ ಮೂಲಕ ಕನ್ನಡ ಕೀರ್ತಿ ಪತಾಕೆಯನ್ನು ಭಾರತಾದ್ಯಂತ ಪಸರಿಸಿದ್ದಾರೆ.
  • ಅವರೊಬ್ಬ ಅದ್ಬುತ ನಟ ಎನ್ನುವುದನ್ನು ಈಗಾಗಲೇ ಇಗ, ಪೂಂಖ್, ರಕ್ತ ಚರಿತ್ರೆ, ಕನ್ನಡದಲ್ಲಿ ಸ್ವಾತಿಮುತ್ತು ಹೀಗೆ ಹಲವಾರು ಬ್ಲಾಕ್ ಬಸ್ಟರ್ ಸಿನಿಮಾಗಳಲ್ಲಿ ತಮ್ಮ ನಟನಾ ಸಾಮರ್ಥ್ಯವನ್ನು ತೋರಿಸಿದ್ದಾರೆ.
ವಿಕ್ರಾಂತ್ ರೋಣ ಮೂಲಕ ಹಾಲಿವುಡ್ ಗೂ ಲಗ್ಗೆ ಇಟ್ಟಿರುವ ಬಾದಷಾ ಕಿಚ್ಚನ ಮುಂದಿನ ಸಿನಿ ನಡೆ ಯಾವುದು ಗೊತ್ತೇ..? title=

ಬೆಂಗಳೂರು: ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್‌ ರವರು ಸದ್ಯ "ವಿಕ್ರಾಂತ್‌ ರೋಣ" ಸಿನಿಮಾದಲ್ಲಿ ಬ್ಯೂಸಿ ಆಗಿದ್ದಾರೆ. ಆದರೆ ಈ ಚಿತ್ರ ಬಿಡುಗಡೆಗೂ ಮುನ್ನವೇ ಸಾಮಾಜಿಕ ಮಾಧ್ಯಮಗಳಲ್ಲಿ ಅವರ ಮುಂದಿನ ಸಿನಿಮಾ ಯಾವುದಾಗಿರಬಹುದು ಎನ್ನುವ ಚರ್ಚೆಗಳು ಈಗ ಹರಿದಾಡುತ್ತಿವೆ. ಅಂತಹ ಚರ್ಚೆಗಳ ಭಾಗವಾಗಿ ಅವರ ಸಿನಿಮಾ ಯಾವುದಾಗಿರಬಹುದು ಎನ್ನುವ ಸಂಪೂರ್ಣ ಮಾಹಿತಿಯನ್ನು ನಾವು ನಿಮ್ಮ ಮುಂದೆ ಇಡುತ್ತಿದ್ದೇವೆ.

ಅಭಿಮಾನಿಗಳ ಪಾಲಿನ ಪ್ರೀತಿಯ ಬಾದ್‌ಷಾ ಕಿಚ್ಚ ಸುದೀಪ್‌ ರವರ ವಿಕ್ರಾಂತ್‌ ರೋಣ ಸಿನಿಮಾ ಇನ್ನೇನು ಬಿಡುಗಡೆಗೆ ಸಜ್ಜಾಗಿದೆ, ಇದಕ್ಕಾಗಿ ಚಿತ್ರ ತಂಡವು ಬಿಡುಗಡೆಗೂ ಮುನ್ನವೇ ಸಕಲ ರೀತಿಯಲ್ಲೂ ತಯಾರಿ ನಡೆಸಿದೆ. ಇದಕ್ಕೆ ಪೂರಕವಾಗಿ ಚಿತ್ರದ ಪ್ರಚಾರ ಮಾಡಲು ಅದ್ಧೂರಿ ರೋಡ್ ಮ್ಯಾಪ್ ನ್ನು ಹಾಕಿಕೊಂಡಿದೆ.ಆ ಮೂಲಕ ಚಿತ್ರವು ಬಿಡುಗಡೆಗೂ ಮುನ್ನವೆ ದೇಶಾದ್ಯಂತ ಹೊಸ ಸಂಚಲನವನ್ನು ಸೃಷ್ಟಿಸಿದೆ, ಅದರಲ್ಲೂ ಕನ್ನಡ ಸಿನಿಮಾ ಆಗಿರುವುದರಿಂದ ಕರ್ನಾಟಕದಲ್ಲಂತೂ ಭರ್ಜರಿ ಸದ್ದು ಮಾಡುತ್ತಿದೆ. ಇದಕ್ಕಾಗಿ ಸುದೀಪ್ ಅಭಿಮಾನಿಗಳಂತೂ ಸಿನಿಮಾದ ಪ್ರತಿ ಅಪ್ಡೇಟ್ ಗಳಿಗಾಗಿ ಕಾತುರದಿಂದ ಕಾಯ್ದು ಕುಳಿತಿದ್ದಾರೆ.

