ಡಿಮ್ಯಾಂಡ್‌ ಹೆಚ್ಚಾದ ಬೆನ್ನಲ್ಲೆ ಸಂಭಾವನೆ ಹೆಚ್ಚಿಸಿಕೊಂಡ ನಟಿ ಶ್ರೀಲೀಲಾ..! ಎಷ್ಟು ಗೊತ್ತಾ..?

Sreeleela movies : ತೆಲುಗಿನಲ್ಲಿ ಬ್ಯುಸಿ ಇರುವ ನಾಯಕಿಯ ಕೈಯಲ್ಲಿ ಅರ್ಧ ಡಜನ್‌ಗಿಂತಲೂ ಹೆಚ್ಚು ಚಿತ್ರಗಳಿವೆ. ಇಂತಹ ಕ್ಷಣದಲ್ಲಿ ಮತ್ತೊಂದು ಹೊಸ ಸಿನಿಮಾಗೆ ಓಕೆ ಅಂದಿದ್ದಾರಂತೆ. ಈ ಚಿತ್ರಕ್ಕೆ ಭಾರೀ ಸಂಭಾವನೆ ಬೇಡಿಕೆ ಇಟ್ಟಿದ್ದು, ಆಕೆಯ ಕ್ರೇಜ್ ನೋಡಿ ನಿರ್ಮಾಪಕರು ಕೂಡ ಓಕೆ ಅಂದಿದ್ದಾರೆ. 

Written by - Krishna N K | Last Updated : Jul 18, 2023, 10:23 PM IST
  • ಟಾಲಿವುಡ್‌ನಲ್ಲಿ ಮಿಂಚುತ್ತಿರುವ ಕನ್ನಡತಿ ನಟಿ ಶ್ರೀಲೀಲಾ ಮತ್ತೆ ಸಂಭಾವನೆ ಹೆಚ್ಚಿಸಿಕೊಂಡಿದ್ದಾರೆ.
  • ತೆಲುಗಿನಲ್ಲಿ ಬ್ಯುಸಿ ಇರುವ ನಾಯಕಿಯ ಕೈಯಲ್ಲಿ ಅರ್ಧ ಡಜನ್‌ಗಿಂತಲೂ ಹೆಚ್ಚು ಚಿತ್ರಗಳಿವೆ.
  • ನಿತೀನ್‌ ಜೊತೆ ನಟಿಸಲು ಶ್ರೀಲೀಲಾ ಹೆಚ್ಚು ಸಂಭಾವನೆ ಕೇಳಿದ್ದು ಸುದ್ದಿಯಾಗಿದೆ.
ಡಿಮ್ಯಾಂಡ್‌ ಹೆಚ್ಚಾದ ಬೆನ್ನಲ್ಲೆ ಸಂಭಾವನೆ ಹೆಚ್ಚಿಸಿಕೊಂಡ ನಟಿ ಶ್ರೀಲೀಲಾ..! ಎಷ್ಟು ಗೊತ್ತಾ..? title=

Sreeleela remuneration : ಟಾಲಿವುಡ್‌ನಲ್ಲಿ ಮಿಂಚುತ್ತಿರುವ ಕನ್ನಡತಿ ನಟಿ ಶ್ರೀಲೀಲಾ ಮತ್ತೆ ಸಂಭಾವನೆ ಹೆಚ್ಚಿಸಿಕೊಂಡಿದ್ದಾರೆ ಎಂದು ನೆಟ್ಟಿಗರು ಮಾತನಾಡಿಕೊಳ್ಳುತಿದ್ದಾರೆ. ತೆಲುಗಿನಲ್ಲಿ ಬ್ಯುಸಿ ಇರುವ ನಾಯಕಿಯ ಕೈಯಲ್ಲಿ ಅರ್ಧ ಡಜನ್‌ಗಿಂತಲೂ ಹೆಚ್ಚು ಚಿತ್ರಗಳಿವೆ. ಇಂತಹ ಕ್ಷಣದಲ್ಲಿ ಮತ್ತೊಂದು ಹೊಸ ಸಿನಿಮಾಗೆ ಓಕೆ ಅಂದಿದ್ದಾರಂತೆ. ನಿತಿನ್ ನಾಯಕನಾಗಿ ವೆಂಕಿ ಕುಡುಮುಲ ನಿರ್ಮಿಸುತ್ತಿರುವ ಚಿತ್ರದಲ್ಲಿ ಶ್ರೀಲೀಲಾ ನಟಿಸಲಿದ್ದು, ಆ ಚಿತ್ರಕ್ಕೆ ಭಾರೀ ಸಂಭಾವನೆ ಬೇಡಿಕೆ ಇಟ್ಟಿದ್ದಾರೆ. ಆಕೆಯ ಕ್ರೇಜ್ ನೋಡಿ ನಿರ್ಮಾಪಕರು ಕೂಡ ಓಕೆ ಅಂದಿದ್ದಾರಂತೆ. 

ಹೌದು.. 'ಭೀಷ್ಮ' ಚಿತ್ರದಲ್ಲಿ ನಿತಿನ್ ಮತ್ತು ರಶ್ಮಿಕಾ ನಟಿಸಿದ್ದರು. ಈ ಚಿತ್ರಕ್ಕೆ ನಿರ್ದೇಶಕ ವೆಂಕಿ ಕುಡುಮು ಆಕ್ಷನ್‌ ಕಟ್‌ ಹೇಳಿದ್ದರು. ಇದೀಗ ಮತ್ತೆ ಸಿನಿಮಾ ಶುರು ಮಾಡಿದ್ದು ಗೊತ್ತೇ ಇದೆ. ಮೊದಲು ಈ ಸಿನಿಮಾಗೆ ರಶ್ಮಿಕಾ ನಟಿ ಎಂಬ ಮಾತು ಕೇಳಿ ಬಂದಿತ್ತು. ಆದ್ರೆ ಶ್ರೀಲೀಲಾ ಹೆಸರು ಫಿಕ್ಸ್‌ ಆಯ್ತು.

