'ನಾನು ಕನ್ನಡ ಮರೆತಿಲ್ಲ..ತೆಲುಗು ಸೆಟ್‌ನಲ್ಲೂ ಕೂಡಾ ಕನ್ನಡ ಮಾತನಾಡುತ್ತೇನೆ'

ಗಟ್ಟಿಮೇಳ ಅಬ್ಬಬ್ಬಾ ಈ ಧಾರವಾಹಿ ಹೆಸರು ಕೇಳಿದಾಕ್ಷಣ ಮೊದಲು ನಮ್ಮ ತಲೆಗೆ ಬರುವಂತ ಪಾತ್ರದಾರಿಗಳು ಅಂದ್ರೆ ಅದೂ ಬಜಾರಿ ಅಮುಲ್ಯಾ ಹಾಗೂ ವೇದಾಂತ್‌ ವಸಿಶ್ಟ..ಈ ಜೋಡಿ ಅಂದ್ರೆ ಪ್ರತಿಯೊಬ್ಬರಿಗೂ ಅಚ್ಚುಮೆಚ್ಚು..

Written by - CHARITHA PATEL | Edited by - Manjunath N | Last Updated : Jul 6, 2022, 05:21 PM IST
  • ಹೌದು, ಸದ್ಯ ತೆಲುಗಿನ 'ಮುತ್ಯಮುಂತ ಮುದ್ದು' ಧಾರಾವಾಹಿಯಲ್ಲಿ ನಿಶಾ ರವಿಕೃಷ್ಣನ್ ನಟಿಸುತ್ತಿದ್ದಾರೆ.ಅಲ್ಲಿಯೂ ನಿಶಾಗೆ ಸಾಕಷ್ಟು ಅಭಿಮಾನಿಗಳಿದ್ದಾರೆ.ಟಾಲಿವುಡ್‌ ಕಿರುತೆರೆಯಲ್ಲಿ ನಿಶಾ ಒಂದು ಮಟ್ಟಿಗೆ ಹೆಸರು ಮಾಡಿದ್ದಾರೆ.
'ನಾನು ಕನ್ನಡ ಮರೆತಿಲ್ಲ..ತೆಲುಗು ಸೆಟ್‌ನಲ್ಲೂ ಕೂಡಾ ಕನ್ನಡ ಮಾತನಾಡುತ್ತೇನೆ' title=

ಬೆಂಗಳೂರು: ಗಟ್ಟಿಮೇಳ ಅಬ್ಬಬ್ಬಾ ಈ ಧಾರವಾಹಿ ಹೆಸರು ಕೇಳಿದಾಕ್ಷಣ ಮೊದಲು ನಮ್ಮ ತಲೆಗೆ ಬರುವಂತ ಪಾತ್ರದಾರಿಗಳು ಅಂದ್ರೆ ಅದೂ ಬಜಾರಿ ಅಮುಲ್ಯಾ ಹಾಗೂ ವೇದಾಂತ್‌ ವಸಿಶ್ಟ..ಈ ಜೋಡಿ ಅಂದ್ರೆ ಪ್ರತಿಯೊಬ್ಬರಿಗೂ ಅಚ್ಚುಮೆಚ್ಚು.. ಅದರಲ್ಲೂ ಅಮ್ಮು ಹಾಗೂ ವೇದಾಂತ್‌ ನಡುವಿನಿ ಪ್ರೀತಿ ಕಾಳಜಿ ಹಾಗೂ ಮುಖ್ಯವಾಗಿ ಈ ಮುದ್ದಾದ ಜೊಡಿಯ ಕೋಳಿ ಜಗಳ ಪ್ರೇಕ್ಷಕರನ್ನ ಸಖತ್‌ ಎಂಟರ್‌ಟೈನ್‌ ಮಾಡತ್ತೆ..ಇನ್ನೂ ಧಾರವಾಹಿಯಲ್ಲಿ ಆಗಾಗ ನೀಡುವ ಟ್ವಿಸ್ಟ್‌ ಪ್ರೇಕ್ಷಕರನ್ನ ತನ್ನತ್ತ ಸೆಳೆಯುವಲ್ಲಿ ಯಶಸ್ವಿಯಾಗಿದೆ.ಹಾಗಾಗಿ ಧಾರವಾಹಿ ಶುರುವಿಂದ ಇಲ್ಲಿಯ ವರೆಗೂ ಟಾಪ್‌ 3 ನೇ ಸ್ಥಾನದಿಂದ ಕೆಳಗಿಳಿದಿಲ್ಲ..ಇದೀಗ ಮತ್ತೊಂದು ಮುಖ್ಯ ವಿಚಾರ ಅಂದ್ರೆ ಅಮುಲ್ಯಾ ಅಲಿಯಾಸ್‌ ನಿಶಾ ರವಿಕೃಷ್ಣ ಮೇಲೆ ಕನ್ನಡ ಪ್ರೇಕ್ಷಕರು ಕೊಂಚ ಬೇಸರಗೊಂಡಿದ್ದಾರೆ.