ಇದನ್ನೂ ಓದಿ: ಅಭಿನಯ ಚಕ್ರವರ್ತಿ' ಕಿಚ್ಚ ಸುದೀಪ್‌ಗೆ ಬ್ಯಾಟ್‌ ಗಿಫ್ಟ್‌ ಕೊಟ್ಟ ಕ್ರಿಕೆಟರ್‌ ಬಟ್ಲರ್..!‌

ಇತ್ತೀಚಿಗೆ ಬಿಡುಗಡೆಯಾಗಿದ್ದ ವಿಕ್ರಾಂತ ರೋಣ ಸಿನಿಮಾದ ಲಿರಿಕಲ್ ಹಾಡು ಗಡಂಗ್ ರಕ್ಕಮ್ಮಾ ದೇಶಾದ್ಯಂತ ಟ್ರೆಂಡ್ ಮಾಡುವ ಮೂಲಕ ಸದ್ದು ಮಾಡಿತ್ತು, ಇದಕ್ಕಾಗಿ ಚಿತ್ರರಂಗದ ಹಲವಾರು ನಟ ನಟಿಯರು ಹುಕ್ ಸ್ಟೆಪ್ ಮಾಡುವ ಮೂಲಕ ಚಿತ್ರದ ಮೇಲಿನ ಕ್ರೇಜ್ ಅನ್ನು ಹೆಚ್ಚುವಂತೆ ಮಾಡಿದ್ದರು.ಆದರೆ ಈಗ ವಿಕ್ರಾಂತ ರೋಣ ಸಿನಿಮಾದ ಬಿಡುಗಡೆಗೂ ಮುನ್ನವೇ ಸುದೀಪ್‌ ರವರ ಮುಂದಿನ ಸಿನಿಮಾ ಯಾವುದಾಗಿರಬಹುದು ಎನ್ನುವ ಕುತೂಹಲ ಎಲ್ಲರಲ್ಲಿಯೂ ಮನೆ ಮಾಡಿದೆ.ಯಾಕಂದ್ರೆ ಸುದೀಪ್ ಅವರು ಕನ್ನಡದಿಂದ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಸದ್ದು ಮಾಡಿದ ಮೊದಲ ನಟ ಎಂದು ಹೇಳಬಹುದು, ಕಾರಣವಿಷ್ಟೇ ಅವರು ಹಿಂದಿ, ತಮಿಳು ತೆಲುಗು, ಭಾಷೆಗಳಲ್ಲಿನ ಚಿತ್ರಗಳಲ್ಲಿಯೂ ನಟಿಸಿ ಸೈ ಎನಿಸಿಕೊಳ್ಳುವ ಮೂಲಕ ಕನ್ನಡ ಕೀರ್ತಿ ಪತಾಕೆಯನ್ನು ಭಾರತಾದ್ಯಂತ ಪಸರಿಸಿದ್ದಾರೆ.ಅವರೊಬ್ಬ ಅದ್ಬುತ ನಟ ಎನ್ನುವುದನ್ನು ಈಗಾಗಲೇ ಇಗ, ಪೂಂಖ್, ರಕ್ತ ಚರಿತ್ರೆ, ಕನ್ನಡದಲ್ಲಿ ಸ್ವಾತಿಮುತ್ತು ಹೀಗೆ ಹಲವಾರು ಬ್ಲಾಕ್ ಬಸ್ಟರ್ ಸಿನಿಮಾಗಳಲ್ಲಿ ತಮ್ಮ ನಟನಾ ಸಾಮರ್ಥ್ಯವನ್ನು ತೋರಿಸಿದ್ದಾರೆ.

