ಫಿಲ್ಮ್ ಚೇಂಬರ್ ಎಲೆಕ್ಷನ್: ಈ ಬಾರಿ ಎಲ್ಲವನ್ನ ಮರೆತು ಸುರೇಶ್ ತಂಡಕ್ಕೆ ಸಪೋರ್ಟ್ ಮಾಡಬೇಕು ಎಂದ ಸಾ.ರಾ. ಗೋವಿಂದ್

Karnataka film chamber election : 2023 ರ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಸ್ಥಾನಕ್ಕೆ ಭಾರೀ ಪೈಪೋಟಿ ಶುರುವಾಗಿದೆ. ಅಧ್ಯಕ್ಷ ಸ್ಥಾನದ ಪೈಪೋಟಿಯಲ್ಲಿರುವ ಎನ್.ಎಂ.ಕುಮಾರ್ ಸುದ್ದಿಗೋಷ್ಠಿ ನಡೆಸಿದರು. ಸುದ್ದಿಗೋಷ್ಠಿಗೂ ಮುನ್ನ ನಮ್ಮ ಸಪೋರ್ಟ್ ಕಾವೇರಿಗಾಗಿ ಎಂದು ಸಾರಾ ಗೋವಿಂದ್ ಅಂಡ್ ಟೀಮ್ ಹೇಳಿದರು.  

Written by - Chetana Devarmani | Last Updated : Sep 20, 2023, 08:58 PM IST
  • ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಚುನಾವಣೆ
  • ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಸ್ಥಾನಕ್ಕೆ ಭಾರೀ ಪೈಪೋಟಿ
  • ಅಧ್ಯಕ್ಷ ಸ್ಥಾನದ ಆಕಾಂಕ್ಷಿ ಎನ್.ಎಂ ಸುರೇಶ್ ಸುದ್ದಿಗೋಷ್ಠಿ
ಫಿಲ್ಮ್ ಚೇಂಬರ್ ಎಲೆಕ್ಷನ್: ಈ ಬಾರಿ ಎಲ್ಲವನ್ನ ಮರೆತು ಸುರೇಶ್ ತಂಡಕ್ಕೆ ಸಪೋರ್ಟ್ ಮಾಡಬೇಕು ಎಂದ ಸಾ.ರಾ. ಗೋವಿಂದ್  title=

ಬೆಂಗಳೂರು : ಚುನಾವಣೆ ಬರುತ್ತೆ ಹೋಗುತ್ತೆ ಆದ್ರೆ ಅದಕ್ಕಿಂತ ದೊಡ್ಡ ಸಮಸ್ಯೆ ಕಾವೇರಿ.‌ ಕಾವೇರಿ ಹೋರಾಟಕ್ಕೆ ನಾವು ಸದಾ ಸಿದ್ಧ ಎಂದು ಸಾರಾ ಗೋವಿಂದ್ ಹೇಳಿದರು. ಸಾರಾ ಗೋವಿಂದ್‌ ಅವರ ಕಾವೇರಿ ಹೋರಾಟ ಮನೋಭಾವವನ್ನ ಉಮೇಶ್ ಬಣಕಾರ್ ಶ್ಲಾಗಿಸಿದರು. 

ಎನ್.ಎಂ.ಕುಮಾರ್ ಅವರ ಕಾರ್ಯವೈಖರಿಯನ್ನು ನಾನು ಕಣ್ಣಾರೆ ನೋಡಿದ್ದೇನೆ. ಸಾರಾ ಗೋವಿಂದ್ ಅವರು ಹೊಂಬಾಳೆ ಫಿಲ್ಮ್ಸ್ ಸಂಸ್ಥೆಯಿಂದ 50 ಲಕ್ಷ ವಾಣಿಜ್ಯ ಮಂಡಳಿಗೆ ಕೊಡಿಸಿದ್ರು. ಇವತ್ತಿನ ವಾಣಿಜ್ಯ ಮಂಡಳಿ ಕಟ್ಟಡ ಅರ್ಧಕ್ಕೆ ನಿಂತೋಗಿತ್ತು. ಅದಕ್ಕೆ ಸಂಬಂಧಿಸಿದಂತೆ ಸಾರಾ ಗೋವಿಂದ್‌ ಅವರ ಜೊತೆಯಲ್ಲಿ ಎನ್.ಎಂ ಸುರೇಶ್ ಪೂರ್ಣಗೊಳಿಸಿದರು ಎಂದು ಉಮೇಶ್ ಬಣಕಾರ್ ಹೇಳಿದರು.

ಎನ್.ಎಂ ಸುರೇಶ್ ಅವರ ಸೇವೆಯನ್ನು ವಾಣಿಜ್ಯ ಮಂಡಳಿ ಪಡೆದುಕೊಂಡರೆ ಮುಂದಿನ ದಿನಗಳಲ್ಲಿ ಸುಲಲಿತವಾಗಿ ಕೆಲಸಗಳು ಆಗುತ್ತೆ. ಹೊಸ ತಂಡದ ಜೊತೆಗೆ ಗೆಲ್ಲಬೇಕು ಅನ್ನುವ ಉದ್ದೇಶ ಹೊಂದಿದ್ದೇವೆ. ಬೇರೆ ಅವರ ತರ ಸುಳ್ಳು ಆಶ್ವಾಸನೆ ನಾನು ಕೊಡಲ್ಲ. ಈ ಹಿಂದೆ ಎಲ್ಲಾ ಅಧ್ಯಕ್ಷರು ತಮ್ಮದೇ ಶೈಲಿಯಲ್ಲಿ ಕೆಲಸ ಮಾಡಿದ್ದಾರೆ ಎಂದು ಹೇಳಿದರು. 

