ಮಲ್ಲಿ ಮಿಸ್ಸಿಂಗ್‌ಗೆ ಸಿಕ್ತು ಬಿಗ್‌ ಟ್ವಿಸ್ಟ್‌..! ದರ್ಶನ್‌ ಮಾಜಿ ಮ್ಯಾನೇಜರ್‌ ಬರೆದ ಲೆಟರ್‌ನಲ್ಲಿ ಏನಿದೆ..?

Mallikarjun: ರೇಣುಕಾಸ್ವಾಮಿ ಕೇಸ್‌ನಲ್ಲಿ ಪೋಲಿಸರ ಅತಿಥಿಯಾಗಿರುವ ದರ್ಶನ್‌ ಮಾಜಿ ಮ್ಯಾನೇಜರ್‌ ಮಿಸ್ಸಿಂಗ್‌ ವಿಚಾರ ಇತ್ತೀಚೆಗೆ ಭಾರಿ ಸದ್ದು ಮಾಡಿತ್ತು. ಇದೀಗ ಮಲ್ಲಿಕಾರ್ಜುನ್‌ ಬರೆದಿದ್ದಾನೆ ಎನ್ನಲಾಗುತಿರುವ ಲೆಟರ್‌ ಒಂದು ಸಾಮಾಜಿಕ ಜಾಲಾತಾಣದಲ್ಲಿ ವೈರಲ್‌ ಆಗುತ್ತಿದೆ.  

Written by - Zee Kannada News Desk | Last Updated : Jun 17, 2024, 01:26 PM IST
  • 2018 ರಲ್ಲಿ ಸಡನ್‌ ಆಗಿ ಕಾಣೆಯಾಗಿ ಸುದ್ದಿ ಮಾಡಿದ್ದ ಮಲ್ಲಿಕಾರ್ಜುನ್‌ ಬಿ ಸಂಕನಗೌಡ.
  • ದರ್ಶನ್‌ ಸಿನಿಮಾ ಡೇಟ್ಸ್‌ ಹಾಗೂ ಎಲ್ಲಾ ವ್ಯವಹಾರಗಳನ್ನು ನೋಡಿಕೊಳ್ಳುತ್ತಿದ್ದ ಮಲ್ಲಿಕಾರ್ಜುನ್‌.
  • ಮಲ್ಲಿಕಾರ್ಜುನ್‌ ಬರೆದಿದ್ದಾನೆ ಎನ್ನಲಾಗುತ್ತಿರುವ ಲೆಟರ್‌ ಒಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗುತ್ತಿದೆ.
ಮಲ್ಲಿ ಮಿಸ್ಸಿಂಗ್‌ಗೆ ಸಿಕ್ತು ಬಿಗ್‌ ಟ್ವಿಸ್ಟ್‌..! ದರ್ಶನ್‌ ಮಾಜಿ ಮ್ಯಾನೇಜರ್‌ ಬರೆದ ಲೆಟರ್‌ನಲ್ಲಿ ಏನಿದೆ..? title=

Mallikarjun: ದರ್ಶನ್‌ ಮಾಜಿ ಮ್ಯಾನೇಜರ್‌ ಮಲ್ಲಿ ಯಾರಿಗೆ ಗೊತ್ತಿಲ್ಲ ಹೇಳಿ. 2018 ರಲ್ಲಿ ಸಡನ್‌ ಆಗಿ ಕಾಣೆಯಾಗಿ ಸುದ್ದಿ ಮಾಡಿದ್ದ ಈತ ಇಂದಿಗೂ ಪತ್ತೇನೇ ಇಲ್ಲ. ಒಂದು ಕಾಲದಲ್ಲಿ ದರ್ಶನ್‌ ಹಿಂದಏ ಹಿಂದೆ ಓಡಾಡಿಕೊಂಡು ಇರುತ್ತಾ ಇದ್ದ ಮಲ್ಲಿಕಾರ್ಜುನ್‌ ದಿಢೀರನೇ ನಾಪತ್ತೆಯಾಗಿಬಿಟ್ಟಿದ್ದ. ಈತ ಎಲ್ಲಿಗೆ ಹೋದ? ಈಗ ಏನು ಮಾಡ್ತಾ ಇದ್ದಾನೆ ? ಯಾರಿಗೂ ಗೊತ್ತಿಲ್ಲ. ನಾಪತ್ತೆಯಾದ ಸ್ವಲ್ಪ ದಿನ ಸದ್ದು ಮಾಡಿದ ಈ ಸುದ್ದಿ ದಿನ ಕಳೆದಂತೆ ಸೈಲೆಂಟ್‌ ಆಗಿತ್ತು. ಇದೀಗ ದರ್ಶನ್‌ ರೇಣುಕಾಸ್ವಾಮಿ ಕೇಸ್‌ನಲ್ಲಿ ಅಂದರ್‌ ಆದಾಗಿನಿಂದ ಮತ್ತೆ ಈ ಸುದ್ದಿ ಸದ್ದು ಮಾಡುತ್ತಿದೆ. 

