Puneeth Parva: ನಾಳೆ ʻಪುನೀತ ಪರ್ವʼ.. ಗಂಧದ ಗುಡಿಯ ರಾಜಕುಮಾರನಿಗೆ ಸಿನಿತಾರೆಯರ ನಮನ

Puneeth Parva: ಕನ್ನಡಿಗರ ಎದೆಯಾಳುವ ದೊರೆ ಅಪ್ಪು. ಇಡೀ ಕರುನಾಡೇ ಕಂದನನ್ನು ಕಳೆದುಕೊಂಡು ಅಕ್ಟೋಬರ್‌ 29ಕ್ಕೆ ಒಂದು ವರ್ಷ ಕಳೆಯಲಿದೆ.‌ ಪುನೀತ್ ರಾಜ್ ಕುಮಾರ್ ನಟನೆಯ ಕೊನೆಯ ಸಿನಿಮಾ ಗಂಧದ ಗುಡಿ ಪ್ರೀ ರಿಲೀಸ್ ಈವೆಂಟ್‌ಗೆ ಭರದ ಸಿದ್ಧತೆ ನಡೆಯುತ್ತಿದೆ. 

Written by - Chetana Devarmani | Last Updated : Oct 20, 2022, 03:22 PM IST
  • ಕನ್ನಡಿಗರ ಎದೆಯಾಳುವ ದೊರೆ ಅಪ್ಪು
  • ಗಂಧದ ಗುಡಿಯ ರಾಜಕುಮಾರನಿಗೆ ಸಿನಿತಾರೆಯರ ನಮನ
  • ನಾಳೆ ಅರಮನೆ ಮೈದಾನದಲ್ಲಿ ಪುನೀತ ಪರ್ವ
Puneeth Parva: ನಾಳೆ ʻಪುನೀತ ಪರ್ವʼ.. ಗಂಧದ ಗುಡಿಯ ರಾಜಕುಮಾರನಿಗೆ ಸಿನಿತಾರೆಯರ ನಮನ title=
ಪುನೀತ ಪರ್ವ

Puneeth Parva: ಕನ್ನಡಿಗರ ಎದೆಯಾಳುವ ದೊರೆ ಅಪ್ಪು. ಇಡೀ ಕರುನಾಡೇ ಕಂದನನ್ನು ಕಳೆದುಕೊಂಡು ಅಕ್ಟೋಬರ್‌ 29ಕ್ಕೆ ಒಂದು ವರ್ಷ ಕಳೆಯಲಿದೆ.‌ ಪುನೀತ್ ರಾಜ್ ಕುಮಾರ್ ನಟನೆಯ ಕೊನೆಯ ಸಿನಿಮಾ ಗಂಧದ ಗುಡಿ ಪ್ರೀ ರಿಲೀಸ್ ಈವೆಂಟ್‌ಗೆ ಭರದ ಸಿದ್ಧತೆ ನಡೆಯುತ್ತಿದೆ. ಇನ್ನೇನೂ ರಾತ್ರಿ ಕಳೆದು ಬೆಳಕಾಗುವುದು ಬಾಕಿ. ಯುವರತ್ನನ ಸ್ಮರಣೆಯಲ್ಲಿ ಇಡೀ ಸೌತ್‌ ಸಿನಿರಂಗವೇ ಭಾಗಿಯಾಗಲಿದೆ. ಅಪ್ಪು ಇಹಲೋಕದಿಂದ ಮರೆಯಾಗಿದ್ದರೂ ಕನ್ನಡಿಗರ ನರ ನಾಡಿಗಳಲ್ಲಿ ಅಜರಾಮರರು. ಅಪ್ಪು ಅವರ ಕನಸಿನ ಕೂಸು ಅವರ ಅಭಿನಯದ ಕೊನೆಯ ಚಿತ್ರ ಗಂಧದ ಗುಡಿ  ಅಕ್ಟೋಬರ್ 28 ರಂದು ಬಿಡುಗಡೆಯಾಗಲಿದೆ. ಸ್ಯಾಂಡಲ್​​ವುಡ್​ ನ ಪವರ್ ಸ್ಟಾರ್ ಎಂದೆಂದಿಗೂ ಜೀವಂತ. ಅವರ ಜೀವನ ಪ್ರೀತಿ, ಸರಳ ವ್ಯಕ್ತಿತ್ವಕ್ಕೆ ಎಲ್ಲರಿಗೂ ಮಾದರಿ. ನಾಳೆ ನಡೆಯಲಿರುವ "ಪುನೀತ ಪರ್ವ" ಕಾರ್ಯಕ್ರಮದಲ್ಲಿ ತಾರೆಯರ ಸಮಾಗಮವೇ ಆಗುತ್ತಿದೆ.