ಇದನ್ನೂ ಓದಿ : ನಮ್ಮ ಕಾವೇರಿ ನಮ್ಮ ಹಕ್ಕು.. ಆದಷ್ಟು ಬೇಗ ನ್ಯಾಯ ಸಿಗಲಿ : ಕಾವೇರಿ ವಿವಾದ ಕುರಿತು ದರ್ಶನ್‌, ಸುದೀಪ್‌ ಟ್ವೀಟ್‌ 

ಈ ಹಿಂದೆ ನಾನು ಮೂರು ಬಾರಿ ಸೆಕ್ರೆಟರಿ ಆಗಿದ್ದೆ. ಮಾಧ್ಯಮ ಇಲ್ಲದೇ ಸಿನಿಮಾ ಇಲ್ಲ. ಮಾಧ್ಯಮ ಸಹ ಚಿತ್ರರಂಗದ ಒಂದು ಭಾಗ. ವಾಣಿಜ್ಯ ಮಂಡಳಿ ತಾಯಿ ಇದ್ದಂಗೆ. ಈಗಾಗಲೇ ವಾಣಿಜ್ಯ ಮಂಡಳಿಗಾಗಿ ದೊಡ್ಡ ದೊಡ್ಡ ರೂಪುರೇಷೆಗಳನ್ನು ಹಾಕಿಕೊಂಡಿದ್ದೇನೆ. ಸಾಮಾನ್ಯ ನಿರ್ಮಾಪಕರಿಗೆ ಬೇಳೆಯೋದಕ್ಕೆ ಬಿಡ್ತಿಲ್ಲಾ ಎಂದು ಎನ್.ಎಂ ಸುರೇಶ್ ಹೇಳಿದರು. 

ನಾನು ಕೆಲಸ ಮಾಡ್ತೀನಿ ಅಂತ ನಂಗೆ ನಂಬಿಕೆ ಇದೆ. ನನ್ನ ಗೆಲುವಿಗೆ ನಮ್ಮ ತಂಡದ ಬೆಂಬಲ ಬೇಕು. ವಿಥೌಟ್ ಎವಿಡೆನ್ಸ್ ಇಲ್ದೆ ಮಾತಾಡಬಾರದು. ಹೊಂಬಾಳೆ ಫಿಲ್ಮ್ಸ್ ಸಂಸ್ಥೆಯ ಸಹಾಯವನ್ನು ಎನ್.ಎಂ ಸುರೇಶ್ ನೆನೆಸಿಕೊಂಡರು. 

ಹೊಸ ನಿರ್ಮಾಪಕರು ಯಾರು ತಪ್ಪು ದಾರಿಗೆ ಹೋಗ್ಬೇಡಿ ಎಂದು ಹೊಸ ನಿರ್ಮಾಪಕರಿಗೆ ಕೈ ಮುಗಿದು ಕೇಳಿದರುಸ. ನಾನು ಗೆದ್ದಮೇಲೆ ಮತ್ತೆ ಮಾಧ್ಯಮಗೋಷ್ಠಿ ಕರೆದು ನಾನು ಮಾಡುವ ಕೆಲಸಗಳ ಬಗ್ಗೆ ಹೇಳ್ತೀನಿ. ನಾನು ಗೆದ್ದ ಮೇಲೆ ಒಳ್ಳೆ ಕೆಲಸ ಮಾಡೆ ಮಾಡ್ತೀನಿ. ಮಾಡಿಲ್ಲ ಅಂದ್ರೆ ನಾನು ಆ ಜಾಗದಲ್ಲಿ ಇರಲ್ಲ ಎಂದರು.

ಇದೇ ವೇಳೆ ಮಾತನಾಡಿದ ಸಾ.ರಾ. ಗೋವಿಂದ್, ನಾನು ಚುನಾವಣೆಗೆ ನಿಂತಿಲ್ಲ. ಆದರೆ ನನ್ನ ಪರವಾಗಿ ಅಭ್ಯರ್ಥಿಗಳಿದ್ದಾರೆ. ಯಾವುದೇ ತಪ್ಪಾದ್ರೂ ನಾನೇ ಹೊಣೆ ಅಂದುಕೊಳ್ಳಿ. 2 ಬಾರಿ ಅಧ್ಯಕ್ಷ ಸ್ಥಾನ ಬಿಟ್ಟುಕೊಟ್ರು. ಹಿರಿಯರಿಗೆ ಅವಕಾಶ ಕೊಡಬೇಕು. ಹಾಗಾಗಿ ಕೆಲವರನ್ನ ಬೆಂಬಲಿಸ್ತೀನಿ. ಈ ಬಾರಿ ಎಲ್ಲವನ್ನ ಮರೆತು ಸುರೇಶ್ ತಂಡಕ್ಕೆ ಸಪೋರ್ಟ್ ಮಾಡಬೇಕು ಎಂದರು. 

ಇದನ್ನೂ ಓದಿ : ನಟ ಪ್ರಕಾಶ್​ ರಾಜ್‌ಗೆ ಜೀವ ಬೆದರಿಕೆ : ಯೂಟ್ಯೂಬ್​ ವಾಹಿನಿ ವಿರುದ್ಧ ಎಫ್​ಐಆರ್​ 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 
 

Trending News