No description available.

ಇದನ್ನೂ ಓದಿ: Chandrashekhar Guruji Murder: ಗುರೂಜಿ ಹಂತಕರು ಯಾರು? ಕೊಲೆಗೆ ಕಾರಣವೇನು..?

ಹೌದು, ಸದ್ಯ ತೆಲುಗಿನ 'ಮುತ್ಯಮುಂತ ಮುದ್ದು' ಧಾರಾವಾಹಿಯಲ್ಲಿ ನಿಶಾ ರವಿಕೃಷ್ಣನ್ ನಟಿಸುತ್ತಿದ್ದಾರೆ.ಅಲ್ಲಿಯೂ ನಿಶಾಗೆ ಸಾಕಷ್ಟು ಅಭಿಮಾನಿಗಳಿದ್ದಾರೆ.ಟಾಲಿವುಡ್‌ ಕಿರುತೆರೆಯಲ್ಲಿ ನಿಶಾ ಒಂದು ಮಟ್ಟಿಗೆ ಹೆಸರು ಮಾಡಿದ್ದಾರೆ..ಆಗಾಗ ನಿಶಾ ಅಲ್ಲಿ ಧಾರವಾಹಿಗಳ ಪೋಸ್ಟ್‌ಗಳನ್ನು ತಮ್ಮ ಸೋಶಿಯಲ್‌ ಮಿಡಿಯಾ ಖಾತೆಯಲ್ಲಿ ಹಂಚಿಕೊಳ್ತಾರೆ..ಈದನ್ನು ಗಮನಿಸಿದ ಕನ್ನಡ ಅಭಿಮಾನಿಗಳು ನೀವು ಯಾಕೆ ಕನ್ನಡ ಧಾರವಾಹಿಗೆ ಸಂಬಂಧ ಪಟ್ಟಂತೆ ಯಾವ ಪೋಸ್ಟ್‌ಗಳನ್ನು ಹಾಕೊದಿಲ್ಲ ಅಂತಾ.. ನಿಶಾಗೆ ಕಮೆಂಟ್‌ ಹಾಗೂ ಮೆಸೇಜ್‌ಗಳ ಮೂಲಕ ಪ್ರೇಕ್ಷಕರು ಆಕ್ರೋಶ ವ್ಯಕ್ತಪಡಿಸುತಿದ್ದಾರಂತೆ.

