ಇದು ಟ್ರೈಲರ್ ಮಾತ್ರ, ಮುಂದೆ ಇದೆ ರಿಯಲ್..!‌ ಭಾರಿ ಸಂಚಲನ ಸೃಷ್ಟಿಸಿದ ನಟ ಕಿಚ್ಚ ಸುದೀಪ್‌ ಹೇಳಿಕೆ..!

ನಟ ಕಿಚ್ಚ ಸುದೀಪ್‌ ‘ವಿಕ್ರಾಂತ್ ರೋಣ’ ಸಿನಿಮಾ ಮೂಲಕ ಜಗತ್ತಿನಾದ್ಯಂತ ಕನ್ನಡದ ಕಂಪನ್ನು ಹರಿಸಲು ಸಜ್ಜಾಗಿದ್ದಾರೆ.ಈಗಾಗಲೇ ‘ವಿಕ್ರಾಂತ್ ರೋಣ’ ಚಿತ್ರದ ಟ್ರೈಲರ್‌ ರಿಲೀಸ್‌ ಆಗಿದ್ದು, ಎಲ್ಲೆಲ್ಲೂ ಸದ್ದು ಮಾಡುತ್ತಿದೆ. ಆದರೆ ಈ ಹೊತ್ತಲ್ಲೇ ನಟ ಕಿಚ್ಚ ಸುದೀಪ್‌ ಅವರು ನೀಡಿರುವ ಆ ಒಂದು ಹೇಳಿಕೆ ಭಾರಿ ಸಂಚಲನ ಸೃಷ್ಟಿಸುತ್ತಿದೆ.

Written by - Malathesha M | Edited by - Manjunath N | Last Updated : Jun 29, 2022, 09:18 PM IST
  • ಈ ಕುರಿತು ಸಂದರ್ಶನ ಒಂದರಲ್ಲಿ ಮಾತನಾಡಿರುವ ನಟ ಸುದೀಪ್‌ ಅವರು, ‘ವಿಕ್ರಾಂತ್ ರೋಣ’ ಬಳಿಕ 'ಬಿಲ್ಲ ರಂಗ ಬಾಷಾ' ಜಗತ್ತಿನಾದ್ಯಂತ ದೊಡ್ಡ ಸದ್ದನ್ನು ಮಾಡಲಿದೆ ಎಂದಿದ್ದಾರೆ.
ಇದು ಟ್ರೈಲರ್ ಮಾತ್ರ, ಮುಂದೆ ಇದೆ ರಿಯಲ್..!‌ ಭಾರಿ ಸಂಚಲನ ಸೃಷ್ಟಿಸಿದ ನಟ ಕಿಚ್ಚ ಸುದೀಪ್‌ ಹೇಳಿಕೆ..! title=
file photo

ಬೆಂಗಳೂರು: ನಟ ಕಿಚ್ಚ ಸುದೀಪ್‌ ‘ವಿಕ್ರಾಂತ್ ರೋಣ’ ಸಿನಿಮಾ ಮೂಲಕ ಜಗತ್ತಿನಾದ್ಯಂತ ಕನ್ನಡದ ಕಂಪನ್ನು ಹರಿಸಲು ಸಜ್ಜಾಗಿದ್ದಾರೆ.ಈಗಾಗಲೇ ‘ವಿಕ್ರಾಂತ್ ರೋಣ’ ಚಿತ್ರದ ಟ್ರೈಲರ್‌ ರಿಲೀಸ್‌ ಆಗಿದ್ದು, ಎಲ್ಲೆಲ್ಲೂ ಸದ್ದು ಮಾಡುತ್ತಿದೆ. ಆದರೆ ಈ ಹೊತ್ತಲ್ಲೇ ನಟ ಕಿಚ್ಚ ಸುದೀಪ್‌ ಅವರು ನೀಡಿರುವ ಆ ಒಂದು ಹೇಳಿಕೆ ಭಾರಿ ಸಂಚಲನ ಸೃಷ್ಟಿಸುತ್ತಿದೆ.

ಇದೇ ಮೊದಲ ಬಾರಿ ಕನ್ನಡ ಸಿನಿಮಾ ಒಂದು ಹಾಲಿವುಡ್‌ ಬಾಗಿಲು ಬಡಿದು ಸಂಚಲನ ಸೃಷ್ಟಿಸುತ್ತಿದೆ.‘ವಿಕ್ರಾಂತ್ ರೋಣ’ ಸಿನಿಮಾ ಆಂಗ್ಲರಿಗೂ ಕನ್ನಡ ಸಿನಿಮಾ ತಾಕತ್ತು ತೋರಿಸಲು ಸಜ್ಜಾಗಿದೆ. ಆದರೆ ‘ವಿಕ್ರಾಂತ್ ರೋಣ’ ಕುರಿತು ಸಂದರ್ಶನ ನೀಡುವಾಗ ನಟ ಕಿಚ್ಚ ಸುದೀಪ್‌ ಅವರು ನೀಡಿದ ಹೇಳಿಕೆ ಕಿಚ್ಚ ಸುದೀಪ್‌ ಅಭಿಮಾನಿಗಳಲ್ಲಿ ಸಂಚಲನ ಸೃಷ್ಟಿಸಿದೆ.

