DBoss ಮೇಲೆ ಚಪ್ಪಲಿ ಎಸೆತ : ನುಗುತ್ತಲೇ ʼಪರವಾಗಿಲ್ಲ ಬಿಡು ಚಿನ್ನʼ ಎಂದ ಯಜಮಾನ..!

ಸ್ಯಾಂಡಲ್‌ವುಡ್‌ ಚಾಲೆಂಜಿಂಗ್ ಸ್ಟಾರ್ ನಟ, ದರ್ಶನ್‌ ಮೇಲೆ ಕಿಡಿಗೇಡಿಯೊಬ್ಬರು ಚಪ್ಪಲಿ ಎಸೆದಿದ್ದಾನೆ. ಈ ಕುರಿತ ವಿಡಿಯೋ ಒಂದು ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಿದೆ. ಅಲ್ಲದೆ, ದಚ್ಚು ಅಭಿಮಾನಿಗಳ ಮನಸ್ಸಿಗೆ ಈ ಘಟನೆ ತುಂಬಾ ನೋವುಂಟು ಮಾಡಿದ್ದು, ಈ ರೀತಿ ಒಬ್ಬ ನಟನಿಗೆ ಅವಮಾನ ಮಾಡುವುದು ಸರಿಯಲ್ಲ ಅಂತ ಅಸಮಾಧಾನ ಹೊರಹಾಕಿದ್ದಾರೆ.

Written by - Krishna N K | Last Updated : Dec 19, 2022, 10:47 AM IST
  • ಚಾಲೆಂಜಿಂಗ್ ಸ್ಟಾರ್ ನಟ, ದರ್ಶನ್‌ ಮೇಲೆ ಕಿಡಿಗೇಡಿಯೊಬ್ಬರು ಚಪ್ಪಲಿ ಎಸೆದಿದ್ದಾನೆ.
  • ಈ ಕುರಿತ ವಿಡಿಯೋ ಒಂದು ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಿದೆ.
  • ಕ್ರಾಂತಿ ಸಿನಿಮಾದ ಎರಡನೇ ಹಾಡು ʼಬೊಂಬೆ ಬೊಂಬೆʼ ಬಿಡುಗಡೆ ಕಾರ್ಯಕ್ರಮದಲ್ಲಿ ಈ ಘಟನೆ ನಡೆದಿದೆ.
DBoss ಮೇಲೆ ಚಪ್ಪಲಿ ಎಸೆತ : ನುಗುತ್ತಲೇ ʼಪರವಾಗಿಲ್ಲ ಬಿಡು ಚಿನ್ನʼ ಎಂದ ಯಜಮಾನ..! title=

Darshan : ಸ್ಯಾಂಡಲ್‌ವುಡ್‌ ಚಾಲೆಂಜಿಂಗ್ ಸ್ಟಾರ್ ನಟ, ದರ್ಶನ್‌ ಮೇಲೆ ಕಿಡಿಗೇಡಿಯೊಬ್ಬರು ಚಪ್ಪಲಿ ಎಸೆದಿದ್ದಾನೆ. ಈ ಕುರಿತ ವಿಡಿಯೋ ಒಂದು ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಿದೆ. ಅಲ್ಲದೆ, ದಚ್ಚು ಅಭಿಮಾನಿಗಳ ಮನಸ್ಸಿಗೆ ಈ ಘಟನೆ ತುಂಬಾ ನೋವುಂಟು ಮಾಡಿದ್ದು, ಈ ರೀತಿ ಒಬ್ಬ ನಟನಿಗೆ ಅವಮಾನ ಮಾಡುವುದು ಸರಿಯಲ್ಲ ಅಂತ ಅಸಮಾಧಾನ ಹೊರಹಾಕಿದ್ದಾರೆ.

ಹೌದು, ನಿನ್ನೆ ದರ್ಶನ್‌ ಅವರು ತಮ್ಮ ಮುಂಬರುವ ಕ್ರಾಂತಿ ಸಿನಿಮಾದ ಎರಡನೇ ಹಾಡು ʼಬೊಂಬೆ ಬೊಂಬೆʼ ಬಿಡುಗಡೆ ಕಾರ್ಯಕ್ರಮವನ್ನು ವಿಜಯನಗರ ಜಿಲ್ಲೆಯ ಹೊಸಪೇಟೆ ನಗರದಲ್ಲಿ ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮ ಆರಂಭಕ್ಕೂ ಮುನ್ನವೇ ದರ್ಶನ್‌ ಹಾಗೂ ಪುನೀತ್‌ ರಾಜಕುಮಾರ ಅವರ ಅಭಿಮಾನಿಗಳ ನಡುವೆ ಘರ್ಷಣೆ ನಡೆದು ಕ್ರಾಂತಿ ಸಿನಿಮಾದ ಕಟೌಟ್‌ಗಳನ್ನು ಹರಿದು ಹಾಕಿದ್ದರು. 

