Puneeth Parva: 'ಪುನೀತ ಪರ್ವ' ಕಾರ್ಯಕ್ರಮಕ್ಕೆ ಡ್ರೆಸ್‌ ಕೋಡ್‌.!

Puneeth Parva: ಅಶ್ವಿನಿ ಪುನೀತ್ ರಾಜ್‌ಕುಮಾರ್ ಅವರು 'ಪುನೀತ ಪರ್ವ' ಕಾರ್ಯಕ್ರಮದ ವಿವರಗಳನ್ನು ಹಂಚಿಕೊಂಡಿದ್ದಾರೆ ಮತ್ತು ಭಾಗವಹಿಸುವವರಿಗೆ ಡ್ರೆಸ್‌ ಕೋಡ್‌ ಬಗ್ಗೆ ತಿಳಿಸಿದ್ದಾರೆ. 

Written by - Chetana Devarmani | Last Updated : Oct 20, 2022, 03:58 PM IST
  • 'ಪುನೀತ ಪರ್ವ' ಕಾರ್ಯಕ್ರಮಕ್ಕೆ ಡ್ರೆಸ್‌ ಕೋಡ್‌
  • ಅಕ್ಟೋಬರ್ 28 ರಂದು ಬಿಡುಗಡೆಯಾಗಲಿದೆ ಗಂಧದ ಗುಡಿ
  • ಬೆಂಗಳೂರಿನ ಅರಮನೆ ಮೈದಾನದಲ್ಲಿ 'ಪುನೀತ ಪರ್ವ'
Puneeth Parva: 'ಪುನೀತ ಪರ್ವ' ಕಾರ್ಯಕ್ರಮಕ್ಕೆ ಡ್ರೆಸ್‌ ಕೋಡ್‌.!  title=
ಪುನೀತ ಪರ್ವ

Puneeth Parva: ಅಕ್ಟೋಬರ್ 28 ರಂದು ಬಿಡುಗಡೆಯಾಗಲಿರುವ ಪುನೀತ್ ರಾಜ್‌ಕುಮಾರ್ ಅವರ “ಗಂಧದ ಗುಡಿ” ಚಿತ್ರಕ್ಕೆ ದಿನಗಣನೆ ಪ್ರಾರಂಭವಾಗಿದೆ. ದೊಡ್ಡ ಪರದೆಯಲ್ಲಿ ಪುನೀತ್‌ರನ್ನು ನೋಡಲು ಅಭಿಮಾನಿಗಳು ಮತ್ತು ಹಿತೈಷಿಗಳು ಉತ್ಸುಕರಾಗಿದ್ದಾರೆ. ಪುನೀತ್ ಅವರ ಮೊದಲ ಪುಣ್ಯತಿಥಿ ಒಂದು ದಿನ ಮುಂಚಿತವಾಗಿ ಅಂದರೆ ಅಕ್ಟೋಬರ್ 28 ರಂದು ಚಿತ್ರ ಬಿಡುಗಡೆಯಾಗುತ್ತಿದೆ. ಅಕ್ಟೋಬರ್ 21 ರಂದು ಸಂಜೆ ಬೆಂಗಳೂರಿನ ಅರಮನೆ ಮೈದಾನದಲ್ಲಿ 'ಪುನೀತ ಪರ್ವ' ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.

ಇದನ್ನೂ ಓದಿ : Puneeth Parva: ನಾಳೆ ʻಪುನೀತ ಪರ್ವʼ.. ಗಂಧದ ಗುಡಿಯ ರಾಜಕುಮಾರನಿಗೆ ಸಿನಿತಾರೆಯರ ನಮನ

