ರಾಷ್ಟ್ರ ಪ್ರಶಸ್ತಿ ಗೆದ್ದ ʼಮೊದಲ ತೆಲುಗು ಸ್ಟಾರ್ʼ ಅಲ್ಲು ಅರ್ಜುನ್..! ʼಬನ್ನಿʼಗೆ ಶುಭಾಶಯಗಳ ಮಹಾಪೂರ

Allu Aarjun national award : 69ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳಲ್ಲಿ 'ಪುಷ್ಪ: ದಿ ರೈಸ್' ಚಿತ್ರದ ಪವರ್-ಪ್ಯಾಕ್ಡ್ ಅಭಿನಯಕ್ಕಾಗಿ ನಟ ಅಲ್ಲು ಅರ್ಜುನ್ ಅವರು ಅತ್ಯುತ್ತಮ ನಟ ರಾಷ್ಟ್ರ ಪ್ರಶಸ್ತಿಯನ್ನು ಗೆದ್ದಿದ್ದಾರೆ. ವಿಶೇಷ ಅಂದ್ರೆ ಈ ಪ್ರಶಸ್ತಿಗೆ ಭಾಜನರಾದ ಮೊದಲ ತೆಲುಗು ನಟರಾಗಿ ಬನ್ನಿ ಖ್ಯಾತಿ ಪಡೆದಿದ್ದಾರೆ.

Written by - Krishna N K | Last Updated : Aug 25, 2023, 01:28 PM IST
  • ನಟ ಅಲ್ಲು ಅರ್ಜುನ್ ಅವರಿಗೆ ಅತ್ಯುತ್ತಮ ನಟ ರಾಷ್ಟ್ರ ಪ್ರಶಸ್ತಿ
  • ಈ ಪ್ರಶಸ್ತಿಗೆ ಭಾಜನರಾದ ಮೊದಲ ತೆಲುಗು ನಟರಾಗಿ ಬನ್ನಿ
  • ಟಾಲಿವುಡ್‌ ದಿಗ್ಗಜರಿಂದ ಸ್ಟೈಲಿಶ್‌ ನಟನಿಗೆ ಶುಭಾಶಯಗಳ ಮಹಾಪೂರ
ರಾಷ್ಟ್ರ ಪ್ರಶಸ್ತಿ ಗೆದ್ದ ʼಮೊದಲ ತೆಲುಗು ಸ್ಟಾರ್ʼ ಅಲ್ಲು ಅರ್ಜುನ್..! ʼಬನ್ನಿʼಗೆ ಶುಭಾಶಯಗಳ ಮಹಾಪೂರ title=

69th National Film Awards winners : ಗುರುವಾರ ಘೋಷಿಸಲಾದ 69ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳಲ್ಲಿ 'ಪುಷ್ಪ: ದಿ ರೈಸ್' ಚಿತ್ರದಲ್ಲಿನ ಅಭಿನಯಕ್ಕಾಗಿ ನಟ ಅಲ್ಲು ಅರ್ಜುನ್ ಅವರಿಗೆ ಅತ್ಯುತ್ತಮ ನಟ ರಾಷ್ಟ್ರ ಪ್ರಶಸ್ತಿ ಲಭಿಸಿದೆ. ಈ ಪ್ರಶಸ್ತಿ ಗೆದ್ದ ಮೊದಲ ತೆಲುಗು ನಟ ಎಂಬ ಹೆಗ್ಗಳಿಕೆಗೆ ಬನ್ನಿ ಪಾತ್ರರಾಗಿದ್ದಾರೆ..

ಅಲ್ಲು ಅರ್ಜುನ್‌ ಅವರಿಗೆ ಪ್ರಶಸ್ತಿ ಪ್ರಕಟವಾದ ಬೆನ್ನಲ್ಲೆ ಫ್ಯಾನ್ಸ್‌ ಸಂಭ್ರಮಾಚರಣೆ ಮಾಡುತ್ತಿದ್ದಾರೆ. ಸಿನಿರಂಗದ ತಾರೆಯರು ಸ್ಟೈಲಿಶ್ ಐಕಾನ್‌ ನಟನಿಗೆ ಶುಭ ಕೋರುತ್ತಿದ್ದಾರೆ. ಅವರ ತಂದೆ ಮತ್ತು ಖ್ಯಾತ ನಿರ್ಮಾಪಕ ಅಲ್ಲು ಅರವಿಂದ್ ಮಗನ ಗೆಲುವನ್ನು ಸಭ್ರಮಿಸಿದ್ದು, ಅಲ್ಲು ಫ್ಯಾಮಿಲಿಯಲ್ಲಿ ಹಬ್ಬದ ವಾತಾವರಣ ಮನೆಮಾಡಿದೆ. ಅಲ್ಲದೆ, ಪುಷ್ಪಾ ನಿರ್ದೇಶಕ ಸುಕುಮಾರ್ ಅಲ್ಲು ಅರ್ಜುನ್‌ ಅವರನ್ನು ಅಪ್ಪಿಕೊಂಡು ಅಭಿನಂದಿಸಿದ್ದಾರೆ.

