ಕ್ರೀಡಾಂಗಣದಲ್ಲೇ ಟಿಕ್‌ ಟಿಕ್‌ ಹಾಡಿಗೆ ಸಖತ್‌ ಸ್ಟೆಪ್‌ ಹಾಕಿದ ಶಿವಣ್ಣ..! ವಿಡಿಯೋ ವೈರಲ್‌

ರಾಜಧಾನಿಯ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕನ್ನಡ ಚಲನಚಿತ್ರ ಕಪ್ ನಡೆಯುತ್ತಿದೆ. ಇಂದು ನಟ ಡಾ. ಶಿವರಾಜಕುಮಾರ್‌ ಅವರ ನಾಯಕತ್ವದ ಒಡೆಯರ್‌ ಚಾರ್ಜಸ್‌ ತಂಡ ಮತ್ತು ಡಾಲಿ ಧನಂಜಯ್‌ ನಾಯಕತ್ವದ ಗಂಗಾ ವಾರಿಯರ್ಸ್‌ ನಡುವೆ ಮ್ಯಾಚ್‌ ನಡೆದಿತ್ತು. ಈ ವೇಳೆ ಬ್ರೇಕ್‌ ಸಮಯದಲ್ಲಿ ಶಿವಣ್ಣ ವಿಲನ್‌ ಸಿನಿಮಾದ ಹಿಟ್‌ ಸಾಂಗ್‌ ಟಿಕ್‌ ಟಿಕ್‌ ಹಾಡಿಗೆ ಹೆಜ್ಜೆ ಹಾಕಿದರು. ಶಿವಣ್ಣ ಎನರ್ಜಿಟಿಕ್‌ ಡಾನ್ಸ್‌ ನೋಡಿ ಪ್ರೇಕ್ಷಕರು ಶಿಳ್ಳೆ ಹೊಡೆದರು. 

Written by - Krishna N K | Last Updated : Feb 25, 2023, 08:52 PM IST
  • ರಾಜಧಾನಿಯ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕನ್ನಡ ಚಲನಚಿತ್ರ ಕಪ್ ನಡೆಯುತ್ತಿದೆ.
  • ಇಂದು ನಟ ಡಾ. ಶಿವರಾಜಕುಮಾರ್‌ ಅವರ ನಾಯಕತ್ವದ ಒಡೆಯರ್‌ ಚಾರ್ಜಸ್‌ ತಂಡ ಮತ್ತು ಡಾಲಿ ಧನಂಜಯ್‌ ನಾಯಕತ್ವದ ಗಂಗಾ ವಾರಿಯರ್ಸ್‌ ನಡುವೆ ಮ್ಯಾಚ್‌ ನಡೆದಿತ್ತು.
  • ಈ ವೇಳೆ ಬ್ರೇಕ್‌ ಸಮಯದಲ್ಲಿ ಶಿವಣ್ಣ ವಿಲನ್‌ ಸಿನಿಮಾದ ಹಿಟ್‌ ಸಾಂಗ್‌ ಟಿಕ್‌ ಟಿಕ್‌ ಹಾಡಿಗೆ ಹೆಜ್ಜೆ ಹಾಕಿದರು.
ಕ್ರೀಡಾಂಗಣದಲ್ಲೇ ಟಿಕ್‌ ಟಿಕ್‌ ಹಾಡಿಗೆ ಸಖತ್‌ ಸ್ಟೆಪ್‌ ಹಾಕಿದ ಶಿವಣ್ಣ..! ವಿಡಿಯೋ ವೈರಲ್‌ title=

Shivarajkumar : ರಾಜಧಾನಿಯ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕನ್ನಡ ಚಲನಚಿತ್ರ ಕಪ್ ನಡೆಯುತ್ತಿದೆ. ಇಂದು ನಟ ಡಾ. ಶಿವರಾಜಕುಮಾರ್‌ ಅವರ ನಾಯಕತ್ವದ ಒಡೆಯರ್‌ ಚಾರ್ಜಸ್‌ ತಂಡ ಮತ್ತು ಡಾಲಿ ಧನಂಜಯ್‌ ನಾಯಕತ್ವದ ಗಂಗಾ ವಾರಿಯರ್ಸ್‌ ನಡುವೆ ಮ್ಯಾಚ್‌ ನಡೆದಿತ್ತು. ಈ ವೇಳೆ ಬ್ರೇಕ್‌ ಸಮಯದಲ್ಲಿ ಶಿವಣ್ಣ ವಿಲನ್‌ ಸಿನಿಮಾದ ಹಿಟ್‌ ಸಾಂಗ್‌ ಟಿಕ್‌ ಟಿಕ್‌ ಹಾಡಿಗೆ ಹೆಜ್ಜೆ ಹಾಕಿದರು. ಶಿವಣ್ಣ ಎನರ್ಜಿಟಿಕ್‌ ಡಾನ್ಸ್‌ ನೋಡಿ ಪ್ರೇಕ್ಷಕರು ಶಿಳ್ಳೆ ಹೊಡೆದರು. 

