Rani Mukherjee: 8 ವರ್ಷ ತನ್ನ ಮಗಳನ್ನು ಗೌಪ್ಯವಾಗಿಟ್ಟಿದ್ದೇಕೆ ಈ ಖ್ಯಾತ ನಟಿ?

Rani Mukherjee in Kareena Kapoor Show: ರಾಣಿ ಮುಖರ್ಜಿ ಇತ್ತೀಚೆಗೆ ಕರೀನಾ ಕಪೂರ್ ಅವರ ವಾಟ್ ವುಮೆನ್ ವಾಂಟ್ ಶೋನಲ್ಲಿ ಕಾಣಿಸಿಕೊಂಡರು. ಅಲ್ಲಿ ನಟಿ ಅನೇಕ ವಿಚಾರಗಳನ್ನು ಬಹಿರಂಗಪಡಿಸಿದರು. ಮಗಳು ಆದಿರಾ ಅವರನ್ನು ಕ್ಯಾಮರಾಗಳಿಂದ ದೂರವಿಟ್ಟಿದ್ದಕ್ಕೆ ಎಂಬುದಕ್ಕೆ ಕಾರಣ ನೀಡಿದ್ದಾರೆ. ಅಲ್ಲದೇ, ತಮ್ಮ ವೈಯಕ್ತಿಕ ಜೀವನದ ಬಗ್ಗೆಯೂ ಸಾಕಷ್ಟು ವಿಷಯಗಳನ್ನು ಹಂಚಿಕೊಂಡಿದ್ದಾರೆ.

Written by - Chetana Devarmani | Last Updated : Apr 2, 2023, 12:43 PM IST
  • ಕರೀನಾ ಕಪೂರ್ ಅವರ ವಾಟ್ ವುಮೆನ್ ವಾಂಟ್ ಶೋ
  • ಕರೀನಾ ಕಪೂರ್ ಶೋನಲ್ಲಿ ರಾಣಿ ಮುಖರ್ಜಿ ಭಾಗಿ
  • 8 ವರ್ಷ ತನ್ನ ಮಗಳನ್ನು ಗೌಪ್ಯವಾಗಿಟ್ಟಿದ್ದೇಕೆ ಈ ಖ್ಯಾತ ನಟಿ?
Rani Mukherjee: 8 ವರ್ಷ ತನ್ನ ಮಗಳನ್ನು ಗೌಪ್ಯವಾಗಿಟ್ಟಿದ್ದೇಕೆ ಈ ಖ್ಯಾತ ನಟಿ?  title=

Rani Mukherjee: ರಾಣಿ ಮುಖರ್ಜಿ ಅಭಿನಯದ 'ಮಿಸೆಸ್ ಚಟರ್ಜಿ ವರ್ಸಸ್ ನಾರ್ವೇಜಿಯನ್' ಚಿತ್ರ ಇತ್ತೀಚೆಗೆ ಬಿಡುಗಡೆಯಾಗಿದೆ. ಚಿತ್ರದಲ್ಲಿ ರಾಣಿ ಮುಖರ್ಜಿ ಅವರ ನಟನೆಯು ಹೆಚ್ಚು ಮೆಚ್ಚುಗೆ ಗಳಿಸಿತು. ಈಗ ರಾಣಿ ಮುಖರ್ಜಿ ಕರೀನಾ ಕಪೂರ್ ಅವರ 'ವಾಟ್ ವುಮನ್ ವಾಂಟ್' ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾರೆ. ಅಲ್ಲಿ ಅವರು ತಮ್ಮ ವೈಯಕ್ತಿಕ ಜೀವನಕ್ಕೆ ಸಂಬಂಧಿಸಿದ ವಿಶೇಷ ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಮಗಳು ಆದಿರಾಳನ್ನು ಲೋಕದ ಕಣ್ಣುಗಳಿಂದ ದೂರ ಇಡಲು ಕಾರಣವನ್ನೂ ಹೇಳಿದ್ದಾರೆ.