ಇದನ್ನೂ ಓದಿ : ಟೀಂ ಇಂಡಿಯಾದ ಮತ್ತೊಂದು ವಿದೇಶಿ ಪ್ರವಾಸ ಘೋಷಣೆ: ಇಲ್ಲಿದೆ ಸಂಪೂರ್ಣ ಮಾಹಿತಿ

ಕನ್ನಡಿಗರ ಅಬ್ಬರ..!
‘ವಿಕ್ರಾಂತ್ ರೋಣ’ ಬಳಿಕ 'ಬಿಲ್ಲ ರಂಗ ಬಾಷಾ' ಸಿನಿಮಾದಲ್ಲಿ ನಟ ಕಿಚ್ಚ ಸುದೀಪ್‌ ಅವರು ಬ್ಯುಸಿಯಾಗಲಿದ್ದಾರೆ.'ಬಿಲ್ಲ ರಂಗ ಬಾಷಾ' ಸಿನಿಮಾಗೂ ಅನೂಪ್‌ ಭಂಡಾರಿ ಅವರದ್ದೇ ಡೈರೆಕ್ಷನ್‌ ಇರಲಿದೆ.ಈ ಕುರಿತು ಸಂದರ್ಶನ ಒಂದರಲ್ಲಿ ಮಾತನಾಡಿರುವ ನಟ ಸುದೀಪ್‌ ಅವರು, ‘ವಿಕ್ರಾಂತ್ ರೋಣ’ ಬಳಿಕ 'ಬಿಲ್ಲ ರಂಗ ಬಾಷಾ' ಜಗತ್ತಿನಾದ್ಯಂತ ದೊಡ್ಡ ಸದ್ದನ್ನು ಮಾಡಲಿದೆ ಎಂದಿದ್ದಾರೆ.ಈ ಮೂಲಕ ಮತ್ತೊಂದು ಪ್ಯಾನ್‌ ವರ್ಲ್ಡ್‌ ಸಿನಿಮಾಗೆ ನಟ ಕಿಚ್ಚ ಸುದೀಪ್‌ ಅವರು ಸಿದ್ಧರಾಗಿದ್ದು, ಸ್ಯಾಂಡಲ್‌ವುಡ್‌ ಇತಿಹಾಸದಲ್ಲೇ ಹೊಸ ಇತಿಹಾಸ ಸೃಷ್ಟಿಸಲು ಮುಂದಾಗಿದ್ದಾರೆ.

ಇದನ್ನೂ ಓದಿ : ಮುಹೂರ್ತ ಮುಗಿಸಿದ ವಿಭಿನ್ನ ಶೀರ್ಷಿಕೆಯ ಇನ್ನಿಲ್ಲ ಸೂರಿ ಸಿನಿಮಾ..!

ಒಟ್ಟಾರೆ ಹೇಳುವುದಾದರೆ ನಟ ಕಿಚ್ಚ ಸುದೀಪ್‌ ಅವರು ಈಗಾಗಲೇ ಹೊಸ ದಾಖಲೆ ಸೃಷ್ಟಿಸಿದ್ದು, ಇದೀಗ 'ಬಿಲ್ಲ ರಂಗ ಬಾಷಾ' ಬಗ್ಗೆ ನಟ ಕಿಚ್ಚ ಸುದೀಪ್‌ ನೀಡಿರುವ ಹೇಳಿಕೆ ರೋಮಾಂಚನ ಮೂಡಿಸಿದೆ. ಸ್ಯಾಂಡಲ್‌ವುಡ್‌ ಪ್ರಿಯರು ಅದರಲ್ಲೂ ಕನ್ನಡಿಗರಿಗೆ ಕಿಚ್ಚ ಸುದೀಪ್‌ ಅವರ ಮಾತು ಮತ್ತಷ್ಟು ಹೆಮ್ಮೆ ತರಿಸಿದೆ. ‘ವಿಕ್ರಾಂತ್ ರೋಣ’ ರೋಣನ ಅಬ್ಬರಕ್ಕೆ ಕೌಂಟ್‌ಡೌನ್‌ ಶುರುವಾದ ಬೆನ್ನಲ್ಲೇ 'ಬಿಲ್ಲ ರಂಗ ಬಾಷಾ' ಕೂಡ ಅಬ್ಬರಿಸುವ ಮುನ್ಸೂಚನೆ ನೀಡಿದೆ.ಇದು ಕಿಚ್ಚ ಸುದೀಪ್‌ ಅಭಿಮಾನಿ ಬಳಗಕ್ಕೆ ಡಬಲ್‌ ಧಮಾಕ ಎನ್ನಬಹುದು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

Trending News