ಇದನ್ನೂ ಓದಿ: ಶಾಲಾ ಮಕ್ಕಳಿಗೆ ಶೂ, ಸಾಕ್ಸ್ ವಿತರಿಸದ ಸರ್ಕಾರ: ಸಿದ್ದರಾಮಯ್ಯ ಆಕ್ರೋಶ

ಈ ಬಗ್ಗೆ ಲೈವ್‌ ಬರುವ ಮೂಲಕ ನಿಶಾ ರವಿಕೃಷ್ಣನ್‌ ಉತ್ತರ ನೀಡಿದ್ದು..ನಾನೂ ತೆಲುಗು ಧಾರವಾಹಿಗೆ ಸಂಭಂದಪಟ್ಟಂತೆ ಪೋಸ್ಟ್‌ ಹಾಕ್ತೀನಿ ಎಂದು ಕೆಲವರು ಕೋಪಗೊಂಡಿದ್ದಾರೆ ಕೆಟ್ಟಕೆಟ್ಟದಾಗಿ ಮೆಸೇಜ್‌ ಕಳಿಸುತ್ತಾರೆ.. ನನಗೆ ಆ ಮೆಸೇಜ್‌ಗಳನ್ನ ನೋಡಿದಾಗ ಬೇಜಾರು ಆಗತ್ತೆ.. ಈ ವೃತ್ತಿಗೆ ಬಂದ ಮೇಲೆ ಬಿಡುವು ಸಿಗೋದೆ ಕಡಿಮೆಯಾಗಿದೆ.. ಕನ್ನಡ ಮಾತ್ರವಲ್ಲದೆ ಪರಭಾಷೆಯಲ್ಲೂ ಸಹ ನಾನೂ ನಟಿಸ್ತಾಯಿದ್ದು ಈಗ ಸಾಕಷ್ಟು ಅವಕಾಶಗಳು ಸಿಗುತ್ತಿವೆ.. ಹಾಗಂತ ನಾನು ಕನ್ನಡ ಮೆರೆತ್ತಿಲ್ಲ, ಪ್ರತಿಯೊಂದು ಭಾಷೆಯನ್ನು ನಾನು ಪ್ರೀತೀಸ್ತಿನಿ ಮತ್ತು ಅದರ ಮೇಲೆ ಗೌರವ ಕೂಡಾ ಅದೇ ರೀತಿ ಇದೆ.ಗಟ್ಟಿಮೇಳ ಧಾರವಾಹಿಯ ಮುಖ್ಯ ಪಾತ್ರದಾರಿ ರಕ್ಷ್‌ಗಾಗಲಿ ನನಗಾಗಲಿ ಫೋಟೊ ಹಾಗೂ ರೀಲ್ಸ್‌ ಮೇಲೆ ಅಷ್ಟು ಒಲವಿಲ್ಲ..ಹಾಗಾಗಿ ನಾನೂ ಫೋಸ್ಟ್‌ ಅಪ್‌ಲೋಡ್‌ ಮಾಡೊದು ತುಂಬಾ ಕಡಿಮೆ ಎಂದು ಹೇಳಿದ್ದಾರೆ.

No description available.

ಹಾಗೂ ನಾನು ಕನ್ನಡ ಮರೆತಿಲ್ಲಾ..ನಾನೂ ತೆಲುಗು ಸೆಟ್‌ನಲ್ಲೂ ಕೂಡಾ ಕನ್ನಡ ಮಾತನಾಡುತ್ತೇನೆ..ತಪ್ಪು ತಿಳಿಯದೆ ನಿಮ್ಮ ದೃಷ್ಟಿಕೋನವನ್ನ ಬದಲಾಯಿಸಿಕೊಳ್ಳಿ ಆಗ ಎಲ್ಲವೂ ಸರಿಯಾಗಿ ಕಾನುತ್ತೆ ಎಂದಿದ್ದಾರೆ..ಇನ್ನೂ ನನ್ನಿಂದ ನಿಮಗೆ ಏನದರೂ ಬೇಸರವಾಗಿದ್ರೆ ನನ್ನನ್ನು ಕ್ಷಮಿಸಿ ಎಂದಿದ್ದಾರೆ.

ಇದನ್ನೂ ಓದಿ: Chandrashekhar Guruji Murder: ಗುರೂಜಿ ಹಂತಕರು ಯಾರು? ಕೊಲೆಗೆ ಕಾರಣವೇನು..?

ಒಟ್ಟಿನಲ್ಲಿ ಪ್ರೇಕ್ಷಕರಿಗೆ ನಿಶಾ ಅವ್ರ ಮೇಲಿದ್ದ ಬೇಸರಕ್ಕೆ ಸ್ವತಃ ನಿಶಾ ಉತ್ತರ ನೀಡುವ ಮೂಲಕ ಎಲ್ಲಾ ಗೊಂದಲಗಳಿಗೆ ತೆರೆ ಎಳೆದಿದ್ದಾರೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News