ದರ್ಶನ್‌ ಸಿನಿಮಾ ಡೇಟ್ಸ್‌ ಹಾಗೂ ಎಲ್ಲಾ ವ್ಯವಹಾರಗಳನ್ನು ನೋಡಿಕೊಳ್ಳುತ್ತಿದ್ದ ಮಲ್ಲಿಕಾರ್ಜುನ್‌ ಬಿ ಸಂಕೇಗೌಡರ್‌ ಸಿನಿಮಾ ನಿರ್ಮಾಣ, ಡಿಸ್ಟ್ರಿಬ್ಯೂಷನ್ ಅಂತ ಬೇಡದೆ ಇರುವ ಕೆಲಸಕ್ಕೆ ಕೈ ಹಾಕಿ ಸಾಲದ ಸುಳಿಗೆ ಸಿಲುಕಿಕೊಂಡಿದ್ದ. ಸಾಲ ತೀರಿಸಲಾಗದೆ ದುಡ್ಡು ಊಡಿಕೆ ಮಾಡಿದ್ದ ನಿರ್ಮಾಪಕರಿಗೆ ಪಂಗನಾಮ ಹಾಕಿ ಓಡಿಹೋಗಿದ್ದ. ಇದೀಗ ಕಾಣೆಯಾದ ಏಳು ವರ್ಷಗಳ ನಂತರ ಮತ್ತೇ ಮಲ್ಲಿ ಹೆಸರು ಕೇಳಿ ಬರುತ್ತಿದೆ. ಇದರ ಬೆನ್ನಲ್ಲೆ ಮಲ್ಲಿಕಾರ್ಜುನ್‌ ಬರೆದಿದ್ದಾನೆ ಎನ್ನಲಾಗುತ್ತಿರುವ ಲೆಟರ್‌ ಒಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗುತ್ತಿದೆ. ಹಾಗಾದರೆ ಈ ಲೆಟರ್‌ನಲ್ಲಿ ಏನಿದೆ? ಮುಂದೆ ಓದಿ...

ಇದನ್ನೂ ಓದಿ: ಮಲ್ಲಿಕಾರ್ಜುನ್‌ ನಾಪತ್ತೆ ಸುದ್ದಿ ಸದ್ದು ಮಾಡುತ್ತಿರುವ ಬೆನ್ನಲ್ಲೆ ರೋಚಕ ಪೋಸ್ಟ್‌ ಶೇರ್‌ ಮಾಡಿದ ಭಾವನಾ ಬೆಳಗೆರೆ

"ನನ್ನ ಪ್ರೀತಿಯ ತೇಜಸ್ವಿನಿ, ನನ್ನನ್ನು ಕ್ಷಮಿಸು ವೈಯಕ್ತಿಕ ಕಾರಣಕ್ಕೆ ಸಾಲಮಾಡಿಕೊಂಡಿದ್ದ ನಾನು ಸಾಲ ತೀರಸಲಾಗದೆ ಒದ್ದಾಡುತ್ತಿದ್ದೇನೆ. ಸಾಲ ತೀರಿಸಲಾಗದ ಕಾರಣ ಯಾರಿಗೂ ನಾನು ಮುಖ ತೋರಿಸಲು ಆಗುತ್ತಿಲ್ಲ. ನಾನು ಮಾಡಿರುವ ಸಾಲವನ್ನು ಕಷ್ಟ ಪಟ್ಟು ದುಡಿದು ತೀರಿಸಿ ಎಲ್ಲರ ಮುಂದೆ ತಲೆ ಎತ್ತಿ ಬದುಕಲು ಬಯಸುತ್ತೇನೆ. ಅಲ್ಲಿಯವರಿಗೆ ನಿಮ್ಮಿಂದ ನಾನು ದೂರವಾಗಿ ಇರುತ್ತೇನೆ. ನನ್ನನ್ನು ಹುಡುಕುವ ಪ್ರಯತ್ನ ಮಾಡಬೇಡಿ. ನನ್ನನ್ನು ಕ್ಷಮಿಸು.
ಇಂತಿ ಪ್ರೀತಿಯ ಮಲ್ಲಿಕಾರ್ಜುನ". ಎಂದು ಬರೆಯಲಾಗಿದೆ.

ಇದೀಗ ಈ ಪತ್ರ ಸಾಮಾಜಿಕ ಜಾಲತಾಣದಲಿ ವೈರಲ್‌ ಆಗುತ್ತಿದೆ. ಇದು ಮಲ್ಲಿ ಬರೆದ ಲೆಟರ್‌ ಅಲ್ಲ ಲೈಕ್ಸ್‌ ಗಿಟ್ಟಿಸಿಕೊಳಲ್ಲು ಯಾರೋ ಸೃಷ್ಟಿಸಿರುವ ಲೆಟರ್‌ ಎಂದು ಕೆಲವರು ವಾದಿಸುತ್ತಿದ್ದರೆ. ಇನ್ನೂ ಕೆಲವರು ಇದು ಮಲ್ಲಿ ಬರೆದಿರುವ ಲೆಟರ್‌ ಎಂದು ವಾದಿಸುತ್ತಿದ್ದಾರೆ. ಎಷ್ಟೇ ವಾದ ವಿವಾದ ನಡೆದರೂ ಮಲ್ಲಿ ಸ್ವತಃ ಎಲ್ಲರ ಎದುರು ಬಂದು ನಿಂತಾಗ ಮಾತ್ರ ಈ ಎಲ್ಲಾ ಅನುಮಾನಗಳಿಗೆ ತೆರೆ ಬೀಳಲಿದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News