ಈ ಕಾರ್ಯಕ್ರಮವು ಪುನೀತ್ ಅವರ ಕುಟುಂಬದ ಸದಸ್ಯರು, ಹಿತೈಷಿಗಳು, ರಾಜಕೀಯ ಗಣ್ಯರು ಮತ್ತು ಕನ್ನಡ, ತೆಲುಗು, ತಮಿಳು ಮತ್ತು ಮಲಯಾಳಂ ಚಿತ್ರರಂಗದ ನಟರು ಸಹ ಭಾಗಿಯಾಗಲಿದ್ದಾರೆ. ಪುನೀತ್ ಅವರ ಪತ್ನಿ ಅಶ್ವಿನಿ ಪುನೀತ್ ರಾಜ್‌ಕುಮಾರ್ ಮತ್ತು ಅವರ ಕುಟುಂಬ ಸದಸ್ಯರು 'ಪುನೀತ ಪರ್ವ' ಆಯೋಜನೆಯ ಜವಾಬ್ದಾರಿಯನ್ನು ತೆಗೆದುಕೊಂಡಿದ್ದಾರೆ. ಈ ಕಾರ್ಯಕ್ರಮವು ಅಪ್ಪು ಸ್ಮರಣೆಗಾಗಿ ಆಯೋಜಿಸಲಾದ ಹಲವಾರು ಕಾರ್ಯಕ್ರಮಗಳಿಗೆ ಸಾಕ್ಷಿಯಾಗಲಿದೆ. ಅಕ್ಟೋಬರ್ 26 ರಂದು ಕಂಠೀರವ ಸ್ಟುಡಿಯೋದಲ್ಲಿ ಪುನೀತ್ ರಾಜ್‌ ಕುಮಾರ್ ಅವರ ಸ್ಮಾರಕದ ಬಳಿ ನಟನ 75 ಕಟೌಟ್‌ಗಳನ್ನು ನಿರ್ಮಿಸಲಾಗುವುದು. ಮರುದಿನ, ಅಭಿಮಾನಿಗಳು ಈ ಕಟೌಟ್‌ಗಳಿಗೆ ಪುಷ್ಪ ನಮನ ಸಲ್ಲಿಸಬಹುದು ಮತ್ತು 1 ಕಿಮೀ ಪ್ರದೇಶದಲ್ಲಿ ಸ್ಮಾರಕವನ್ನು ನಿರ್ಮಾಣಕ್ಕೆ ಯೋಜಿಸಲಾಗಿದೆ. 

ಅ. 28ರಂದು ಸಿನಿಮಾ ಬಿಡುಗಡೆಯಾಗಲಿದೆ. ಅಂದು ಪುನೀತ್ ಅಭಿಮಾನಿಗಳು ಬೆಂಗಳೂರಿನ ಎಂ.ಜಿ ರೋಡ್, ಮಾಗಡಿ ರಸ್ತೆ ಸೇರಿದಂತೆ ಪ್ರಮುಖ ಚಿತ್ರಮಂದಿರಗಳ ಮುಂದೆ ಸಂಭ್ರಮಾಚರಣೆ ನಡೆಸಲಿದ್ದಾರೆ. ಅಕ್ಟೋಬರ್ 29 ರಂದು ಪುನೀತ್ ಅವರ ಸ್ಮಾರಕದ ಬಳಿ ಬೆಳಿಗ್ಗೆ 8 ರಿಂದ ಸಂಜೆ 6 ರವರೆಗೆ ಅವರ ಅಭಿಮಾನಿಗಳಿಗಾಗಿ ʻಅನ್ನ ದಾಸೋಹ’ ಆಯೋಜಿಸಲಾಗಿದೆ.

ಇದನ್ನೂ ಓದಿ : ಅಪ್ಪು ಕನಸಿನ ʼಗಂಧದಗುಡಿʼಗೆ ಅಶ್ವಿನಿ ಪುನೀತ್‌ ಧ್ವನಿ..!

ನವೆಂಬರ್ 1 ರಂದು ಕನ್ನಡ ರಾಜ್ಯೋತ್ಸವದ ಸಂದರ್ಭದಲ್ಲಿ ಪುನೀತ್ ಅವರಿಗೆ ರಾಜ್ಯ ಸರ್ಕಾರವು “ಕರ್ನಾಟಕ ರತ್ನ” ಪ್ರಶಸ್ತಿಯನ್ನು ಪ್ರದಾನ ಮಾಡುವ ಮೂಲಕ ಮರಣೋತ್ತರ ಗೌರವ ನೀಡಲಿದೆ. ಟ್ವಿಟರ್‌ನಲ್ಲಿ, ಅಶ್ವಿನಿ ಪುನೀತ್ ರಾಜ್‌ಕುಮಾರ್ ಅವರು 'ಪುನೀತ ಪರ್ವ' ಕಾರ್ಯಕ್ರಮದ ವಿವರಗಳನ್ನು ಹಂಚಿಕೊಂಡಿದ್ದಾರೆ ಮತ್ತು ಭಾಗವಹಿಸುವವರಿಗೆ ಬಿಳಿ ಬಟ್ಟೆಗಳನ್ನು ಧರಿಸುವಂತೆ ಕೋರಿದ್ದಾರೆ. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News