ಇದನ್ನೂ ಓದಿ : ಅಪ್ಪು ಕನಸಿನ ʼಗಂಧದಗುಡಿʼಗೆ ಅಶ್ವಿನಿ ಪುನೀತ್‌ ಧ್ವನಿ..!

ಅಪ್ಪು ಡ್ರೀಮ್ ಪ್ರಾಜೆಕ್ಟ್ ಗಂಧದ ಗುಡಿ ಪ್ರಿ ರಿಲೀಸ್ ಇವೆಂಟ್ ಅನ್ನು ಅದ್ದೂರಿಯಾಗಿ ನಡೆಸಲು ಡಾ.ರಾಜ್ ಕುಟುಂಬ ನಿರ್ಧರಿಸಿದೆ. ಹಾಗೆಯೇ ಎಲ್ಲ ರೀತಿಯಲ್ಲಿಯೂ ಸಿದ್ಧತೆ ಕೂಡ ಮಾಡಿಕೊಂಡಿದ್ದಾರೆ. ಅಕ್ಟೋಬರ್ 21ರಂದು (ನಾಳೆ) ಸಾಯಂಕಾಲ ಅರಮನೆ ಮೈದಾನದಲ್ಲಿ ಪುನೀತ ಪರ್ವ ಕಾರ್ಯಕ್ರಮ ನಡೆಯಲಿದೆ. ಅಶ್ವಿನಿ ಪುನೀತ್ ರಾಜಕುಮಾರ್ ಮುಂದಾಳತ್ವದಲ್ಲಿ ನಡೆಯುತ್ತಿರುವ ಈವೆಂಟ್‌ಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೇರಿದಂತೆ ಅನೇಕ ಸಿನಿ ಗಣ್ಯರಿಗೆ ಆಹ್ವಾನ ನೀಡಲಾಗಿದೆ. ಪುನೀತ್ ನಟನೆಯ ಕೊನೆಯ ಸಿನಿಮಾ ಗಂಧದ ಗುಡಿ ಚಿತ್ರದ ಪ್ರೀ ರಿಲೀಸ್ ಕಾರ್ಯಕ್ರಮವನ್ನು ಅದ್ದೂರಿಯಾಗಿ ಮಾಡಲು ಸಿನಿಮಾ ತಂಡದ ಜೊತೆಗೆ ಅವರ ಕುಟುಂಬ ಸಹ ನಿರ್ಧರಿಸಿದೆ. 

ಪುನೀತ ಪರ್ವ ಎನ್ನುವ ಹೆಸರಿನಲ್ಲಿ ನಾಳೆ ಗಂಧದ ಗುಡಿ ಪ್ರಿ ರಿಲೀಸ್‌ ಈವೆಂಟ್‌ ನಡೆಯಲಿದೆ. ಅಪ್ಪು ನೆನಪಿನಲ್ಲಿ ನಡೆಯುತ್ತಿದೆ. ಕೊನೆಯ ಬಾರಿಗೆ ತಮ್ಮ ನೆಚ್ಚಿನ ನಟ ಪುನೀತ್ ರಾಜ್ ಕುಮಾರ್ ಅವರನ್ನು ತೆರೆಮೇಲೆ ಕಣ್ತುಂಬಿಕೊಳ್ಳಲು ಅವರ ಫ್ಯಾನ್ಸ್‌ ಶಬರಿಯಂತೆ ಕಾದು ಕುಳಿತಿದ್ದಾರೆ. ನಾಳೆ ನಡೆಯುವ ಈ ಪ್ರಿ ರಿಲೀಸ್‌ ಈವೆಂಟ್‌ಗೆ ರಾಜಕೀಯ ನಾಯಕರು ಸೇರಿದಂತೆ ಸಿನಿಮಾ ರಂಗದ ಖ್ಯಾತ ನಾಮರು ಸಹ ಆಗಮಿಸಲಿದ್ದಾರೆ. ನಾಳೆ ಬೆಂಗಳೂರಿನ ಅರಮನೆ ಮೈದಾನದಲ್ಲಿ ಅಕ್ಟೋಬರ್-21 ರಂದು ಪುನೀತ್ ಸ್ಮರಣಾರ್ಥ "ಪುನೀತ ಪರ್ವ" ಅದ್ದೂರಿ ಕಾರ್ಯಕ್ರಮ ಆಯೋಜನೆ ಆಗಿದೆ. 