ಹೌದು.. ಕೆಸಿಸಿ ಮ್ಯಾಚ್‌ಗೆ ನಿನ್ನೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅದ್ದೂರಿ ಚಾಲನೆ ನೀಡಿದ್ದರು. ಇಂದು ಶಿವ ರಾಜ್‌ಕುಮಾರ್ ನಾಯಕತ್ವದ ಒಡೆಯರ್ ಚಾರ್ಜರ್ಸ್ ಹಾಗೂ ಡಾಲಿ ಧನಂಜಯ್ ನಾಯಕತ್ವದ ಗಂಗಾ ವಾರಿಯರ್ಸ್ ನಡುವೆ ಮ್ಯಾಚ್‌ ಇತ್ತು. ಬ್ರೇಕ್‌ ವೇಳೆ ಶಿವಣ್ಣ ಟಿಕ್‌ ಟಿಕ್‌ ಹಾಡಿಗೆ ಸಖತ್‌ ಸ್ಟೆಪ್‌ ಹಾಕಿದರು. ಅಲ್ಲದೆ ಕೂಲ್ ಡ್ರಿಂಕ್‌ ಬಾಟಲಿಯನ್ನು ಬಾಯಲ್ಲಿ ಹಿಡಿದುಕೊಂಡು ಹೆಚ್ಚೆ ಹಾಕಿದ್ರು. ಇದೀಗ ಶಿವಣ್ಣ ಡಾನ್ಸ್‌ ವಿಡಿಯೋ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಿದೆ.

ಇದನ್ನೂ ಓದಿ: ನಾಟು ನಾಟು ಹಾಡಿಗೆ ಸಖತ್‌ ಸ್ಟೆಪ್‌ ಹಾಕಿದ ಪಾಕಿಸ್ತಾನ ನಟಿ..! ವಿಡಿಯೋ ವೈರಲ್‌ 

ಇನ್ನು ಮ್ಯಾಚ್‌ ವಿಚಾರಕ್ಕೆ ಬರುವುದಾದ್ರೆ, ಒಡೆಯರ್‌ ಚಾರ್ಜರ್ಸ್‌ ಟೀಮ್‌ ಟಾಸ್ ಗೆದ್ದ ಫೀಲ್ಡಿಂಗ್ ಆಯ್ದುಕೊಂಡಿತು. ಗಂಗಾ ವಾರಿಯರ್ಸ್ ಬ್ಯಾಟಿಂಗ್ ಮಾಡಲು ಆಹ್ವಾನಿಸಿದರು. 10 ಓವರ್‌ಗಳಲ್ಲಿ 4 ವಿಕೆಟ್‌ ನಷ್ಟಕ್ಕೆ 113 ರನ್ ಕಲೆ ಹಾಕಿದ ಗಂಗಾ ವಾರಿಯರ್ಸ್, ಒಡೆಯರ್ ಚಾರ್ಜರ್ಸ್ ತಂಡಕ್ಕೆ 114 ರನ್‌ಗಳ ಗುರಿ ನೀಡಿತು. ಗಂಗಾ ವಾರಿಯರ್ಸ್ ಪರ ಡಾರ್ಲಿಂಗ್ ಕೃಷ್ಣ 29 ಎಸೆತಗಳಲ್ಲಿ 58 ರನ್ ಬಾರಿಸಿ ಅಬ್ಬರಿಸಿದರು. 

114 ಟಾರ್ಗೆಟ್‌ ಗುರಿಯನ್ನು ಬೆನ್ನತ್ತುವಲ್ಲಿ ವಿಫಲವಾದ ಒಡೆಯರ್ ಚಾರ್ಜರ್ಸ್ ಸೋಲನ್ನು ಅನುಭವಿಸಿತು. ನಿನ್ನೆ ನಡೆದಿದ್ದ ಪಂದ್ಯದಲ್ಲಿ ಸುದೀಪ್ ನಾಯಕತ್ವದ ಹೊಯ್ಸಳ ಈಗಲ್ಸ್ ವಿರುದ್ಧ ಗೆದ್ದಿದ್ದ ಗಂಗಾ ವಾರಿಯರ್ಸ್‌, ಇದೀಗ ಒಡೆಯರ್ ಚಾರ್ಜರ್ಸ್ ವಿರುದ್ಧವೂ ಗೆದ್ದು ಫೈನಲ್ ಪಂದ್ಯಕ್ಕೆ ಅರ್ಹತೆ ಪಡೆದುಕೊಂಡಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News