ಕರೀನಾ ಕಪೂರ್ ಇತ್ತೀಚಿನ ದಿನಗಳಲ್ಲಿ 'ವಾಟ್ ವುಮನ್ ವಾಂಟ್' ಎಂಬ ಶೋ ನಡೆಸುತ್ತಿದ್ದಾರೆ. ಇದರಲ್ಲಿ ಅವರು ತಮ್ಮ ಶೋನಲ್ಲಿ ವಿವಿಧ ತಾರೆಯರನ್ನು ಕರೆಸುತ್ತಾರೆ ಮತ್ತು ಅವರ ವೈಯಕ್ತಿಕ ಜೀವನಕ್ಕೆ ಸಂಬಂಧಿಸಿದ ಪ್ರಶ್ನೆಗಳನ್ನು ಕೇಳುತ್ತಾರೆ. ಈ ಸಂಬಂಧ ರಾಣಿ ಮುಖರ್ಜಿ ಕೂಡ ಕಾರ್ಯಕ್ರಮಕ್ಕೆ ಆಗಮಿಸಿದ್ದರು. ಇದರಲ್ಲಿ ಕರೀನಾ ಕಪೂರ್ ಈ ಬಗ್ಗೆ ಪ್ರಶ್ನಿಸಿದಾಗ, "ಇಲ್ಲ ಸೂಪರ್ ಪವರ್. ನನ್ನ ಮಗಳ ಫೋಟೋ ತೆಗೆಯಬೇಡಿ ಎಂದು ನಾನು ಪಾಪರಾಜಿಗಳಿಗೆ ತುಂಬಾ ಪ್ರೀತಿಯಿಂದ ಹೇಳುತ್ತೇನೆ ಮತ್ತು ಅವರು ಅವಳ ಫೋಟೋಗಳನ್ನು ತೆಗೆದುಕೊಳ್ಳುವುದಿಲ್ಲ. ಅವಳು ತುಂಬಾ ಮುದ್ದಾಗಿದ್ದಾಳೆ. ನನ್ನ ಆದಿ ತೀರಾ ಖಾಸಗಿ ವ್ಯಕ್ತಿ" ಎಂದಿದ್ದಾರೆ ರಾಣಿ ಮುಖರ್ಜಿ.

ಇದನ್ನೂ ಓದಿ : ಬೇಕು ಅಂತಲೇ 'ಪೆಂಟಗನ್' ಬಗ್ಗೆ ವಿವಾದ ಮಾಡಿದ್ರು ಕನ್ನಡಪರ ಹೋರಾಟಗಾರ ಎನಿಸಿಕೊಂಡಿರೋ ಆ ವ್ಯಕ್ತಿ.!

ರಾಣಿ ಮುಖರ್ಜಿ ಅವರು ತಮ್ಮ ಮಗಳು ಸಾಮಾನ್ಯ ಬಾಲ್ಯವನ್ನು ಹೊಂದಬೇಕೆಂದು ಬಯಸುತ್ತಾರಂತೆ. "ಆದಿರಾ ಶಾಲೆಯಲ್ಲಿ ಸಾಮಾನ್ಯ ಪಾಲನೆಯನ್ನು ಹೊಂದಲು ಬಹಳ ಮುಖ್ಯವಾಗಿತ್ತು, ಏಕೆಂದರೆ ನೀವು ಪ್ರಸಿದ್ಧ ಪೋಷಕರ ಮಗುವಾಗಿದ್ದಾಗ ಸಾಮಾನ್ಯವಾಗಿ ಮಗುವಿನ ಮೇಲೆ ಹೆಚ್ಚು ಗಮನ ಹರಿಸುತ್ತಾರೆ. ಆದಿರಾ ತಾನು ಯಾರ ಮಗಳೆಂಬ ಕಾರಣಕ್ಕಾಗಿ ಅವಳು ವಿಶೇಷವಲ್ಲ ಎಂದು ಅರಿತುಕೊಳ್ಳುವುದು ನನಗೆ ಮುಖ್ಯವಾಗಿತ್ತು. ತನ್ನನ್ನು ತಾನೇ ಜೀವನದಲ್ಲಿ ವಿಶೇಷವಾಗಿಸಿಕೊಳ್ಳಬೇಕು" ಎಂದರು.

ನಟಿ ರಾಣಿ ಮುಖರ್ಜಿ ಮುಂಬರುವ ಸಿನಿಮಾ 'ಮರ್ದಾನಿ 3' ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಹಿಂದೆ, 'ಬಂಟಿ ಔರ್ ಬಬ್ಲಿ 2' ನಲ್ಲಿ ಸೈಫ್ ಅಲಿ ಖಾನ್, ಸಿದ್ಧಾಂತ್ ಚತುರ್ವೇದಿ ಮತ್ತು ಶರ್ವರಿ ವಾಘ್ ಅವರೊಂದಿಗೆ ಕೆಲಸ ಮಾಡಿದ್ದರು, ಆದರೆ ಚಿತ್ರವು ಗಲ್ಲಾಪೆಟ್ಟಿಗೆಯಲ್ಲಿ ಉತ್ತಮ ಪ್ರದರ್ಶನ ನೀಡಲು ವಿಫಲವಾಯಿತು. 

ಇದನ್ನೂ ಓದಿ : Dasara Movie Controversy: ವಿವಾದದ ಸುಳಿಯಲ್ಲಿ ನಾನಿ ಅಭಿನಯದ ʻದಸರಾʼ

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News