ಇದನ್ನೂ ಓದಿ : 'ಪುನೀತ್ ಪರ್ವ'ಕ್ಕೆ ಯಾರೆಲ್ಲಾ ಸಾಕ್ಷಿಯಾಗಲಿದ್ದಾರೆ? ರಾಘಣ್ಣ ಹಂಚಿಕೊಂಡ್ರು ಕಂಪ್ಲೀಟ್‌ ಡಿಟೇಲ್ಸ್‌

ಸಂಜೆ 6.30ಕ್ಕೆ ನಡೆಯಲಿರುವ ಈ ಕಾರ್ಯಕ್ರಮದಲ್ಲಿ ಟಾಲಿವುಡ್, ಕಾಲಿವುಡ್​ನಿಂದಲೂ ನಟ - ನಟಿಯರು ಆಗಮಿಸುತ್ತಿದ್ದಾರೆ. ಟಾಲಿವುಡ್​ ನಿಂದ ಬಾಲಯ್ಯ, ಕಾಲಿವುಡ್​ ಮಹಾ ನಾಯಕ ಕಮಲ್ ಹಾಸನ್, ಸೂರ್ಯ, ಬಹು ಭಾಷಾ ನಟ ಪ್ರಭು ದೇವ, ರಾಣಾ ದಗ್ಗುಬಾಟಿ ಹೀಗೆ ಇನ್ನೂ ಅನೇಕರು ಈ ಪುನೀತ್ ಪರ್ವ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ನಿರೀಕ್ಷೆಯಿದೆ. ಪುನೀತ ಪರ್ವಕ್ಕೆ ಚಂದನವನದ ಖ್ಯಾತನಾಮರು ಸಹ ಸಾಕ್ಷಿಯಾಗಲಿದ್ದಾರೆ. ಕಿಚ್ಚ ಸುದೀಪ್, ಯಶ್, ಡಾರ್ಲಿಂಗ್ ಕೃಷ್ಣ, ಡಾಲಿ ಧನಂಜಯ್, ಮೋಹಕ ತಾರೆ ರಮ್ಯಾ ಸೇರಿದಂತೆ ಇನ್ನೂ ಅನೇಕ ಸ್ಯಾಂಡಲ್‌ವುಡ್‌ ತಾರೆಯರು ಭಾಗಿಯಾಗಲಿದ್ದಾರೆ. ಈ ಕಾರ್ಯಕ್ರಮದಲ್ಲಿ ಹಾಡು, ಡಾನ್ಸ್ ಎಲ್ಲವೂ ಇರಲಿದೆ. ನಟ ಶಿವ ರಾಜ್​ಕುಮಾರ್, ರಮ್ಯಾ ಸೇರಿದಂತೆ ಅನೇಕ ನಟ - ನಟಿಯರು ತಮ್ಮ ನೃತ್ಯದ ಮೂಲಕ ರಂಜಿಸಲಿದ್ದಾರೆ. ಗಂಧದ ಗುಡಿ ಸಾಕ್ಷ್ಯಚಿತ್ರಕ್ಕೆ ಅಶ್ವಿನಿ ಧ್ವನಿ ನೀಡಿದ್ದು, ಅಭಿಮಾನಿಗಳು ಈ ಸಿನಿಮಾ ನೋಡಲು ಕಾತುರರಾಗಿದ್ದಾರೆ. ಅಕ್ಟೋಬರ್ 28 ಕ್ಕೆ ಗಂಧದ ಗುಡಿ ಸಿನಿಮಾ ರಿಲೀಸ್ ಆಗಲಿದೆ. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News