Balakrishna : ʼದೇವ ಬ್ರಾಹ್ಮಣʼರ ಕ್ಷಮೆ ಕೇಳಿದ ತೆಲುಗು ನಟ ಬಾಲಕೃಷ್ಣ..! 

ಟಾಲಿವುಡ್‌ ನಟಸಿಂಹ ನಂದಮೂರಿ ಬಾಲಕೃಷ್ಣ ಅವರು ಇತ್ತೀಚೆಗೆ ತಮ್ಮ ಚಿತ್ರ ವೀರ ಸಿಂಹ ರೆಡ್ಡಿ ಪ್ರಚಾರದ ವೇಳೆ ನೀಡಿದ ಹೇಳಿಕೆ ಒಂದು ಭಾರೀ ವಿರೋದಕ್ಕೆ ಕಾರಣವಾಗಿದೆ. ಚಿತ್ರದ ಪ್ರಚಾರದ ವೇಳೆ ಬಾಲಕೃಷ್ಣ ಅವರು ದೇವಲ ಮಹರ್ಷಿ ದೇವ ಬ್ರಾಹ್ಮಣರ ಗುರು ಮತ್ತು ರಾವಣ ಅವರ ನಾಯಕ ಎಂದು ಹೇಳಿಕೆ ನೀಡಿದರು. ದೇವಬ್ರಾಹ್ಮಣ ಸಮಾಜದವರ ಆಕ್ರೋಶಕ್ಕೆ ಕಾರಣವಾಗಿತ್ತು.

Written by - Krishna N K | Last Updated : Jan 15, 2023, 03:16 PM IST
  • ನಂದಮೂರಿ ಬಾಲಕೃಷ್ಣ ಅವರು ನೀಡಿದ ಹೇಳಿಕೆ ಒಂದು ಭಾರೀ ವಿರೋದಕ್ಕೆ ಕಾರಣವಾಗಿದೆ.
  • ದೇವಬ್ರಾಹ್ಮಣ ಸಮುದಾಯದವರ ಕುರಿತು ಬಾಲಯ್ಯ ಹೇಳಿಕೆ ನೀಡಿದ್ದಾರೆ.
  • ಬಾಲಕೃಷ್ಣ ಕ್ಷಮೆಯಾಚಿಸಬೇಕು ಎಂದು ದೇವಬ್ರಾಹ್ಮಣ ಸಮುದಾಯ ಆಗ್ರಹಿಸಿತ್ತು.
Balakrishna : ʼದೇವ ಬ್ರಾಹ್ಮಣʼರ ಕ್ಷಮೆ ಕೇಳಿದ ತೆಲುಗು ನಟ ಬಾಲಕೃಷ್ಣ..!  title=

Balakrishna Apologies : ಟಾಲಿವುಡ್‌ ನಟಸಿಂಹ ನಂದಮೂರಿ ಬಾಲಕೃಷ್ಣ ಅವರು ಇತ್ತೀಚೆಗೆ ತಮ್ಮ ಚಿತ್ರ ವೀರ ಸಿಂಹ ರೆಡ್ಡಿ ಪ್ರಚಾರದ ವೇಳೆ ನೀಡಿದ ಹೇಳಿಕೆ ಒಂದು ಭಾರೀ ವಿರೋದಕ್ಕೆ ಕಾರಣವಾಗಿದೆ. ಚಿತ್ರದ ಪ್ರಚಾರದ ವೇಳೆ ಬಾಲಕೃಷ್ಣ ಅವರು ದೇವಲ ಮಹರ್ಷಿ ದೇವ ಬ್ರಾಹ್ಮಣರ ಗುರು ಮತ್ತು ರಾವಣ ಅವರ ನಾಯಕ ಎಂದು ಹೇಳಿಕೆ ನೀಡಿದರು. ದೇವಬ್ರಾಹ್ಮಣ ಸಮಾಜದವರ ಆಕ್ರೋಶಕ್ಕೆ ಕಾರಣವಾಗಿತ್ತು.