ಇದನ್ನೂ ಓದಿ: Vikrant Rona: ನೀವೂ ರಕ್ಕಮ್ಮನನ್ನು ಭೇಟಿಯಾಗಬಹುದು.. ಎಲ್ಲಿ? ಯಾವಾಗ? ಇಲ್ಲಿದೆ ನೋಡಿ

ಇವರ ನಟನೆಗೆ ರಾಮ್ ಗೋಪಾಲ್ ವರ್ಮಾ,ರಾಜಮೌಳಿ ,ಅಮಿತಾಬ್ ಬಚ್ಚನ್ ರಂತಹ ವ್ಯಕ್ತಿಗಳು ಕೂಡ ಫಿದಾ ಆಗಿದ್ದಾರೆ.ಈಗ ವಿಕ್ರಾಂತ ರೋಣ ಸಿನಿಮಾ ನಂತರ ಮುಂದಿನ ಸಿನಿಮಾ ಯಾವುದಾಗಿರಬಹುದು ಎನ್ನುವ ಚರ್ಚೆಗಳು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿವೆ, ಈಗ ಮೂಲಗಳ ಪ್ರಕಾರ ಸುದೀಪ್ ರವರ ಮುಂದಿನ ಸಿನಿಮಾಗಳು ಅಶ್ವತ್ಥಾಮ ಮತ್ತು ಬಿಲ್ಲಾ ರಂಗ ಭಾಷಾ ಎನ್ನಲಾಗುತ್ತಿದೆ.

ಹೌದು, ಈ ಅಶ್ವತ್ಥಾಮ ಸಿನಿಮಾ ಅನುಪ್‌ ಬಂಡಾರಿ ಅವರ ನಿರ್ದೇಶನದಲ್ಲಿ ಮೂಡಿಬರುತ್ತಂತೆ, ಸುದೀಪ್‌ ರವರು ನಟಿಸೋದರ ಜೊತೆಗೆ ನಿರ್ಮಾಣವನ್ನು ಸಹ ಮಾಡ್ತಾರೆ ಎಂಬ ಮಾತು ಸ್ಯಾಂಡಲ್‌ವುಡ್‌ ನಲ್ಲಿ ಹರಿದಾಡುತ್ತಿದೆ.ವಿಕ್ರಾಂತ್‌ ರೋಣ ಸಿನಿಮಾ ಕೂಡ ಅನೂಪ್‌ ಬಂಡಾರಿ ನಿರ್ದೇಶನದಲ್ಲಿ ಬರ್ತಾಯಿದ್ದು, ಸುದೀಪ್‌ ರವರ ಮುಂದಿನ ಸಿನಿಮಾ ಕೂಡ ಅನೂಪ್‌ ರವರ ನಿರ್ದೇಶನದ್ದೇ ಆಗಿರುತ್ತಾ? ಹಾಗಾದ್ರೇ ವಿಕ್ರಾಂತ್‌ ರೋಣ ಕಥೆಗಿಂತ ಇದು ಹೇಗೆ ಭಿನ್ನ ಕಥೆಯಾಗಿರುತ್ತೆ? ಸುದೀಪ್‌ ರವರು ನಟನೆ ಜೊತೆ ಬಂಡವಾಳ ಕೂಡ ಹೂಡ್ತಾರಾ? ಎನ್ನುವ ಪ್ರಶ್ನೆಗಳಿಗೆ ನಿಮಗೆ ಸ್ಪಷ್ಟ ಉತ್ತರ ಸಿಗಬೇಕಾದರೆ ವಿಕ್ರಾಂತ ರೋಣ ಬಿಡುಗಡೆಗೊಂಡ ನಂತರ ನಮ್ಮ ಪ್ರೀತಿಯ ಕಿಚ್ಚ ಸುದೀಪ್ ಅವರೇ ಇದಕ್ಕೆಲ್ಲಾ ಉತ್ತರ ನೀಡುತ್ತಾರೆ.ಅಲ್ಲಿಯವರೆಗೆ ಈಗ ನಮ್ಮ ಜಪ ವಿಕ್ರಾಂತ ರೋಣ ಚಿತ್ರವಾಗಿರಬೇಕಷ್ಟೇ ಎನ್ನುವುದು ನಮ್ಮೆಲ್ಲರ ಇಚ್ಛೆಯಾಗಬೇಕು.

ಇದನ್ನೂ ಓದಿ: ಕ್ರಿಕೆಟ್ ಕಾಶಿ ಲಾರ್ಡ್ಸ್ ಗ್ರೌಂಡ್ ಇಟ್ಟಿಗೆ ಮೇಲೆ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಹೆಸರು..!

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

 

  

Trending News