ಇದನ್ನೂ ಓದಿ: ಜೇಮ್ಸ್ ನಂತರ ಡೈರೆಕ್ಟರ್ ಚೇತನ್ ಪ್ಯಾನ್ ಇಂಡಿಯಾ ಸಿನಿಮಾ, 'ಗಟ್ಟಿಮೇಳ' ರಕ್ಷ್ ನಾಯಕ

68 ವರ್ಷಗಳ ಪ್ರಶಸ್ತಿಗಳ ಇತಿಹಾಸದಲ್ಲಿ ಅತ್ಯುತ್ತಮ ನಟ ರಾಷ್ಟ್ರ ಪ್ರಶಸ್ತಿಯನ್ನು ಗೆದ್ದ ಮೊದಲ ಟಾಲಿವುಡ್ ನಟ ಎಂಬ ಹೆಗ್ಗಳಿಕೆಗೆ ಪಾತ್ರರಾದ ಅಲ್ಲು ಅರ್ಜುನ್ ಅವರನ್ನು ಹಲವಾರು ಚಿತ್ರರಂಗದ ಗಣ್ಯರು ಅಭಿನಂದಿಸಿದ್ದಾರೆ. 

'ಬನ್ನಿ' ಎಂದು ಜನಪ್ರಿಯವಾಗಿರುವ ಅಲ್ಲು ಅರ್ಜುನ್ 1985 ರಲ್ಲಿ ಬಾಲ ನಟನಾಗಿ ಚಿತ್ರರಂಗ ಪ್ರವೇಶಿಸಿದರು. 'ಗಂಗೋತ್ರಿ' ಸಿನಿಮಾ (2003) ನಾಯಕನಾಗಿ ನಟಿಸಿದ ಚೊಚ್ಚಲ ಚಿತ್ರ. 'ಪುಷ್ಪ: ದಿ ರೈಸ್' ಬ್ಲಾಕ್ಬಸ್ಟರ್ನೊಂದಿಗೆ ಪ್ಯಾನ್-ಇಂಡಿಯಾ ನಟರಾಗಿ ಅಪಾರ ಅಭಿಮಾನಿ ಬಳಗ ಹೊಂದಿದ್ದಾರೆ.

ಇದನ್ನೂ ಓದಿ: WWE ಸೂಪರ್‌ಸ್ಟಾರ್ ಬ್ರೇ ವ್ಯಾಟ್ ʼವಿಂಡ್‌ಹ್ಯಾಮ್ ರೋಟುಂಡಾʼ ನಿಧನ..!

ಅಲ್ಲು ಅರ್ಜುನ್‌ ಜನಪ್ರಿಯ ಹಾಸ್ಯನಟ ಅಲ್ಲು ರಾಮಲಿಂಗಯ್ಯನವರ ಮೊಮ್ಮಗ ಮತ್ತು ಅಲ್ಲು ಅರವಿಂದ್ ಅವರ ಮಗ, ಮೆಗಾಸ್ಟಾರ್ ಚಿರಂಜೀವಿ ಅವರ ಸೋದರಳಿಯ ಕೂಡ ಹೌದು.. ಚಿರಂಜೀವಿ ಪತ್ನಿ ಸುರೇಖಾ ಅಲ್ಲು ಅರ್ಜುನ್ ಅವರ ತಂದೆಯ ಸಹೋದರಿ.

ಇನ್ನು ರಾಷ್ಟ್ರ ಪ್ರಶಸ್ತಿ ಪಡೆದ ಅಲ್ಲು ಅರ್ಜುನ್‌ ಅವರಿಗೆ ಚಿರಂಜೀವಿ ಅವರು ಅಭಿನಂದನೆ ಸಲ್ಲಿಸಿದ್ದಾರೆ. ತೆಲುಗು ಚಿತ್ರರಂಗಕ್ಕೆ ಹೆಮ್ಮೆಯ ಕ್ಷಣ. ರಾಷ್ಟ್ರೀಯ ಅತ್ಯುತ್ತಮ ನಟ ಪ್ರಶಸ್ತಿ ಪಡೆದ ನನ್ನ ಪ್ರೀತಿಯ ಬನ್ನಿಗೆ ಹೃತ್ಪೂರ್ವಕ ಅಭಿನಂದನೆಗಳು... ನಿನ್ನ ಕೆಲಸಕ್ಕೆ ಹೆಮ್ಮೆಪಡುತ್ತೇನೆ ಎಂದು ಬರೆದುಕೊಂಡಿದ್ದಾರೆ.

ಇದನ್ನೂ ಓದಿ: 69ನೇ ರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಕನ್ನಡಿಗರ ಕಮಾಲ್‌

ಇನ್ನು ನಾಯಕ ನಟ ಜೂನಿಯರ್ ಎನ್‌ಟಿಆರ್ ಕೂಡ ಅಲ್ಲು ಅರ್ಜುನ್ ಗೆ ಅಭಿನಂದನೆ ಸಲ್ಲಿಸಿದ್ದಾರೆ. ಅಲ್ಲು ಅರ್ಜುನ್ ಸೋದರ ಸಂಬಂಧಿ ರಾಮ್ ಚರಣ್ ಮತ್ತು ವೆಂಕಟೇಶ್ ಕೂಡ ಶುಭ ಕೋರಿದ್ದಾರೆ. ಜೊತೆಗೆ ಆಂಧ್ರಪ್ರದೇಶ ಮುಖ್ಯಮಂತ್ರಿ ವೈಎಸ್ ಜಗನ್ ಮೋಹನ್ ರೆಡ್ಡಿ ಅತ್ಯುತ್ತಮ ನಟನೆಗಾಗಿ ಚೊಚ್ಚಲ ರಾಷ್ಟ್ರ ಪ್ರಶಸ್ತಿಯನ್ನು ಗೆದ್ದಿದ್ದಕ್ಕಾಗಿ ಅಭಿನಂದಿಸಿದ್ದಾರೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News