ಇದನ್ನೂ ಓದಿ: Deepika Padukone : ಅಸೆಂಬ್ಲಿವರೆಗೂ ಹೊಯ್ತು ದೀಪಿಕಾ ಕೇಸರಿ ಬಿಕಿನಿ.. ಚಳಿಗಾಲ ಅದಿವೇಶನದಲ್ಲಿ ಚರ್ಚೆ..!

 

ಇಷ್ಟೇಲ್ಲ ಘಟನೆಯಗಳ ನಡುವೆ ದರ್ಶನ್‌ ಅವರು ಪುನೀತ್‌ ಪುತ್ಥಳಿಗೆ ಮಾಲಾರ್ಪಣೆ ಮಾಡಿದಾಗ ಒಂದು ಹಂತಕ್ಕೆ ಎಲ್ಲವೂ ಸರಿಯಾಯ್ತು ಎನ್ನುವಷ್ಟರಲ್ಲಿ, ವೇದಿಕೆ ಮೇಲೆ ನಿಂತಿದ್ದ ದರ್ಶನ್‌ ಅವರ ಮೇಲೆ ಕಿಡಿಗೇಡಿ ಒಬ್ಬರು ಚಪ್ಪಲಿ ಎಸೆದಿದ್ದಾರೆ. ಇದರಿಂದ ಈ ವೇಳೆ ದರ್ಶನ್‌ ಅಭಿಮಾನಿಳು ಕೆಂಡಾಮಂಡಲರಾದರು, ಆದ್ರೆ ದರ್ಶನ್‌ ಇದನ್ನು ನಗುತ್ತಲೇ ಸ್ವೀಕರಿಸಿ ಪರವಾಗಿಲ್ಲ ಬಿಡು ಚಿನ್ನ ಅಂತ ಸುಮ್ಮನಾದರು. ಆದ್ರೆ ಈ ಘಟನೆ ದಾಸನ ಅಭಿಮಾನಿಗಳಿಗೆ ನೋವುಂಟು ಮಾಡಿದೆ.

ಹೌದು.. ಕಳೆದ ಕೆಲವುದಿನಗಳಿಂದ ಹೊಸಪೇಟೆಯಲ್ಲಿ ದರ್ಶನ್‌ ಮತ್ತು ಪುನೀತ್‌ ಅಭಿಮಾನಿಗಳ ಮಧ್ಯ ತೆರೆಮರೆಯಲ್ಲಿ ಟಾಕ್‌ ವಾರ್‌ ನಡೆದಿತ್ತು. ಇದಕ್ಕೆಲ್ಲ ಕಾರಣ ಅಪ್ಪು ಹಾಗೂ ದರ್ಶನ್‌ ಕುರಿತು ದಚ್ಚು ಬ್ಯಾಡ್‌ ಆಗಿ ಮಾತನಾಡಿದ್ದಾರೆ ಎನ್ನಲಾದ ವಿಚಾರವೇ ಕಾರಣವಾಗಿತ್ತು. ಇದರಿಂದ ರೊಚ್ಚಿಗೆದ್ದಿದ್ದ ಅಪ್ಪು ಪ್ಯಾನ್ಸ್‌ ದರ್ಶನ್‌ ಹೊಸಪೇಟೆಗೆ ಕಾಲಿಟ್ಟರೆ ಸರಿಯಾಗಿಲ್ಲ ಎಂದು ಅವಾಜ್‌ ನೀಡಿದ್ದರು. ಅಲ್ಲದೆ, ದರ್ಶನ್‌ ಫ್ಯಾನ್ಸ್‌ ನೋಡೋಣ ಎಂದು ತೊಡೆತಟ್ಟಿದ್ದರು. ಇದೇ ಇಂದಿನ ಘಟನೆಗೆ ಮೂಲ ಕಾರಣವಾಗಿದೆ ಎಂದು ಹೇಳಲಾಗಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News