ಇದನ್ನೂ ಓದಿ: ಚಿತ್ರರಂಗದಲ್ಲಿ ಮುಂದುವರೆದ ʼಡೈವೋರ್ಸ್‌ʼ ಸರಣಿ..! ನಟಿ ಸ್ವಾತಿ ವಿಚ್ಛೇದನ..

'ಧಮಾಕಾ' ಮೊದಲು ಶ್ರೀಲೀಲಾಗೆ ದೊಡ್ಡ ಹಿಟ್‌ ನೀಡಲಿಲ್ಲ. ಆದರೆ... ಆ ಸಿನಿಮಾದಿಂದ ಬಂದ ಕ್ರೇಜ್ ಅನ್ನು ಚೆನ್ನಾಗಿಯೇ ಕ್ಯಾಶ್ ಮಾಡಿಕೊಂಡಳು. ‘ಧಮಾಕಾ’ ಚಿತ್ರಕ್ಕಾಗಿ ಆಕೆ ಪಡೆದ ಸಂಭಾವನೆ ಒಂದು ಕೋಟಿ ರೂಪಾಯಿಗಿಂತ ಕಡಿಮೆ ಎಂದು ಹೇಳಲಾಗುತ್ತಿದೆ. 'ಧಮಾಕಾ' ಚಿತ್ರದ ನಂತರ ಹೆಚ್ಚು ಅವಕಾಶಗಳು ಬಂದಿದ್ದು, ಈಗ ಸಂಭಾವನೆ ದುಪ್ಪಟ್ಟಾಗಿದೆ.

ಇದೀಗ ನಿತಿನ್ ನಟನೆಯ ಚಿತ್ರಕ್ಕೆ ಎರಡು ಕೋಟಿ ಬೇಡಿಕೆ ಇಟ್ಟಿದ್ದಾರಂತೆ. ಶ್ರೀಲೀಲಾ ಚಿತ್ರದ ಕ್ರೇಜ್ ನೋಡಿ ಇಷ್ಟು ಕೊಡಲು ನಿರ್ಮಾಪಕರು ರೆಡಿಯಾಗಿದ್ದಾರೆ ಎನ್ನಲಾಗಿದೆ. ಸದ್ಯ ಸೂಪರ್ ಸ್ಟಾರ್ ಮಹೇಶ್ ಬಾಬು ಅಭಿನಯದ ತ್ರಿವಿಕ್ರಮ್ ಶ್ರೀನಿವಾಸ್ ನಿರ್ದೇಶನದ 'ಗುಂಟೂರ್ ಕಾರಂ' ಮತ್ತು ಪವರ್ ಸ್ಟಾರ್ ಪವನ್ ಕಲ್ಯಾಣ್ ಅಭಿನಯದ ಹರೀಶ್ ಶಂಕರ್ ಅವರ 'ಉಸ್ತಾದ್ ಭಗತ್ ಸಿಂಗ್' ಚಿತ್ರದಲ್ಲಿ ಶ್ರೀಲೀಲಾ ಮುಖ್ಯ ನಾಯಕಿಯಾಗಿ ನಟಿಸುತ್ತಿದ್ದಾರೆ.

ಇದನ್ನೂ ಓದಿ: ಸಾವಿನ ಸಮಯದಲ್ಲಿ 2 ತಿಂಗಳ ಗರ್ಭಿಣಿ ಆಗಿದ್ರು ನಟಿ ಸೌಂದರ್ಯ.!

ಅಲ್ಲದೆ, ನಟ ಸಿಂಹಂ ನಂದಮೂರಿ ಬಾಲಕೃಷ್ಣ ನಾಯಕನಾಗಿ ಅನಿಲ್ ರವಿಪುಡಿ ನಿರ್ದೇಶನದ 'ಭಗವಂತ ಕೇಸರಿ' ಚಿತ್ರದಲ್ಲಿ ಪ್ರಮುಖ ಪಾತ್ರ ನಿರ್ವಹಿಸುತ್ತಿದ್ದಾರೆ. ಜೊತೆಗೆ ರಾಮ್ 'ಸ್ಕಂದ', ಪಂಜ ವೈಷ್ಣವ್ ತೇಜ್ 'ಆದಿಕೇಶವ', ನವೀನ್ ಪೋಲಿಶೆಟ್ಟಿ ಜೊತೆಗೆ ಕೆಲವು ಸಿನಿಮಾಗಳಿವೆ. ಹಾಗಾಗಿ ಈಗ ಒಂದು ಚಿತ್ರಕ್ಕೆ ಎರಡು ಕೋಟಿ ಕೊಡುವಂತೆ ಬೇಡಿಕೆ ಇಡುತ್ತಿದ್ದಾರಂತೆ ಶ್ರೀಲೀಲಾ. ಈ ಹಿಂದೆ ರಾಕುಲ್ ಪ್ರೀತ್ ಸಿಂಗ್ ಮತ್ತು ಪೂಜಾ ಹೆಗ್ಡೆಯಂತಹ ನಾಯಕಿಯರು ಚಿತ್ರವೊಂದಕ್ಕೆ ಎರಡು ಕೋಟಿ ಪಡೆದಿದ್ದರು. ಇದೀಗ ಅವರ ಖಾತೆಗೆ ಶ್ರೀ ಲೀಲಾ ಕೂಡ ಸೇರಿಕೊಂಡಿದ್ದಾರೆ ಎನ್ನಲಾಗಿದೆ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News