Naresh Babu : 'ನಾನು ಡೈವೋರ್ಸ್ ಕೊಡುತ್ತಿರುವುದನ್ನ ಪವಿತ್ರ ಲೋಕೇಶ್ ಗೆ ಕನೆಕ್ಟ್ ಮಾಡಬೇಡಿ'

ನಾನು ಈಗ ಡೈವರ್ಸ್ ಕೊಡೋ ನಿರ್ಧಾರ ಮಾಡಿದ್ದೇನೆ..  ಪವಿತ್ರ ಲೋಕೇಶ್ ನನ್ನ ಸ್ನೇಹಿತೆ. ಅವರು ಈಗ ಈ ಕೆಟ್ಟ ಮಾತುಗಳಿಂದ ಡಿಪ್ರೆಶನ್ ಗೆ ಹೋಗಿದ್ದಾರೆ. ಪವಿತ್ರ ಲೋಕೇಶ್ ನನ್ನ ಬೆಸ್ಟ್  ಫ್ರೆಂಡ್.. ನಾನು ಮನುಷ್ಯ ನನಗೂ ಭಾವನೆ ಇದೆ.

Written by - Zee Kannada News Desk | Last Updated : Jun 30, 2022, 08:26 PM IST
  • ವಿತ್ರಾ ಲೋಕೇಶ್ ಜೊತೆ ನನಗೆ ನಾಲ್ಕು ವರ್ಷಗಳಿಂದ ಪರಿಚಯ
  • ಪವಿತ್ರಾ ಲೋಕೇಶ್ ನನ್ನ ಬೆಸ್ಟ್ ಫ್ರೆಂಡ್
  • ನಾನು ಈಗ ಡೈವರ್ಸ್ ಕೊಡೋ ನಿರ್ಧಾರ ಮಾಡಿದ್ದೇನೆ
Naresh Babu : 'ನಾನು ಡೈವೋರ್ಸ್ ಕೊಡುತ್ತಿರುವುದನ್ನ ಪವಿತ್ರ ಲೋಕೇಶ್ ಗೆ ಕನೆಕ್ಟ್ ಮಾಡಬೇಡಿ' title=

ಬೆಂಗಳೂರು : ಪವಿತ್ರ ಲೋಕೇಶ್ ಜೊತೆ ನನಗೆ ನಾಲ್ಕು ವರ್ಷಗಳಿಂದ ಪರಿಚಯ. ಆದ್ರೆ ರಮ್ಯಾ ರಘುಪತಿಯನ್ನ ಹತ್ತು ವರ್ಷದ ಹಿಂದೆ ಮದುವೆ ಆಗಿದೆ. ನಾನು ನನ್ನ ವೈಯಕ್ತಿಕ ವಿಚಾರವಾಗಿ ಮಾತನಾಡಲು ಬಂದೆ ಎಂದು ತೆಲಗು ನಟ ನರೇಶ್ ಬಾಬು, ಪವಿತ್ರ ಲೋಕೇಶ್ ವಿಚಾರವಾಗಿ ಸ್ಪಷ್ಟನೆ ನೀಡಿದ್ದಾರೆ.

ಈ ಕುರಿತು ಲಾಯರ್ ಸಮೇತ  ಸುದ್ದಿಗೋಷ್ಠಿ ನಡೆಸಿದ ನರೇಶ್ ಬಾಬು, ರಮ್ಯಾ ರಘುಪತಿ ಬಗ್ಗೆ ಎಲ್ಲಾ ಕಡೆಯಿಂದ ಹೈದರಾಬಾದ್ ನಲ್ಲಿ ಸುದ್ದಿ ಬಂದಿದೆ. ಅವರು ತುಂಬಾ ಜನರಿಗೆ ಮೋಸ ಮಾಡಿದ್ದಾರೆ. ಜನ ನಮ್ಮ ಮನೆ ಮೇಲೆ ಅಟ್ಯಾಕ್ ಮಾಡಿದ್ರು. ಇದರ ಬಗ್ಗೆ ಕಂಪ್ಲೇಟ್ ಕೊಟ್ಟಿದ್ದೇವೆ. ಇದುವರೆಗೂ ಎಲ್ಲೂ ಯಾವ ಹಣವನ್ನು ಸೆಟಲ್ ಮಾಡಿಲ್ಲ. ರಮ್ಯಾ ಮೇಲೆ ಎಫ್ ಆರ್ ಆಗಿಲ್ಲ ಯಾಕಂದ್ರೆ ಇದು ಫ್ಯಾಮಿಲಿ ವಿಚಾರ ಅಂತ..  ಅವರು ಮಾನಸಿಕಗವಾಗಿ ಸರಿಯಾಗಿ ಇಲ್ಲ ಎಂದರು. 