ಇತಿಹಾಸ ತಿಳಿಯದೆ ತಮ್ಮ ಸಮುದಾಯದ ಬಗ್ಗೆ ಅಪಪ್ರಚಾರ ಮಾಡಿದ್ದಕ್ಕೆ ಬಾಲಕೃಷ್ಣ ಕ್ಷಮೆಯಾಚಿಸಬೇಕು ಎಂದು ದೇವಬ್ರಾಹ್ಮಣ ಸಮುದಾಯ ಆಗ್ರಹಿಸಿತ್ತು. ಈ ವಿಷಯ ತಮ್ಮ ಗಮನಕ್ಕೆ ಬಂದ ತಕ್ಷಣ, ಬಾಲಕೃಷ್ಣ ಅವರು ಪತ್ರಿಕಾ ಪ್ರಕಟಣೆಯಲ್ಲಿ ಕ್ಷಮೆಯಾಚಿಸಿ ವಿವರಣೆಯನ್ನು ನೀಡಿದ್ದಾರೆ. ತಮ್ಮ ತಪ್ಪನ್ನು ಒಪ್ಪಿಕೊಂಡಿರುವ ಎನ್‌ಬಿಕೆ ಅಪರಾಧಕ್ಕೆ ತೀವ್ರ ವಿಷಾದ ವ್ಯಕ್ತಪಡಿಸಿದ್ದಾರೆ. 

ಇದನ್ನೂ ಓದಿ: Miss Universe 2022 : ಯುಸ್‌ನ ಚೆಲುವೆಯ ಮುಡಿಗೆ ಭುವನ ಸುಂದರಿ ಕಿರೀಟ, ಭಾರತದ ದಿವಿತಾ ರೈಗೆ ನಿರಾಸೆ

ಅಲ್ಲದೆ, ʼದೇವ ಬ್ರಾಹ್ಮಣರ ನಾಯಕ ರಾವಣ ಬ್ರಹ್ಮ ಅಲ್ಲ ಎಂದು ನನಗೆ ತಿಳಿಸಿದ ಎಲ್ಲಾ ದೇವ ಬ್ರಾಹ್ಮಣ ಹಿರಿಯರಿಗೆ ನಾನು ಧನ್ಯವಾದ ಹೇಳಲು ಬಯಸುತ್ತೇನೆʼ ಎಂದಿದ್ದಾರೆ. ಅದರ ಬಗ್ಗೆ ನನಗೆ ಸರಿಯಾದ ಮಾಹಿತಿ ಇಲ್ಲ. ನನ್ನ ತಪ್ಪು ತಿಳಿಸಿದ್ದಕ್ಕಾಗಿ ಧನ್ಯವಾದಗಳು. ಸಹೋದರ ಸಹೋದರಿಯರ ಭಾವನೆಗಳನ್ನು ನಾನು ಎಂದಿಗೂ ನೋಯಿಸುವುದಿಲ್ಲ. ತಿಳಿಯದೆ ನಾನು ತಪ್ಪು ಮಾಡಿದೆ, ಅದಕ್ಕಾಗಿ ನಾನು ವಿಷಾದಿಸುತ್ತೇನೆ. ನಿಮ್ಮ ಭಾವನೆಗಳನ್ನು ನೋಯಿಸಲು ನಾನು ಎಂದಿಗೂ ಉದ್ದೇಶಿಸಿಲ್ಲ ಎಂದ ನಮ್ಮ ತೆಲುಗು ಜನರಿಗೆ ತಿಳಿದಿದೆ ಎಂದು ಹೇಳಿದ್ದಾರೆ.

ಬಾಲಕೃಷ್ಣ ನಟನೆಯ ವೀರ ಸಿಂಹ ರೆಡ್ಡಿ ಸಿನಿಮಾ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಮೈತ್ರಿ ಮೂವಿ ಮೇಕರ್ಸ್‌ ಬ್ಯಾನರ್‌ ಅಡಿಯಲ್ಲಿ ಈ ಸಿನಿಮಾ ನಿರ್ಮಾಣವಾಗಿದೆ. ಈ ಚಿತ್ರದಲ್ಲಿ ನಟಸಿಂಹ ನಂದಮೂರಿ ಬಾಲಕೃಷ್ಣ, ಶೃತಿ ಹಾಸನ್‌, ಕನ್ನಡದ ದುನಿಯಾ ವಿಜಯ್‌ ನಟಿಸಿದ್ದಾರೆ. ಬಾಕ್ಸ್‌ ಆಫೀಸ್‌ನಲ್ಲಿ ಕಮಾಲ್‌ ಮಾಡುತ್ತಿರುವ ಸಿನಿಮಾ ಮೆಗಾಸ್ಟಾರ್‌ ಚಿರಂಜೀವಿ ನಟನೆಯ ವಾಲ್ಟೇರ್‌ ವೀರಯ್ಯ ಸಿನಿಮಾಗೆ ಭಾರಿ ಪೈಪೋಟಿ ನೀಡುತ್ತಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News