ಇದನ್ನೂ ಓದಿ : ಕಾಜೋಲ್, ಸೂರ್ಯ, ರೀಮಾ ಸೇರಿ ಆರು ಭಾರತೀಯರು ಆಸ್ಕರ್ ಸಮಿತಿಗೆ ಆಯ್ಕೆ

ನಾನು ಈಗ ಡೈವರ್ಸ್ ಕೊಡೋ ನಿರ್ಧಾರ ಮಾಡಿದ್ದೇನೆ..  ಪವಿತ್ರ ಲೋಕೇಶ್ ನನ್ನ ಸ್ನೇಹಿತೆ. ಅವರು ಈಗ ಈ ಕೆಟ್ಟ ಮಾತುಗಳಿಂದ ಡಿಪ್ರೆಶನ್ ಗೆ ಹೋಗಿದ್ದಾರೆ. ಪವಿತ್ರ ಲೋಕೇಶ್ ನನ್ನ ಬೆಸ್ಟ್  ಫ್ರೆಂಡ್.. ನಾನು ಮನುಷ್ಯ ನನಗೂ ಭಾವನೆ ಇದೆ. ನನ್ನ ಫೋನ್ ಅನ್ನ ಟ್ರ್ಯಾಪ್ ಮಾಡಿದ್ರು. ಮದುವೆ ಸೆಲೆಬ್ರೇಷನ್ ಅಲ್ಲ, ಡೈವೋರ್ಸ್ ಸೆಲೆಬ್ರೇಷನ್ ಅಲ್ಲ.. ಎರಡನೇ ಮದುವೆ ಲವ್ ಮ್ಯಾರೇಜ್ ಮಾಡಿಕೊಂಡೆ ಅವರು ನನ್ನ ಬಾಲ್ಯದ ಗೆಳೆತಿ.. ನನ್ನ ಮೂರನೇ ಮದುವೆ ಆಗಿದ್ದೆ ತಪ್ಪು ಮಾಡಿದೆ ಎಂದರು.

ಇನ್ನು ಮುಂದುವರೆದು ಮಾತನಾಡಿದ ನರೇಶ್ ಬಾಬು, ಪವಿತ್ರ ಲೋಕೇಶ್ ರಮ್ಯಾ ಅವರ ಸೀರೆ ಚಿನ್ನವನ್ನ ತಗೋಂಡು ಹೋದ್ರು ಅಂತ ಹೇಳಿದ್ದಾರೆ. ನಾನು ರಮ್ಯಾ ರಘುಪತಿ ಅವರನ್ನ ಮದುವೆ ಆಗುವಾಗ ಯಾವ ಡೌರಿಯನ್ನ ಪಡೆದಿಲ್ಲ. ಮತ್ತೆ ಹೇಗೆ ಅವರು ತೆಗೆದುಕೊಂಡು ಹೋಗ್ತಾರೆ. ನಾನು ಪವಿತ್ರ 6 ಸಿನಿಮಾಗಳಲ್ಲಿ ನಟಿಸಿದ್ದೇವೆ. ಅವರು ಜೊತೆ ಸೇರಿ ಹಲವು ಭಾರಿ ಇಡೀ ಕುಟುಂಬದ ಸಮೇತ ಕಾರ್ಯಕ್ರಮ ಮಾಡಿದ್ದೇವೆ, ಆದ್ರೆ ಆಗ ರಮ್ಯಾ ರಘುಪತಿ ಬರುತ್ತಿರಲಿಲ್ಲ. ಅವರು ನನ್ನ ಸ್ನೇಹಿತೆ, ಅವರು ದೀಪಾವಳಿ ಹಬ್ಬ ಆಚರಿಸಿದ್ದು ಹೌದು, ಇಡೀ ಫ್ಯಾಮಿಲಿ ಸೇರಿ ದೀಪಾವಳಿ ಆಚರಿಸಿದ್ದೇವೆ. ನಾನು ಡೈವೋರ್ಸ್ ಕೊಡ್ತಿರದನ್ನ ಪವಿತ್ರ ಲೋಕೇಶ್ ಗೆ ಕನೆಕ್ಟ್ ಮಾಡಬೇಡಿ. ಇದು ನನ್ನ ನಿರ್ಧಾರ.. ಆದ್ರೆ ಪವಿತ್ರ ಲೋಕೇಶ್ ಡೈವೋರ್ಸ್ ಬಗ್ಗೆ ನನಗೆ ಗೊತ್ತಿಲ್ಲ. ನನ್ನನ್ನ ಯಾರೂ ಬ್ಲ್ಯಾಕ್ ಮೇಲ್ ಮಾಡೋಕೆ ಆಗಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ. 

ಇದನ್ನೂ ಓದಿ : Sudeep in DKD: ಡ್ಯಾನ್ಸ್‌ ಕರ್ನಾಟಕ ಡ್ಯಾನ್ಸ್‌ನಲ್ಲಿ ಕಿಚ್ಚ ಸುದೀಪ್‌! ಈ ದಿನದಂದು ಪ್ರಸಾರವಾಗಲಿದೆ ಶೋ

 ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News